ADVERTISEMENT
  • Home
  • About Us
  • ಕರ್ನಾಟಕ
Saturday, May 17, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಸತ್ತಂತಿರುವ ವಿರೋಧ ಪಕ್ಷಗಳಿಗೆ ಕನ್ನಯ್ಯಾನ ನುಡಿ ಪ್ರೇರಣೆಯಾಗಬಲ್ಲವೇ?     

by
December 28, 2019
in ದೇಶ
0
ಸತ್ತಂತಿರುವ ವಿರೋಧ ಪಕ್ಷಗಳಿಗೆ ಕನ್ನಯ್ಯಾನ ನುಡಿ ಪ್ರೇರಣೆಯಾಗಬಲ್ಲವೇ?      
Share on WhatsAppShare on FacebookShare on Telegram

ಅಧಿಕಾರಸ್ಥರ ಗುಂಡಿಗೆ ನಡುಗುವಂಥ ಪ್ರಶ್ನೆಗಳನ್ನು ಅವರ ಮುಖಕ್ಕೆ ಎಸೆಯಬಲ್ಲ, ಅಧಿಕಾರದ ಮದ, ಜಾತೀಯತೆ, ಮತಾಂದತೆ, ಅನ್ಯಾಯ, ಅಕ್ರಮ ಸೇರಿದಂತೆ ಸಮಾಜವನ್ನು ಬಾಧಿಸುತ್ತಿರುವ ಸಾಮಾಜಿಕ ಅನಿಷ್ಟಗಳಿಂದ ನಮಗೆ ಸ್ವಾತಂತ್ರ್ಯ ಬೇಕಿದೆ ಎಂಬ ಗೀತೆಯ ಮೂಲಕ ಕೋಟ್ಯಂತರ ಭಾರತೀಯರ ಮನದಲ್ಲಿ ಕ್ರಾಂತಿಯ ಜ್ವಾಲೆ ಎಬ್ಬಿಸುವಲ್ಲಿ ಯಶಸ್ವಿಯಾಗಿರುವ, ಅದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿಯ ಬೆಂಬಲಿಗರಿಂದ ತುಕಡೇ-ತುಕಡೇ ಗ್ಯಾಂಗ್ ನಾಯಕ ಎಂದು ಕರೆಸಿಕೊಂಡಿರುವ ಪ್ರತಿಷ್ಠಿತ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ನಾಯಕ ಕನ್ಹಯ್ಯಾ ಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಗೆ ನೇರ ಸವಾಲು ಎಸೆದಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ದದ ಹೋರಾಟದಲ್ಲಿ ವಿದ್ಯಾರ್ಥಿಗಳು ಹಾಗೂ ನಾಗರಿಕ ಸಂಘಟನೆಗಳಿಗೆ ಬೆಂಬಲವಾಗಿ ನಿಂತ ಹಲವು ನಾಯಕರು ಹಾಗೂ ವಿದ್ಯಾರ್ಥಿಗಳನ್ನು ಮೋದಿ ಸರ್ಕಾರ ಹಾಗೂ ಅವರ ಪಕ್ಷದ ಸರ್ಕಾರಗಳಿರುವ ರಾಜ್ಯಗಳು ಬಂಧಿಸಿವೆ. ಅಸ್ಸಾಂ ರೈತ ನಾಯಕ ಹಾಗೂ ಮಾಹಿತಿ ಹಕ್ಕು ಹೋರಾಟಗಾರ ಅಖಿಲ್ ಗೊಗೊಯ್ ಹಾಗೂ ಉತ್ತರ ಪ್ರದೇಶದ ಯುವ ದಲಿತ ಮುಖಂಡ, ಭೀಮ್ ಆರ್ಮಿ ನಾಯಕ ಚಂದ್ರಶೇಖರ್ ಆಜಾದ್ ಬಂಧಿತರಲ್ಲಿ ಪ್ರಮುಖ ಯುವ ನಾಯಕರು. ಇವರ ಬಂಧನವನ್ನು ಅಕ್ರಮ ಎಂದಿರುವ ಕನ್ಹಯಾ ಕುಮಾರ್ “ಇದು ಹೇಡಿ ಸರ್ಕಾರ. ಮೋದಿ-ಶಾ ಅವರೇ ನೀವು ಹೋರಾಟ ಹತ್ತಿಕ್ಕಿರುವುದನ್ನು ನೋಡಿದ್ದೇವೆ ಮತ್ತು ಮುಂದೆಯೂ ನೋಡುತ್ತೇವೆ. ಹಾಗೆಯೇ ನಿಮ್ಮ ಜೈಲುಗಳಲ್ಲಿ ಅದೆಷ್ಟು ಜಾಗವಿದೆ‌‌ ಎಂಬುದನ್ನೂ ನೋಡುತ್ತೇವೆ” ಎನ್ನುವ ಮೂಲಕ ನಿರ್ಣಾಯಕ ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂಬ ಸಂದೇಶವನ್ನು ಕನ್ಹಯಾ ನೀಡಿದ್ದಾರೆ.

CAA-NRC-NPR का विरोध करने के कारण इस “कायर और लायर” सरकार ने अखिल गोगोई,चन्द्रशेखर आज़ाद,सदफ ज़फ़र,दीपक कबीर व हजारों अन्य नागरिकों को झूठी धाराएँ लगाकर गिरफ़्तार किया है।

सुनिए साहेब,

दम है कितना दमन में तेरे, देख लिया है देखेंगे
जगह है कितनी जेल में तेरे, देख लिया है देखेंगे

— Kanhaiya Kumar (@kanhaiyakumar) December 26, 2019


ADVERTISEMENT

ಯುವಕನೊಬ್ಬ ಭಾರತದ ಇಬ್ಬರು ಪ್ರಬಲ ನಾಯಕರಾದ ಮೋದಿ-ಶಾ ಅವರಿಗೆ ಇಷ್ಟೊಂದು ಮಹತ್ವದ ಸವಾಲು ಎಸೆಯುತ್ತಿರುವುದು ಒಂದೆಡೆಯಾದರೆ ದೇಶದ ಉದ್ದಗಲಕ್ಕೂ ಪಕ್ಷದ ನೆಲೆ ಹೊಂದಿರುವ ಕಾಂಗ್ರೆಸ್ ನಾಯಕರಾಗಲಿ, ನಿರ್ದಿಷ್ಟ ಪ್ರದೇಶಗಳಲ್ಲಿ‌ ತಮ್ಮದೇ ಪ್ರಭುತ್ವ ಹೊಂದಿರುವ ಇತರೆ ಪ್ರಾದೇಶಿಕ ಪಕ್ಷಗಳ ನೇತಾರರು ‘ಮಾಡು ಇಲ್ಲವೇ ಮಡಿ‌’ ಮಾದರಿಯಲ್ಲಿ ಹೋರಾಡುವ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತು ಅಧಿಕಾರಸ್ಥರು ಕಂಪಿಸುವಂತೆ ಮಾಡುವಲ್ಲಿ ವಿಫಲವಾಗುವ ಮೂಲಕ ದೇಶದಲ್ಲಿ ವಿರೋಧ ಪಕ್ಷಗಳು ಸತ್ತು ಹೋಗಿವೆ ಎಂಬ ಮಾತನ್ನು ಸತ್ಯವಾಗಿಸಿದ್ದಾರೆ.

ಸಿಎಎ ವಿರುದ್ಧದ ಜನಾಕ್ರೋಶವನ್ನು ಪರಿಣಾಮಕಾರಿಯಾಗಿ ಮುನ್ನಡೆಸಬಲ್ಲ ನಾಯಕತ್ವ ಪ್ರಸ್ತುತಪಡಿಸಲು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಹೊರತುಪಡಿಸಿ ಕಾಂಗ್ರೆಸ್ ಒಳಗೊಂಡ ಬಹುತೇಕ ವಿರೋಧ ಪಕ್ಷಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂಬುದು ವಾಸ್ತವ. ಮುಖ್ಯಮಂತ್ರಿ ಪದವಿಯನ್ನೂ ಲೆಕ್ಕಿಸದೇ ರಾಜ್ಯದ ವಿವಿಧೆಡೆ ಪಾದಯಾತ್ರೆ ಮಾಡುವ ಮೂಲಕ ಮೋದಿ-ಶಾ ಗ್ಯಾಂಗ್ ಬೆಚ್ಚುವಂತೆ ಮಾಡುವಲ್ಲಿ ಮಮತಾ ತಕ್ಕಮಟ್ಟಿಗೆ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಅಮಾಯಕ ಮುಸ್ಲಿಮರು ಹಾಗೂ ಹಿಂದೂಗಳ ಮೇಲೆ ಬಿಜೆಪಿ ಸರ್ಕಾರಗಳಿರುವ ಕಡೆ ಆಡಳಿತಗಾರರ ಪಿತೂರಿಗೆ ಒಳಗಾಗಿ ಪೊಲೀಸರು ನಡೆಸಿರುವ ಘೋರ ಹಿಂಸೆಗಳನ್ನು ಮುಂದಿಟ್ಟು ನರೇಂದ್ರ ಮೋದಿ ಹಾಗೂ ಅಮಿತ್ ಶಾ ನೇತೃತ್ವದ ಬಿಜೆಪಿಯನ್ನು ಕಟೆಕಟೆಯಲ್ಲಿ‌ ನಿಲ್ಲಿಸುವ ಅದ್ಭುತ ಅವಕಾಶವನ್ನು ಬಹುತೇಕ ವಿರೋಧ ಪಕ್ಷಗಳು ಮಣ್ಣು ಪಾಲು ಮಾಡಿವೆ.

ಬಿಜೆಪಿ ವಿರುದ್ಧದ ಹೋರಾಟವನ್ನು ಗಾಂಧಿ ಕುಟುಂಬವೇ ಮಾಡಬೇಕು ಎಂದು ಬಯಸಿದಂತಿರುವ ಇತರೆ ಕಾಂಗ್ರೆಸ್ ನಾಯಕರು ತಮ್ಮ ಅಸ್ತಿತ್ವವನ್ನೇ ಮರೆತಿರುವುದು ಹಾಗೂ ರಾಜಕೀಯ ಸ್ಥಾನಮಾನಗಳನ್ನು ಪಿತ್ರಾರ್ಜಿತ ಆಸ್ತಿ ಎಂಬಂತೆ ಭಾವಿಸುವ ಇವರು ಜನರು ಅನುಭವಿಸುತ್ತಿರುವ ಯಾತನೆಗೆ ನಿರೀಕ್ಷಿತ ಪ್ರಮಾಣದಲ್ಲಿ ಕಿವಿಯಾಗಿಲ್ಲ ಎಂಬುದೂ ಅಷ್ಟೇ ಸತ್ಯ. ಇಂಥ ದುರ್ಬಲ ಹಾಗೂ ಬದ್ಧತೆ ಇಲ್ಲದ ವಿರೋಧ ಪಕ್ಷಗಳು, ಸರ್ವಾಧಿಕಾರಿ ಮನೋಭಾವದ ಆಡಳಿತ ಪಕ್ಷಕ್ಕಿಂತಲೂ ಹೆಚ್ಚಿನ ಅಪಾಯಕಾರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ಲೋಪ-ದೋಷಗಳನ್ನು ಎತ್ತಿಹಿಡಿಯುವುದು ವಿರೋಧ ಪಕ್ಷಗಳ ಕೆಲಸ. ಇದಕ್ಕೂ ಸರ್ಕಾರ ಬಗ್ಗದಿದ್ದಾಗ ಹೋರಾಟವನ್ನು ಜನರ ಬಳಿಗೆ ಕೊಂಡೊಯ್ಯಬೇಕಾಗುತ್ತದೆ. ಆದರೆ, ಸಿಎಎ ವಿರುದ್ಧದ ಹೋರಾಟದಲ್ಲಿ ಸ್ವಯಂಪ್ರೇರಿತವಾಗಿ ಜನರೇ ಹೋರಾಟದ ಮುಂಚೂಣಿಯಲ್ಲಿದ್ದರೂ ಅದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಇಚ್ಛಾಶಕ್ತಿಯನ್ನು ವಿರೋಧ ಪಕ್ಷಗಳು ಪ್ರದರ್ಶಿಸದಿರುವುದು ಅವುಗಳ ದಿವಾಳಿತನಕ್ಕೆ‌ ಹಿಡಿದ ಕನ್ನಡಿಯಾಗಿದೆ.

ಇನ್ನು ಮಾಧ್ಯಮಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲು ನಾಯಿ ಎನ್ನಲಾಗುತ್ತದೆ. ಆದರೆ, ಮುಖ್ಯವಾಹಿನಿಯಲ್ಲಿರುವ ಕಾವಲು ನಾಯಿಗಳು ಎಂಜಲು ನಾಯಿಗಳಾಗಿವೆ ಎಂಬರ್ಥದ ಭಿತ್ತಿಪತ್ರಗಳನ್ನು ಹಲವು ಪ್ರತಿಭಟನಾಕಾರರು ಎತ್ತಿ ಹಿಡಿಯುವ ಮೂಲಕ ಅವುಗಳಿಗೂ‌‌ ಛೀಮಾರಿ ಹಾಕಿದ್ದಾರೆ. ಪ್ರತಿಭಟನಾಕಾರರ ಪೈಕಿ ಕೆಲವರು ಬಹಿರಂಗವಾಗಿ ಮಾಧ್ಯಮ ಪ್ರತಿನಿಧಿಗಳನ್ನು ಛೇಡಿಸುವ ಮೂಲಕ ಪೌರತ್ವ ಕಾಯ್ದೆಯ ವಿರುದ್ಧದ ಚಾರಿತ್ರಿಕ ಹೋರಾಟದ ಮಹತ್ವವನ್ನು ಸಾರಿದ್ದಾರೆ. ಹೊಸ ರಾಜಕೀಯ ಸಮೀಕರಣಕ್ಕೆ ದಿಕ್ಸೂಚಿಯಾಗಬಲ್ಲ ಹೋರಾಟದಲ್ಲಿ ತಮ್ಮ ಜವಾಬ್ದಾರಿ ನಿಭಾಯಿಸಲು ನೈತಿಕವಾಗಿ ಸೋತಿರುವ ವಿರೋಧ ಪಕ್ಷಗಳು ಹಾಗೂ ಮುಖ್ಯವಾಹಿನಿಯ ಬಹುತೇಕ ಮಾಧ್ಯಮಗಳು ತಮ್ಮೊಳೆಗೆ ಊತು ಹೋಗಿರುವ ಕನ್ನಯ್ಯಾ ಕುಮಾರ್ ರಂಥವರನ್ನು ಈಗಲಾದರೂ ಹುಡುಕಬೇಕಿದೆ. ಅದು ಅರೋಗ್ಯವಂತ ಪ್ರಜಾಪ್ರಭುತ್ವಕ್ಕೆ ಅವಶ್ಯ.

Tags: Amit ShahCongress PartyKanhaiya KumarMainstream MediaNarendra ModiOpposition Partiesಅಮಿತ್ ಶಾಕನ್ಹಯ್ಯಾ ಕುಮಾರ್ಕಾಂಗ್ರೆಸ್ ಪಕ್ಷನರೇಂದ್ರ ಮೋದಿಪೌರತ್ವ ತಿದ್ದುಪಡಿ ಕಾನೂನುಮುಖ್ಯವಾಹಿನಿ ಮಾಧ್ಯಮಗಳುವಿರೋಧ ಪಕ್ಷ
Previous Post

ದೇಶದ ಆರ್ಥಿಕ ಸ್ಥಿತಿ ಬದಲಿಸಿದ ವರ್ಷದ ಹನ್ನೆರಡು ವಿದ್ಯಮಾನಗಳೇನು ಗೊತ್ತಾ ?

Next Post

ಮೂರೇ ತಿಂಗಳಿನಲ್ಲಿ ಬರುತ್ತೇನೆ ಎಂದ ಯೋಧ……ಕಣ್ಮರೆಯಾದ

Related Posts

ಕರ್ನಾಟಕ

ಅಧ್ಯಕ್ಷ ಸ್ಥಾನಕ್ಕೆ DKಸುರೇಶ್ ನಾಮಪತ್ರ ಸಲ್ಲಿಕೆ

by ಪ್ರತಿಧ್ವನಿ
May 17, 2025
0

https://youtu.be/1PWjkUhCOwo

Read moreDetails

ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಎಡವಿಬಿದ್ದ ಸಿಎಂ ಸಿದ್ದರಾಮಯ್ಯ

May 17, 2025

Operation Sindoora ಹಾಗೂ ಸೇನೆ ಬಗ್ಗೆ ಹಗುರವಾಗಿ ಮಾತನಾಡಿದಲ್ಲ

May 17, 2025

ಸಿಎಂಗೆ ಪತ್ರ ಬರೆದ ಸಂಸದ ಸಿಎನ್ ಮಂಜುನಾಥ

May 17, 2025
ಭಾರತ..ಪಾಕಿಸ್ತಾನ ನಡುವಿನ ಕದನ ವಿರಾಮ ನಾಳೆ ಅಂತ್ಯ…! ಮುಂದೇನು ..?! 

ಭಾರತ..ಪಾಕಿಸ್ತಾನ ನಡುವಿನ ಕದನ ವಿರಾಮ ನಾಳೆ ಅಂತ್ಯ…! ಮುಂದೇನು ..?! 

May 17, 2025
Next Post
ಮೂರೇ ತಿಂಗಳಿನಲ್ಲಿ ಬರುತ್ತೇನೆ ಎಂದ ಯೋಧ......ಕಣ್ಮರೆಯಾದ

ಮೂರೇ ತಿಂಗಳಿನಲ್ಲಿ ಬರುತ್ತೇನೆ ಎಂದ ಯೋಧ......ಕಣ್ಮರೆಯಾದ

Please login to join discussion

Recent News

ಕೊತ್ತೂರು ಮಂಜುನಾಥ್​ಗೆ ಕಾಂಗ್ರೆಸ್​ – ಬಿಜೆಪಿ ನಾಯಕರ ಚಾಟಿ..
Top Story

ಕೊತ್ತೂರು ಮಂಜುನಾಥ್​ಗೆ ಕಾಂಗ್ರೆಸ್​ – ಬಿಜೆಪಿ ನಾಯಕರ ಚಾಟಿ..

by ಕೃಷ್ಣ ಮಣಿ
May 17, 2025
Top Story

ಕರಡಿ ಹಾಗೂ ಕರಡಿ ಮರಿಯನ್ನು ಕಂಡು ಪ್ರವಾಸಿಗರು ಫುಲ್ ಖುಷ್.

by ಪ್ರತಿಧ್ವನಿ
May 17, 2025
ಭಾರತ..ಪಾಕಿಸ್ತಾನ ನಡುವಿನ ಕದನ ವಿರಾಮ ನಾಳೆ ಅಂತ್ಯ…! ಮುಂದೇನು ..?! 
Top Story

ಭಾರತ..ಪಾಕಿಸ್ತಾನ ನಡುವಿನ ಕದನ ವಿರಾಮ ನಾಳೆ ಅಂತ್ಯ…! ಮುಂದೇನು ..?! 

by Chetan
May 17, 2025
ಕೊತ್ತೂರು ಮಂಜುನಾಥ್​ ವಿರುದ್ಧ ದೂರು.. ನಾನು ಹೇಳಿದ್ದು ಹೀಗೆ ಎಂದ ಶಾಸಕ
Top Story

ಕೊತ್ತೂರು ಮಂಜುನಾಥ್​ ವಿರುದ್ಧ ದೂರು.. ನಾನು ಹೇಳಿದ್ದು ಹೀಗೆ ಎಂದ ಶಾಸಕ

by ಕೃಷ್ಣ ಮಣಿ
May 17, 2025
ರಾಜ್ಯದಲ್ಲಿ ನುಡಿದಂತೆ ನಡೆದಿರುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್​ ಸರ್ಕಾರ..
Top Story

ರಾಜ್ಯದಲ್ಲಿ ನುಡಿದಂತೆ ನಡೆದಿರುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್​ ಸರ್ಕಾರ..

by ಕೃಷ್ಣ ಮಣಿ
May 17, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಕೊತ್ತೂರು ಮಂಜುನಾಥ್​ಗೆ ಕಾಂಗ್ರೆಸ್​ – ಬಿಜೆಪಿ ನಾಯಕರ ಚಾಟಿ..

ಕೊತ್ತೂರು ಮಂಜುನಾಥ್​ಗೆ ಕಾಂಗ್ರೆಸ್​ – ಬಿಜೆಪಿ ನಾಯಕರ ಚಾಟಿ..

May 17, 2025

Santhosh Lad ಅಂಥವ್ರು ಹಿಂಗೆಲ್ಲ ಮಾತಾಡ್ತಾರೆ ಅಂದ್ರೆ..

May 17, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada