Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಹಣ-ಜಾತಿ-ತೋಳ್ಬಲಗಳ ಸೆರೆಯಾಳಾದ ವ್ಯವಸ್ಥೆ

ಹಣ-ಜಾತಿ-ತೋಳ್ಬಲಗಳ ಸೆರೆಯಾಳಾದ ವ್ಯವಸ್ಥೆ
ಹಣ-ಜಾತಿ-ತೋಳ್ಬಲಗಳ ಸೆರೆಯಾಳಾದ ವ್ಯವಸ್ಥೆ
Pratidhvani Dhvani

Pratidhvani Dhvani

August 5, 2019
Share on FacebookShare on Twitter

ಉನ್ನಾವ್ ಮತ್ತು ಕಠುವಾ ಅತ್ಯಾಚಾರ ಪ್ರಕರಣಗಳ ವಿಶ್ಲೇಷಣೆ ಭಾಗ – 2

ಹೆಚ್ಚು ಓದಿದ ಸ್ಟೋರಿಗಳು

ವಿಂಡ್‌ಶೀಲ್ಡ್‌ನಲ್ಲಿ ಬಿರುಕು ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್ ಜೆಟ್ ವಿಮಾನ

ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ ಶಿಂಧೆ ಬಣ

ಶೀಘವ್ರೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು : ಫಡ್ನವೀಸ್

ಹೆಣ್ಣು ದೈವಸಮಾನ ಎಂಬ ಬಿಜೆಪಿಯ ಮಾತು ಅಪ್ಪಟ ಅವಕಾಶವಾದಿ. ವರ್ಷದ ಹಿಂದೆ ಉನ್ನಾವ್ ನ ಕಾಂಡದ ಜೊತೆಗೇ ಬೆಳಕಿಗೆ ಬಂದ ಮತ್ತೊಂದು ಭಯಾನಕ ಘಟನೆ ಜಮ್ಮುವಿನ ಕಠುವಾದಲ್ಲಿ ಜರುಗಿದ್ದು. ಈ ಭೀಭತ್ಸದ ಹಿಂದೆ ಜನಾಂಗೀಯ ‘ಶುದ್ಧಿ’ಯ ಹುನ್ನಾರವಿತ್ತು. ಬಾಕರ್ವಾಲ್ ಎಂಬ ಕುರಿಗಾಹಿ ಮುಸ್ಲಿಂ ಅಲೆಮಾರಿಗಳನ್ನು ಜಮ್ಮುವಿಗೆ ಮರಳಿ ಬಾರದಂತೆ ಹೊರಗಟ್ಟುವ ದ್ವೇಷವಿತ್ತು. ಎಂಟು ವರ್ಷದ ಅಸೀಫಾ ಮುಸ್ಲಿಂ ಜನಾಂಗದಲ್ಲಿ ಹುಟ್ಟಿದ ಕಾರಣಕ್ಕೆ ಜರುಗಿದ ಬಲಾತ್ಕಾರವಿದು. ಈ ಪಾತಕದ ಮೇಲೆ ಪರದೆ ಎಳೆಯಲು ತ್ರಿವರ್ಣ ಧ್ವಜವನ್ನು ಪಟಪಟಿಸಲಾಯಿತು. ಹಿಂದು ಏಕತಾ ಮಂಚ್ ಮತ್ತು ಭಾರತ ಬಚಾವೋ ರಥಯಾತ್ರ ಸಂಘಟನೆಗಳ ಮೊಹರು ಈ ಬಲಾತ್ಕಾರದ ಮೇಲೆ ನ್ಯಾಯಬದ್ಧತೆಯ ಮೊಹರು ಒತ್ತಿದ್ದವು. ಭಾರತ ಮಾತಾ ಕೀ ಜೈ ಘೋಷಣೆ ಕೂಗಲಾಯಿತು. ದೇಶದ ಪರವಾಗಿ ಮಾಡಲಾದ ಬಲಾತ್ಕಾರವಿದು. ಅರ್ಥಾತ್ ‘ರಾಷ್ಟ್ರವಾದಿ’ ಬಲಾತ್ಕಾರ ಎಂದು ಬಿಂಬಿಸುವ ಪ್ರಯತ್ನಗಳು ನಡೆದವು.. ಈ ಬಲಾತ್ಕಾರದಲ್ಲಿ ದೈಹಿಕವಾಗಿ ಭಾಗಿಯಾದವರು ಕೆಲವೇ ಮಂದಿ. ಆದರೆ ಮಾನಸಿಕವಾಗಿ ಭಾಗಿಯಾದವರು ಕೋಟ್ಯಂತರ ಮಂದಿ. ಬಲಾತ್ಕಾರಿಗಳನ್ನು ರಕ್ಷಿಸಲು ಧರ್ಮ ಮತ್ತು ದೇಶಭಕ್ತಿಯನ್ನು ಬಳಸಿದವರೂ ಈ ಬಲಾತ್ಕಾರದಲ್ಲಿ ಭಾಗಿಗಳೇ ಅಲ್ಲವೇ?

ಜಮ್ಮು- ಕಾಶ್ಮೀರ ಕ್ರೈಂ ಬ್ರ್ಯಾಂಚ್ ಆಪಾದನಾ ಪಟ್ಟಿ ಸಲ್ಲಿಸಲು ಅಡ್ಡಿ ಮಾಡಿ ಬಲಾತ್ಕಾರಿಗಳನ್ನು ರಕ್ಷಿಸಲು ಮುಂದಾದವರಲ್ಲಿ ಬಿಜೆಪಿಯ ಹಿಂದೂ ಏಕತಾ ವೇದಿಕೆ ಇತ್ತು, ಕಾಂಗ್ರೆಸ್ ಬೆಂಬಲಿಗರೂ ಇದ್ದರು. ಉತ್ತರಪ್ರದೇಶದ ದಾದ್ರಿಯ ಅಖ್ಲಾಕ್ ಅಹ್ಮದನನ್ನು ಜಜ್ಜಿ ಕೊಂದವರಲ್ಲಿ ಒಬ್ಬ ಸತ್ತಾಗ ಆತನ ಕಳೇಬರಕ್ಕೆ ತ್ರಿವರ್ಣಧ್ವಜ ಹೊದಿಸಿ ಹುತಾತ್ಮ ಪಟ್ಟ ನೀಡಲಾಯಿತು. ಪಹಲೂಖಾನ್ ನ ಹಂತಕರನ್ನು ಭಗತ್ ಸಿಂಗ್ ಎಂದು ಕರೆಯಲಾಯಿತು. ಜಮ್ಮುವಿನ ಹಿಂದೂ ಆಪಾದಿತರನ್ನು ಮುಸ್ಲಿಂ ಕಾಶ್ಮೀರದ ಪೊಲೀಸರು ಮಟ್ಟ ಹಾಕಲು ಹೊರಟಿದ್ದಾರೆ ಎಂಬುದಾಗಿ ನಡೆದ ಪ್ರತಿಭಟನೆಯಲ್ಲಿ ರಾಜ್ಯದ ಅಂದಿನ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರದ ಇಬ್ಬರು ಬಿಜೆಪಿ ಮಂತ್ರಿಗಳೂ ಭಾಗವಹಿಸಿದ್ದರು.

ಬಾಕರ್ವಾಲ ಅಲೆಮಾರಿ ಮುಸ್ಲಿಮರು ಮತ್ತು ಸ್ಥಳೀಯ ಹಿಂದೂಗಳ ನಡುವಣ ಮನಸ್ತಾಪ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ನಡೆದಿದೆ. ಎರಡೂ ಸಮುದಾಯಗಳು ಪೊಲೀಸ್ ಠಾಣೆಗಳ ಮೆಟ್ಟಿಲು ಹತ್ತಿವೆ. ಹಿಂದೂಗಳಿಗೆ ಸೇರಿದ ಜಮೀನಿಗೆ ನಮ್ಮ ಆಡು ಕುರಿ ಕುದುರೆಗಳು ಸುಳಿದರೆ ಹರಿತ ಕತ್ತಿಗಳಿಂದ ಅವುಗಳನ್ನು ಇರಿಯಲಾಗುತ್ತದೆ. ಪ್ರಾಣಿಗಳಿಗೆ ಹಿಂದು ಭೂಮಿ ಮುಸ್ಲಿಂ ಭೂಮಿ ಎಂಬ ಫರಕು ತಿಳಿಯುತ್ತದೇನು ಎಂದು ಕೇಳಿದ್ದ ಆಸೀಫಾಳ ಅಜ್ಜ.

ಬಿಜೆಪಿಯ ಬಲಗುಂದಿಸುವ ಅಥವಾ ಅದಕ್ಕೆ ರಾಜಕೀಯವಾಗಿ ಅನಾನುಕೂಲ ಉಂಟು ಮಾಡುವ ರೇಪ್ ರಾಷ್ಟ್ರವಿರೋಧಿಯೂ, ಬಲ ಹೆಚ್ಚಿಸುವ ರೇಪ್ ರಾಷ್ಟ್ರವಾದಿಯೂ ಆಗಿರುವಂತೆ ತೋರುತ್ತಿದೆ.

ಕಠುವಾ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಅರ್ಚಕ ಸಂಜೀ ರಾಮ್ ಗೆ ಪಂಜಾಬ್ ನ ಪಠಾಣಕೋಟ್ ಕೋರ್ಟ್ ಜೂನ್ 10, 2019 ರಂದು ಜೀವಾವಧಿ ಶಿಕ್ಷೆ ಘೋಷಿಸಿತು.

ಹಣಬಲ-ತೋಳ್ಬಲ-ಜಾತಿಬಲ ಹೊಂದಿರುವ ರಾಜಕಾರಣಿಗಳನ್ನು ಬಚಾವು ಮಾಡಲು ರಾಜಕೀಯ ಪಕ್ಷಗಳು ಯಾವ ಲಜ್ಜೆಗೇಡಿ ಹಂತಕ್ಕೂ ಹೋಗಬಲ್ಲವು. ಇತಿಹಾಸವನ್ನು ಕೆದಕಿದರೆ ಕಾಂಗ್ರೆಸ್ ಮೂಗಿನಡಿ ನಡೆದಿರುವ ಇಂತಹುದೇ ಪ್ರಕರಣಗಳು ಬೆಳಕಿಗೆ ಬಂದಾವು. ಮೊನ್ನೆ ಮೊನ್ನೆ 2014ರಲ್ಲಿ ಸಮಾಜವಾದಿ ಪಾರ್ಟಿಯು ಗಾಯತ್ರಿ ಪ್ರಸಾದ ಪ್ರಜಾಪತಿ ಎಂಬ ತನ್ನ ಮಂತ್ರಿಯನ್ನು ಹೀಗೆಯೇ ರಕ್ಷಿಸಿಕೊಂಡಿತ್ತು. ಈಗ ರಜಪೂತ-ಠಾಕೂರ್ ವೋಟುಗಳಿಗಾಗಿ ಬಿಜೆಪಿಯು ಸೆಂಗರ್ ನನ್ನು ರಕ್ಷಿಸಿಕೊಳ್ಳುತ್ತಿರುವಂತೆಯೇ, ಆಗ ಹಿಂದುಳಿದ ವರ್ಗಗಳ ವೋಟುಗಳಿಗಾಗಿ ಸಮಾಜವಾದಿ ಪಾರ್ಟಿಯು ಪ್ರಜಾಪತಿಯನ್ನು ಬಿಟ್ಟುಕೊಡಲು ಸಿದ್ಧವಿರಲಿಲ್ಲ.

ಚಿತ್ರಕೂಟಕ್ಕೆ ಸೇರಿದ್ದ ಯುವತಿಯನ್ನು ಮನೆ ಮತ್ತು ಉದ್ಯೋಗ ಕೊಡಿಸುವ ಆಮಿಷ ಒಡ್ಡಿ ಲಖ್ನೋಗೆ ಕರೆದು, ಪ್ರಜಾಪತಿ ಮತ್ತು ಆತನ ಬಂಟರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಅತ್ಯಾಚಾರದ ವಿಡಿಯೋ ಚಿತ್ರೀಕರಣ ಮಾಡಿ, ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿತ್ತು. ಆಗಲೂ ಪೊಲೀಸರು ಆಕೆಯ ದೂರು ದಾಖಲಿಸದೆ ಕಂಬ ಸುತ್ತಿಸಿದರು. ಪ್ರಜಾಪತಿಯ ಬಂಧನ ಸಾಧ್ಯವಾದದ್ದು ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರವೇ. ಈಗ ಸೆಂಗರ್ ರಕ್ಷಣೆಗೆ ನಿಂತಿರುವ ಆಡಳಿತ ಪಕ್ಷ ಬಿಜೆಪಿ, ಆಗ ಪ್ರತಿಪಕ್ಷವಾಗಿತ್ತು. ಪ್ರಜಾಪತಿ ಮತ್ತು ಬಂಟರಿಂದ ಸಾಮೂಹಿಕ ಅತ್ಯಾಚಾರಕ್ಕೆ ಈಡಾಗಿದ್ದ ಸಂತ್ರಸ್ತೆ ಯುವತಿಯ ಪರವಾಗಿ ನಿಂತು ತುರುಸಿನ ರಾಜಕಾರಣ ನಡೆಸಿತು. ಪ್ರಜಾಪತಿಯನ್ನು ಸಂಪುಟದಿಂದ ಕೈಬಿಟ್ಟು ಪಕ್ಷದಿಂದ ಉಚ್ಚಾಟಿಸುವಂತೆ ಆಗ್ರಹಿಸಿತ್ತು. ಜೈಲು ಸೇರಿದ್ದ ಪ್ರಜಾಪತಿಯ ವಿರುದ್ಧ ಯುವತಿ ಇತ್ತೀಚೆಗೆ ಅತ್ಯಾಚಾರದ ದೂರು ವಾಪಸು ಪಡೆದಳು. ಅತ್ಯಾಚಾರ ನಡೆಸಿದ್ದು, ಆತನ ಬಂಟರೇ ವಿನಾ ಪ್ರಜಾಪತಿ ಅಲ್ಲ ಎಂಬ ಹೇಳಿಕೆ ನೀಡಿ ಈ ಮಾಜಿ ಮಂತ್ರಿಯನ್ನು ಪಾರು ಮಾಡಿದ್ದಾಳೆ. ಹಿನ್ನೆಲೆಯಲ್ಲಿ ಕೆಲಸ ಮಾಡಿರುವುದು ಭಯವೋ ಆಮಿಷವೋ ಸದ್ಯಕ್ಕೆ ತಿಳಿಯದು. ಅಂದ ಹಾಗೆ ಜೈಲು ಸೇರಿದ ತನ್ನನ್ನು ಸಮಾಜವಾದಿ ಪಾರ್ಟಿ ನಿರ್ಲಕ್ಷಿಸಿತು ಎಂದು ಪ್ರಜಾಪತಿ ಕುಪಿತನಾಗಿದ್ದಾನೆ. ಆತನ ಮಕ್ಕಳು ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ, ಅಮೇಠಿಯಲ್ಲಿ ಸ್ಮೃತಿ ಜುಬಿನ್ ಇರಾನಿಯ ಗೆಲುವಿಗೆ ಪ್ರಚಾರ ನಡೆಸಿದರು.

ಆದರೆ ಮಾಯಾವತಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಬಂಡಾ ಕ್ಷೇತ್ರದ ಶಾಸಕ ಪುರುಷೋತ್ತಮ ನರೇಶ ದ್ವಿವೇದಿಯ ಮೇಲೆ ಬಂದ ಅತ್ಯಾಚಾರದ ಆರೋಪವನ್ನು ತಡಮಾಡದೆ ಸಿಬಿಐಗೆ ಒಪ್ಪಿಸಿದ್ದುಂಟು. ಆದರೂ ಸಂತ್ರಸ್ತೆಯ ಪಾಲಿಗೆ ತಡ ಆಗಿತ್ತು. ದ್ವಿವೇದಿಯಿಂದ ಅತ್ಯಾಚಾರಕ್ಕೆ ಗುರಿಯಾದ ಶೀಲೂ ನಿಶಾದ್ ಇದೀಗ ಉನ್ನಾವ್ ಯುವತಿಗೆ ನ್ಯಾಯ ದೊರಕಿಸಿಕೊಡಿ ಎಂದು ದನಿ ಎತ್ತಿದ್ದಾಳೆ.

ಆಕೆಯ ಅಹವಾಲನ್ನು ಆಕೆಯ ಮಾತುಗಳಲ್ಲೇ ಕೇಳಿ- 2011ರಲ್ಲಿ ಬಿ.ಎಸ್.ಪಿ. ಶಾಸಕ ಪುರುಷೋತ್ತಮ ದ್ವಿವೇದಿ ನನ್ನ ಮೇಲೆ ಅತ್ಯಾಚಾರ ನಡೆಸಿದ. ಆಗ ನನ್ನ ವಯಸ್ಸು 17. ತೀವ್ರ ನೋವಿನ ಕಾರಣ ದಿನಗಟ್ಟಲೆ ನಡೆಯಲಾಗಲಿಲ್ಲ. 22 ದಿನಗಳ ಕಾಲ ರಕ್ತಸ್ರಾವ. ಮಾನಸಿಕವಾಗಿಯೂ ಛಿದ್ರವಾಗಿದ್ದೆ. ಶಾಸಕನ ಬಂಟರು ಮತ್ತು ಪಕ್ಷದ ಕಾರ್ಯಕರ್ತರು ಬಾಯಿ ಬಿಡದಂತೆ ಬೆದರಿಕೆ ಹಾಕಿದ್ದರು. ತೆಪ್ಪಗಿದ್ದರೂ ನನ್ನ ಮೇಲೆ ಕಳ್ಳತನದ ಆರೋಪ ಹೊರಿಸಿ ಜೈಲಿಗೆ ಕಳಿಸಿದರು. ಜೈಲಿನಿಂದ ಹೊರಬಿದ್ದರೆ ಕೊಂದು ಹಾಕುತ್ತಾರೆಂದು ಹೇಳುತ್ತಿದ್ದ ಕಾರಣ ಜೈಲುವಾಸವೇ ಲೇಸು ಎನಿಸಿತ್ತು. ರಾಜಿ ಮಾಡಿಕೊಳ್ಳುವಂತೆ ನನ್ನ ಭಯಭೀತ ಕುಟುಂಬದ ಮೇಲೆ ಭಾರೀ ಒತ್ತಡವಿತ್ತು. ನಾನೂ ಹೆದರಿದ್ದೆ. ನನ್ನನ್ನು ಬೆಂಬಲಿಸಿದವರ ಮನೆಗಳ ಸುಟ್ಟು ಹಾಕುವುದಾಗಿ ಗ್ರಾಮಸ್ತರಿಗೆ ಎಚ್ಚರಿಕೆ ನೀಡಲಾಗಿತ್ತು. ಬಡರೈತನ ಮಗಳು ನಾನು ಗೊಂದಲಕ್ಕೆ ಬಿದ್ದಿದ್ದೆ, ವ್ಯಗ್ರಳಾಗಿದ್ದೆ. ನ್ಯಾಯಕ್ಕಾಗಿ ಹೋರಾಡಲು ತೀರ್ಮಾನಿಸಿದೆ, ದೂರು ದಾಖಲಿಸಿದೆ. ಮಾಧ್ಯಮಗಳ ಮುಂದೆ ಮಾತಾಡಿದೆ. ಗುಲಾಬಿ ಗ್ಯಾಂಗ್ ನ ಸಂಪತ್ ಪಾಲ್ ಅವರನ್ನು ಸಂಪರ್ಕಿಸಿದೆ. ದೆಹಲಿಗೆ ತೆರಳಿ ಪ್ರತಿಭಟನೆಗಳು, ಸುದ್ದಿ ಚರ್ಚೆಗಳಲ್ಲಿ ಭಾಗವಹಿಸಿದೆ. ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಭಟನೆಗಳಲ್ಲಿ ಭಾಗವಹಿಸಿದೆ. ಬಂಡಾ ದಿಂದ ಶಾಸಕನ ವಿರುದ್ಧ ದೂರು ನೀಡಿದ್ದ ಮೊದಲ ಮಹಿಳೆಯಾಗಿದ್ದೆ. ಇದೆಲ್ಲವನ್ನು ನಾನು ಇತರರ ಸಹಾಯದಿಂದ ಸಾಧಿಸಿದೆ. ಎಫ್.ಐ.ಆರ್. ದಾಖಲಾದ ತಕ್ಷಣ ನನ್ನ ಆತ್ಮರಕ್ಷಣೆಗೆಂದು ಗನ್ ಮ್ಯಾನ್ ನೀಡಲಾಯಿತು. ಪಿಸ್ತೂಲನ್ನೂ ಕೊಟ್ಟರು. ಉನ್ನಾವದ ಹುಡುಗಿಗೂ ಇಂತಹುದೇ ರಕ್ಷಣೆಯ ಅಗತ್ಯವಿದೆ. ಆಕೆಗೆ ಸುಲಭವಾಗಿ ನ್ಯಾಯ ದೊರೆಯುವ ಭರವಸೆ ನನಗಿಲ್ಲ.

ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಬೇಕಿರುವ ಈ ಕಟು ಸತ್ಯಗಳು ಹೊರಬಿದ್ದ ಬಳಿಕವೂ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ- ಗೃಹಮಂತ್ರಿ-ಪಕ್ಷದ ಅಧ್ಯಕ್ಷ ತುಟಿ ಬಿಚ್ಚುವುದಿಲ್ಲವೆಂದರೆ ಆತ್ಮಸಾಕ್ಷಿಗಳು ಯಾವ ಪರಿ ಕೊಳೆತು ಹೋಗಿರಬಹುದು! ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷಕ್ಕೆ, ನೈತಿಕತೆ ಅನೈತಿಕತೆಗಳು ಅನ್ವಯ ಆಗುವುದಿಲ್ಲವೇ? ಅನ್ಯಾಯವನ್ನು ಖಂಡಿಸದಂತೆ ಇವರೆಲ್ಲರ ಬಾಯಿಗೆ ಬಿದ್ದಿರುವ ಬೆರಗಿನ ಬೀಗ ಯಾವುದದು? ತಾನು ಇತರೆ ಪಕ್ಷಗಳಿಗಿಂತ ಭಿನ್ನ ಎಂದು ಮುಟ್ಟಿ ಹೇಳಿಕೊಳ್ಳುವ ನೈತಿಕ ಧೈರ್ಯವನ್ನು ಈ ಪಕ್ಷ ಈಗಲೂ ಉಳಿಸಿಕೊಂಡಿದೆಯೇ?

RS 500
RS 1500

SCAN HERE

don't miss it !

ನೂಪುರ್‌ ಹೇಳಿಕೆ ಬೆಂಬಲಿಸಿದ ಮತ್ತೊಂದು ಹತ್ಯೆ: ಮಹಾರಾಷ್ಟ್ರದಲ್ಲಿ 5 ಬಂಧನ
ದೇಶ

ನೂಪುರ್‌ ಹೇಳಿಕೆ ಬೆಂಬಲಿಸಿದ ಮತ್ತೊಂದು ಹತ್ಯೆ: ಮಹಾರಾಷ್ಟ್ರದಲ್ಲಿ 5 ಬಂಧನ

by ಪ್ರತಿಧ್ವನಿ
July 2, 2022
ಹಿಂದುತ್ವದ ಮೇಲೆ ನಂಬಿಕೆಯಿಲ್ಲದ ಯಾವುದೇ ಸರ್ಕಾರ NDA ಆಡಳಿತದ ಭಾರತದಲ್ಲಿ ಸುರಕ್ಷಿತವಲ್ಲ: ಯಶವಂತ್‌ ಸಿನ್ಹಾ ಕಿಡಿ
ದೇಶ

ಹಿಂದುತ್ವದ ಮೇಲೆ ನಂಬಿಕೆಯಿಲ್ಲದ ಯಾವುದೇ ಸರ್ಕಾರ NDA ಆಡಳಿತದ ಭಾರತದಲ್ಲಿ ಸುರಕ್ಷಿತವಲ್ಲ: ಯಶವಂತ್‌ ಸಿನ್ಹಾ ಕಿಡಿ

by ಪ್ರತಿಧ್ವನಿ
July 2, 2022
ಸಿದ್ದರಾಮೋತ್ಸವ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ : ಎಚ್.ಸಿ ಮಹಾದೇವಪ್ಪ ಅಸಮಾಧಾನ
ಕರ್ನಾಟಕ

ಸಿದ್ದರಾಮೋತ್ಸವ ಬಗ್ಗೆ ಅನಗತ್ಯ ಗೊಂದಲ ಸೃಷ್ಟಿ : ಎಚ್.ಸಿ ಮಹಾದೇವಪ್ಪ ಅಸಮಾಧಾನ

by ಪ್ರತಿಧ್ವನಿ
July 4, 2022
ಎರಡು ವರ್ಷದಲ್ಲಿ ಅಮೃತ ನಗರೋತ್ಥಾನ ಯೋಜನೆ ಪೂರ್ಣಗೊಳಿಸಲು ಸಿಎಂ ಬೊಮ್ಮಾಯಿ ಸೂಚನೆ
ಕರ್ನಾಟಕ

ಮೀನುಗಾರಿಕೆಯಿಂದ ರಾಜ್ಯದ ಒಟ್ಟು ಜಿಡಿಪಿಯಲ್ಲಿ ವೃದ್ಧಿ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
July 4, 2022
ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್ : ಹವಾಮಾನ ಇಲಾಖೆ
ಕರ್ನಾಟಕ

ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್ : ಹವಾಮಾನ ಇಲಾಖೆ

by ಕರ್ಣ
July 1, 2022
Next Post
ಕಲಂ 370

ಕಲಂ 370, 35ಎ ರದ್ದು: ಪ್ರತಿಪಕ್ಷಗಳ ವಿರುದ್ಧ ಬಿಜೆಪಿಗೆ ಮತ್ತೊಂದು ಅಸ್ತ್ರ

ಕಾಶ್ಮೀರ ಸಮಸ್ಯೆ ಪರಿಹಾರ: ಇತಿಹಾಸ ಸೇರಿರುವ ಪ್ರಯತ್ನಗಳು

ಕಾಶ್ಮೀರ ಸಮಸ್ಯೆ ಪರಿಹಾರ: ಇತಿಹಾಸ ಸೇರಿರುವ ಪ್ರಯತ್ನಗಳು

ಕಾಶ್ಮೀರ ಕಣಿವೆ: ರಾಜಾಡಳಿತದಿಂದ... ಕೇಂದ್ರಾಡಳಿತದವರೆಗೆ

ಕಾಶ್ಮೀರ ಕಣಿವೆ: ರಾಜಾಡಳಿತದಿಂದ... ಕೇಂದ್ರಾಡಳಿತದವರೆಗೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist