ಗೋವಾದಲ್ಲಿ ಸಮ್ಮರ್ ಶಾಟ್ ಮಾಡುವಾಗ ಕುತ್ತಿಗೆಗೆ ಗಂಭೀರ ಪೆಟ್ಟು ಮಾಡಿಕೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದ ನಟ ದೂದ್ ಪೇಡ ದಿಗಂತ್ ಈಗ ಚೇತರಿಸಿಕೊಂಡು ಮೊದಲ ಬಾರಿಗೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪ್ರಕಟಿಸಿರುವ ದಿಗಂತ್, ತಾವೀಗ ಚೇತರಿಸಿಕೊಂಡಿದ್ದು, ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
‘ಶಸ್ತ್ರಚಿಕಿತ್ಸೆ ಬಳಿಕ ನಾನೀಗ ಮೊದಲಿನ ಸ್ಥಿತಿಗೆ ಮರಳಿದ್ದೇನೆ. ಆ ಸಂದರ್ಭದಲ್ಲಿ ನನಗೆ ಏರ್ ಲಿಫ್ಟ್ ಮಾಡಲು ಸಹಕರಿಸಿದ ಗೋವಾ ಸಿಎಂ, ಮಣಿಪಾಲ್ ಆಸ್ಪತ್ರೆ ವೈದ್ಯರಿಗೆ ಧನ್ಯವಾದಗಳು. ಇನ್ನು ಎರಡು ವಾರಗಳಲ್ಲಿ ನಾನು ನಾರ್ಮಲ್ ಆಗಿ ರೆಡಿ ಆಗಲಿದ್ದೇನೆ. ನನಗೆ ಹಾರೈಸಿದ ನನ್ನ ಸ್ನೇಹಿತರು, ಚಿತ್ರರಂಗ, ನನ್ನ ತವರು ತೀರ್ಥಹಳ್ಳಿಯ ಸ್ನೇಹಿತರು, ಕುಟುಂಬಸ್ಥರು, ಅಭಿಮಾನಿಗಳು, ಮಾಧ್ಯಮಗಳು ಎಲ್ಲರಿಗೂ ಧನ್ಯವಾದ’ ಎಂದು ದಿಗಂತ್ ತಿಳಿಸಿದ್ದಾರೆ.
https://www.instagram.com/tv/Cfgt88HtyA1/?igshid=YmMyMTA2M2Y=