Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

`ಸುಪ್ರೀಂ’ ಶಕ್ತಿಯೊಂದಿಗೆ ಬಂದರೂ, ಶಾಸಕರ ರಾಜಿನಾಮೆ ಇದ್ದಲ್ಲೇ ಇದೆ

`ಸುಪ್ರೀಂ’ ಶಕ್ತಿಯೊಂದಿಗೆ ಬಂದರೂ, ಶಾಸಕರ ರಾಜಿನಾಮೆ ಇದ್ದಲ್ಲೇ ಇದೆ
`ಸುಪ್ರೀಂ’ ಶಕ್ತಿಯೊಂದಿಗೆ ಬಂದರೂ
Pratidhvani Dhvani

Pratidhvani Dhvani

July 11, 2019
Share on FacebookShare on Twitter

ಶುಕ್ರವಾರ ಅಧಿವೇಶನ ಆರಂಭವಾಗುವುದರೊಳಗೆ ತಮ್ಮ ರಾಜೀನಾಮೆ ಅಂಗೀಕಾರವಾಗುವಂತೆ ನೋಡಿಕೊಳ್ಳಬೇಕು ಎಂಬ ಗುರಿಯೊಂದಿಗಿದ್ದ ಶಾಸಕರಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಗುರುವಾರ ರಾತ್ರಿಯವರೆಗೆ ಫಲಿತಾಂಶ ಮಾತ್ರ ಶೂನ್ಯ.
ಕಳೆದ ಶನಿವಾರ 13 ಶಾಸಕರು ನೀಡಿದ ರಾಜಿನಾಮೆಗಳನ್ನು ಮಂಗಳವಾರ ಪರಿಶೀಲಿಸಿದ ಸ್ಪೀಕರ್ ರಮೇಶ್ ಕುಮಾರ್, ಐದು ಶಾಸಕ ರಾಜಿನಾಮೆ ಕ್ರಮಬದ್ಧವಾಗಿದ್ದು, ತಮ್ಮ ಮುಂದೆ ಹಾಜರಾಗುವಂತೆ ಆ ಶಾಸಕರಿಗೆ ಸೂಚನೆ ನೀಡಲಾಗಿದೆ. ಉಳಿದ ಎಂಟು ನಾಮಪತ್ರಗಳು ಕ್ರಮಬದ್ಧವಲ್ಲ. ಈ ವಿಚಾರವನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದರು. ಯಾವುದೋ ಹಪಾಹಪಿಗೆ ಸಿಕ್ಕಿಕೊಳ್ಳದೆ ಶಾಸಕರು ತಾಳ್ಮೆಯಿಂದ ಯೋಚಿಸಿದ್ದರೆ ಅಥವಾ ತಮ್ಮ ಬದ್ಧತೆ ಬಗ್ಗೆ ನಂಬಿಕೆ ಇದ್ದಿದ್ದರೆ ನೇರವಾಗಿ ಸ್ಪೀಕರ್ ಅವರನ್ನು ಭೇಟಿಯಾಗಿ ಕ್ರಮಬದ್ಧವಲ್ಲದ ರಾಜಿನಾಮೆಯನ್ನು ಕ್ರಮಬದ್ಧಗೊಳಿಸಿಕೊಳ್ಳಬಹುದಿತ್ತು. ತಾವು ಸ್ವ ಇಚ್ಛೆಯಿಂದ ಹಾಗೂ ಯಾವುದೇ ಒತ್ತಡಕ್ಕೆ ಒಳಗಾಗದೆ ರಾಜಿನಾಮೆ ನೀಡಿರುವುದಾಗಿ ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಳ್ಳಬಹುದಿತ್ತು.

ಹೆಚ್ಚು ಓದಿದ ಸ್ಟೋರಿಗಳು

ಟಿಆರ್‌ಎಸ್‌ ಟ್ವೀಟ್‌ಗೆ ಉರ್ದುವಿನಲ್ಲಿ ಟಕ್ಕರ್‌ ಕೊಟ್ಟ ಬಿಜೆಪಿ

ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಆದೇಶ ಹೊರಡಿಸಿದ ಅಖಿಲೇಶ್ ಯಾದವ್

ಮುಂದಿನ 30 ರಿಂದ 40 ವರ್ಷಗಳು ಬಿಜೆಪಿಯ ಯುಗ : ಅಮಿತ್ ಶಾ

ಇಂತಹ ಅವಕಾಶ ಇದ್ದರೂ ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂತೆ ಅತೃಪ್ತ ಶಾಸಕರು ನೇರವಾಗಿ ಸ್ಪೀಕರ್ ಮುಂದೆ ಬರುವ ಬದಲು ಸುಪ್ರೀಂ ಕೋರ್ಟ್ ಮೊರೆ ಹೋದರು. ಆದರೆ, ಸುಪ್ರೀಂ ಕೋರ್ಟ್ ಕೂಡ ಹೇಳಿದ್ದು ಅಷ್ಟೆ. ಸಂಜೆಯೊಳಗೆ ಸ್ಪೀಕರ್ ಬಳಿ ಹೋಗಿ ರಾಜಿನಾಮೆಗೆ ಸಂಬಂಧಿಸಿದಂತೆ ನಿಮ್ಮ ಅಹವಾಲು ಮಂಡಿಸಿ. ಅವರು ಆ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳಲಿ ಎಂದು. ಅದರಂತೆ ಅತೃಪ್ತ ಶಾಸಕರು ಮುಂಬೈನಿಂದ ವಿಶೇಷ ವಿಮಾನದಲ್ಲಿ ಬಂದು ಗಡಿಬಿಡಿಯಲ್ಲಿ ಸ್ಪೀಕರ್ ಅವರನ್ನು ಭೇಟಿಯಾಗಿ ಕ್ರಮಬದ್ಧ ನಾಮಪತ್ರ ಸಲ್ಲಿಸಿ ವಾಪಸ್ ಮುಂಬೈಗೆ ತೆರಳಿದ್ದಾರೆ. ಒಂದೊಮ್ಮೆ ಶಾಸಕರು ತಮ್ಮ ಬಗ್ಗೆ ತಾವು ನಂಬಿಕೆ ಹೊಂದಿದ್ದರೆ, ನೇರವಾಗಿ ಸ್ಪೀಕರ್ ಅವರನ್ನು ಭೇಟಿಯಾಗಿ ಈ ಕೆಲಸವನ್ನು ಒಂದು ದಿನ ಮುಂಚೆಯೇ ಮಾಡಿ ತ್ವರಿತ ತೀರ್ಮಾನಕ್ಕೆ ಮನವಿ ಮಾಡಿಕೊಳ್ಳಬಹುದಿತ್ತು. ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಆತ್ಮಾಭಿಮಾನ, ಗೌರವ, ಘನತೆ ಉಳಿಸಿಕೊಂಡು ಬಂದಿರುವ ರಮೇಶ್ ಕುಮಾರ್ ಅವರು ಈ ರೀತಿ ನೇರವಾಗಿ ಬಂದಿದ್ದರೆ ಅದನ್ನು ಪರಿಗಣಿಸುತ್ತಿದ್ದರೋ ಏನೋ

ಸುಪ್ರೀಂ ಆದೇಶವಷ್ಟೇ ಶಾಸಕರಿಗೆ ಶ್ರೀರಕ್ಷೆಯಾಗಬೇಕು:

ಆದರೆ, ಶಾಸಕರು ಸುಪ್ರೀಂ ಕೋರ್ಟ್ ಮೂಲಕ ಸ್ಪೀಕರ್ ರಮೇಶ್ ಕುಮಾರ್ ಬಳಿ ಬಂದಿದ್ದರಿಂದ ಸಹಜವಾಗಿಯೇ ಇದನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಹೀಗಾಗಿ ಏನೇ ಒತ್ತಡ ಬಂದರೂ ನಿಯಮ ಬಿಟ್ಟು ರಾಜಿನಾಮೆ ಅಂಗೀಕರಿಸುವುದಿಲ್ಲ. ಈ ವಿಚಾರವನ್ನು ಸುಪ್ರೀಂ ಕೋರ್ಟ್ ಗಮನಕ್ಕೂ ತರುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸ್ಪೀಕರ್ ಅವರು ತಮ್ಮ ಈ ನಿಲುವುಗೆ ಬದ್ಧವಾಗಿ ತಕ್ಷಣ ಶಾಸಕರ ರಾಜಿನಾಮೆ ಅಂಗೀಕರಿಸುವುದಿಲ್ಲ. ನಿಯಮಾವಳಿ ಪ್ರಕಾರ ವಿಚಾರಣೆ ನಡೆಸಿಯೇ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟವಾಗಿ ಹೇಳಿದರೆ ಕೋರ್ಟ್ ಕೂಡ ಮಧ್ಯಪ್ರವೇಶಿಸಲು ಸ್ವಲ್ಪ ಯೋಚಿಸಬೇಕಾಗುತ್ತದೆ. ಏಕೆಂದರೆ, ಸ್ಪೀಕರ್ ಅಥವಾ ಸದನದ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹಿಂದೆ ಲೋಕಸಭೆಯ ಅಧ್ಯಕ್ಷರಾಗಿದ್ದ ಸೋಮನಾಥ್ ಚಟರ್ಜಿ ಅವರು ಈ ಹಿಂದೆ ಸ್ಪಷ್ಟವಾಗಿ ಕೋರ್ಟ್ ಆದೇಶ ತಳ್ಳಿಹಾಕಿದ್ದರು. ಆ ವೇಳೆ ಕೋರ್ಟ್ ಏನೂ ಕ್ರಮ ಕೈಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೇ ರೀತಿ ಸ್ಪೀಕರ್ ರಮೇಶ್ ಕೂಡ ಖಡಕ್ ನಿರ್ಧಾರ ಕೈಗೊಂಡರೆ ಆಗ ಕೋರ್ಟ್ ಏನು ಆದೇಶಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಒಂದೊಮ್ಮೆ ರಾಜಿನಾಮೆ ಕುರಿತು ತಕ್ಷಣ ತೀರ್ಮಾನ ಕೈಗೊಳ್ಳಿ ಎಂದು ಆದೇಶಿಸಿದರೆ ಮತ್ತು ಅದನ್ನು ಸ್ಪೀಕರ್ ಪಾಲಿಸಿದರೆ ಮಾತ್ರ ಶಾಸಕರ ರಾಜಿನಾಮೆ ಶೀಘ್ರವಾಗಿ ಅಂಗೀಕಾರವಾಗಬಹುದು.

ಅಧಿವೇಶನದ ಪರಿಸ್ಥಿತಿ ಏನು:

ಈ ಮಧ್ಯೆ ಶುಕ್ರವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದು, ಎಲ್ಲಾ ಶಾಸಕರು ಅಧಿವೇಶನದಲ್ಲಿ ಕಡ್ಡಾಯವಾಗಿ ಹಾಜರಿರಬೇಕು. ವಿಧೇಯಕಗಳು ಚರ್ಚೆಗೆ ಬಂದಾಗ ಸರ್ಕಾರದ ಪರ ಮತ ಹಾಕಬೇಕು ಎಂದು ಎಲ್ಲಾ ಶಾಸಕರಿಗೆ ವಿಪ್ ನೀಡಲಾಗಿದೆ. ಈ ವಿಪ್ ಉಲ್ಲಂಘಿಸಿದರೆ ಅನರ್ಹಗೊಳಿಸಲು ಅವಕಾಶವಿದೆ. ಆದರೆ, ಈ ಶಾಸಕರು ಈಗಾಗಲೇ ರಾಜಿನಾಮೆ ನೀಡಿರುವುದರಿಂದ ಅವರಿಗೆ ವಿಪ್ ಅನ್ವಯವಾಗುವುದೇ ಎಂಬ ಬಗ್ಗೆ ಎರಡು ಬಗೆಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೆಲವು ಕಾನೂನು ತಜ್ಞರು, ವಿಪ್ ಅನ್ವಯವಾಗುತ್ತದೆ ಎಂದು ಹೇಳಿದರೆ, ಇನ್ನು ಕೆಲವರು, ವಿಪ್ ಅನ್ವಯವಾಗಿ ಅದರ ಆಧಾರದ ಮೇಲೆ ಅನರ್ಹಗೊಳಿಸಿದರೂ ಅದರಿಂದ ಶಾಸಕರಿಗೆ ಏನೂ ತೊಂದರೆಯಾಗುವುದಿಲ್ಲ. ಹೇಗೂ ರಾಜಿನಾಮೆ ನೀಡಿದ್ದಾರೆ. ಅದನ್ನು ಅಂಗೀಕರಿಸದೆ ವಜಾಗೊಳಿಸಿದಂತೆ ಆಗುತ್ತದೆ. ಮತ್ತೆ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳುತ್ತಾರೆ.

ಆದರೆ, ಅಧಿವೇಶನ ಆರಂಭವಾದರೂ ಕಲಾಪ ನಡೆಸಲು ಪ್ರತಿಪಕ್ಷ ಬಿಜೆಪಿ ಅವಕಾಶ ನೀಡುವುದಿಲ್ಲ. ಶಾಸಕರ ರಾಜಿನಾಮೆಯಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಅಧಿವೇಶನ ನಡೆಸಲು ಸರ್ಕಾರಕ್ಕೆ ಅಧಿಕಾರವಿಲ್ಲ. ಮುಖ್ಯಮಂತ್ರಿ ರಾಜಿನಾಮೆಗೆ ಒತ್ತಾಯಿಸಿ ಕಲಾಪಕ್ಕೆ ಅಡ್ಡಿಪಡಿಸುವುದು ಖಚಿತ. ಹೀಗಾಗಿ ರಾಜ್ಯ ರಾಜಕಾರಣದ ಬೃಹನ್ನಾಟಕ ಇನ್ನಷ್ಟು ದಿನ ಮುಂದುವರಿಯುವುದು ಖಚಿತ.

RS 500
RS 1500

SCAN HERE

don't miss it !

ಬ್ರಾಡ್‌ ಒಂದೇ ಓವರ್‌ ನಲ್ಲಿ 35 ರನ್‌ ಸೂರೆಗೈದ ಜಸ್‌ ಪ್ರೀತ್ ಬುಮ್ರಾ!
ಕ್ರೀಡೆ

ಬ್ರಾಡ್‌ ಒಂದೇ ಓವರ್‌ ನಲ್ಲಿ 35 ರನ್‌ ಸೂರೆಗೈದ ಜಸ್‌ ಪ್ರೀತ್ ಬುಮ್ರಾ!

by ಪ್ರತಿಧ್ವನಿ
July 2, 2022
ಖ್ಯಾತ ಮಲಯಾಳಿ ನಟ ಎನ್.ಡಿ.ಪ್ರಸಾದ್ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ
ದೇಶ

ಖ್ಯಾತ ಮಲಯಾಳಿ ನಟ ಎನ್.ಡಿ.ಪ್ರಸಾದ್ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

by ಪ್ರತಿಧ್ವನಿ
June 27, 2022
ಟಿ ಆರ್ ಎಸ್ – ಬಿಜೆಪಿ; ಮಿತ್ರರಿಂದ ಶತ್ರುಗಳವರೆಗೆ
ದೇಶ

ಟಿಆರ್‌ಎಸ್‌ ಟ್ವೀಟ್‌ಗೆ ಉರ್ದುವಿನಲ್ಲಿ ಟಕ್ಕರ್‌ ಕೊಟ್ಟ ಬಿಜೆಪಿ

by ಪ್ರತಿಧ್ವನಿ
July 3, 2022
ನೀವು ಹುಡುಕುತ್ತಿರುವ ಆರೋಪಿ ನಾನೇ ಅಂತ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?
ಕರ್ನಾಟಕ

ನೀವು ಹುಡುಕುತ್ತಿರುವ ಆರೋಪಿ ನಾನೇ ಅಂತ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?

by ಪ್ರತಿಧ್ವನಿ
June 27, 2022
ಜಮ್ಮು-ಕಾಶ್ಮೀರ; ಇಬ್ಬರು ಉಗ್ರರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ದೇಶ

ಜಮ್ಮು-ಕಾಶ್ಮೀರ; ಇಬ್ಬರು ಉಗ್ರರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

by ಪ್ರತಿಧ್ವನಿ
July 3, 2022
Next Post
ಕಾಣೆಯಾದ ಕೆರೆಯ ಏರಿ ಮೇಲೇ ನಿಂತು ಎ.ಸಿ. ಕೇಳಿದ್ರು ‘ಕೆರೆ ಎಲ್ಲಿ?’

ಕಾಣೆಯಾದ ಕೆರೆಯ ಏರಿ ಮೇಲೇ ನಿಂತು ಎ.ಸಿ. ಕೇಳಿದ್ರು ‘ಕೆರೆ ಎಲ್ಲಿ?’

ಮಾಲ್ ಗಳು  ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ - ಗುಜರಾತ್ ಹೈ ಕೋರ್ಟ್

ಮಾಲ್ ಗಳು  ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ - ಗುಜರಾತ್ ಹೈ ಕೋರ್ಟ್

ಮುಖ್ಯಮಂತ್ರಿ ವಿಶ್ವಾಸ ಮತ ಯಾಚನೆ ಹಿಂದಿನ ಮರ್ಮ ಏನು?

ಮುಖ್ಯಮಂತ್ರಿ ವಿಶ್ವಾಸ ಮತ ಯಾಚನೆ ಹಿಂದಿನ ಮರ್ಮ ಏನು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist