ಬಂಟ್ವಾಳ ತಾಲೂಕಿನ ಕಾಂಪ್ರಬೈಲು ಶ್ರೀ ಉಳ್ಳಾಲ್ತಿ ಮತ್ತು ಅಜ್ಜರ ದೈವಗಳ ಬಂಡಾರ ಕ್ಕೆ ಸಂಬಂಧಿಸಿದಂತೆ ಬಾಳ್ತಿಲ ಬೀಡು ಮತ್ತು ದೈವಸ್ಥಾನದ ಆಡಳಿತ ಸಮಿತಿ ಯ ನಡುವಿನ ಭಿನ್ನಾಭಿಪ್ರಾಯ ಮೊಗರನಾಡು ಸಾವಿರ ಸೀಮೆಯಲ್ಲಿ ಧಾರ್ಮಿಕ ಕ್ಷೇತ್ರದಲ್ಲಿ ಬಹು ಚರ್ಚೆಗೆ ಗ್ರಾಸವಾಗಿದೆ.
ತುಳುನಾಡ ದೈವಾರಾಧನೆಯ ಸಂಪ್ರದಾಯದಲ್ಲೇ ಪ್ರಧಾನವಾಗಿ ಗುತ್ತು ಅಥವಾ ಬೀಡುಗಳಲ್ಲಿ ದೈವಗಳ ಭಂಡಾರ ಇರುವುದು. ಮತ್ತು ದೈವದ ಮೊಗ ಮೂರ್ತಿಗೆ ನಿತ್ಯ ಪೂಜೆ ಸಂದಾಯವಾಗುವ ಕ್ರಮ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಸಂಪ್ರದಾಯ, ಅದೇ ರೀತಿ ಬಾಳ್ತಿಲ ಬೀಡಿನಲ್ಲೂ ಇಂದಿಗೂ ದೈವಗಳಿಗೆ ನಿತ್ಯಪೂಜೆ ಸಂದಾಯವಾಗುವ ಪರಂಪರೆ ನಡೆಯುತ್ತಿದ್ದವು. ಹಾಗೂ ಸೀಮೆಯ ಮೂರು ದೈವಸ್ಥಾನ ಹಾಗೂ ಎರಡು ದೇವಸ್ಥಾನಗಳ ಕಾಲಾವಧಿ ಜಾತ್ರೆಯ ಸಮಯದಲ್ಲಿ ಭಂಡಾರ ಹೋಗುವ ಕ್ರಮ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದ ನಿಯಮ. ಇಷ್ಟರವರೆಗೆ ಎಲ್ಲಿಯೂ ಭಂಡಾರ ಕೊಡು ಕೊಳ್ಳುವಿಕೆಯ ಬಗ್ಗೆ ವಾದ ವಿವಾದಗಳು ನಡೆದ ಉದಾರಣೆಗಳೇ ಇಲ್ಲ.
ನವರಾತ್ರಿ ಪೂಜೆಗೆ ಬಂದ ಭಂಡಾರವನ್ನು ಮರಳಿ ಈಗಿನ ವ್ಯವಸ್ಥಾಪನಾ ಸಮಿತಿ ವಾಪಾಸು ಕಳುಹಿಸದೇ ,ಹೈಕೋರ್ಟ್ ತಡೆಯಾಜ್ಞೆಯನ್ನು ದಿಕ್ಕರಿಸಿರುವುದು ಈ ವಿವಾದಕ್ಕೆ ಕಾರಣವಾಗಿದೆ.
ಶ್ರೀ ಉಳ್ಳಾಲ್ತಿ ಮತ್ತು ಅಜ್ವಾರ ದೈವಗಳಿಗೆ ಅನಾದಿ ಕಾಲದಿಂದಲೂ ಬಾಳ್ತಿಲ ಬೀಡು ವಂಶಸ್ಥರಿಂದ ನಿತ್ಯಪೂಜೆ ನಡವಳಿಗಳು ನಡೆದುಕೊಂಡು ಬರುತ್ತಿರುವುದು ರೂಢಿ. ಆದರೆ ಇತ್ತೀಚೆಗೆ ರಚನೆಯಾದ ನೂತನ ವ್ಯವಸ್ಥಾಪನಾ ಸಮಿತಿ ಸಂಪ್ರದಾಯಕ್ಕೆ ಬೆಲೆ ಕೊಡದೆ ಭಂಡಾರವನ್ನು ಉತ್ಸವಗಳಿಗೆ ಬರಮಾಡಿಕೊಂಡು ಆನಂತರದಲ್ಲಿ ಭಂಡಾರವನ್ನು ಹಿಂದಕ್ಕೆ ಪುನಃ ಬಾಳ್ತಿಲ ಬೀಡಿಗೆ ಕಳುಹಿಸಲಾಗುವುದಿಲ್ಲ, ಹೊರತಾಗಿ ದೈವಸ್ಥಾನದಲ್ಲೇ ಇಡಲಾಗುವುದು ಎಂದು ನಿರ್ಣಯಿಸಿದ ವೇಳೆಯಲ್ಲಿ ಸಂಬಂಧಪಟ್ಟ ಗುತ್ತಿನ ಪ್ರಮುಖರು ಪ್ರಸ್ತುತ ವ್ಯವಸ್ಥಾಪನಾ ಸಮಿತಿಯ ತೀರ್ಮಾನಕ್ಕೆ ಹೈಕೋರ್ಟ್ ನಿಂದ ತಡೆಯಾಜ್ಞೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಇದರ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ, ಎ.ಸಿ ಯವರಿಗೆ ಬಂಟ್ವಾಳ ಪೊಲೀಸ್ ಠಾಣೆಗೆ ಸಂಬಂಧ ಪಟ್ಟ ರವಾನೆಯಾಗಿದೆ ಎಂಬುದು ಉಲ್ಲೇಖನೀಯ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಾಳ್ತಿಲ ಬೀಡಿನ ಪ್ರಮುಖರು ಪತ್ರಿಕಾ ಹೇಳಿಕೆ ನೀಡಿ ಇದರಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಏಲ್ಲಿದೆ? ಇದೆ ರೀತಿ ಮುಂದುವರೆದರೆ ದೈವಗಳ ಕಥೆಯೇ ಹೀಗಾದರೆ ಜನಸಾಮಾನ್ಯರ ಪಾಡೇನು ಎಂಬಂತಾಗಿದೆ ಪ್ರಶ್ನಿಸುವಂತಾಗಿದೆ. ಇನ್ನು ಮುಂದೆಯೂ ಬಾಳ್ತಿಲ ಬಿಡುವಿನಲ್ಲಿ ನಿತ್ಯ ಪೂಜಾದಿ ವಿಧಿ ವಿಧಾನಗಳು ನಡೆಯುತ್ತದೆ. ನಮ್ಮ ನೋವಿನಲ್ಲಿ ಭಾಗಿಯಾದ ಸೀಮೆಯ ಎಲ್ಲಾ ಭಕ್ತರಿಗೆ ಋಣಿಯಾಗಿದ್ದೇವೆ. ಎಂದು ಪ್ರಥ್ವಿ ರಾಜ್ ಅಜಿಲ ಯಾನೆ ದೇಜು ಬಂಗ ಮತ್ತು ಮುನಿರಾಜ ಅಜಿಲರು ಸಮಸ್ತ ಸೀಮೆಯ ಉಪಸ್ಥಿತಿಯಲ್ಲಿ ತಿಳಿಸಿದ್ದಾರೆ.