ಬೆಂಗಳೂರಿನಲ್ಲಿ ಕರೋನಾ ವಿಪರೀತ ಹೆಚ್ಚುತ್ತಿರುವ ಸಂಧರ್ಭದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲೂ ಸಾಧ್ಯವಾಗುತ್ತಿಲ್ಲ. ಯಾವ ಆಸ್ಪತ್ರೆಗಳಲ್ಲೂ ಹಾಸಿಗೆಗಳು ಲಭ್ಯ ಇಲ್ಲ. ಇದಕ್ಕೆ ಕಾರಣ ಏಕಾಏಕಿ ಏರಿಕೆಯಾದ ಕರೋನಾ ಸೋಂಕಿತರು. ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದ ಕಾರಣ ಸೋಂಕಿತರನ್ನು ಕರೆದೊಯ್ಯಲು ಸಾಧ್ಯವಾಗದೆ ಸಾಕಷ್ಟು ಟೀಕೆಗೆ ಗುರಿಯಾಗಬೇಕಾಯ್ತು. ಇದರಿಂದ ಬೇಸತ್ತ ರಾಜ್ಯ ಸರ್ಕಾರ, ಅರಮನೆ ಮೈದಾನ, ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ, ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್, ಜಿಕೆವಿಕೆ ಸೇರದಂತೆ ಸಾಕಷ್ಟು ಭಾಗಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲು ಮುಂದಾಗಿತ್ತು. ಅದರಲ್ಲಿ ಅತೀ ಪ್ರಮುಖವಾದದ್ದು ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಬೆಡ್ಗಳನ್ನು ಸಿದ್ಧ ಮಾಡಿದ್ದು.
ದೇಶದಲ್ಲಿ ಅತಿ ದೊಡ್ಡ ಕೋವಿಡ್ ಕೇರ್ ಮಾಡುತ್ತಿದ್ದೇವೆ ಎಂದು ಮಾಧ್ಯಮಗಳ ಎದುರು ಕೊಚ್ಚಿಕೊಂಡಿದ್ದ ಸರ್ಕಾರಕ್ಕೆ ಇನ್ನೂ ಕೂಡ ಕಾರ್ಯಾಚರಣೆ ಶುರು ಮಾಡುವಲ್ಲಿ ವಿಫಲವಾಗಿದೆ. ಹಾಲ್ ನಂಬರ್ 1 ರಲ್ಲಿ 920 ಬೆಡ್ಗಳು, ಹಾಲ್ ನಂಬರ್ 2ರಲ್ಲಿ 872 ಬೆಡ್ಗಳು, ಹಾಲ್ ನಂಬರ್ 3ರಲ್ಲಿ 1180 ಬೆಡ್ಗಳು, ಹಾಲ್ ನಂಬರ್ 4ರಲ್ಲಿ 1512 ಬೆಡ್ಗಳು, ಹಾಲ್ ನಂಬರ್ 5ರಲ್ಲಿ 1616 ಬೆಡ್ಗಳನ್ನು ಸಿದ್ಧಮಾಡಲು ಮುಂದಾಗಿತ್ತು. ಒಟ್ಟು 10,100 ಬೆಡ್ಗಳನ್ನು ಮಾಡಲು ಉದ್ದೇಶಿಸಲಾಗಿತ್ತು. ಆದರೆ ಒಂದು ದಿನಕ್ಕೆ ಬೆಡ್ಗೆ 800 ರೂಪಾಯಿ ರೀತಿ ಬಾಡಿಗೆ ಫಿಕ್ಸ್ ಮಾಡಲಾಗಿತ್ತು. ಆದರೆ ವಿರೋಧ ಪಕ್ಷಗಳು ಬಾಡಿಗೆ ಕೊಡುವುದಕ್ಕೆ ವಿರೋಧ ಮಾಡಿದ್ದರಿಂದ ಸರ್ಕಾರ ಯೂ ಟರ್ನ್ ತೆಗೆದುಕೊಂಡಿತ್ತು.
ಪ್ರತಿ 100 ಮಂದಿ ಸೋಂಕಿತರಿಗೆ ಒಬ್ಬ ವೈದ್ಯ ಹಾಗೂ ಇಬ್ಬರು ನರ್ಸ್, ಬಿಬಿಎಂಪಿ ಮಾರ್ಷಲ್, ಸಹಾಯಕರನ್ನು ನಿಯೋಜಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಇಲ್ಲೀವರೆಗೂ ಯಾವುದೇ ಸೋಂಕಿತರನ್ನು ಶಿಫ್ಟ್ ಮಾಡಿಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವಾರು ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 2,200 ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದು ಮಾಹಿತಿ ಕೊಡಲಾಗಿತ್ತು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
300 ವೈದ್ಯರು, 600 ನರ್ಸ್ಗಳು, 300 ಸಹಾಯಕರು, 400 ಶುಚಿತ್ವ ಸಿಬ್ಬಂದಿ, 300 ಮಾರ್ಶಲ್ಗಳು, 300 ಆರಕ್ಷಕ ಸಿಬ್ಬಂದಿ ಸೇರಿ ಒಟ್ಟು 2200 ಸಿಬ್ಬಂದಿಗಳನ್ನು ಕೋವಿಡ್ ಕೇರ್ ಸೆಂಟರ್ನಲ್ಲಿ ಕರ್ತವ್ಯಕ್ಕೆ ನೇಮಿಸಲು ಚಿಂತನೆ ಮಾಡಲಾಗಿತ್ತು. ಆದರೆ ಇದೀಗ ಬಿಬಿಎಂಪಿ ಹಾಗೂ ಗುತ್ತಿಗೆದಾರರ ನಡುವೆ ಬಾಡಿಗಾಗಿ ತಿಕ್ಕಾಟ ಶುರುವಾಗಿದೆ. ಬಾಡಿಗೆ, ವಸ್ತುಗಳ ಖರೀದಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ BIEC ಕೋವಿಡ್ ಕೇರ್ ಸೆಂಟರ್ ಕಾಮಗಾರಿ ಸ್ಥಗಿತವಾಗಿದೆ. ದಿನಕ್ಕೆ 800 ರೂಪಾಯಿಗೆ 26 ವಸ್ತುಗಳ ಪೂರೈಕೆಗೆ ಟೆಂಡರ್ ಕರೆಯಲಾಗಿದ್ದು, ಮೂಲಸೌಕರ್ಯ ಒದಗಿಸಲು ಬಿಬಿಎಂಪಿ ಆದೇಶಿಸಿತ್ತು. ಆದ್ರೆ, ಬಾಡಿಗೆ ನೀಡುವ ವಿಚಾರದಲ್ಲಿ ಅಕ್ರಮದ ಆರೋಪ ಮಾಡಲಾಗಿದೆ.
ಈವರೆಗೆ 6,500 ಬೆಡ್ ಫಿಕ್ಸ್ ಮಾಡಲಾಗಿದೆ. 100 ದಿನಕ್ಕೆ 240 ಕೋಟಿ ರೂಪಾಯಿ ಬಾಡಿಗೆಗೆ ಒಪ್ಪಂದ ಆಗಿತ್ತು. ಈಗ 6 ವಸ್ತುಗಳ ಖರೀದಿಗೆ ಮಾತ್ರ ಸಿಎಂ ಬಿ.ಎಸ್ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ. ಮೆಟಲ್ ಸ್ಟೀಲ್ ಮಂಚ, ಬೆಡ್, ನೆಲದ ಮೇಲಿಡುವ ಫ್ಯಾನ್, ಬಕೆಟ್, ಮಗ್ ಖರೀದಿಗೆ ಸರ್ಕಾರ ತೀರ್ಮಾನ ಮಾಡಲಾಗಿದೆ. 6 ವಸ್ತುಗಳನ್ನ 4,800 ರೂಪಾಯಿಗೆ ನೀಡಲು ಬಿಬಿಎಂಪಿಗೆ ಸೂಚನೆ ಕೊಡಲಾಗಿತ್ತು. ಆದರೆ 7,500 ರೂಪಾಯಿ ನೀಡುವಂತೆ ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ. ಇದೇ ಕಾರಣದಿಂದ ಗುತ್ತಿಗೆದಾರರು ಹಾಗೂ ಬಿಬಿಎಂಪಿ ನಡುವೆ ಹಗ್ಗಾಜಗ್ಗಾಟ ನಡೀತಿದೆ. ಸಿಎಂ ಬಿ.ಎಸ್ ಯಡಿಯೂರಪ್ಪ, ಸಿಎಸ್ಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ.
ಕೋವಿಡ್ ಸೆಂಟರ್ಗೆ ಪೂರೈಕೆ ಮಾಡಿದ್ದ ವಸ್ತುಗಳಿಗೆ ದಿನಕ್ಕೆ 800 ರೂಪಾಯಿಯಂತೆ 26 ವಸ್ತು ಪೂರೈಕೆಗೆ ಟೆಂಡರ್ ಕೊಡಲಾಗಿತ್ತು. ಈವರೆಗೆ 6,500 ಬೆಡ್ ಫಿಕ್ಸ್ ಮಾಡಲಾಗಿದೆ. 100 ದಿನಕ್ಕೆ 240 ಕೋಟಿ ರೂಪಾಯಿ ಬಾಡಿಗೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಇದೀಗ 6 ವಸ್ತುಗಳ ಖರೀದಿಗೆ ಮಾತ್ರ ಸಿಎಂ ಸೂಚನೆ ಕೊಟ್ಟಿದ್ದಾರೆ. ದರ ಹಗ್ಗಾಜಗ್ಗಾಟ ಮುಕ್ತಾಯವಾಗಿ ಎಲ್ಲವೂ ಸರಿದಾರಿಗೆ ಬಂದರೆ ಮುಂದಿನ ಸೋಮವಾರದಿಂದ ಕೋವಿಡ್ ಸೆಂಟರ್ ಕಾರ್ಯಾರಂಭ ಮಾಡಲಿದೆ. ಇನ್ನೂ ಕೂಡ ಕೆಲವು ವಸ್ತುಗಳಿಗೆ ಬಾಡಿಗೆ ಕೊಡುವುದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. 26 ವಸ್ತುಗಳ ಪೂಕಿ ಕೇವಲ 6 ವಸ್ತುಗಳನ್ನು ಖರೀದಿ ಮಾಡಲು ಸರ್ಕಾರ ಮುಂದಾಗಿದೆ. ಉಳಿದ ವಸ್ತುಗಳಿಗೆ ಬಾಡಿಗೆ ರೂಪದಲ್ಲಿ ಅದೆಷ್ಟು ಕೋಟಿ ಕೊಡ್ತಾರೆ ಎನ್ನುವುದು ಗೊತ್ತಾಗಬೇಕಿದೆ. ಆ ಗೊಂದಲದ ನಡುವೆ ಕೋವಿಡ್ ಸೆಂಟರ್ ಉದ್ಘಾಟನೆ ಆಗಬೇಕಿದೆ.