Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಶೌಚಾಲಯ ನಿರ್ವಹಣೆ: ಕರ್ಮಚಾರಿಗಳನ್ನು ಕಡೆಗಣಿಸುತ್ತಿರುವ ಬಿಬಿಎಂಪಿ

ಶೌಚಾಲಯ ನಿರ್ವಹಣೆ: ಕರ್ಮಚಾರಿಗಳನ್ನು ಕಡೆಗಣಿಸುತ್ತಿರುವ ಬಿಬಿಎಂಪಿ
ಶೌಚಾಲಯ ನಿರ್ವಹಣೆ: ಕರ್ಮಚಾರಿಗಳನ್ನು ಕಡೆಗಣಿಸುತ್ತಿರುವ ಬಿಬಿಎಂಪಿ
Pratidhvani Dhvani

Pratidhvani Dhvani

September 17, 2019
Share on FacebookShare on Twitter

ಬೆಂಗಳೂರಿನಲ್ಲಿ ಪಾವತಿಸಿ ಬಳಸುವ ಶೌಚಾಲಯಗಳನ್ನು ನೋಡಿಕೊಳ್ಳುವವರು ಬಹುತೇಕ ಉತ್ತರ ಭಾರತೀಯರು. ಸ್ಥಳೀಯ ಕರ್ಮಚಾರಿಗಳು ಕಾಣುವುದೇ ಇಲ್ಲ. ಇದರ ಜೊತೆಗೆ ಉತ್ತರ ಭಾರತೀಯರು ನಿರ್ವಹಣೆ ಮಾಡುತ್ತಿರುವ ಸಾಕಷ್ಟು ಶೌಚಾಲಯಗಳಲ್ಲಿ ಶುಚಿತ್ವ ಇರುವುದಿಲ್ಲ. ಅಲ್ಲದೆ, ಇವರು ಮನಬಂದಂತೆ ಸಾರ್ವಜನಿಕರಿಂದ ಹಣವನ್ನು ವಸೂಲಿ ಮಾಡುತ್ತಿರುವುದು ದಿನನಿತ್ಯ ಕಂಡು ಬರುತ್ತಿದ್ದರೂ, ಬಿಬಿಎಂಪಿ ಮಾತ್ರ ಮೌನವಹಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ

ಸರ್ಕಾರದ ಆಸ್ತಿ ಕಾಪಾಡಬೇಕಾದ BMTF ನಿಂದಲೇ ಭೂಗಳ್ಳರ ರಕ್ಷಣೆ ಆಗ್ತಿದ್ಯಾ.!?

ಚಾರ್ಲಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್‌ : ಬೇರೆ ಭಾಷೆಯಲ್ಲೂ ಮಿಂಚಲಿದೆಯ ಚಾರ್ಲಿ?

ಶೌಚಾಲಯಗಳ ನಿರ್ವಹಣೆಗೆ ನಿಯಮ ಹಾಕಿಕೊಳ್ಳದ ಬಿಬಿಎಂಪಿ

ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ, 530 ಪಾಲಿಕೆ ಹಾಗೂ 150 ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ ಸೇರಿ ಒಟ್ಟು 680 ಶೌಚಾಲಯಗಳಿವೆ. ಬಿಬಿಎಂಪಿ ಇಲಾಖೆ ಸಾರ್ವಜನಿಕ ಶೌಚಾಲಯ ನಿರ್ವಹಣೆಯನ್ನು ಹೊತ್ತುಕೊಂಡ ದಿನದಿಂದಲೂ ಟೆಂಡರ್ ಪ್ರಕ್ರಿಯೆಯಲ್ಲಾಗಲಿ, ಶುಚಿತ್ವವನ್ನು ಕಾಪಾಡುವುದಕ್ಕಾಗಲಿ, ಅಥವಾ ದರ ವಸೂಲಿಯಲ್ಲಿ ಯಾವ ನಿಯಮವನ್ನೂ ರೂಪಿಸಿಲ್ಲ. ಅಲ್ಲದೆ, 3 ವರ್ಷಗಳಿಗೊಮ್ಮ ಟೆಂಡರ್ ಪ್ರಕ್ರಿಯೆ ನಡೆಸಬೇಕು ಎಂಬ ನಿಯಮವಿದ್ದರೂ, ದಶಕ ಕಳೆದರೂ, ಬಿಬಿಎಂಪಿ ಟೆಂಡರ್ ಪ್ರಕ್ರಿಯೆಯನ್ನೇ ನಡೆಸಿಲ್ಲ. ನಗರದ ಬಹುತೇಕ ಶೇಕಡ 90ರಷ್ಟು ಶೌಚಾಲಯಗಳನ್ನು ಉತ್ತರ ಭಾರತೀಯರೇ ನಿರ್ವಹಣೆ ಮಾಡುತ್ತಿದ್ದು, ಮನಬಂದಂತೆ ಹಣ ವಸೂಲಿ ಮಾಡಿದರೂ, ಶುಚಿತ್ವವನ್ನು ಮಾತ್ರ ಕಾಪಾಡುತ್ತಿಲ್ಲ. ಇದಲ್ಲದೇ ಶೌಚಾಲಯ ನಿರ್ವಹಿಸುವ ಜನರು ಶೌಚಾಲಯದಲ್ಲೇ ಅಡುಗೆ ಮಾಡಿಕೊಂಡು, ಅಲ್ಲೇ ವಾಸಿಸುತ್ತಿರುವುದು ಸಹ ಬೆಳಕಿಗೆ ಬಂದಿದೆ. ಆದರೆ ಬಿಬಿಎಂಪಿ ಮಾತ್ರ ಇದನ್ನು ನಿಯಂತ್ರಿಸುವುದಕ್ಕೆ ಯಾವುದೇ ಸೂಕ್ತವಾದ ಕ್ರಮ ಕೈಗೊಳ್ಳದೆ, ನಿಯಮ ರೂಪಿಸದೆ ಇರುವುದು ವಿಷಾದನೀಯ.

ಮಲ ಹೊರುವವರಿಗೆ (Manual Scavengers) ಪ್ರಥಮ ಆದ್ಯತೆ ನೀಡಬೇಕು:

2013ರಲ್ಲಿ ರಾಷ್ಟ್ರೀಯ ಕರ್ಮಚಾರಿಗಳ ಆಯೋಗ ರಾಜ್ಯಾದ್ಯಂತ ಸಮೀಕ್ಷೆ ನಡೆಸಿ, ಶೌಚಾಲಯಗಳ ನಿರ್ವಹಣೆಯನ್ನು ಮಲವನ್ನು ಕೈಯಿಂದ ಎತ್ತಿ ಶುಚಿಗೊಳಿಸುವವರು (Manual Scavengers) ಮತ್ತು ಚರಂಡಿ ಶುಚಿಗೊಳಿಸುವವರಿಗೆ ನೀಡಬೇಕು. ನಂತರ ಪೌರಕಾರ್ಮಿಕರ ಮಕ್ಕಳು, ಹಾಗೂ ಅವರ ರಕ್ತ ಸಂಬಂಧಿಗಳು ಸಹ ನಿರ್ವಹಣೆ ಮಾಡಬಹುದು ಎಂಬ ಕಾಯ್ದೆಯನ್ನು ರೂಪಿಸಿದೆ. ಆದರೆ ಇಂತಹವರು ನಗರದ ನೂರು ಶೌಚಾಲಯಗಳಲ್ಲಿ ಒಬ್ಬರು ಅಥವಾ ಇಬ್ಬರು ಬಿಟ್ಟರೆ, ಇನ್ಯಾವ ಶೌಚಾಲಯಗಳಲ್ಲೂ ಕಾಣುವುದೇ ಇಲ್ಲ.

ಸೆಪ್ಟಂಬರ್ 11ರಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ್ ಹೀರೇಮನಿ, ನಗರದ ಆರು ಶೌಚಾಲಯಗಳಿಗೆ ದಿಢೀರ್ ಬೇಟಿ ಕೊಟ್ಟು ಶುಚಿತ್ವದ ಕೊರತೆ ಮತ್ತು ಅವ್ಯವಸ್ಥೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ್ದರು. ಶೌಚಾಲಯಗಳ ಸರಿಯಾದ ದಾಖಲೆಗಳಿಲ್ಲದೆ, ನಿರ್ವಹಣೆಯ ಗುತ್ತಿಗೆಯನ್ನು ಟೆಂಡರ್ ಆಹ್ವಾನಿಸದೆಯೇ ನೀಡಿರುವುದಕ್ಕೆ, ಮಂತ್ರಿಮಾಲ್ ಸಮೀಪದ ಸಾರ್ವಜನಿಕ ಶೌಚಾಲಯ, ಮಲ್ಲೇಶ್ವರ ಮೈದಾನ ಮತ್ತು ರಾಜಾಜಿನಗರದ ಗಾಯಿತ್ರಿದೇವಿ ಉದ್ಯಾನವನದ ಸಾರ್ವಜನಿಕ ಶೌಚಾಲಯಗಳಿಗೆ ಬೀಗ ಹಾಕಿಸಿ, ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

“ಬಿಬಿಎಂಪಿ 20 ವರ್ಷದ ಹಿಂದೆ ಒಂದು ಬಾರಿ ಮಾತ್ರ ಟೆಂಡರ್ ಪ್ರಕ್ರಿಯೆ ನಡೆಸಿದ್ದಾರೆ. ನಂತರ ಯಾವ ಟೆಂಡರನ್ನು ಕರೆದಿಲ್ಲ. ಹೀಗಾಗಿ ಅವತ್ತಿನ ದಿನಗಳಲ್ಲಿ ಬಹುತೇಕ ಉತ್ತರ ಭಾರತೀಯರೇ ಟೆಂಡರ್ ಪಡೆದುಕೊಳ್ಳುತ್ತಿದ್ದರು. ಅವರೇ ಸ್ವಂತ ಖರ್ಚಿನಿಂದ ಶೌಚಾಲಯಗಳನ್ನು ನಿರ್ಮಿಸಿಕೊಳ್ಳುತ್ತಿದ್ದರು. ನಂತರ ಬಿಬಿಎಂಪಿ ನಿರ್ಮಾಣ ಮಾಡಿದ ಶೌಚಾಲಯಗಳು ಸಹ ಶೇಕಡ 90ರಷ್ಟು ಉತ್ತರ ಭಾರತೀಯರಿಗೆ ನಿರ್ವಹಣೆಗೆ ಕೊಟ್ಟಿದ್ದಾರೆ.

ಉತ್ತರ ಭಾರತದ ಮಾಲೀಕನೊಬ್ಬ, ಹುಡುಗರಿಗೆ ಕಡಿಮೆ ಸಂಬಳ ಕೊಟ್ಟು ಅಲ್ಲಿಂದಲೇ ಒಟ್ಟು 300ಕ್ಕೂ ಹೆಚ್ಚು ಶೌಚಾಲಯಗಳನ್ನು ನಿರ್ವಹಣೆ ಮಾಡುತ್ತಿದ್ದಾನೆ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಮತ್ತು ರಾಷ್ಟ್ರೀಯ ಕರ್ಮಚಾರಿಗಳ ಆಯೋಗ ಸಮೀಕ್ಷೆ ನಡೆಸಿದ ಪ್ರಕಾರ, ನಗರದಲ್ಲಿ ಮಲವನ್ನು ಕೈಯಿಂದ ಎತ್ತುವ 700 ಕರ್ಮಚಾರಿಗಳು ಇದ್ದಾರೆ. ರಾಜ್ಯಾದ್ಯಂತ 3000ಕ್ಕೂ ಹೆಚ್ಚು ಕರ್ಮಚಾರಿಗಳು ಇದ್ದಾರೆ. ಹೀಗಾಗಿ ಕೇಂದ್ರ ಸರ್ಕಾರದಿಂದ ಇವರಿಗೆ ಪರ್ಯಾಯ ಉದ್ಯೋಗ ನೀಡಿ, ಇವರೇ ಶೌಚಾಲಯಗಳ ನಿರ್ವಹಣೆ ಮಾಡುವುದಕ್ಕೆ ಆದ್ಯತೆ ಕೊಡಬೇಕು ಎಂದು ನಿಯಮ ರೂಪಿಸಲಾಗಿದೆ. ಸೆಪ್ಟಂಬರ್ 12ರಂದು ನಡೆದ ಸಭೆಯಲ್ಲಿ ಬಿಬಿಎಂಪಿ ಆಯುಕ್ತರು ಮತ್ತು ವಿಶೇಷ ಆಯುಕ್ತರು ಶೀಘ್ರದಲ್ಲಿ ನಿರ್ವಹಣೆಗೆ ಹೊಸ ನಿಯಮ ರೂಪಿಸುತ್ತೇವೆ, ಮಲ ಎತ್ತುವವರಿಗೆ (Manual Scavengers) ಶೇಕಡ 30ರಷ್ಟು ಕೆಲಸವನ್ನು ಖಾತ್ರಿಗೊಳಿಸುತ್ತೇವೆ ಎಂದು ಹೇಳಿದ್ದಾರೆ. ನಾನು ತೆಗೆದುಕೊಂಡ ನಿರ್ಧಾರದಿಂದ ಬಿಬಿಎಂಪಿ ಹೊಸ ನಿಯಮ ರೂಪಿಸಲು ಸಾಧ್ಯವಾಯಿತು”

-ಜಗದೀಶ್ ಹೀರೇಮನಿ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ

ರಣದೀಪ್. ಡಿ, ವಿಶೇಷ ಆಯುಕ್ತ, ಬಿಬಿಎಂಪಿಆರಂಭದ ದಿನಗಳಲ್ಲಿ ಶೌಚಾಲಯಗಳನ್ನು ಉತ್ತರ ಭಾರತದ ಸುಲಭ್ ಎಂಬ ಸಂಸ್ಥೆ ನಿರ್ಮಿಸಿ, ನಿರ್ವಹಣೆಮಾಡುತ್ತೇವೆ ಎಂದು ಮನವಿ ಮಾಡಿದ್ದರು. ಹಾಗಾಗಿ ಅವರಿಗೆ ಕೊಟ್ಟಿದ್ದೆವು. ಮುಂದಿನ ದಿನಗಳಲ್ಲಿಪಾಲಿಕೆಯ ಘನತ್ಯಾಜ್ಯ ವಿಭಾಗದಿಂದ, ನಗರದಲ್ಲಿ ಕನಿಷ್ಠ 50ಕ್ಕಿಂತ ಹೆಚ್ಚು ಸಾರ್ವಜನಿಕ ಶೌಚಾಲಯಗಳು ಮತ್ತು ಹೈಟೆಕ್ ಶೌಚಾಲಯಗಳನ್ನುನಿರ್ಮಿಸುವುದರ ಬಗ್ಗೆ ಕ್ರಿಯಾಯೋಜನೆ ಮಾಡಿಕೊಂಡಿದ್ದೇವೆ. ಅಲ್ಲದೆ, ಶೌಚಾಲಯಗಳನಿರ್ವಹಣೆ ಮಾಡುವುದಕ್ಕೆ ಶೇಕಡ 50ರಷ್ಟು ಮಲ ಎತ್ತುವವರಿಗೆ (ManualScavengers) ಮೊದಲ ಆದ್ಯತೆ ಕೊಡುತ್ತೇವೆ. ನಂತರ ಉಳಿದವರೂ ನಿರ್ವಹಣೆಮಾಡಬಹುದು

ಬಿಬಿಎಂಪಿ, ಎರಡು ದಶಕಗಳಿಂದಲೂ ಯಾವುದೇ ನಿಯಮ ರೂಪಿಸದೇ, ಸಾಕಷ್ಟು ಕರ್ಮಚಾರಿಗಳು ಅವಕಾಶ ವಂಚಿತರಾಗಿಯೇ ಇದ್ದಾರೆ. ಇನ್ಮುಂದೆ ಶೌಚಾಲಯಗಳ ನಿರ್ವಹಣೆಯನ್ನು ಶೇಕಡ 50ರಷ್ಟು ಮಲ ಎತ್ತುವವರಿಗೆ ಕೊಡುವ ಅವಕಾಶವನ್ನು ಕಾದು ನೋಡಬೇಕಿದೆ.

RS 500
RS 1500

SCAN HERE

don't miss it !

GST ಪರಿಷ್ಕರಣೆ ಜನ ಸಾಮಾನ್ಯರಿಗೆ ಮಾಡಿದ ಅನ್ಯಾಯ : ಸಿದ್ದರಾಮಯ್ಯ
ಕರ್ನಾಟಕ

GST ಪರಿಷ್ಕರಣೆ ಜನ ಸಾಮಾನ್ಯರಿಗೆ ಮಾಡಿದ ಅನ್ಯಾಯ : ಸಿದ್ದರಾಮಯ್ಯ

by ಪ್ರತಿಧ್ವನಿ
June 30, 2022
ಕೋವಿಡ್ ಹೆಚ್ಚಳ : TAC ನಿಂದ ಮಾಸ್ಕ್ ಕಡ್ಡಾಯಕ್ಕೆ ಸೂಚನೆ : ಆರೋಗ್ಯ ಇಲಾಖೆ ದಂಡ ಪ್ರಯೋಗಕ್ಕೆ‌ ಚಿಂತನೆ !
ಕರ್ನಾಟಕ

ಕೋವಿಡ್ ಹೆಚ್ಚಳ : TAC ನಿಂದ ಮಾಸ್ಕ್ ಕಡ್ಡಾಯಕ್ಕೆ ಸೂಚನೆ : ಆರೋಗ್ಯ ಇಲಾಖೆ ದಂಡ ಪ್ರಯೋಗಕ್ಕೆ‌ ಚಿಂತನೆ !

by ಕರ್ಣ
June 29, 2022
ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ
ಕರ್ನಾಟಕ

ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
June 30, 2022
ತೆರಿಗೆದಾರರ GST ಸಂಕಟಗಳಿಗೆ ಐದು ವರ್ಷ : ಮೊಸರು, ಧವಸಧಾನ್ಯಗಳಿಗೂ ಇನ್ನು ಮುಂದೆ ತೆರಿಗೆ
ದೇಶ

ತೆರಿಗೆದಾರರ GST ಸಂಕಟಗಳಿಗೆ ಐದು ವರ್ಷ : ಮೊಸರು, ಧವಸಧಾನ್ಯಗಳಿಗೂ ಇನ್ನು ಮುಂದೆ ತೆರಿಗೆ

by ಚಂದನ್‌ ಕುಮಾರ್
June 30, 2022
WHO Report | ‘ಮೋದಿ ಸುಳ್ಳು ಹೇಳಬಹುದು ಆದರೆ ವಿಜ್ಞಾನ ಸುಳ್ಳು ಹೇಳುವುದಿಲ್ಲ’ : ರಾಹುಲ್ ಗಾಂಧಿ
ದೇಶ

‘ಆಳುವ ಸರ್ಕಾರ ಈ ವಾತಾವರಣವನ್ನು ಸೃಷ್ಟಿಸಿದೆ’ : ರಾಹುಲ್ ಗಾಂಧಿ

by ಪ್ರತಿಧ್ವನಿ
July 1, 2022
Next Post
ಡಿಜಿಟಲ್ ಇಂಡಿಯಾ ಕ್ಲೈಮ್ಯಾಕ್ಸ್: ಹಣ ಇಟ್ಟರೂ

ಡಿಜಿಟಲ್ ಇಂಡಿಯಾ ಕ್ಲೈಮ್ಯಾಕ್ಸ್: ಹಣ ಇಟ್ಟರೂ, ಪಡೆದರೂ ನಿಮಗೇ ಶುಲ್ಕ!

‘ಕಲ್ಯಾಣ’ ವಾಗಬೇಕಿದೆ ಕರ್ನಾಟಕ!

‘ಕಲ್ಯಾಣ’ ವಾಗಬೇಕಿದೆ ಕರ್ನಾಟಕ!

ಹತಾಶೆಯ ಹಂತ ತಲುಪಿದೆಯೇ ಕಾಂಗ್ರೆಸ್ ಪಕ್ಷ

ಹತಾಶೆಯ ಹಂತ ತಲುಪಿದೆಯೇ ಕಾಂಗ್ರೆಸ್ ಪಕ್ಷ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist