Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಸುಪ್ರೀಂ ಅಡ್ಡ ಬಂದರೂ ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಸಿಡ್ ದಾಳಿ ಅಬಾಧಿತ!

ಸುಪ್ರೀಂ ಕೋರ್ಟ್ ತೀರ್ಪು ನೀಡಿದ 2013ರಲ್ಲಿ 116 ಆಸಿಡ್ ದಾಳಿ ದಾಖಲಾದರೆ, ತೀರ್ಪು ಬಂದ ಮರುವರ್ಷ (2014) 225ಕ್ಕೇರಿತ್ತು!
ಸುಪ್ರೀಂ ಅಡ್ಡ ಬಂದರೂ ಕರ್ನಾಟಕ ಸೇರಿದಂತೆ ದೇಶಾದ್ಯಂತ ಆಸಿಡ್ ದಾಳಿ ಅಬಾಧಿತ!
Pratidhvani Dhvani

Pratidhvani Dhvani

July 3, 2019
Share on FacebookShare on Twitter

ಆಕೆಯ ಹೆಸರು ಲಕ್ಷ್ಮಿ ಅಗರ್‌ವಾಲ್. ರಾಜಧಾನಿ ದೆಹಲಿಯಲ್ಲಿ ವಾಸ. 2005ರಲ್ಲಿ ಆಕೆಯ ಪ್ರಿಯಕರನೇ ಆಸಿಡ್ ಎರಚಿಬಿಟ್ಟಿದ್ದ. ಆಗಿನ್ನೂ ಆಕೆಗೆ 15ರ ಹರೆಯ. ಮುಖ ಮತ್ತು ದೇಹದ ಒಂದಷ್ಟು ಭಾಗ ಸುಟ್ಟುಹೋಯಿತು. ಲಕ್ಷ್ಮಿ ಸುಪ್ರೀಂ ಕೋರ್ಟ್ ಮೊರೆಹೋದಳು. ಆದರೆ, ಪರಿಹಾರ ಕೋರಿ ಅಲ್ಲ; ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಿಡಿದು. ಆಸಿಡ್ ಅಟ್ಯಾಕ್ ನಿಯಂತ್ರಣ ಕುರಿತ ಕಾನೂನನ್ನು ಬಿಗಿ ಮಾಡಬೇಕು ಅಥವಾ ಅಂಥದ್ದೊಂದು ಹೊಸ ಕಾನೂನನ್ನು ರೂಪಿಸಬೇಕು ಎಂಬುದು ಲಕ್ಷ್ಮಿ ಹೂಡಿದ ದಾವೆಯ ಸಾರಾಂಶ. ಅಸಲಿಗೆ, ಆಸಿಡ್ ದಾಳಿಗಳ ನಿಯಂತ್ರಣ ಕುರಿತ ಅಭಿಯಾನವೊಂದು ಇಂಡಿಯಾದಲ್ಲಿ ಸದ್ದಿಲ್ಲದೆ ಆರಂಭಗೊಂಡಿದ್ದು ಹೀಗೆ.

ಹೆಚ್ಚು ಓದಿದ ಸ್ಟೋರಿಗಳು

ವಿಂಡ್‌ಶೀಲ್ಡ್‌ನಲ್ಲಿ ಬಿರುಕು ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್ ಜೆಟ್ ವಿಮಾನ

ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ ಶಿಂಧೆ ಬಣ

ಶೀಘವ್ರೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು : ಫಡ್ನವೀಸ್

ಈ ಅಭಿಯಾನ ದೊಡ್ಡ ರೂಪು ತಾಳಿ, ಆಸಿಡ್ ದಾಳಿಗಳ ಭಯಾನಕತೆ ಕಂಡು ಬೆಚ್ಚಿದ ಸುಪ್ರೀಂ ಕೋರ್ಟ್, 2013ರಲ್ಲಿ ಒಂದು ಮಹತ್ವದ ತೀರ್ಪು ಕೊಡುತ್ತದೆ. ಆ ತೀರ್ಪಿನ ಪ್ರಕಾರ, ಆಸಿಡ್ ಮಾರಾಟ ಸಂಪೂರ್ಣವಾಗಿ ಸರ್ಕಾರದ ನಿಯಂತ್ರಣಕ್ಕೆ ಒಳಪಟ್ಟು, ಅಧಿಕೃತ ಔಟ್‌ಲೆಟ್‌ಗಳಲ್ಲಿ ಮಾತ್ರವೇ ಮಾರಾಟ ಮಾಡಬೇಕು ಎಂದಾಗುತ್ತದೆ. ಹಾಗೆ ಮಾರಾಟ ಮಾಡುವಾಗ ಆಸಿಡ್ ಕೊಳ್ಳುವವರ ಗುರುತಿನ ಪತ್ರದ ಪ್ರತಿಯನ್ನು ಪಡೆಯಬೇಕು ಮತ್ತು ಆತ ಆಸಿಡ್ ಕೊಳ್ಳುತ್ತಿರುವ ಉದ್ದೇಶವನ್ನು ದಾಖಲಿಸಿಕೊಳ್ಳುವುದು ಕಡ್ಡಾಯ ಎನ್ನುತ್ತದೆ ಸುಪ್ರೀಂ ಕೋರ್ಟ್. ಆ ನಂತರ ಆ ಮಾಹಿತಿಯನ್ನು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಬೇಕು ಎಂಬುದನ್ನು ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಆದರೆ, ಈ ತೀರ್ಪಿನ ನಂತರ ನಡೆದ ಬೆಳವಣಿಗೆಗಳು ಮಾತ್ರ ಇಂಥ ತೀರ್ಪುಗಳನ್ನು ಸರ್ಕಾರಗಳು ಹೇಗೆ ಸ್ವೀಕರಿಸುತ್ತವೆ ಎಂಬುದಕ್ಕೆ ಸಾಕ್ಷಿ. 2012ರಲ್ಲಿ 106 ಆಸಿಡ್‌ ದಾಳಿ ಪ್ರಕರಣಗಳು ದಾಖಲಾಗಿದ್ದವು. 2013ರಲ್ಲಿ, ಅಂದರೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ವರ್ಷ ಆಸಿಡ್ ದಾಳಿಗಳ ಸಂಖ್ಯೆ 116ಕ್ಕೆ ತಲುಪಿ, ತೀರ್ಪು ಬಂದ ಮರುವರ್ಷ (2014) 225ಕ್ಕೂ, ಅದರ ಮರುವರ್ಷ (2015) 249ಕ್ಕೂ ಏರಿಕೆ ಕಂಡು ಅಭಿಯಾನದಲ್ಲಿ ತೊಡಗಿದ್ದ, ಅಭಿಯಾನಕ್ಕೆ ಬೆಂಬಲ ನೀಡಿದ್ದ ಎಲ್ಲರನ್ನೂ, ಸ್ವತಃ ಸುಪ್ರೀಂ ಕೋರ್ಟನ್ನೂ ಬೆಚ್ಚಿಬೀಳಿಸಿವೆ.

ದೇಶದ ಆಸಿಡ್ ದಾಳಿ ಪ್ರಕರಣಗಳಲ್ಲಿ ಕರ್ನಾಟಕದ ಪಾಲೂ ಇದೆ. ಆಸಿಡ್ ಮಾರಾಟದ ಮೇಲೆ ಸುಪ್ರೀಂ ಕೋರ್ಟ್ ನಿಯಂತ್ರಣ ಹೇರಿದ 2013ರಿಂದ ಇಲ್ಲಿಯವರೆಗೆ (ಮೇ 2019) ಒಟ್ಟು 17 ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿವೆ. ಈ ಪೈಕಿ ಬೆಂಗಳೂರು ನಗರದ ಐದು ಪ್ರಕರಣಗಳೂ ಸೇರಿವೆ. ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳಿಂದ ತಲಾ ಒಂದು ಹಾಗೂ ಕಲಬುರಗಿ, ಮಂಗಳೂರು ನಗರದಿಂದ ತಲಾ ಒಂದು ಪ್ರಕರಣ ದಾಖಲಾಗಿವೆ (ಮಾಹಿತಿ: ಕರ್ನಾಟಕ ಸ್ಟೇಟ್ ಕ್ರೈಮ್ ರೆಕಾರ್ಡ್ಸ್ ಬ್ಯುರೋ). ಆದರೆ, ಮಾಧ್ಯಮಗಳಲ್ಲಿ ವರದಿಯಾದದ್ದು ಮತ್ತು ಆಚೆ ಬಾರದ ಪ್ರಕರಣಗಳನ್ನೂ ಸೇರಿಸಿದರೆ ಈ ಸಂಖ್ಯೆ ಹೆಚ್ಚಾಗುವುದು ನಿಶ್ಚಿತ.

ಬೆಂಗಳೂರು ಮತ್ತಿತರ ನಗರಗಳಿಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿ ದೆಹಲಿಯ ಪರಿಸ್ಥಿತಿ ಮಾತ್ರ ನಿಜಕ್ಕೂ ಚಿಂತಾಜನಕ. ‘ಮೇಲ್ ಟುಡೇ’ ದಿನಪತ್ರಿಕೆಯ ರಿಯಾಲಿಟಿ ಚೆಕ್‌ನಲ್ಲಿ ದೆಹಲಿಯ ಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಆಸಿಡ್ ಸಿಗುತ್ತಿರುವುದು ಬೆಳಕಿಗೆ ಬಂದಿದೆ. ದಕ್ಷಿಣ ದೆಹಲಿಯ ಮನೆಯೊಂದರಲ್ಲಿ ಸಹಾಯಕಿಯಾಗಿ ಕೆಲಸ ಮಾಡುವ ಪುಷ್ಟ ಎಂಬಾಕೆ ಹೇಳಿರುವ ಹೇಳಿಕೆ ಇದು: “ಟಾಯ್ಲೆಟ್ ಸೀಟ್ ಅನ್ನು ಸರಿಯಾಗಿ ಕ್ಲೀನ್ ಮಾಡುತ್ತಿಲ್ಲ ಎಂಬುದು ನನ್ನ ಮನೆಯಾಕೆಯ ಪ್ರತಿದಿನದ ದೂರಾಗಿತ್ತು. ಟಾಯ್ಲೆಟ್ ಕ್ಲೀನ್ ಮಾಡಲು ಅತ್ಯಂತ ಜನಪ್ರಿಯ ಬ್ರಾಂಡ್‌ಗಳನ್ನೆಲ್ಲ ಬಳಸಿಯೂ ನಾನು ಸೋತಿದ್ದೆ. ಕೊನೆಗೆ ಯಾರೋ ಹೇಳಿದರೂಂತ ಆಸಿಡ್ ಬಳಸಿ ತೊಳೆದೆ. ಸ್ವಚ್ಛವಾಯಿತು. ಮನೆಯಾಕೆಗೆ ತುಂಬಾ ಖುಷಿಯಾಯಿತು. 60 ರುಪಾಯಿಯ ಒಂದು ಬಾಟಲ್ ಆಸಿಡ್ ಅನ್ನು ಎರಡು ತಿಂಗಳು ಬಳಸಬಹುದು.” ಅಪರಾಧ ಕೃತ್ಯಗಳು ಹೆಚ್ಚಾಗಿ ಕಂಡುಬರುವ ದೆಹಲಿ ಹೊರವಲಯ ನೋಯ್ಡಾದಲ್ಲಿ ಹಾರ್ಡ್‌ವೇರ್‌ ಶಾಪ್‌ಗಳಲ್ಲಿ ಕೂಡ ಆಸಿಡ್ ಮಾರಾಟ ಕಂಡುಬಂದಿದೆ.

ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿ, ದೆಹಲಿಇತ್ತೀಚಿನ ವರ್ಷಗಳಲ್ಲಿ ಆಸಿಡ್ ಮಾರಾಟದ ಲೈಸೆನ್ಸ್ ಕೇಳಿಕೊಂಡು ಯಾರೂ ಪೊಲೀಸರ ಬಳಿ ಸುಳಿದಿಲ್ಲ. ಇನ್ನು, ಈಗಾಗಲೇ ಇರುವ ಲೈಸೆನ್ಸ್ ನವೀಕರಣಕ್ಕೆ ಬಂದವರ ಸಂಖ್ಯೆ ಕೂಡ ಬೆರಳೆಣಿಕೆಯಷ್ಟು ಕಡಿಮೆ. ಹಾಗಾಗಿ ದಾಳಿಗೆ ಬಳಸಲಾಗುತ್ತಿರುವ ಆಸಿಡ್ ಸಂಪೂರ್ಣವಾಗಿ ಅಕ್ರಮ ಮಾರಾಟದಿಂದ ಸಿಕ್ಕಿದ್ದೇ ಆಗಿದೆ.

ಇತ್ತೀಚೆಗೆ 22 ವರ್ಷದ ಮಹಿಳೆ ಮೇಲೆ ಆಸಿಡ್ ದಾಳಿ ನಡೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಘಟನೆ ಹಿನ್ನೆಲೆಯಲ್ಲಿ, ಆಸಿಡ್ ಮಾರಾಟ ನಿಷೇಧಕ್ಕೆ ಒತ್ತಾಯಿಸಿ ಉತ್ತರ ಪ್ರದೇಶದ ಪೊಲೀಸ್ ಮುಖ್ಯಸ್ಥರಿಗೆ ಆ ರಾಜ್ಯದ ಮಹಿಳಾ ಆಯೋಗ ಪತ್ರ ಬರೆದಿತ್ತು. ದೆಹಲಿಯ ಮಹಿಳಾ ಆಯೋಗ ಕೂಡ ಕಂದಾಯ ಇಲಾಖೆಯ ವಿಭಾಗೀಯ ಆಯುಕ್ತರಿಂದ ಆಸಿಡ್ ನಿಯಂತ್ರಣ ಸಂಬಂಧ ಸಂಪೂರ್ಣ ವಿವರ ನೀಡುವಂತೆ ಕೇಳಿದೆ.

ಅಲೋಕ್ ದೀಕ್ಷಿತ್, ಸಾಮಾಜಿಕ ಕಾರ್ಯಕರ್ತಆಸಿಡ್ ಮಾರಾಟ ತೀರಾ ಬಹಿರಂಗವಾಗೇನೂ ನಡೆಯುತ್ತಿಲ್ಲ. ಆದರೆ, ನಲ್ಲಿ ರಿಪೇರಿ ಸಲಕರಣೆಗಳು, ಕೈಗಾರಿಕಾ ಸರಂಜಾಮು ಮಾರಾಟ ಮಾಡುವ ಬಹುತೇಕ ಅಂಗಡಿಗಳಲ್ಲಿ ಆಸಿಡ್ ಸಿಗುತ್ತದೆ. ಹೀಗೆ ಆಸಿಡ್ ಸುಲಭವಾಗಿ ಸಿಗುವುದೇ ದಾಳಿಗಳು ಹೆಚ್ಚಾಗಲು ಪ್ರಮುಖ ಕಾರಣ.

ಆಸಿಡ್ ದಾಳಿ ಇಷ್ಟೊಂದು ಚರ್ಚೆಗೆ ಸಿಗಲು ಮುಖ್ಯ ಕಾರಣವೆಂದರೆ, ಮಹಿಳೆಯರನ್ನು ಹಣಿಯಲು, ಬೆದರಿಸಲು ಮತ್ತು ಮಹಿಳೆಯರ ವಿರುದ್ಧ ಸೇಡು ತೀರಿಸಿಕೊಳ್ಳಲು ಅದನ್ನೊಂದು ಆಯುಧವಾಗಿ ಉಪಯೋಗಿಸಿಕೊಳ್ಳುತ್ತಿರುವುದು. ಮಾಧ್ಯಮ ಸಮೀಕ್ಷೆಯೊಂದರ ಪ್ರಕಾರ, ಶೇಕಡ 72ರಷ್ಟು ಆಸಿಡ್ ದಾಳಿ ಪ್ರಕರಣಗಳಲ್ಲಿ ಸಂತ್ರಸ್ತರು ಮಹಿಳೆಯರೇ ಆಗಿರುತ್ತಾರೆ. ಪ್ರೇಮ ನಿರಾಕರಣೆ ಪ್ರಕರಣಗಳು, ಬೆದರಿಕೆಯೊಡ್ಡಿ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾದ ಪ್ರಕರಣಗಳು ಹಾಗೂ ವರದಕ್ಷಿಣೆ ಕಿರುಕುಳ ಪ್ರಕರಣಗಳ ಸಂಬಂಧವೇ ಆಸಿಡ್ ದಾಳಿಗಳು ಹೆಚ್ಚಾಗಿ ನಡೆದಿವೆ, ನಡೆಯುತ್ತಿವೆ. ಹಾಗಾಗಿ ಆಯಾ ರಾಜ್ಯಗಳ ಮಹಿಳಾ ಆಯೋಗಗಳು ಇಂಥ ಪ್ರಕರಣ ಬೆಳಕಿಗೆ ಬಂದಾಗಲೆಲ್ಲ ಪೊಲೀಸರಿಗೆ ವಿವರಣೆ ಕೇಳಿ ನೋಟಿಸ್ ನೀಡುವುದು ಅಥವಾ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯುವುದು ನಡೆದೇ ಇದೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಆಸಿಡ್ ಮಾರಾಟ ದಂಧೆ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಬಹುಶಃ ಅಂಥ ನೋಟಿಸ್ ಅಥವಾ ಪತ್ರಗಳಿಂದ ಯಾವುದೇ ಪ್ರಯೋಜನ ಆಗಲಾರದು.

RS 500
RS 1500

SCAN HERE

don't miss it !

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ
ಅಭಿಮತ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

by ನಾ ದಿವಾಕರ
July 5, 2022
‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?
ದೇಶ

‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?

by ಪ್ರತಿಧ್ವನಿ
June 29, 2022
ಬಿಬಿಎಂಪಿ ಡಿ ಲಿಮಿಟೇಷನ್ ವಿರೋಧಿಸಿ ಸಾರ್ವಜನಿಕರು ನೀಡುತ್ತಿರುವ ಕಾರಣವೇನು ಗೊತ್ತಾ !
ಕರ್ನಾಟಕ

ಬಿಬಿಎಂಪಿ ಡಿ ಲಿಮಿಟೇಷನ್ ವಿರೋಧಿಸಿ ಸಾರ್ವಜನಿಕರು ನೀಡುತ್ತಿರುವ ಕಾರಣವೇನು ಗೊತ್ತಾ !

by ಕರ್ಣ
June 30, 2022
ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ
ಕರ್ನಾಟಕ

ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
June 30, 2022
ಕರ್ನಾಟಕದ ಚೆಲುವೆ ಸಿನಿ ಶೆಟ್ಟಿಗೆ ಒಲಿದ ಮಿಸ್‌ ಇಂಡಿಯಾ ಪ್ರಶಸ್ತಿ!
ದೇಶ

ಕರ್ನಾಟಕದ ಚೆಲುವೆ ಸಿನಿ ಶೆಟ್ಟಿಗೆ ಒಲಿದ ಮಿಸ್‌ ಇಂಡಿಯಾ ಪ್ರಶಸ್ತಿ!

by ಪ್ರತಿಧ್ವನಿ
July 4, 2022
Next Post
ಅಹಿಂದ ಹಿಂದೆ ಹೇಗಿತ್ತು

ಅಹಿಂದ ಹಿಂದೆ ಹೇಗಿತ್ತು, ಇಂದು ಹೇಗಿದೆ, ಮುಂದೆ ಎತ್ತ?

ರಾಜ್ಯದ 6

ರಾಜ್ಯದ 6,053 ಹಳ್ಳಿಗಳಲ್ಲಿ ಸ್ಮಶಾನ ಭೂಮಿಯೇ ಇಲ್ಲ

ಮೇಘಾಲಯ ಸರ್ಕಾರಕ್ಕೆ 100 ಕೋಟಿ ಠೇವಣಿ ಇರಿಸಲು ಹೇಳಿದ ಸುಪ್ರೀಂ ಕೋರ್ಟ್

ಮೇಘಾಲಯ ಸರ್ಕಾರಕ್ಕೆ 100 ಕೋಟಿ ಠೇವಣಿ ಇರಿಸಲು ಹೇಳಿದ ಸುಪ್ರೀಂ ಕೋರ್ಟ್

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist