• Home
  • About Us
  • ಕರ್ನಾಟಕ
Wednesday, November 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸೋದರಳಿಯನ ಸೆಳೆಯಲು ಕುಟುಂಬ ಪ್ರೇಮ ಅಸ್ತ್ರವಾಯಿತೇ? 

by
March 10, 2020
in ದೇಶ
0
ಸೋದರಳಿಯನ ಸೆಳೆಯಲು ಕುಟುಂಬ ಪ್ರೇಮ ಅಸ್ತ್ರವಾಯಿತೇ? 
Share on WhatsAppShare on FacebookShare on Telegram

ಮಧ್ಯಪ್ರದೇಶದಲ್ಲಿ ಜೋತಿರಾದಿತ್ಯ ಸಿಂಧಿಯಾ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದಾರೆ. 18 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಜೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರಿರುವುದಕ್ಕೆ ವಿಶೇಷ ಕಾರಣಗಳಿವೆ. ಜೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯಾಗುವ ಕಾರ್ಯಕ್ರಮಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಬಂದು ಸ್ವಾಗತಿಸಿದ್ದಾರೆ ಎಂದ ಮೇಲೆ ಏನೋ ವಿಶೇಷತೆ ಇರಲೇ ಬೇಕು.

ADVERTISEMENT

1947ರಲ್ಲಿ ಗ್ವಾಲಿಯರ್‌ನ ರಾಜ ಮನೆತನ ಅಧಿಕಾರದಲ್ಲಿತ್ತು. ಭಾರತದ ಒಕ್ಕೂಟ ಗಣರಾಜ್ಯಕ್ಕೆ ಸೇರ್ಪಡೆಯಾದ ಬಳಿಕ ರಾಜ ಜಿವಾಜಿ ರಾವ್ ಸಿಂಧಿಯಾ ಕಾಲವಾದ ನಂತರ ಸಿಂಧಿಯಾ ಕುಟುಂಬ ಬಿಜೆಪಿ ಸೇರ್ಪಡೆಯಾಗಿತ್ತು. ಮೂಲತಃ ಮರಾಠ ಪ್ರದೇಶದ ಕುಟುಂಬವಾದ ಜಿವಾಜಿ ರಾವ್ ಸಿಂಧಿಯಾಗೆ ಒಟ್ಟು ನಾಲ್ವರು ಮಕ್ಕಳು ಅದರಲ್ಲಿ ಉಶಾರಾಜೇ, ಮಾಧವ ರಾವ್ ಸಿಂಧಿಯಾ, ವಸುಂಧರ ರಾಜೆ, ಯಶೋಧರ ರಾಜೆ. ಜಿವಾಜಿ ರಾವ್ ಸಿಂಧಿಯಾ ಬಳಿಕ ಮಾಧವ ರಾವ್ ಸಿಂಧಿಯಾ ಕುಟುಂಬ ಕ್ರಮೇಣ ಕಾಂಗ್ರೆಸ್
ಪಕ್ಷಕ್ಕೆ ಸೇರ್ಪಡೆಯಾಗಿ ಕೇಂದ್ರ, ರಾಜ್ಯದಲ್ಲೂ ಅಧಿಕಾರ ಅನುಭವಿಸಿದ್ರು. ಇದೀಗ ಇದೇ ಮಾಧವ ರಾವ್
ಸಿಂಧಿಯಾ ಸಹೋದರಿ ವಸುಂಧರ ರಾಜೆ ಈಗಿನ ಬಿಜೆಪಿ ನಾಯಕಿ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ. ಈ ಆಪರೇಷನ್ ಕಮಲದ ಪ್ರಮುಖ ಸೂತ್ರಧಾರಿ ಎನ್ನಲಾಗುತ್ತಾ ಇದೆ.

ಅಣ್ಣನ ಮಗನಾದ ಜೋತಿರಾದಿತ್ಯ ಸಿಂಧಿಯಾ, ಸಂಬಂಧದಲ್ಲಿ ಅಳಿಯ. ಸೋದರಳಿಯ ಜೋತಿರಾದಿತ್ಯ ಸಿಂಧಿಯಾ ಅವರನ್ನು ಕಾಂಗ್ರೆಸ್ ನಿಂದ ಹೊರಕ್ಕೆ ಕರೆತಂದು ಬಿಜೆಪಿ ಸೇರಿಸುವ ಹೊಣೆಗಾರಿಕೆಯನ್ನು ವಸುಂಧರ ರಾಜೆ ಅವರಿಗೆ ವಹಿಸಲಾಗಿತ್ತು. ಇದೇ ಕಾರಣಕ್ಕೆ ಆಪರೇಷನ್ ಕಮಲ ಎಲ್ಲೂ ಬಹಿರಂಗವಾಗದೆ ಕುಟುಂಬದ ಒಳಗೇ ನಡೆದು ಹೋಗಿದೆ. ವಸುಂಧರ ರಾಜೆ ಸೂತ್ರಧಾರಿ ಆಗಿದ್ದರೂ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ.

ಆದರೆ 2018ರಲ್ಲಿ ಕಾಂಗ್ರೆಸ್ ಪರ ಸಾಕಷ್ಟು ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮ ವಹಿಸಿದ್ದು ಜೋತಿರಾದಿತ್ಯ ಸಿಂಧಿಯಾ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್
ಅಧಿಕಾರ ಹಿಡಿಯುವುದು ಖಚಿತ ಆಗುತ್ತಿದ್ದಂತೆ ಜೋತಿರಾದಿತ್ಯ ಮುಖ್ಯಮಂತ್ರಿ ಆಗಬೇಕು ಎನ್ನುವ ಕೂಗು ಎದ್ದಿತ್ತು. ಆದರೆ, ಹಿರಿತನದ ಆಧಾರದ ಮೇಲೆ ಕಮಲನಾಥ್ ಮುಖ್ಯಮಂತ್ರಿ ಆಗಲು ಕಾಂಗ್ರೆಸ್ ಹೈಕಮಾಂಡ್
ಒಪ್ಪಿಗೆ ಸೂಚಿಸಿತ್ತು. ಅಂದಿನಿಂದಲೂ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದ ಜೋತಿರಾದಿತ್ಯ ಸಿಂಧಿಯಾ, ಪಕ್ಷದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡಿದ್ದರು.

ಜೋತಿರಾದಿತ್ಯ ಸಿಂಧಿಯಾ ಒಂದು ಕಾಲದಲ್ಲಿ ರಾಹುಲ್ ಗಾಂಧಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ನಾಯಕ. ಆದ್ರೆ ರಾಹುಲ್ ಆಪ್ತನಾಗಿ ಇಡೀ ಮಧ್ಯಪ್ರದೇಶ ಸುತ್ತಾಡಿ ಕಾಂಗ್ರೆಸ್
ಅಧಿಕಾರಕ್ಕೆ ತಂದರೂ 48 ವರ್ಷದ ಜೋತಿರಾದಿತ್ಯ ಸಿಂಧಿಯಾ ಅವರನ್ನು ಕಡೆಗಣಿಸಿ, 74 ವರ್ಷದ ಕಮಲನಾಥ್ ರನ್ನು ಆಯ್ಕೆ ಮಾಡಲಾಗಿತ್ತು. ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊಂದಿದ್ದ ನಾಯಕನನ್ನೇ ಆಪರೇಷನ್ ಮಾಡಿದರೆ ಅನುಕೂಲ ಎನ್ನುವ ಏಕೈಕ ಕಾರಣಕ್ಕೆ ಜೋತಿರಾದಿತ್ಯ ಸಿಂಧಿಯಾ ಅವರನ್ನು ಸೆಳೆಯುವ ತಂತ್ರಗಾರಿಕೆ ಮಾಡಲಾಯ್ತು ಎನ್ನಲಾಗಿದೆ. ಒಂದು ವೇಳೆ ಆಪರೇಷನ್ ಕಮಲ ವಿಫಲವಾದರೆ ಅವಮಾನ ಎನ್ನುವ ಕಾರಣಕ್ಕೆ ಕುಟುಂಬಸ್ಥರನ್ನೇ ಅಸ್ತ್ರ ಮಾಡಿಕೊಂಡ ಕಮಲ ನಾಯಕರು ವಸುಂದರ ರಾಜೆಯನ್ನೇ ಅಖಾಡಕ್ಕೆ ಇಳಿಸಿ ಅಳಿಯನನ್ನು ಸೆಳೆದಿದ್ದಾರೆ.

ಮೊದಲೇ ಕಾಂಗ್ರೆಸ್ ನಲ್ಲಿ ಅಸಮಾಧಾನಗೊಂಡು ರಾಹುಲ್ ಗಾಂಧಿಯಿಂದಲೂ ದೂರವಾಗಿದ್ದ ಜೋತಿರಾದಿತ್ಯ ಸಿಂಧಿಯಾ ಕಮಲಕ್ಕೆ ಜೈ ಎಂದಿದ್ದಾರೆ. ಜೊತೆಗೆ 22 ಜನ ಶಾಸಕರನ್ನು ಕರೆದುಕೊಂಡು ಹೊರಟಿದ್ದಾರೆ. ಇನ್ನೂ 8 ಜನ ಶಾಸಕರು ರಾಜೀನಾಮೆ ನೀಡುತ್ತಾರೆ ಎನ್ನುವ ಮಾಹಿತಿಯೂ ಇದೆ. ಒಟ್ಟಾರೆ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಮುಳುಗುತ್ತಿದೆ.

Tags: BJPjyotiraditya scindiaKamal NathMadhya Pradesh
Previous Post

ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್: ಬಲಿಷ್ಠ ಮಹಿಳಾ ತಂಡ ಕಟ್ಟಲು ಸಹಾಯಕ

Next Post

ಮಾಜಿ ಸ್ಪೀಕರ್ ಮತ್ತು ಸಚಿವರೇ, ವಿಧಾನಸಭೆಯಲ್ಲಿ ಇದೆಲ್ಲಾ ಬೇಕಿತ್ತಾ?

Related Posts

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?
Top Story

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

by ಪ್ರತಿಧ್ವನಿ
November 12, 2025
0

ನವದೆಹಲಿ: ದೇಶದಲ್ಲಿ ಏನೇ ನಡೆದರೂ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಚರ್ಚೆಗಳು ಇದ್ದೇ ಇರುತ್ತದೆ. ಘಟನೆ ಸಂಭವಿಸಿದ ರೀತಿ, ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಹೀಗೆ ಒಂದಿಲ್ಲ ಒಂದು...

Read moreDetails
ಮಾಧ್ಯಮ ಸ್ವಾತಂತ್ರ್ಯವೂ-ನೈತಿಕ ಜವಾಬ್ದಾರಿಯೂ

ಮಾಧ್ಯಮ ಸ್ವಾತಂತ್ರ್ಯವೂ-ನೈತಿಕ ಜವಾಬ್ದಾರಿಯೂ

November 12, 2025
ಬಿಹಾರ Exit Poll: ಅಧಿಕಾರದತ್ತ ಎನ್‌ಡಿಎ..ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆ

ಬಿಹಾರ Exit Poll: ಅಧಿಕಾರದತ್ತ ಎನ್‌ಡಿಎ..ಮಹಾಘಟಬಂಧನ್‌ಗೆ ತೀವ್ರ ಹಿನ್ನಡೆ

November 11, 2025

ಮಂಡ್ಯ ಜಿಲ್ಲೆಯ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್..!!

November 11, 2025
ದೆಹಲಿಯಲ್ಲಿ ನಿಗೂಢ ಕಾರು ಸ್ಫೋಟ: ಶಂಕಿತ ವ್ಯಕ್ತಿಯ ಕುಟುಂಬಸ್ಥರು ವಶಕ್ಕೆ

ದೆಹಲಿಯಲ್ಲಿ ನಿಗೂಢ ಕಾರು ಸ್ಫೋಟ: ಶಂಕಿತ ವ್ಯಕ್ತಿಯ ಕುಟುಂಬಸ್ಥರು ವಶಕ್ಕೆ

November 11, 2025
Next Post
ಮಾಜಿ ಸ್ಪೀಕರ್ ಮತ್ತು ಸಚಿವರೇ

ಮಾಜಿ ಸ್ಪೀಕರ್ ಮತ್ತು ಸಚಿವರೇ, ವಿಧಾನಸಭೆಯಲ್ಲಿ ಇದೆಲ್ಲಾ ಬೇಕಿತ್ತಾ?

Please login to join discussion

Recent News

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?
Top Story

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

by ಪ್ರತಿಧ್ವನಿ
November 12, 2025
ಕರ್ನಾಟಕ ಕ್ವಾಂಟಮ್‌ ಎಕೋಸಿಸ್ಟಮ್‌ ಮ್ಯಾಪ್‌ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌ ಭೋಸರಾಜು ಸೂಚನೆ
Top Story

ಕರ್ನಾಟಕ ಕ್ವಾಂಟಮ್‌ ಎಕೋಸಿಸ್ಟಮ್‌ ಮ್ಯಾಪ್‌ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌ ಭೋಸರಾಜು ಸೂಚನೆ

by ಪ್ರತಿಧ್ವನಿ
November 12, 2025
ಧರ್ಮಸ್ಥಳ ಕೇಸ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು
Top Story

ಧರ್ಮಸ್ಥಳ ಕೇಸ್ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವು

by ಪ್ರತಿಧ್ವನಿ
November 12, 2025
ಸಂತೋಷ್‌ ಲಾಡ್‌ V/S ವಿಜಯೇಂದ್ರ ವಾಕ್ಸಮರ: ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಕಾಂಗ್ರೆಸ್‌ ಸಚಿವ
Top Story

ಸಂತೋಷ್‌ ಲಾಡ್‌ V/S ವಿಜಯೇಂದ್ರ ವಾಕ್ಸಮರ: ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಕಾಂಗ್ರೆಸ್‌ ಸಚಿವ

by ಪ್ರತಿಧ್ವನಿ
November 12, 2025
ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನ
Top Story

ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ನಿಧನ

by ಪ್ರತಿಧ್ವನಿ
November 12, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

ಚುನಾವಣೆ ಸಮಯದಲ್ಲೇ ಭಯೋತ್ಪಾದಕರ ದಾಳಿ ಯಾಕೆ?: ನೆಟ್ಟಿಗರ ಪ್ರಶ್ನೆಗೆ ಉತ್ತರಿಸೋರ್ಯಾರು..?

November 12, 2025
ಕರ್ನಾಟಕ ಕ್ವಾಂಟಮ್‌ ಎಕೋಸಿಸ್ಟಮ್‌ ಮ್ಯಾಪ್‌ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌ ಭೋಸರಾಜು ಸೂಚನೆ

ಕರ್ನಾಟಕ ಕ್ವಾಂಟಮ್‌ ಎಕೋಸಿಸ್ಟಮ್‌ ಮ್ಯಾಪ್‌ ತಯಾರಿಸಿ: ಅಧಿಕಾರಿಗಳಿಗೆ ಸಚಿವ ಎನ್‌.ಎಸ್‌ ಭೋಸರಾಜು ಸೂಚನೆ

November 12, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada