ನಿಯಮಾವಳಿಗಳನ್ನು ಉಲ್ಲಂಘಿಸಿ ವಿದೇಶಿ ಮೂಲಗಳಿಂದ ಹಣ ಪಡೆದಿದೆ ಎಂಬ ದೆಹಲಿ ಪೊಲೀಸರ ಆರೋಪಗಳನ್ನು ಫ್ಯಾಕ್ಟ್ ಚೆಕ್ ವೆಬ್ಸೈಟ್ ಆಲ್ಟ್ ನ್ಯೂಸ್ ಸೋಮವಾರ ತಿರಸ್ಕರಿಸಿದೆ.
ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ವಿರುದ್ಧ ಪ್ರಾಥಮಿಕ ವರದಿಯ (FIR) ಸಂದರ್ಭದ ಪೊಲೀಸ್ ಹೇಳಿಕೆಯಲ್ಲಿ, ಇದರಲ್ಲಿ ಪೊಲೀಸರು ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ, ಸಾಕ್ಷ್ಯಾಧಾರಗಳ ನಾಶಪಡಿಸಿದ್ದಾರೆ, ವಿದೇಶಿ ಹಣದ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಕ್ರಿಮಿನಲ್ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪಗಳು ಸ್ಪಷ್ಟವಾಗಿ ಸುಳ್ಳು ಎಂದು ಆಲ್ಟ್ ನ್ಯೂಸ್ ಸುದ್ದಿ ಸಂಸ್ಥೆ ಹೇಳಿದೆ.
ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಶನಿವಾರ ಪತ್ರಕರ್ತರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
” ವಿದೇಶಿ ಮೂಲಗಳಿಂದ ದೇಣಿಗೆ ಹಣವನ್ನು ಸ್ವೀಕರಿಸಲು ನಮ್ಮ ಸಂಸ್ಥೆ ಅನುಮತಿಸುವುದಿಲ್ಲ ಮತ್ತು ನಾವು ಭಾರತೀಯ ಬ್ಯಾಂಕ್ ಖಾತೆಗಳಿಂದ ಮಾತ್ರ ದೇಣಿಗೆಗಳನ್ನು ಸ್ವೀಕರಿಸಿದ್ದೇವೆ. ಈ ವಿಧಾನಗಳ ಮೂಲಕ ಸಂಗ್ರಹಿಸಲಾದ ಎಲ್ಲಾ ದೇಣಿಗೆಗಳು ಸಂಸ್ಥೆಯ ಬ್ಯಾಂಕ್ ಖಾತೆಗೆ ಹೋಗುತ್ತವೆ” ಎಂದು Alt News Twitter ನಲ್ಲಿ ಹೇಳಿದೆ.
ಜುಬೈರ್ ತಮ್ಮ ವೈಯಕ್ತಿಕ ಖಾತೆಯಲ್ಲಿ ದೇಣಿಗೆ ಪಡೆದಿದ್ದಾರೆ ಎಂಬ ಆರೋಪವನ್ನು ಆಲ್ಟ್ ನ್ಯೂಸ್ ತಳ್ಳಿಹಾಕಿದೆ. ಅದರೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳು ಮಾಸಿಕ ಸಂಭಾವನೆಯನ್ನು ಮಾತ್ರ ಪಡೆಯುತ್ತಾರೆ ಎಂದು ಸಂಸ್ಥೆ ಹೇಳಿದೆ.
“ಇದೆಲ್ಲವೂ ನಾವು ಮಾಡುವ ಅತ್ಯಂತ ನಿರ್ಣಾಯಕ ಕೆಲಸವನ್ನು ಮುಚ್ಚಿಸುವ ಪ್ರಯತ್ನವಾಗಿದೆ ಅಥಾವ ದಮನಿಸುವ ಪ್ರಯತ್ನ. ಈ ಪ್ರಯತ್ನದ ವಿರುದ್ಧ ಹೋರಾಡಿ ಎತ್ತರದ ಸ್ಥಾನಕ್ಕೇರುತ್ತೇವೆ” ಎಂದು ಹೇಳಿದೆ.
ಸುಳ್ಳು ಸುದ್ದಿ ಹಬ್ಬಿಸುವುದು ಹಾಗೂ ತಪ್ಪು ಮಾಹಿತಿ ನೀಡುವ ಅಭಿಯಾನವು ಈಗಿನ ಸಂದರ್ಭದಲ್ಲಿ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬಹುದೊಡ್ಡ ಬೆದರಿಕೆಗಳು. ಸುಳ್ಳು ಸುದ್ದಿಗಳನ್ನು ಗುರುತಿಸುವ ಮೂಲಕ ಹಾಗೂ ನಿಜ ಸುದ್ದಿ ಯಾವುದು ಎಂಬುದನ್ನು ತಿಳಿಸುವ ಮೂಲಕ Alt News ಈಚಿನ ವರ್ಷಗಳಲ್ಲಿ ಬಹಳ ಒಳ್ಳೆಯ ಕೆಲಸ ಮಾಡಿದೆ. ಈ ವೆಬ್ಸೈಟ್ ವಸ್ತುನಿಷ್ಠವಾಗಿ ಕೆಲಸ ಮಾಡಿದೆ.
ಮೊಹಮ್ಮದ್ ಜುಬೇರ್ ಪ್ರಕರಣ
ಜುಬೈರ್ ಅವರು ಮಾರ್ಚ್ 2018 ರಲ್ಲಿ ಪೋಸ್ಟ್ ಮಾಡಿದ ಟ್ವೀಟ್ಗಾಗಿ 2022ರ ಜೂನ್ 27 ರಂದು ಸಂಜೆ ಅವರನ್ನು ಬಂಧಿಸಲಾಯಿತು. ಕಳೆದ ಜೂನ್ನಲ್ಲಿ, ಆರೋಪಿ ಮೊಹಮ್ಮದ್ ಜುಬೇರ್ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153 ಎ ಅಡಿಯಲ್ಲಿ ಧರ್ಮ, ಜನಾಂಗ, ಜನ್ಮ ಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು 295 ಎ ಅಡಿಯಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯದ ಪ್ರಕರಣ ದಾಖಲಿಸಲಾಗಿತ್ತು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಟ್ವಿಟರ್ ಬಳಕೆದಾರರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ನಂತರದಲ್ಲಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ, ಸಾಕ್ಷ್ಯಾಧಾರಗಳ ನಾಶಪಡಿಸಿದ್ದಾರೆ, ವಿದೇಶಿ ಹಣದ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಕ್ರಿಮಿನಲ್ ಪಿತೂರಿ ಮಾಡಿದ್ದಾರೆ ಈ ಕುರಿತು ಪ್ರಕರಣವನ್ನು ದಾಖಲಾಗಿಸಿದೆ ಎಂದು ಹೇಳಿದ್ದರು. ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಶನಿವಾರ ಪತ್ರಕರ್ತ ಜುಬೇರ್ ವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.
ಪತ್ರಕರ್ತ ಮೊಹಮ್ಮದ್ ಜುಬೇರ್ ಅವರ ಬಂಧನದ ಬಗ್ಗೆ ರಾಷ್ಟ್ರಮಟ್ಟದಲ್ಲಿ ವ್ಯಾಪಕ ಪರವಿರೋಧ ವ್ಯಕ್ತವಾಗಿ ಅವರನ್ನು ಬಡುಗಡೆ ಮಾಡಬೇಕು ಎಂದು ಅನೇಕ ಸಂಘಟನೆ ಪತ್ರಕರ್ತರು ಮಾಧ್ಯಮ ಸಂಸ್ಥೆಗಳು ಆಗ್ರಹಿಸಿದ್ದವು.