ಅಲಹಾಬದ್ ವಿಶ್ವವಿದ್ಯಾಲಯದಲ್ಲಿ ಶುಲ್ಕವನ್ನ ಶೇ 300ರಿಂದ 400 ರಷ್ಟು ಏರಿಕೆ ಮಾಡಿರುವುದನ್ನು ಖಂಡಿಸಿ ವಿದ್ಯಾರ್ಥಿಗಳು ಜೀವಂತೆ ಸಮಾಧಿಯಾಗಲು ಮುಂದಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಶುಲ್ಕ ಹೆಚ್ಚಳ ಖಂಡಿಸಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿರುದ್ದ ವಿವಿಧ ಸಂಘಟನೆಗಳ ಜತೆಗೂಡಿ ಪ್ರತಿಭಟನೆಯನ್ನ ಮಾಡುತ್ತಿದ್ದಾರೆ.
ಬುಧವಾರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು ವಿದ್ಯಾರ್ಥಿಗಳು 5 ಅಡಿ ಆಳದ ಗುಂಡಿಯಲ್ಲಿ ಮಲಗಿಕೊಂಡು ತಮ್ಮ ಮೇಲೆ ತಾವೇ ಮಣ್ಣು ಎಳೆದುಕೊಂಡು ಜೀವಂತೆ ಸಮಾಧಿಯಾಗಲು ಯತ್ನಿಸಿದ್ದಾರೆ. ಇದನ್ನು ಕಂಡ ಪೊಲೀಸರು ತಕ್ಷಣವೇ ವಿದ್ಯಾರ್ಥಿಗಳನ್ನು ಆಚೆ ಎಳೆದೊಯ್ದಿದ್ದಾರೆ.
ಆದರೆ, ಶುಲ್ಕ ಹೆಚ್ಚಳ ನಿರ್ಧಾರವನ್ನ ಸಮರ್ಥಿಸಿಕೊಂಡಿರುವ ಕುಲಪತಿಗಳು ತಮ್ಮ ನಿರ್ಧಾರಕ್ಕೆ ತಾವು ಬದ್ದರಾಗಿರುವುದಾಗಿ ಹೇಳಿದ್ದಾರೆ. ಇದು ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ ಎಂದಿದ್ದಾರೆ.
ಕುಲಪತಿಗಳ ಹೇಳಿಕೆಯನ್ನು ನಿರಾಕರಿಸಿರುವ ವಿದ್ಯಾರ್ಥಿಗಳು ಈ ಹಿಂದೆ ಪ್ರವೇಶ ಶುಲ್ಕ ಒಂದು ಸಾವಿರ ರೂಪಾಯಿ ಇತ್ತು ಇದೀಗ ದರ ಏರಿಕೆ ಮಾಡುವ ಮೂಲಕ ಮೂರರಿಂದ ನಾಲ್ಕು ಸಾವಿರವಾಗಿದೆ. ಈ ಕೂಡಲ್ಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಔಇಚಾರದಲ್ಲಿ ಮಧ್ಯಪ್ರವೇಶಿಸಿ ವಿದ್ಯಾರ್ಥಿಗಳ ಹಿತ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.