ಭಾರತೀಯ ರೈಲ್ವೇ ಇಂದು ಒಂದೇ ದಿನ 155 ರೈಲು ಸಂಚಾರವನ್ನು ರದ್ದು ಪಡಿಸಿದೆ.
ರೈಲಿನ ಕಾರ್ಯಚರಣೆ ಮತ್ತು ನಿರ್ವಹಣೆಯ ಕಾರಣ ನೀಡಿ ಚೆನ್ನೈ, ಕೋಲ್ಕತ್ತಾ, ರತ್ನಗಿರಿ ಸೇರಿದಂತೆ ಕೆಲ ನಗರಗಳಿಗೆ ಪ್ರಯಾಣಿಸುವ ಪ್ರಮುಖ ರೈಲುಗಳ ಪ್ರಯಾಣವನ್ನು ರೈಲ್ವೇ ಇಲಾಖೆ ರದ್ದು ಪಡಿಸಿದೆ. ಬಗ್ಗೆ ಭಾರತೀಯ ರೈಲ್ವೇ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಟಿಸಿ) ಮಾಹಿತಿ ಹಂಚಿಕೊಂಡಿದೆ.
ಉತ್ತರ ಭಾರತದಲ್ಲಿ ರೈಲಿನಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಿದ್ದು, ಜನ ಓಡಾಟಕ್ಕಾಗಿ ಹೆಚ್ಚಾಗಿ ರೈಲನ್ನೆ ಅವಲಂಬಿಸಿದ್ದಾರೆ. ಹಾಗಾಗಿ ರೈಲು ಸೇವೆ ವ್ಯತ್ಯಾಸಗೊಂಡರೆ, ಜನಸಾಮಾನ್ಯರಿಗೆ ಪ್ರಯಾಣಕ್ಕೆ ತೊಂದರೆ ಉಂಟಾಗಲಿದೆ.