ಪೇಜಾವರ ಶ್ರೀಗಳ ಬಗ್ಗೆ ಸಾಹಿತಿ ಹಂಸಲೇಖ ಲೇವಡಿ ಹೇಳಿಕೆ ಹಿನ್ನೆಲೆ. ಮೈಸೂರಿನಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ವಿರುದ್ಧ ಮೈಸೂರು ಸಂಸದ ಪ್ರತಾಪ ಸಿಂಹ ಕಿಡಿಕಾರದ್ದಾರೆ.
ಹಂಸಲೇಖ ಬಹಳ ದೊಡ್ಟ ಸಾಧನೆ ಮಾಡಿ ನಮ್ಮ ಹೃದಯದಲ್ಲಿ ಒಳ್ಳೆ ಸ್ಥಾನ ಪಡೆದಿದ್ದಾರೆ. ಅವರಿಂದ ನಾನು ಇಂತಹ ಹೇಳಿಕೆಯನ್ನು ನಿರೀಕ್ಷಿಸಿರಲಿಲ್ಲ ಅಸಂಬದ್ಧ ಮಾತುಗಳಾಡಿ ನಾಮಕಾವಸ್ಥೆಗೆ ಕ್ಷಮೆ ಕೇಳಿವುದು ಒಂದು ಚಾಳಿ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಂಸಲೇಖರವರು ಈ ಚಾಳಿಗೆ ಬಲಿಯಾಗಿದ್ದು ಬೇಸರ ಆಗಿದೆ. ಪೇಜಾವರ ಶ್ರೀಗಳಂತ ಯತಿವರ್ಯರ ಬಗ್ಗೆ ಮಾತನಾಡುವಾಗ ಪರಿಜ್ಞಾನ ಇಟ್ಟುಕೊಳ್ಳಬೇಕಿತ್ತು ಎಂದು ಹೇಳಿದ್ದಾರೆ.
ರಾಮಮಂದಿರ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದವರು. ನಮ್ಮ ಮನಸಲ್ಲಿ ಇರುವ ಅಸಮಾನತೆ ಹೋಗಲಾಡಿಸಲು ದಲಿತರ ಕೇರಿಗೆ ಪಾದಯಾತ್ರೆ ಮಾಡಿದವರು ಪೇಜಾವರ ಶ್ರೀಗಳು ಎಂದು ಹೇಳಿದ್ದಾರೆ.
ಸಮಾನತೆಯನ್ನ ಮನಸಲ್ಲಿ ತರಲಿಕ್ಕೆ ಪ್ರಾಮಾಮಣಿಕ ಪ್ರಯತ್ನ ಮಾಡಿದ ಯತಿವರ್ಯ. ಹಂಸಲೇಖರಿಂದ ಈ ಮಾತು ಯಾಕೆ ಬಂತು ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಾಧು ಸಂತರ ಆಹಾರದ ಪದ್ದತಿ ನಿಮಗೆ ಗೊತ್ತಿಲ್ಲವೆ. ನಿಮಗೆ ಆಹಾರ ಪದ್ದತಿಯಿಂದ ಸಮಾನತೆ ಬರುತ್ತೆ ಅನ್ನೋದಾದ್ರೆ ಯಾರಾದರೂ ಮುಸ್ಲೀಮರನ್ನ ನಿಮ್ಮ ಮನೆಗೆ ಕರೆಸಿ ಹಂದಿ ಮಾಂಸ ಮಾಡಿ ಬಡಿಸಿ ಆಗ ಗೊತ್ತಾಗುತ್ತೆ ಎಂದು ಕಿಡಿಕಾರಿದ್ದಾರೆ.
ಇತ್ತೀಚಗೆ ನಿಮ್ಮ ಎಲ್ಲ ಕೆಲಸಗಳು ನಿಂತು ಹೋಗಿದೆ. ಪ್ರಚಾರದ ಗೀಳಿಗೆ, ಪ್ರಗತಿಪರ ಎನಿಸಿಕೊಳ್ಳಲು ಈ ರೀತಿ ಮಾತಾನಾಡಿದ್ದಾರೊ ಗೊತ್ತಿಲ್ಲ ಎಂದು ಹೇಳಿದ್ದಾರೆ. ಮಾತನಾಡುವಾಗ ಎಚ್ಚರಿಕೆ, ವಿವೇಕದಿಂದ ಮಾತನಾಡಿ ಎಂದು ಸಂಸದ ಪ್ರತಾಪ್ ಸಿಂಹ ಬುದ್ಧಿವಾದ ಹೇಳಿದ್ದಾರೆ.
ರಾಜ್ಯದಲ್ಲಿ ಬಿಟ್ ಕಾಯಿನ್ ಆರೋಪ ವಿಚಾರ. ಇಡಿ ಮಾಜಿ ಸಿಎಂ ಸಿದ್ದರಾಮಯ್ಯಗೆ ನೋಟಿಸ್ ನೀಡಲಿ. ಬಿಟ್ ಕಾಯಿನ್ ಬಗ್ಗೆ ಮೊದಲು ಟ್ವೀಟ್ ಮಾಡಿದವರು ಸಿದ್ದರಾಮಯ್ಯ. ನಂತರ ಪ್ರಿಯಾಂಕಾ ಖರ್ಗೆ, ಸುರ್ಜೆವಾಲ ಸೇರಿ ಹಲವರು ಮಾತಾನಾಡಿದ್ದಾರೆ ಎಂದು ಹೇಳಿದ್ದಾರೆ.
ಇವರ ಬಳಿ ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಸಾಮಾನ್ಯ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸುವಂತೆ ನಡೆಸಲಿ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.
ಕುಮಾರಸ್ವಾಮಿ ಸಹಾ ಜನಧನ್ ಹಣ ಕದ್ದ ಬಗ್ಗೆ ಮಾತನಾಡಿದ್ದಾರೆ. ಅವರಿಗೂ ಇಡಿ ನೋಟಿಸ್ ನೀಡಲಿ. ಈ ಎಲ್ಲಾ ನಾಯಕರು ತನಿಖೆಗೆ ಸಹಕರಿಸಬೇಕು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪಸಿಂಹ ಹೇಳಿಕೆ.