Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ವಿಶ್ವ ಪರಿಸರ ದಿನ: ಅರ್ಧ ದಿನದ ಕಾರ್ಯಕ್ರಮಕ್ಕೆ 20 ಲಕ್ಷ ಖರ್ಚು!

ವಿಶ್ವ ಪರಿಸರ ದಿನ: ಅರ್ಧ ದಿನದ ಕಾರ್ಯಕ್ರಮಕ್ಕೆ 20 ಲಕ್ಷ ಖರ್ಚು!
ವಿಶ್ವ ಪರಿಸರ ದಿನ: ಅರ್ಧ ದಿನದ ಕಾರ್ಯಕ್ರಮಕ್ಕೆ 20 ಲಕ್ಷ ಖರ್ಚು!
Pratidhvani Dhvani

Pratidhvani Dhvani

June 6, 2019
Share on FacebookShare on Twitter

ಇದು ಒಂದು ಸಾಲು ಸುದ್ದಿಯಂತೆ ಕಾಣಬಹುದು. ಆದರೆ, ಸುದ್ದಿ ಬರೆಯುವುದಕ್ಕೆ ಕಾಗದ ಖರ್ಚಾಗುವುದಿಲ್ಲ, ಪರಿಸರ ಅಷ್ಟೊಂದು ಕೆಡುವುದಿಲ್ಲ ಎಂಬ ವಿಶ್ವಾಸದಲ್ಲಿ ಇಷ್ಟು ಬರೆಯಲೇಬೇಕು. ವಿಶ್ವ ಪರಿಸರ ದಿನದಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಕಾರ್ಯಕ್ರಮಕ್ಕೆ ವ್ಯಯಿಸಿದ ಹಣ ಬರೋಬ್ಬರಿ ರೂ 20 ಲಕ್ಷ (20,45,245).

ಹೆಚ್ಚು ಓದಿದ ಸ್ಟೋರಿಗಳು

ಮೀಸಲಾತಿ ನೀಡದಿದ್ದರೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾದೀತು : ವೀಣಾ ಕಾಶಪ್ಪನವರ

ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮಾತ್ರ PSI ಹಗರಣ ಬಗ್ಗೆ ನಿಷ್ಪಕ್ಷಪಾತ ತನಿಖೆ ಸಾಧ್ಯ : ರಾಹುಲ್‌ ಗಾಂಧಿ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

ಈ ಕಾರ್ಯಕ್ರಮ ನಡೆದಿದ್ದು ಮಲ್ಲೇಶ್ವರಂನ ಪಿಟೀಲು ಚೌಡಯ್ಯ ಸಭಾಂಗಣದಲ್ಲಿ. ಕಾರ್ಯಕ್ರಮದ ಮುಖ್ಯಾಂಶ ಇಷ್ಟು; ಪರಿಸರ ಸಂರಕ್ಷಣೆಯಲ್ಲಿ ಮಹತ್ವದ ಕಾಣಿಕೆ ನೀಡಿದ ಮೂವರಿಗೆ ಹಾಗೂ ಮೂರು ಸಂಘ-ಸಂಸ್ಥೆಗಳಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ. ಪ್ರಶಸ್ತಿ ತಲಾ ರೂ 1 ಲಕ್ಷ ನಗದು ಒಳಗೊಂಡಿತ್ತು. ಕಾರ್ಯಕ್ರಮ ನಡೆದಿದ್ದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ರವರೆಗೆ.

ಈ ಕಾರ್ಯಕ್ರಮ ಆಯೋಜನೆಗೆ ಮಂಡಳಿ ಮೊತ್ತ ಮೊದಲನೆಯದಾಗಿ ಪಡೆದುಕೊಂಡಿದ್ದು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕ ಕಾಯ್ದೆಯಡಿ (Karnataka Transparency in Public Procurement Act – KTPP) ವಿನಾಯಿತಿ. ಈ ವಿನಾಯಿತಿ ನೀಡಲಾಗುವುದು ಕಾಯ್ದೆಯ ಸೆಕ್ಷನ್ 4G ಅಡಿಯಲ್ಲಿ. ಈ ವಿನಾಯತಿ ನೀಡಲಾಗುವುದು ಟೆಂಡರ್ ಕರೆಯಲು ಸಮಯವೇ ಇಲ್ಲದಂತ ತುರ್ತು ಕಾಮಗಾರಿಗಳಿಗಷ್ಟೆ. ಉದಾಹರಣೆಗೆ, ಪ್ರವಾಹ, ಭೂಕಂಪ ಹಾಗೂ ಇಂತಹ ತುರ್ತು ಕಾಮಗಾರಿಗಳಿಗಷ್ಟೆ ಈ ವಿನಾಯಿತಿಯನ್ನು ಕೋರಲಾಗುತ್ತದೆ ಹಾಗೂ ವಿನಾಯಿತಿಯನ್ನು ನೀಡಲಾಗುತ್ತದೆ. ಯಾವುದೇ ಖರೀದಿ ಅಥವಾ ಸಿವಿಲ್ ಕಾಮಗಾರಿಗಳ ಒಟ್ಟು ಮೊತ್ತ ರೂ 5 ಲಕ್ಷಕ್ಕೂ ಕಡಿಮೆ ಇದ್ದರೆ ಕಾಯ್ದೆಯೇ ಅನ್ವಯಿಸುವುದಿಲ್ಲ.

ಪ್ರತಿವರ್ಷ ಜೂನ್ 5 ರಂದೇ ಆಚರಿಸಲಾಗುವ ವಿಶ್ವ ಪರಿಸರ ದಿನದ ಖರ್ಚು ನಿರ್ವಹಣೆಗೂ ವಿನಾಯಿತಿ ಪಡೆದಿರುವುದು ಸಂಶಯವನ್ನು ಹೆಚ್ಚಿಸಿತ್ತು. ಇದಕ್ಕಾಗಿ, ಮೇ 10 ರಿಂದ ಜೂನ್ 1 ರವರೆಗೆ ಪತ್ರ ವ್ಯವಹಾರ ನಡೆಸಿದ ಮಂಡಳಿ ಕೊನೆಗೂ ವಿನಾಯಿತಿ ಪಡೆಯುವಲ್ಲಿ ಯಶಸ್ವಿಯಾಯಿತು.

ಈಗ ಮಂಡಳಿ ಯಾವುದಕ್ಕೆಲ್ಲಾ ಎಷ್ಟೆಷ್ಟು ಖರ್ಚು ಮಾಡಿದೆ ಎನ್ನುವುದನ್ನು ನೋಡೋಣ.

ಪರಿಸರ ದಿನದ ಖರ್ಚು ವೆಚ್ಚ
ಪರಿಸರ ದಿನದ ಖರ್ಚು ವೆಚ್ಚ

ಪ್ರತಿಧ್ವನಿ ಕಲೆಹಾಕಿದ ಮಾಹಿತಿ ಪ್ರಕಾರ ಕೇವಲ ಕಾರ್ಯಕ್ರಮದ ಆಯೋಜನೆಗೇ ರೂ. 20 ಲಕ್ಷ ಖರ್ಚು ಮಾಡಲಾಗಿದೆ. ಪ್ರಶಸ್ತಿ ಮೊತ್ತ ಇದರಲ್ಲಿ ಒಳಗೊಂಡಿಲ್ಲ. ಸ್ಟೇಜ್ ನ ಅಲಂಕಾರಕ್ಕೆ ರೂ. 47,250, ಸ್ಟೇಜ್ ನ ಬ್ಯಾಕ್ ಡ್ರಾಪ್ ಗೆ ರೂ. 54,000, ಸೈಡ್ ಪ್ಯಾನೆಲ್ ಗೆ ರೂ. 42,000, ಕನ್ಸೋಲ್ ಮಾಸ್ಕಿಂಗ್ ಮತ್ತು ಸ್ಟ್ಯಾಂಡ್ ಬೈ ಗೆ ರೂ. ತಲಾ 18,900, ಸ್ವಾಗತ ಬ್ಯಾನರ್ ಗೆ ರೂ. 22,800, ಒಬ್ಬ ಫೊಟೊಗ್ರಾಫರ್ ಗೆ ರೂ. 47,460, ವಿಡಿಯೋಗ್ರಾಫರ್ ಗೆ ರೂ. 94,920, ಜನರೇಟರ್ ಗೆ ರೂ. 71,190, ಸಭೆಯ ಮೇಲಿನ ಕುರ್ಚಿ ಹಾಗೂ ಟೇಬಲ್ ಗೆ ರೂ. 35,595, ಹೂವಿನ ಅಲಂಕಾರ ಮತ್ತು ಹಣ್ಣುಗಳ ಬಾಸ್ಕೆಟ್ ಗೆ ರೂ. 94,500, ಹೊರಾಂಗಣದ ಆರ್ಚ್ ಗೆ ರೂ. 52,000, ನೀರಿನ್ ಬಾಟಲ್, ಬಾಳೆ ಹಣ್ಣು ಮತ್ತು 500 ಸ್ಯಾಂಡ್ ವಿಚ್ ಗೆ ರೂ. 47,400, ಎರಡು ಹೊತ್ತು ತಿಂಡಿ ಮತ್ತು ಊಟಕ್ಕೆ ರೂ. 6.21 ಲಕ್ಷ, ಹೂಗುಚ್ಛ (ಅದರಲ್ಲೂ eco-friendly) ರೂ. 6,300, 2,000 ಹೂ ಕುಂಡಗಳಿಗೆ ರೂ. 30,000, ವೇಸ್ಟ್ ಮ್ಯಾನೆಜ್ ಮೆಂಟ್ ಗೆ ರೂ. 1 ಲಕ್ಷ, 100 ಮಂದಿ ಮಾಧ್ಯಮದವರಿಗೆ ಕಿಟ್ ವಿತರಣೆಗಾಗಿ ರೂ. 20,000 ಹಾಗೂ ಕೊನೆಯದಾಗಿ ಜಿಎಸ್ ಟಿ ಮೊತ್ತ ರೂ 3.11 ಲಕ್ಷ.

ಪ್ರತಿವರ್ಷ ಆಚರಿಸುವ ಪರಿಸರ ದಿನದ ಕಾರ್ಯಕ್ರಮದ ಖರ್ಚಿಗೆ ಪ್ರತಿಧ್ವನಿ KTPP ಕಾಯ್ದೆಯಡಿ ವಿನಾಯಿತಿ ಏಕೆ ಪಡೆಯಲಾಯಿತು ಎಂದು ಕೇಳಲು ಪ್ರತಿಧ್ವನಿ ಮಂಡಳಿ ಅಧ್ಯಕ್ಷ ಡಾ. ಜಯರಾಂ ಅವರನ್ನು ಸಂಪರ್ಕಿಸಿತು. ಆದರೆ, ಅವರು ಲಭ್ಯವಿರದ ಕಾರಣ ಹೇಳಿಕೆ ಪಡೆಯಲಾಗಿಲ್ಲ. ಅವರ ಪ್ರತಿಕ್ರಿಯೆ ದೊರಕಿದೊಡನೆ ವರದಿಯಲ್ಲಿ ಸೇರಿಸಲಾಗುವುದು.

RS 500
RS 1500

SCAN HERE

don't miss it !

ಗೋಧ್ರಾ ಹತ್ಯಾಕಾಂಡ ಪ್ರಕರಣ: ಆರೋಪ ಸಾಬೀತಾಗದಿದ್ದರೆ ದೂರು ನೀಡಿದವರನ್ನು ಶಿಕ್ಷಿಸುವುದು ಸರಿಯೇ?
Top Story

ಗೋಧ್ರಾ ಹತ್ಯಾಕಾಂಡ ಪ್ರಕರಣ: ಆರೋಪ ಸಾಬೀತಾಗದಿದ್ದರೆ ದೂರು ನೀಡಿದವರನ್ನು ಶಿಕ್ಷಿಸುವುದು ಸರಿಯೇ?

by ಚಂದನ್‌ ಕುಮಾರ್
June 28, 2022
ಅಂದು ಅಮಿತ್ ಶಾ ನುಡಿದಂತೆ ನಡೆದಿದ್ದರೆ ಇಂದು ಬಿಜೆಪಿಯವರು ಸಿಎಂ ಆಗಿರುತ್ತಿದ್ದರು : ಉದ್ದವ್ ಠಾಕ್ರೆ
ದೇಶ

ಅಂದು ಅಮಿತ್ ಶಾ ನುಡಿದಂತೆ ನಡೆದಿದ್ದರೆ ಇಂದು ಬಿಜೆಪಿಯವರು ಸಿಎಂ ಆಗಿರುತ್ತಿದ್ದರು : ಉದ್ದವ್ ಠಾಕ್ರೆ

by ಪ್ರತಿಧ್ವನಿ
July 1, 2022
ಮೀನುಗಾರಿಕೆಯಿಂದ ರಾಜ್ಯದ ಒಟ್ಟು ಜಿಡಿಪಿಯಲ್ಲಿ ವೃದ್ಧಿ : ಬೊಮ್ಮಾಯಿ
ಇದೀಗ

ಮೀನುಗಾರಿಕೆಯಿಂದ ರಾಜ್ಯದ ಒಟ್ಟು ಜಿಡಿಪಿಯಲ್ಲಿ ವೃದ್ಧಿ : ಬೊಮ್ಮಾಯಿ

by ಪ್ರತಿಧ್ವನಿ
July 4, 2022
ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇದೆ.. ಬಜೆಟ್ ಇದೆ : ಆದರೂ BMRCL ನಿಂದಾಗಿ ಬಿಬಿಎಂಪಿಗೆ ತಲೆನೋವು !
ಕರ್ನಾಟಕ

ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇದೆ.. ಬಜೆಟ್ ಇದೆ : ಆದರೂ BMRCL ನಿಂದಾಗಿ ಬಿಬಿಎಂಪಿಗೆ ತಲೆನೋವು !

by ಕರ್ಣ
July 1, 2022
ಡಾಲರ್‌ ಎದುರು ಮತ್ತೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ!
ದೇಶ

ಡಾಲರ್‌ ಎದುರು ಸಾರ್ವಕಾಲಿಕ 79 ರೂ.ಗೆ ಕುಸಿದ ರೂಪಾಯಿ!

by ಪ್ರತಿಧ್ವನಿ
July 1, 2022
Next Post
ಹೊಸನಗರ ವಿಧಾನಸಭಾ ಕ್ಷೇತ್ರಕ್ಕಾಗಿ ಮೊಳಕೆಯೊಡೆದ ಹೋರಾಟ ಹೆಮ್ಮರವಾಗುವುದೇ?

ಹೊಸನಗರ ವಿಧಾನಸಭಾ ಕ್ಷೇತ್ರಕ್ಕಾಗಿ ಮೊಳಕೆಯೊಡೆದ ಹೋರಾಟ ಹೆಮ್ಮರವಾಗುವುದೇ?

ನಿಫಾ ಸೋಂಕು: ಬಚಾವಾಗಲು ನೀವು ಮಾಡಬೇಕಿರುವುದು ಈ ಒಂದೇ ಒಂದು ಸುಲಭ ಕೆಲಸ!

ನಿಫಾ ಸೋಂಕು: ಬಚಾವಾಗಲು ನೀವು ಮಾಡಬೇಕಿರುವುದು ಈ ಒಂದೇ ಒಂದು ಸುಲಭ ಕೆಲಸ!

ಐಸಿಸಿ ವಿಶ್ವ ಕಪ್‌

ಐಸಿಸಿ ವಿಶ್ವ ಕಪ್‌ | ಎಬಿಡಿ ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist