Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಸಿಗುವುದೇ ಹೊಸಪೇಟೆಗೆ ವಿಜಯನಗರದ ಕಿರೀಟ!

ಸಿಗುವುದೇ ಹೊಸಪೇಟೆಗೆ ವಿಜಯನಗರದ ಕಿರೀಟ!
ಸಿಗುವುದೇ ಹೊಸಪೇಟೆಗೆ ವಿಜಯನಗರದ ಕಿರೀಟ!
Pratidhvani Dhvani

Pratidhvani Dhvani

September 21, 2019
Share on FacebookShare on Twitter

ಹೊಸಪೇಟೆಯನ್ನು ನೂತನ ಜಿಲ್ಲೆಯನ್ನಾಗಿ ಮಾಡಬೇಕೆಂದು ಮೊನ್ನೆ ಬುಧವಾರ ಉಜ್ಜಯನಿ ಪೀಠದ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿತು. ಈ ನಿಯೋಗದಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ರೇಣುಕಾಚಾರ್ಯ, ವಿಧಾನ ಪರಿಷತ್ ಸದಸ್ಯ ಕೆ. ಸಿ. ಕೊಂಡಯ್ಯ, ಶಾಸಕರಾದ ಕಂಪ್ಲಿ ಗಣೇಶ್ ಹಾಗೂ ಇನ್ನಿತರರೂ ಇದ್ದರು. ಅದಾದ ನಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು ಹಾಗೂ ಮುಖ್ಯಮಂತ್ರಿಗಳು ಅದಕ್ಕೆ ಒಲವು ತೋರಿದ್ದು ಜಾಲತಾಣಗಳಲ್ಲಿ ಪರ ವಿರೋಧಗಳೂ ವ್ಯಕ್ತವಾದವು.

ಹೆಚ್ಚು ಓದಿದ ಸ್ಟೋರಿಗಳು

ಬೆಂಗಳೂರು ಜೈಲಿನಿಂದಲೇ ವಿಡಿಯೋ ಪೋಸ್ಟ್‌ ಮಾಡಿದ ಹರ್ಷ ಕೊಲೆ ಆರೋಪಿ!

ಸರಳ ವಾಸ್ತುಗೂ ಮುನ್ನ ಚಂದ್ರಶೇಖರ್‌ ಗುರೂಜಿ ಏನಾಗಿದ್ದರು ಗೊತ್ತಾ?

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಧರೆಗುರುಳಿದ ವಿದ್ಯುತ್ ಕಂಬಗಳು!

ಹೊಸಪೇಟೆ ಈಗ ಹೊಸ ಜಿಲ್ಲೆಯಾಗಲು ಅಣಿಯಾಗಿದೆ. ವಿಜಯನಗರ ವೆಂಬ ನಾಮಕರಣಕ್ಕೂ ಮುಖ್ಯಮಂತ್ರಿಗಳು ಒಲವು ತೋರಿದ್ದಾರೆ. ಆದರೆ ಬಳ್ಳಾರಿ ಜಿಲ್ಲೆ ವಿಭಜನೆಯಾಗುತ್ತದೆ ಎಂಬ ಸುದ್ದಿ ಹರಿದಾಡ ತೊಡಗಿದ ಮೇಲೆ ವ್ಯಾಪಕ ವಿರೋಧಗಳು, ಟೀಕೆಗಳು ವ್ಯಕ್ತವಾಗಿವೆ. ಹಲವು ಪ್ರತಿಭಟನೆಗಳು ನಡೆಯುತ್ತಲಿವೆ. ಪ್ರಚಲಿತ ರಾಜಕೀಯದಲ್ಲಿ ಇದು ಆನಂದ್ ಸಿಂಗ್ ಅವರಿಗೆ ವೈಯಕ್ತಿಕವಾಗಿ ಲಾಭವಾಗುತ್ತದೆ ಎಂಬ ಲೆಕ್ಕಾಚಾರಗಳು ಶುರುವಾಗಿವೆ. ಅಖಂಡ ಬಳ್ಳಾರಿ ಜಿಲ್ಲೆಯನ್ನು ಒಡೆಯುವುದು ಬೇಡ ಎಂಬ ಸಾತ್ವಿಕ ಅಳಲನ್ನು ಬಹಳಷ್ಟು ಜನರು ತೋರಿಕೊಂಡಿದ್ದಾರೆ.

ಈಗ ಸಚಿವ ಸಂಪುಟ ಇದಕ್ಕೆ ಅಸ್ತು ಅಂದರೆ 11 ತಾಲೂಕುಗಳನ್ನು ಒಳಗೊಂಡಿದ್ದ ಬಳ್ಳಾರಿ ಜಿಲ್ಲೆಯಲ್ಲಿರುವ ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಹಳ್ಳಿ, ಕೊಟ್ಟುರು, ಹಡಗಲಿ ಹಾಗೂ ಹರಪನಹಳ್ಳಿ ತಾಲೂಕುಗಳು ಹೊಸ ವಿಜಯನಗರ ಜಿಲ್ಲೆಗೆ ಸೇರ್ಪಡೆಯಾಗಲಿವೆ. ಬಳ್ಳಾರಿ ಜಿಲ್ಲೆಗೆ ಕುರುಗೋಡು, ಸಂಡೂರು, ಕೂಡ್ಲಿಗಿ ಹಾಗೂ ಸಿರುಗುಪ್ಪ ತಾಲೂಕುಗಳು ಉಳಿಯಲಿವೆ.

ನೂತನ ಜಿಲ್ಲೆಯ ಪ್ರಸ್ತಾಪವಾಗುತ್ತಿದಂತೆಯೇ ಕೂಡ್ಲಿಗಿ, ಹರಪನಹಳ್ಳಿ, ಹಡಗಲಿಯಲ್ಲಿ ಪ್ರತಿಭಟನೆಗಳು ಆರಂಭಗೊಂಡಿವೆ. ಸದ್ಯಕ್ಕೆ ಹೊಸಪೇಟೆಯೇ ಜಿಲ್ಲೆಯಾಗಬೇಕೆಂಬ ಅವಶ್ಯಕತೆ ಇಲ್ಲ. ಹರಪನಹಳ್ಳಿಯಂತೆ ಜನರಿಗೆ ಜಿಲ್ಲಾ ಕೇಂದ್ರ ತಲುಪಲು ಸಾರಿಗೆ ವ್ಯವಸ್ಥೆಯ ತಾಪತ್ರಯವಿಲ್ಲ. ಪಕ್ಕದಲ್ಲೇ ಕೂಡ್ಲಿಗಿ ಇದೆ. ಅದೂ ಕೂಡ ಜಿಲ್ಲೆಯಾಗಿ ಪರಿಗಣಿಸುವಂತಿದೆ. ರಾಜ ಸಂಸ್ಥಾನ ಹೊಂದಿದ ಹಾಗೂ ಗಣಿಗಾರಿಕೆಯಿಂದ ಹೆಚ್ಚಿನ ಲಾಭ ತರುವ ಸಂಡೂರು ಪಕ್ಕದಲ್ಲಿಯೇ ಇದೆ. ಹೀಗಾಗಿ ಹೋಸಪೇಟೆಗೆ ಏಕೆ ಪ್ರಾಶಸ್ತ್ಯ ಎಂಬುದು ಹಲವರ ಪ್ರಶ್ನೆಯಾಗಿದೆ.

ಹೊಸಪೇಟೆಯೇ ಏಕೆ?

ಇದು ರಾಜಕೀಯ ಪ್ರೇರಿತ, ತಮ್ಮ ಸ್ವಾರ್ಥಕ್ಕೆ ಹಾಗೂ ಹಿತಾಸಕ್ತಿಗೆ ಆನಂದ್ ಸಿಂಗ್ ಈ ಕ್ರಮಕ್ಕೆ ಮುಂದಾಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕೆಲಸ ಮಾಡಲಾಗಲಿಲ್ಲ. ಅಭಿವೃದ್ಧಿಯ ಕಡೆಗೆ ಗಮನ ನೀಡಲಾಗಲಿಲ್ಲ. ಹಾಗಾಗಿ ಜನಪ್ರಿಯತೆ ಕಡಿಮೆಯಾಗುತ್ತಿದ್ದು ಇದನ್ನೆಲ್ಲ ಮರೆಮಾಚಲು ಪ್ರತ್ಯೇಕ ಜಿಲ್ಲೆಯ ಅಸ್ತ್ರವನ್ನು ಹಿಡಿಯಲು ಹೊರಟಿದ್ದಾರೆ ಎಂಬುದು ರಾಜಕೀಯ ವಿಶ್ಲೇಷಕರ ಲೆಕ್ಕಾಚಾರ. ಹೊಸಪೇಟೆಯನ್ನೇ ಏಕೆ ಜಿಲ್ಲಾ ಕೇಂದ್ರವನ್ನು ಮಾಡಬೇಕು, ಪಕ್ಕದ 30 ಕಿಮಿ ಅಂತರದಲ್ಲಿ ರಾಜರ ಸಂಸ್ಥಾನವಿದ್ದ ಸಂಡೂರು ಇದೆ. ವಾಣಿಜ್ಯ ಕ್ಷೇತ್ರದಲ್ಲಿ ಹೆಸರುವಾಸಿಯಾದ ಹಡಗಲಿ ಇದೆ ಹಾಗೂ ಕೂಡ್ಲಿಗಿ ಇದೆ ಎಂಬುದು ಕೆಲವರು ಅನಿಸಿಕೆ.

ಸಿಎಂಗೇಕೆ ಇಷ್ಟು ಒಲವು!

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಒಂದಷ್ಟು ಕೊಡುಗೆ ನೀಡಿದ ಆನಂದ ಸಿಂಗ್ ಅವರ ಋಣ ತೀರಿಸಲು ಈ ಅವೈಜ್ಞಾನಿಕ ನಿರ್ಧಾರ ಕೈಕೊಂಡಿದ್ದಾರೆಂದು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಪಾಳಯದಲ್ಲಿ ಚರ್ಚೆಗಳು ಬಿಸಿಯಾಗಿಯೇ ನಡೆಯುತ್ತಿವೆ. ಆದ್ದರಿಂದ ಹಲವು ಸಂಘಟನೆಗಳು ಈಗಾಗಲೇ ಜೋರಾಗಿ ಹೋರಾಟ ಮಾಡಲು ಸಿದ್ಧತೆ ನಡೆಸಿವೆ. ತುಂಗಭದ್ರಾ ರೈತ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವುದರ ಮೂಲಕ ನೂತನ ಜಿಲ್ಲೆಗೆ ವಿರೋಧ ವ್ಯಕ್ತಪಡಿಸಿವೆ. ಹಡಗಲಿ ತಾಲೂಕಿನಲ್ಲೂ ಹೋರಾಟ ಆರಂಭವಾಗಿದ್ದು, ಸಂಡೂರು, ಕೂಡ್ಲಿಗಿಯಲ್ಲಿಯೂ ಜನರು ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ. ಹೊಸಪೇಟೆ ಜಿಲ್ಲೆ ಬೇಡ ಎಂಬ ಮಾತು ಸ್ವತಃ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿವೆ.

ಆರೋಗ್ಯ ಮಂತ್ರಿ ಶ್ರೀರಾಮುಲು ಬಳ್ಳಾರಿ ಜಿಲ್ಲೆಯೆಂದು ನಾವು ಇದರ ಅಭಿವೃದ್ಧಿಗಾಗಿ ಶ್ರಮಿಸುತ್ತ ಬಂದಿದ್ದೇವೆ ಆದರೂ ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಮುಜುಗರ ತರುವಂತಹ ಹೇಳಿಕೆಯನ್ನು ನಾನು ನೀಡುವುದಿಲ್ಲ ಎಂದು ಶುಕ್ರವಾರ (ಸೆಪ್ಟೆಂಬರ್ 20) ಮಾಧ್ಯಮಕ್ಕೆ ತಿಳಿಸಿದರು. ಮೇಲ್ನೋಟಕ್ಕೆ ಹೀಗೆ ಹೇಳಿದರೂ, ಶ್ರೀರಾಮುಲು ಅವರಿಗೂ ಇದು ಬೇಡವಾಗಿದೆ ಎಂಬುದು ಸ್ಪಷ್ಟ.

ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿವರು ಪ್ರತಿಕ್ರಿಯಿಸಿದ್ದು ಹೀಗೆ, “ಏನೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಜನಪ್ರತಿನಿಧಿಗಳ ಜೊತೆಗೆ ಹಾಗೂ ಪ್ರಮುಖರ ಜೊತೆಗೆ ಚರ್ಚಿಸಬೇಕಾಗಿತ್ತು. ದಿಢೀರನೇ ಜಿಲ್ಲೆ ಮಾಡುವುದೆಂದರೆ ಹೇಗೆ! ಜಿಲ್ಲೆ ದೊಡ್ಡದಾಗುತ್ತೆ, ಜನರಿಗೆ ತೊಂದರೆ ಆಗುತ್ತದೆ ಎಂದರೆ ಮೊದಲು 18 ಕ್ಷೇತ್ರಗಳಿರುವ ಬೆಳಗಾವಿಯನ್ನು ಇಬ್ಭಾಗ ಮಾಡಿ, ಬಳ್ಳಾರಿ ಏಕೆ. ಇದರಿಂದ ತುಘಲಕ್ ದರ್ಬಾರ್ ಗೆ ಆಸ್ಪದ ನೀಡಿದಂತಾಗುತ್ತದೆ”

ಕಲ್ಯಾಣ ಕರ್ನಾಟಕ ಹೋರಾಟಗಾರರಾದ ಸಿರಿಗೇರಿ ಪನ್ನರಾಜಇಷ್ಟು ಅವಸರದಲ್ಲಿ ಹೊಸ ಜಿಲ್ಲೆಯಾಗಿ ಘೋಷಣೆ ಏಕೆ. ಇದರಿಂದ371 (ಜೆ) ಗೆ ಏನು ಅನುಕೂಲವಾಗಲಿದೆ. ನೂತನ ಜಿಲ್ಲೆಗೆ 371 (ಜೆ) ತಪ್ಪುವ ಅಪಾಯವೂ ಇದೆ. ಇದರ ಸಾಧಕ ಬಾಧಕಗಳನ್ನು ವಿಶ್ಲೇಷಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ

ತುಂಗಭದ್ರಾ ರೈತ ಸಂಘ ಬಳ್ಳಾರಿಯ ಅಧ್ಯಕ್ಷರಾದ ದರೂರು ಪುರುಷೋತ್ತಮಗೌಡರು ಹೇಳುತ್ತಾರೆ, “ಜಿಲ್ಲೆಯನ್ನು ಇಬ್ಭಾಗ ಮಾಡುವುದು ಅವೈಜ್ಞಾನಿಕ ನಿರ್ಧಾರ. ಇದಕ್ಕೆ ನಮ್ಮ ವಿರೋಧವಿದೆ. ತುಂಗಭದ್ರಾ ಜಲಾಶಯಕ್ಕೆ ಹೊಂದಿಕೊಂಡಿರುವ ತಾಲೂಕುಗಳನ್ನು ಬೇರ್ಪಡಿಸುವುದನ್ನು ನಾವು ವಿರೋಧಿಸುತ್ತೇವೆ. ನಾವು ಇದರ ವಿರುದ್ಧ ಹೋರಾಟವನ್ನೂ ಮಾಡುತ್ತೇವೆ”.

ಹರಪನಹಳ್ಳಿಯನ್ನು ಜಿಲ್ಲೆಯಾಗಿ ಘೋಷಣೆ ಮಾಡಲಿ:

ಈ ಭಾಗದಲ್ಲಿ ಹೊಸ ಜಿಲ್ಲೆಯ ಅವಶ್ಯಕತೆಯಿರುವುದು ಹರಪನಹಳ್ಳಿಗೆ ಎಂದು ಹರಪನಹಳ್ಳಿಯ ಜನರು ಮುಖ್ಯಮಂತ್ರಿಗಳಿಗೆ ಕೇಳುತ್ತಿದ್ದಾರೆ. ಇದಕ್ಕಾಗಿ ಉಗ್ರ ಹೋರಾಟಕ್ಕೂ ಅಣಿಯಾಗಿದ್ದಾರೆ. 1997 ರಲ್ಲಿ ಜಿಲ್ಲೆಗಳ ಪುನರ್ ರಚನೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಜೆ. ಎಚ್. ಪಟೇಲರು ಬಳ್ಳಾರಿ ಜಿಲ್ಲೆಯಿಂದ ಹರಪನಹಳ್ಳಿಯನ್ನು ದಾವಣಗೆರೆಗೆ ಸೇರಿಸಿದರು. ಎರಡು ದಶಕಗಳ ನಂತರ 2018 ರಲ್ಲಿ ಹರಪನಹಳ್ಳಿಯನ್ನು ಬಳ್ಳಾರಿ ಜಿಲ್ಲೆಗೆ ಮರು ಸೇರ್ಪಡೆಗೊಳಿಸಲಾಯಿತು. ಬಳ್ಳಾರಿಯಿಂದ ಹರಪನಹಳ್ಳಿಗೆ 180 ಕಿಮಿ. ಜಿಲ್ಲಾ ಕೇಂದ್ರ ತಲುಪಲು ಬಸ್ಸಿನಲ್ಲಿ ಮೂರುವರೆ ತಾಸು ಬೇಕು. ಹೀಗಾಗಿ ಹರಪನಹಳ್ಳಿಯನ್ನು ಜಿಲ್ಲೆಯಾಗಿ ಮಾಡಿದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎಂಬುದು ಈ ಭಾಗದ ಜನರ ಅಂಬೋಣ.

RS 500
RS 1500

SCAN HERE

don't miss it !

ಮೇ 21ರವರೆಗೆ 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌
ಕರ್ನಾಟಕ

ರಾಜ್ಯದಲ್ಲಿ 4 ದಿನ ಮುಂಗಾರು ಅಬ್ಬರ: 7 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್!‌

by ಪ್ರತಿಧ್ವನಿ
July 2, 2022
ಉತ್ತರ ಪ್ರದೇಶ | ಎರಡನೇ ಅವಧಿಯ ಆದಿತ್ಯನಾಥ್ ಸರ್ಕಾರಕ್ಕೆ 100 ದಿನ : ಸಾಧನೆಗಳೇನು?
ದೇಶ

ಉತ್ತರ ಪ್ರದೇಶ | ಎರಡನೇ ಅವಧಿಯ ಆದಿತ್ಯನಾಥ್ ಸರ್ಕಾರಕ್ಕೆ 100 ದಿನ : ಸಾಧನೆಗಳೇನು?

by Shivakumar A
July 5, 2022
Explained | ಕರ್ನಾಟಕ ವಿಧಾನಸಭಾ ಚುನಾವಣೆ – 2023 : ‘ಸಾಮೂಹಿಕ ನಾಯಕತ್ವ’ ಸೂತ್ರದತ್ತ ಕಾಂಗ್ರೆಸ್
ಕರ್ನಾಟಕ

Explained | ಕರ್ನಾಟಕ ವಿಧಾನಸಭಾ ಚುನಾವಣೆ – 2023 : ‘ಸಾಮೂಹಿಕ ನಾಯಕತ್ವ’ ಸೂತ್ರದತ್ತ ಕಾಂಗ್ರೆಸ್

by ಚಂದನ್‌ ಕುಮಾರ್
July 2, 2022
ನೂಪುರ್‌ ಹೇಳಿಕೆ ಕೀಳುಮಟ್ಟದ ಪ್ರಚಾರ ಗಿಮಿಕ್‌: ಸುಪ್ರೀಂಕೋರ್ಟ್‌
ದೇಶ

ನೂಪುರ್‌ ಹೇಳಿಕೆ ಕೀಳುಮಟ್ಟದ ಪ್ರಚಾರ ಗಿಮಿಕ್‌: ಸುಪ್ರೀಂಕೋರ್ಟ್‌

by ಪ್ರತಿಧ್ವನಿ
July 1, 2022
ಮೇ 16ರ ಬದಲಾಗಿ, ಜೂನ್‌ 1 ರಿಂದ ಶಾಲೆಯನ್ನು ಆರಂಭಿಸಿ : ಸಿಎಂಗೆ ಪತ್ರ ಬರೆದ ಸಭಾಪತಿ ಬಸವರಾಜ ಹೊರಟ್ಟಿ
ಕರ್ನಾಟಕ

ಶಿಕ್ಷಣ ವ್ಯವಸ್ಥೆ ಕುರಿತು ಸರ್ಕಾರಕ್ಕೆ 112 ಪತ್ರಗಳನ್ನು ಬರೆದಿದ್ದೆ, ಯಾವುದಕ್ಕೂ ಒಂದೇ ಒಂದು ಉತ್ತರ ಬಂದಿಲ್ಲ : ಬಸವರಾಜ್ ಹೊರಟ್ಟಿ

by ಪ್ರತಿಧ್ವನಿ
July 1, 2022
Next Post
ರಾಖೀಗಢಿಯ ಪುರಾತತ್ವ ಅಧ್ಯಯನ ಸಾರಿದ ಸತ್ಯವೇನು?

ರಾಖೀಗಢಿಯ ಪುರಾತತ್ವ ಅಧ್ಯಯನ ಸಾರಿದ ಸತ್ಯವೇನು?

ದೇಶದಲ್ಲಿ ಮತ್ತೊಮ್ಮೆಸಾಲ ಮೇಳ

ದೇಶದಲ್ಲಿ ಮತ್ತೊಮ್ಮೆಸಾಲ ಮೇಳ, ಹಣ ಚಲಾವಣೆ ಹೆಚ್ಚಿಸಲು ಸರಕಾರದ ಶ್ರಮ

ಸುಪ್ರೀಂ ದಯೆ ತೋರದಿದ್ದರೆ ಅನರ್ಹರಿಗೆ ಸ್ಪರ್ಧೆಗೂ ಅವಕಾಶವಿಲ್ಲ!

ಸುಪ್ರೀಂ ದಯೆ ತೋರದಿದ್ದರೆ ಅನರ್ಹರಿಗೆ ಸ್ಪರ್ಧೆಗೂ ಅವಕಾಶವಿಲ್ಲ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist