ಮೈಸೂರಿಗೆ ಸಂಸದ ಪ್ರತಾಪ್ ಸಿಂಹ ಸಾಧನೆ ಶೂನ್ಯ. ಬರೀ ಸುಳ್ಳು ಹೇಳಿಕೊಂಡೆ ಪ್ರತಾಪ್ ಸಿಂಹ ಜೀವನ ಮಾಡ್ತಿದ್ದಾರೆ . ಅಭಿವೃದ್ಧಿಯಲ್ಲಿ ಮೈಸೂರು ಹಿಂದೆ ಬೀಳ್ತಿದೆ ಅಂತ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.. ಮೈಸೂರಿನಲ್ಲಿ ಗುಂಬಜ್ ಮಾದರಿಯ ಬಸ್ ಶೆಲ್ಟರ್ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ವಕ್ತಾರ ಎಂ ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸ್ವಪಕ್ಷದ ಸಂಸದ ಮತ್ತು ಶಾಸಕರು ಮೈಸೂರಿನ ಮರ್ಯಾದೆಯನ್ನ ಹರಾಜು ಹಾಕ್ತಾ ಇದ್ದಾರೆ. ಸಂಸದ ಪ್ರತಾಪ್ ಸಿಂಹ ಕೊಡುಗೆ ಮೈಸೂರಿಗೆ ಏನೂ ಇಲ್ಲ. ಬರಿ ಆಶ್ವಾಸನೆ ಕೊಡುವುದರಲ್ಲಿ ಕಾಲ ಕಳೆದಿದ್ದಾರೆ ಅಂತ ವ್ಯಂಗ್ಯವಾಡಿದ್ದಾರೆ..
ಮೈಸೂರಿಗೆ ಹೊಸ ರೈಲ್ವೆ ಟರ್ಮಿನಲ್ ತರುತ್ತೇನೆ ಎಂದು ೨೦೧೭ ರಲ್ಲೇ ಹೇಳಿದರು, ಏರ್ ಪೋರ್ಟ್ ವಿಸ್ತರಣೆ ಮಾಡುತ್ತೇನೆ ಎಂದಿದ್ದರು ಅದೂ ಆಗಿಲ್ಲ. ಕುಶಾಲನಗರಕ್ಕೆ ರೈಲು ಬಿಡ್ತಿನಿ ಎಂದಿದ್ದರು. ದಸರಾಗೂ ಮುಂಚೆ ಬೆಂಗಳೂರು ಮೈಸೂರು ದಶಪಥ ರಸ್ತೆ ಕಾಮಗಾರಿ ಮುಗಿಯುಸತ್ತೇನೆ ಎಂದಿದ್ದರು. ಗ್ಯಾಸ್ ಪೈಪ್ ಲೈನ್ ಕಾಮಗಾರಿ ಅದೂ ಕೂಡ ಮುಗಿದಿಲ್ಲ. ಅಭಿವೃದ್ಧಿ ಕೆಲಸಗಳ ಕಡೆ ಗಮನ ಹರಿಸುವುದನ್ನ ಬಿಟ್ಟು ಬಸ್ ಶೆಲ್ಟರ್ ವಿಚಾರ ತೆಗೆದುಕೊಂಡು ಸಣ್ಣ ವಿಚಾರವನ್ನ ದೊಡ್ಡದು ಮಾಡಿ ಸಮಾಜದ ಶಾಂತಿ ಕದಡುತ್ತಿದ್ದಾರೆ. ನೀವು ಕೇವಲ ಬಿಜೆಪಿಯವರಿಗೆ ಸಂಸದರಲ್ಲ 35 ಲಕ್ಷ ಜನರಿಗೆ ನೀವು ಪ್ರತಿನಿಧಿ ಎಂದು ಗುಡುಗಿದರು.
ಗುಂಬಜ್ ಮಾದರಿಯ ಕಟ್ಟಡ ಕಟ್ಟಬಾರದು ಅಂಥ ನಿಮ್ಮ ಕೇಂದ್ರದ ನಿರ್ದೇಶನ ಇದೆಯಾ..? ಸಂವಿಧಾನದಲ್ಲಿ ಕಾನೂನು ಇದೆಯಾ..? ಒಡೆದು ಹಾಕುತ್ತೇನೆ ಅಂದಿದ್ರಿ ಒಡೆದು ಹಾಕಿ ನೋಡೋಣ. ನಿಮ್ಮ ಧಮ್ಮ ತಾಕತ್ತು ತೋರಿಸಿ ಈಗ. ನೀವು ಕೊಟ್ಟ ಗಡುವು ಮುಗಿದಿದೆಯಲ್ಲ ಹೋಗಿ ಒಡಿರಿ ನೋಡೋಣ. ಪ್ರಚೋದನಕಾರಿ ಹೇಳಿಕೆ ಕೊಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳುತ್ತೀರಾ. ನಾಳೆ ಜನ ನಿಮಗೆ ಕಲ್ಲು ತಗೋಂಡು ಹೊಡಿತಾರೆ. ಮುಸ್ಲೀಮರನ್ನೇ ಟಾರ್ಗೆಟ್ ಮಾಡೋದ ನಿಲ್ಲಿಸಿ ಇದೇ ರೀತಿ ಮುಂದುವರಿದರೆ ನಿಮ್ಮ ಕಚೇರಿ ಮುಂದೆ ಧರಣಿ ಕೂರುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಮೈಸೂರಿನಲ್ಲಿ ಡೂಮ್ ಮಾದರಿಯ 350 ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳಿವೆ. ಅದರಲ್ಲಿ 157 ಕಟ್ಟಡಗಳು ಸರ್ಕಾರಿ ಕಟ್ಟಡಗಳು. 59 ಕಟ್ಟಡಗಳಲ್ಲಿ ಮೇಲೆ ಡೂಮ್ ಮಾದರಿ ಇದೆ. ಎಲ್ಲವನ್ನ ಒಡೆದು ಬಿಡ್ತಿರಾ..? ಸಾರ್ವಜನಿಕರಿಗೆ ಮನರಂಜನೆ ಕೊಡುವ ಕೆಲಸ ಮಾಡುತ್ತೀರಾ.? ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದರು






