ದೆಹಲಿಯ ಅಬಕಾರಿ ನೀತಿ 2021-22 ಕುರಿತು ವಿವಾದದಲ್ಲಿ ಮುಳುಗಿರುವ ಎಎಪಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ರಾಜಕೀಯಕ್ಕೆ ಸೇರಿದ ನಂತರ “ತಮ್ಮ ಆದರ್ಶಗಳನ್ನು ಮರೆತಿದ್ದಾರೆ” ಮತ್ತು “ಅಧಿಕಾರದ ಅಮಲಿನಲ್ಲಿದ್ದಿರಿ” ಎಂದು ಆರೋಪಿಸಿದ್ದಾರೆ.
ಈ ಕುರಿತು ಸಿಎಂಗೆ ಪತ್ರ ಬರೆದಿರುವ ಹಜಾರೆ ಅವರು ‘ಸ್ವರಾಜ್’ ಪುಸ್ತಕದಿಂದ ಉಲ್ಲೇಖಿಸಿ, ಮದ್ಯದ ಬಗ್ಗೆ ಕೇಜ್ರಿವಾಲ್ ಇದ್ದ ಹಿಂದಿನ ನಿಲುವನ್ನು “ಜ್ಞಾಪಿಸಲು” ಇಚ್ಚಿಸುತ್ತೇನೆ. ದೆಹಲಿ ಸರ್ಕಾರದ ನೀತಿಯು ಮದ್ಯ ಸೇವನೆ ಮತ್ತು ಮಾರಾಟವನ್ನು ಹೆಚ್ಚಿಸುವುದರ ಜೊತೆಗೆ ಭ್ರಷ್ಟಾಚಾರವನ್ನು ಹೆಚ್ಚಿಸುತ್ತಿದೆ. ಇದೆಲ್ಲವೂ “ಸಾರ್ವಜನಿಕ ಹಿತಾಸಕ್ತಿಗೆ ಹಾನಿಕರ” ಎಂದು ಹಜಾರೆ ಹೇಳಿದ್ದಾರೆ.
ಕೇಜ್ರಿವಾಲ್ ಅವರು “ಅಧಿಕಾರದ ಅಮಲಿನಲ್ಲಿದ್ದಿರಿ ” ಮತ್ತು ಎಎಪಿ ನಾಯಕ ಕೇಜ್ರಿವಾಲ್ 2012 ರ ಭ್ರಷ್ಟಾಚಾರ ವಿರೋಧಿ ಆಂದೋಲನದ ಆದರ್ಶಗಳಿಗೆ ಈಗ ಬದ್ಧರಾಗಿಲ್ಲ ಎಂದು ಹಜಾರೆ ಹೇಳಿದ್ದಾರೆ.. ಲೋಕಾಯುಕ್ತ ಕಾನೂನನ್ನು ತರುವ ಬದಲು ಕೇಜ್ರಿವಾಲ್ ಸರ್ಕಾರವು “ಜನರ ಜೀವನವನ್ನು ಹಾಳುಮಾಡುವ” ಮತ್ತು ಮಹಿಳೆಯರ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ನೀತಿಯನ್ನು ತಂದಿದೆ ಎಂದು ಹಜಾರೆ ಬರೆದಿದ್ದಾರೆ.
ಎಎಪಿ ನೇತೃತ್ವದ ದೆಹಲಿ ಸರ್ಕಾರವು ಹೊಸ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ವಿವಾದದಲ್ಲಿ ಸಿಲುಕಿಕೊಂಡಿದೆ. ಆಗಸ್ಟ್ 19 ರಂದು, ಸಿಬಿಐ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಮನೆ ಸೇರಿದಂತೆ 31 ಸ್ಥಳಗಳಲ್ಲಿ ಶೋಧ ನಡೆಸಿ ಹಲವರ ವಿರುದ್ಧ ಪ್ರಕರಣ ದಾ/ಕಲಿಸಿದೆ ಈಗಲೂ ತನಿಖೆ ನಡೆಯುತ್ತಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಅಬಕಾರಿ ನೀತಿಯ ಬಗ್ಗೆ ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಒಂದು ತಿಂಗಳ ನಂತರ ಈ ಬೆಳವಣಿಗೆಯು ಸಂಭವಿಸಿದೆ, ಅಬಕಾರಿ ಇಲಾಖೆಯ ಉಸ್ತುವಾರಿ ಸಿಸೋಡಿಯಾ ಅವರನ್ನು ನೇರವಾಗಿ ಗುರಿಯಾಗಿದ್ದಾರೆ. ಇದರ ಬೆನ್ನಲ್ಲೇ ದೆಹಲಿ ಸರ್ಕಾರ ಈ ನೀತಿಯನ್ನು ಹಿಂಪಡೆಯುವುದಾಗಿ ಘೋಷಿಸಿತ್ತು.