ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶದಂತೆ ಮೈಸೂರಿನ ಲೋಕಾಯುಕ್ತದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಎಫ್ ಐಆರ್ ದಾಖಲಾಗಿದೆ.ಕೇಸ್ ನಂಬರ್ 11/2024 ಅಡಿ ಲೋಕಾಯುಕ್ತ ಎಸ್ಪಿ ಉದೇಶ್ ರಿಂದ ಎಫ್ಐಆರ್ ದಾಖಲು ಮಾಡಲಾಗಿದೆ. ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ A1, ಸಿಎಂ ಪತ್ನಿ ಬಿ.ಎನ್ ಪಾರ್ವತಿ A2, ಸಿಎಂ ಸಿದ್ದರಾಮಯ್ಯ ಬಾಮೈದ ಮಲ್ಲಿಕಾರ್ಜುನ್ ಸ್ವಾಮಿ A3 ಹಾಗೂ ಭೂಮಿ ಮಾರಾಟ ಮಾಡಿದ ದೇವರಾಜು A4 ಎಂದು ಎಫ್ ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಕಳೆದ 2 ತಿಂಗಳಿಂದ ಅಕ್ರಮ ಸೈಟ್ ಪಡೆದ ಆರೋಪ ಸಿಎಂ ಸಿದ್ದರಾಮಯ್ಯ ಮೇಲೆ ಇತ್ತು. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿಯನ್ನು ಸಹ ನೀಡಿದ್ರು. ಇದ್ರಿಂದ ವಿಚಲಿತರಾಗಿದ್ದ ಸಿಎಂ ಸಿದ್ದರಾಮಯ್ಯ , ಹೈ ಕೋರ್ಟ್ ಗೆ ಮನವಿ ಸಲ್ಲಿಸಿದ್ರು. ಆದ್ರೆ ವಾದ-ಪ್ರತಿವಾದ ಆಲಿಸಿದ ಕೋರ್ಟ್ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿತ್ತು.ಈಗ ಕಡೆಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಮೈಸೂರಲ್ಲಿ ಎಫ್ ಐ ಆರ್ ದಾಖಲಾಗಿದ್ದು, ಸಿದ್ದರಾಮಯ್ಯ ಗೆ ಸಂಕಷ್ಟ ಎದುರಾಗಿದೆ. ಈಗಾಗ್ಲೇ ಬಿಜೆಪಿ ಎಲ್ಲೆಡೆ ಪ್ರತಿಭಟನೆ ನಡೆಸ್ತಾಯಿದ್ದು, ರಾಜೀನಾಮೆಗೆ ಪಟ್ಟು ಹಿಡಿದಿದೆ.
ದ್ವೇಷದ ರಾಜಕಾರಣಕ್ಕೆ ಮುಂದಾಯ್ತ ರಾಜ್ಯ ಸರ್ಕಾರ ?! ಸಿದ್ದು ವಿರುದ್ಧ FIR ಬೆನ್ನಲ್ಲೇ HDK ಗೆ ಲೋಕಾಯುಕ್ತ ನೋಟೀಸ್ !
ಗಂಗೇನಹಳ್ಳಿ ಡಿನೋಟಿಫೈ (Gangenahalli denitrification) ಪ್ರಕರಣದಲ್ಲಿ,2015 ರಲ್ಲಿ ಲೋಕಾಯುಕ್ತಕ್ಕೆ ಜಯಕುಮಾರ್ ಹಿರೇಮಠ್ (Jaikumar hirematt) ಎಂಬುವರು ದೂರು ನೀಡಿದ ಪರಿಣಾಮ ಲೋಕಾಯುಕ್ತ ಪೊಲೀಸ್ರು ಯಡಿಯೂರಪ್ಪ(Yediyurappa) ಹಾಗೂ ಕುಮಾರಸ್ವಾಮಿ (Kumaraswamy)ವಿರುದ್ದ ಪ್ರಕರಣ...
Read more