ಕೇಂದ್ರ ಸರ್ಕಾರ ಹಾಗೂ ದೆಹಲಿ ಎಎಪಿ ಸರ್ಕಾರ ನಡುವಿನ ಶೀತಲ ಸಮರ ಮುಂದುವರೆದಿದ್ದು ಅರವಿಂದ್ ಕೇಜ್ರಿವಾಲ್ ದೇಶದಲ್ಲಿ ತಮ್ಮ ಪಕ್ಷದ ಪ್ರಾಮುಖ್ಯತೆಯನ್ನು ಸ್ಥಾಪಿಸುವುದು ಅವರ ಏಕೈಕ ಗುರಿ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಆರೋಪಿಸಿದ್ದಾರೆ.
ಉಚಿತ ಕೊಡುಗೆಗಳನ್ನು ಜನರಿಗೆ ಆಮಿಷವೊಡ್ಡುವ ದೊಡ್ಡ ಆಮಿಷವಾಗಿದೆ ಕೇಜ್ರಿವಾಲ್ ಇಡೀ ಜಗತ್ತಿನ ಬಗ್ಗೆ ಚಿಂತಿತರಾಗಿರುವಂತೆ ಕಾಣುತ್ತಾರೆ ಆದರೆ, ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ ಎಂದು ಟೀಕಿಸಿದ್ದಾರೆ.
ತಮ್ಮ ಹಾಗೂ ತಮ್ಮ ಪಕ್ಷದ ಬಗ್ಗೆ ಚಿಂತಿಸುತ್ತಾ ದಿನದಿಂದ ದಿನಕ್ಕೆ ಜನರರಿಗೆ ಹೆಚ್ಚು ಸುಳ್ಳುಗಳನ್ನು ಹೇಳುತ್ತಿದ್ದಾರೆ. ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ರಾಸಾಯನಿಕ ಸಿಂಪಡಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ, 60 ಲಕ್ಷದ ರಾಸಾಯನಿಕದ ಜಾಹೀರಾತಿಗೆ 24 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜನರಿಗೆ ಉಚಿತ ಕೊಡುಗೆಗಳ ಬಗ್ಗೆ ಕೇಂದ್ರ ಸರ್ಕಾರ ವಿರೋಧಿಸುವುದನ್ನು ನೋಡಿದರೆ ಕೇಂದ್ರ ಹಣಕಾಸು ಇಲಾಖೆಯಲ್ಲಿ ಯಾವುದೋ ದೋಷ ಇದ್ದಂತೆ ಕಾಣುತ್ತಿದೆ ಎಂದು ಕೇಜ್ರಿವಾಲ್ ದೂಷಿಸಿದ್ದರು.