ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಕೊನೆಗೂ ಭಾರತ ಪ್ರತೀಕಾರದ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ. ಮೇ 7ರ ಮಧ್ಯ ರಾತ್ರಿ 1:40 ರ ಸುಮಾರಿಗೆ ಒಟ್ಟು 9 ಉಗ್ರರ ನೆಲೆಗಳ ಮೇಲೆ ಭಾರತ ಮಿಸೈಲ್ ದಾಳಿ ನಡೆಸಿ ಲಕ್ಷರ್ ಏ ತೈಬಾ ಮತ್ತು ಜೈಷ್ ಎ ಮೊಹಮ್ಮದ್ ಸಂಘಟನೆಯ ಉಗ್ರರ ನೆಲೆಗಳನ್ನು ಸಂಪೂರ್ಣ ಧ್ವಂಸಗೊಳಿಸಿದ್ದು, ಪಾಕಿಸ್ತಾನ ಬೆಚ್ಚಿಬಿದ್ದಿದೆ.

ಹೌದು, ಈ ಆಪರೇಷನ್ ಗೆ ಆಪರೇಷನ್ ಸಿಂಧೂರ್ ಯೃಂದು ಭಾರತೀಯ ಸೇನೆ ಹೆಸರಿಟ್ಟಿದ್ದು, ಉಗ್ರ ದಾಳಿಯಲ್ಲಿ ತಮ್ಮ ಸಿಂಧೂರವನ್ನು ಕಳೆದುಕೊಂಡ ಭಾರತೀಯ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಸೇನೆ ಈ ದಾಳಿ ನಡೆಸಿದೆ. ಇನ್ನು ಈ ದಾಳಿಯಲ್ಲಿ ಈಗಾಗಲೇ 70 ಕ್ಕೂ ಹೆಚ್ಚು ಉಗ್ರರು ಸಾವನಪ್ಪಿದ್ದಾರೆ ಎನ್ನಲಾಗಿದೆ.

ಭಾರತದ ಸೇನೆಯ ಈ ದಾಳಿಯನ್ನು ಪಾಕಿಸ್ತಾನ ದೃಢಪಡಿಸಿದ್ದು, ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ಮಾಡಿದೆ. ಯಾವುದೇ ಸೇನಾ ನೆಲೆಗಳ ಮೇಲೆ ಭಾರತದಿಂದ ಯಾವುದೇ ದಾಳಿಯಾಗಿಲ್ಲ. ಇದಕ್ಕೆ ಪಾಕಿಸ್ತಾನ ಕೂಡ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿಕೊಂಡಿದೆ. ಸದ್ಯದ ಮಾಹಿತಿಯ ಪ್ರಕಾರ, ಪಾಕ್ ಆಕ್ರಮುತ ಕಾಶ್ಮೀರದ 5 ಮತ್ತು ಪಾಕಿಸ್ತಾನದ 4 ಉಗ್ರರ ಕ್ಯಾಂಪ್ ಸೇರಿದಂತೆ ಒಟ್ಟು 9 ಕಡೆಗಳಲ್ಲಿ ಈ ಏರ್ ಸ್ಟ್ರೈಕ್ ನಡೆದಿದೆ.