ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಕ್ಷಣಕ್ಕೆ ಜಾರಿಗೆ ಬರುವಂತೆ ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಆದೇಶ ಹೊರಡಿಸಿದ್ದಾರೆ.
ರಾಷ್ಟ್ರ, ರಾಜ್ಯ, ಯುವ ಹಾಗೂ ಮಹಿಳಾ ಘಟಕಗಳನ್ನು ಒಳಗೊಂಡಿವೆ. ಆದರೆ, ದಿಢೀರ್ ನಿರ್ಧಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚಿಗೆ ನಡೆದ ಅಜಂಗಢ ಹಾಗೂ ರಾಂಪುರ ಲೋಕಸಭೆ ಉಪಚುನಾವಣೆಯ ಸೋಲಿಗೆ ೀ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉತ್ತರ ಪ್ರದೇಶದ ರಾಜ್ಯಧ್ಯಕ್ಷ ಸ್ಥಾನದಲ್ಲಿ ನರೇಶ್ ಉತ್ತಮ್ ಮುಂದುವರಿಯಲಿದ್ದಾರೆ ಎಂದು ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
2024ರ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸದೃಢವಾಗಿ ಬಿಜೆಪಿಯನ್ನು ಎದುರಿಸಲು ಕಟ್ಟಲು ಮತ್ತು ಹೊಸ ತಲೆಮಾರಿನ ನಾಯಕತ್ವವನ್ನು ಮುನ್ನೆಲೆಗೆ ತರಲು ವಿಸರ್ಜಿಸಲಾಗಿದೆ ಎಂದು ತಿಳಿದು ಬಂದಿದೆ.