Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ವಿಧಾನ ಸಭೆಯಲ್ಲಿ ಎಂಭತ್ತರಲ್ಲಿ ನಡೆದಿದ್ದ “ಪಾಯಿಂಟ್ ಆಫ್ ಆರ್ಡರ್”

ವಿಧಾನ ಸಭೆಯಲ್ಲಿ ಎಂಭತ್ತರಲ್ಲಿ ನಡೆದಿದ್ದ “ಪಾಯಿಂಟ್ ಆಫ್ ಆರ್ಡರ್”
ವಿಧಾನ ಸಭೆಯಲ್ಲಿ ಎಂಭತ್ತರಲ್ಲಿ ನಡೆದಿದ್ದ “ಪಾಯಿಂಟ್ ಆಫ್ ಆರ್ಡರ್”
Pratidhvani Dhvani

Pratidhvani Dhvani

July 18, 2019
Share on FacebookShare on Twitter

ವಿಶ್ವಾಸಮತಯಾಚನೆ ಸಂಬಂಧ ಇಂದು ಗುರುವಾರ ಮುಂಜಾನೆ 11 ರಿಂದ ರಾಜ್ಯ ವಿಧಾನಸಭೆಯಲ್ಲಿ ಚರ್ಚೆ ನಡೆದಿದ್ದು “ಪಾಯಿಂಟ್ ಆಫ್ ಆರ್ಡರ್( ಕ್ರಿಯಾಲೋಪ) ಗಳದ್ದೇ ವಾರ್ ನಡೆದಿದೆ. ಕಾಂಗ್ರೆಸ್ ನಾಯಕರುಗಳಾದ ಸಿದ್ದರಾಮಯ್ಯ,ಎಚ್.ಕೆ.ಪಾಟೀಲ ಮತ್ತು ಕೃಷ್ಣ ಭೈರೇಗೌಡ ಅವರು ಅತೃಪ್ತ 15 ಶಾಸಕರ ಗೈರು ಹಾಜರಿ,ಅವರ ಸದಸ್ಯತ್ವದ ಬಗ್ಗೆ ಕ್ರಿಯಾಲೋಪ ಎತ್ತಿದ್ದಾರೆ. ಚರ್ಚೆ ನಡೆದಾಗ ಕ್ರಿಯಾಲೋಪದ ಮೂಲಕ ಸಭಾಧ್ಯಕ್ಷರ ಗಮನ ಸೆಳೆದು ಸ್ಪಷ್ಟೀಕರಣ ಕೇಳುವದು ಸಾಮಾನ್ಯ.

ಹೆಚ್ಚು ಓದಿದ ಸ್ಟೋರಿಗಳು

ಹಿಂದುತ್ವದ ಭ್ರಮೆ ಬಿತ್ತುವ ಮೂಲಕ ರಾಜಕೀಯದಲ್ಲಿ ಧರ್ಮದ ದುರ್ಬಳಕೆ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

ಝೀ ವಾಹಿನಿಯಲ್ಲಿ ಅಂತರ್‌ ಕಲಹ; ಮತ್ತೊಂದು ಕೂಗುಮಾರಿ ವಾಹಿನಿಗೆ ಹಾದಿ

1980 ರಲ್ಲಿ ರಾಜ್ಯದಲ್ಲಿ ಗುಂಡೂರಾವ್ ಸರಕಾರ. ರಾಜ್ಯ ವಿಧಾನಸಭೆಯಲ್ಲಿ ವಿಷಯವೊಂದರ ಮೇಲೆ ಗಹನವಾದ ಚರ್ಚೆ ನಡೆದಿತ್ತು. ಲಕ್ಷ್ಮೇಶ್ವರದ ಶಾಸಕ, ಕಾಂಗ್ರೆಸ್ಸಿನ ಗೂಳಪ್ಪ ಉಪನಾಳ ಮತ್ತು ಸವದತ್ತಿ ಕಾಂಗ್ರೆಸ್ ಶಾಸಕ ದಿ.ಜಿ.ಕೆ.ಟಕ್ಕೇದ ಒಂದೇ ಕಡೆಗೆ ಕುಳಿತಿದ್ದರು. ದೊಡ್ಡ ಪೇಟಾ, ಅದರಲ್ಲಿ ಎಲೆ ಅಡಿಕೆ ಸುಣ್ಣದ ಕಟ್ಟು ಇರಿಸಿಕೊಂಡಿರುತ್ತಿದ್ದ ಉಪನಾಳ ಅವರು ಅಪ್ಪಟ ಗ್ರಾಮೀಣ ಶೈಲಿಯ , ಹೃದಯವಂತ ಶಾಸಕ. ಸದನದಲ್ಲಿ ತಾವೂ ಏನಾದರೂ ಮಾತನಾಡಿ ಸದನದ ಗಮನ ಸೆಳೆಯಬೇಕೆಂಬ ಆಸೆಯಾಯಿತು. ತಮ್ಮ ಆಸೆಯನ್ನು ಅವರು ಬದಿಗೇ ಕುಳಿತಿದ್ದ ಹಾಸ್ಯ ಪ್ರಜ್ಞೆಗೆ ಹೆಸರಾಗಿದ್ದ ಟಕ್ಕೇದರ ಕಿವಿಯಲ್ಲಿ ಹೇಳಿಯೇ ಬಿಟ್ಟರು!
ಟಕ್ಕೇದರು ತಮ್ಮ “ಅಮೂಲ್ಯ” ಸಲಹೆ ನೀಡುತ್ತ,” ಗೂಳಪ್ಪ, ನೀನು ಎದ್ದು ನಿಂತು ಪಾಯಿಂಟ್ ಆಫ್ ಆರ್ಡರ್ ” ಎಂದು ಬಿಡು.” ಅದರ ಹೊಡ್ತಾ ನೋಡು” ಎಂದರು.

ಗೂಳಪ್ಪ ಎದ್ದು ನಿಂತು,” ಸಭಾಧ್ಯಕ್ಷರೇ ಪಾಯಿಂಟ್ ಆಫ್ ಅಡರ್ ರ್ ರ್” ಎಂದು ಕೂಗಿ ಬಿಟ್ಟರು! ಸಭಾಧ್ಯಕ್ಷರು,” ಹೇಳ್ರಿ, ಏನು ಹೇಳ್ರಿ” ಎಂದು ಗೂಳಪ್ಪರನ್ನು ಕೇಳಿದರು. ಆದರೆ ಗೂಳಪ್ಪ, ” ಪಾಯಿಂಟ್ ಆಪ್ ಅಡರ್ ಅಡರ್ ಅಡರ್ ” ಎಂದು ಪುನರುಚ್ಛಾರ ಮಾಡತೊಡಗಿದರು. ಇಡೀ ಸದನ ನಗೆಗಡಲದಲ್ಲಿ ಮುಳುಗಿತು. ಮುಖ್ಯಮಂತ್ರಿ ಗುಂಡೂರಾವ್ ಅವರೂ ನಕ್ಕರು. ಅವರಿಗೆ ಗೊತ್ತಾಯಿತು ಇದು ಟಕ್ಕೇದರ ಕಿರಿಕ್ ಎಂದು! ಅಲ್ಲಿಂದ ಟಕ್ಕೇದರನ್ನು ಎಬ್ಬಿಸಿ ಬೇರೆ ಕಡೆಗೆ ಕೂಡಿಸಿದರು. ಟಕ್ಕೇದರು ತಮಗೆಷ್ಟು ಕಲಿಸಿದ್ದರೊ ಅಷ್ಟನ್ನೇ ಗೂಳಪ್ಪ ಹೇಳಿದರು.

ದಿ.ಟಕ್ಕೇದರು ಶಾಸಕರಾಗಿದ್ದಾಗ ಬೆಳಗಾವಿ ಪತ್ರಕರ್ತರೊಂದಿಗೆ ವಾರ್ತಾ ಇಲಾಖೆಯ ವಾಹನದಲ್ಲೇ ಕುಳಿತು ಪ್ರಯಾಣ ಮಾಡುತ್ತಿದ್ದರು. ಆಗ ” ಪಾಯಿಂಟ್ ಆಫ್ ಅಡರ್ ” ಪ್ರಸಂಗವನ್ನು ನೆನಪಿಸಿಕೊಳ್ಳುತ್ತಿದ್ದರು.
ಟಕ್ಕೇದ 1978 ರಲ್ಲಿ ಸವದತ್ತಿಯಿಂದ ಶಿವಾನಂದ ಕೌಜಲಗಿ ಅವರನ್ನು ಸೋಲಿಸಿ ಆಯ್ಕೆಯಾಗಿದ್ದರು. ಅವರು ಸಂಸ್ಕೃತ ಶ್ಲೋಕಗಳನ್ನು ಕಂಠಪಾಠ ಮಾಡಿದ್ದರು.

RS 500
RS 1500

SCAN HERE

don't miss it !

ನಾಳೆಯಿಂದ ಬೆಂಗಳೂರಿನಲ್ಲಿ JDS ಜನತಾಮಿತ್ರ : 17 ದಿನ ರಾಜಧಾನಿಯಲ್ಲಿ ಜನ ಸಂಪರ್ಕ ಕಾರ್ಯಕ್ರಮ!
ಕರ್ನಾಟಕ

ನಾಳೆಯಿಂದ ಬೆಂಗಳೂರಿನಲ್ಲಿ JDS ಜನತಾಮಿತ್ರ : 17 ದಿನ ರಾಜಧಾನಿಯಲ್ಲಿ ಜನ ಸಂಪರ್ಕ ಕಾರ್ಯಕ್ರಮ!

by ಪ್ರತಿಧ್ವನಿ
June 30, 2022
ಪಂತ್- ಜಡೇಜಾ ಭರ್ಜರಿ ಜೊತೆಯಾಟ: ಭಾರತಕ್ಕೆ ದಿನದ ಗೌರವ!
ಕ್ರೀಡೆ

ಪಂತ್- ಜಡೇಜಾ ಭರ್ಜರಿ ಜೊತೆಯಾಟ: ಭಾರತಕ್ಕೆ ದಿನದ ಗೌರವ!

by ಪ್ರತಿಧ್ವನಿ
July 2, 2022
ಗುವಾಹಟಿಯಿಂದ ಮುಂಬೈಗೆ ಮರಳಿದ ಶಿವಸೇನೆ ಬಂಡಾಯ ಶಾಸಕರು!
ದೇಶ

ಸಂಪುಟ ಸಭೆಯಲ್ಲಿ ಅಗಲಿದ ಮಕ್ಕಳನ್ನು ನೆನೆದು ಕಣ್ಣೀರಿಟ್ಟ ಸಿಎಂ ಏಕನಾಥ್ ಶಿಂಧೆ

by ಪ್ರತಿಧ್ವನಿ
July 5, 2022
ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಣೆ
ದೇಶ

ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಣೆ

by ಪ್ರತಿಧ್ವನಿ
June 29, 2022
ಕರ್ನಾಟಕದ ಚೆಲುವೆ ಸಿನಿ ಶೆಟ್ಟಿಗೆ ಒಲಿದ ಮಿಸ್‌ ಇಂಡಿಯಾ ಪ್ರಶಸ್ತಿ!
ದೇಶ

ಕರ್ನಾಟಕದ ಚೆಲುವೆ ಸಿನಿ ಶೆಟ್ಟಿಗೆ ಒಲಿದ ಮಿಸ್‌ ಇಂಡಿಯಾ ಪ್ರಶಸ್ತಿ!

by ಪ್ರತಿಧ್ವನಿ
July 4, 2022
Next Post
ಕಾಲಹರಣದ ಮೇಲೆ ರಾಜಭವನದ ಹದ್ದಿನ ಕಣ್ಣು!

ಕಾಲಹರಣದ ಮೇಲೆ ರಾಜಭವನದ ಹದ್ದಿನ ಕಣ್ಣು!

ಅಧಿಕಾರದವಸರದ ಬಿಜೆಪಿಗೆ `ಸಮ್ಮಿಶ್ರ’ ಸೇಡು

ಅಧಿಕಾರದವಸರದ ಬಿಜೆಪಿಗೆ `ಸಮ್ಮಿಶ್ರ’ ಸೇಡು, ಸದನ ಗೊಂದಲದ ಗೂಡು

ತ್ರಿವಳಿಗಳ “ಕ್ರಿಯಾಲೋಪ ತಂತ್ರ”

ತ್ರಿವಳಿಗಳ “ಕ್ರಿಯಾಲೋಪ ತಂತ್ರ”, ಮೊದಲ ದಿನದಂತ್ಯಕ್ಕೆ ಕೈ ಮೇಲು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist