ADVERTISEMENT
  • Home
  • About Us
  • ಕರ್ನಾಟಕ
Friday, May 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಲಕ್ಷ ಕೋಟಿ ನಷ್ಟದಲ್ಲಿರುವ ಮೊಬೈಲ್ ಕಂಪನಿಗಳ ಉಚಿತ ಸೇವೆ ಎಷ್ಟು ದಿನಾ?

by
November 16, 2019
in ದೇಶ
0
ಲಕ್ಷ ಕೋಟಿ ನಷ್ಟದಲ್ಲಿರುವ ಮೊಬೈಲ್ ಕಂಪನಿಗಳ ಉಚಿತ ಸೇವೆ ಎಷ್ಟು ದಿನಾ?
Share on WhatsAppShare on FacebookShare on Telegram

ಈಗಾಗಲೇ ಸರ್ಕಾರಕ್ಕೆ ನೀಡಬೇಕಾದ ಸ್ಪೆಕ್ಟ್ರಂ ಶುಲ್ಕ ಪಾಲತಿಗೆ ಕಾಲಾವಕಾಶವನ್ನು ಏರ್ಟೆಲ್ ಮತ್ತು ವೊಡಾಫೋನ- ಐಡಿಯಾ ಕೋರಿವೆ. ಜತೆಗೆ ದೂರಸಂಪರ್ಕ ಇಲಾಖೆಯು ತಮ್ಮ ನೆರವಿಗೆ ಬರುವಂತೆಯೂ ಮನವಿ ಮಾಡಿವೆ. ಅರ್ಧಲಕ್ಷ ಕೋಟಿಗೂ ಹೆಚ್ಚು ನಷ್ಟ ಘೋಷಣೆ ಮಾಡಿದ ವೋಡಾಫೋನ್- ಐಡಿಯಾ ಕೇಂದ್ರ ಸರ್ಕಾರ ನೆರವು ನೀಡದಿದ್ದರೆ, ದಿವಾಳಿ ಸಂಹಿತೆ ಮಂಡಳಿ (ಐಬಿಸಿ) ಮುಂದೆ ಹೋಗುವುದಾಗಿ ಹೇಳಿದೆ. ಈ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಯಾವುದೇ ಕಂಪನಿಯು ಬಾಗಿಲು ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ನಷ್ಟದಲ್ಲಿರುವ ಈ ಕಂಪನಿಗಳಿಗೆ ಸರ್ಕಾರ ಯಾವ ರೀತಿ ನೆರವು ನೀಡಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಈ ಕಂಪನಿಗಳಿಗೆ ಸರ್ಕಾರ ನೆರವು ನೀಡುವುದರ ವಿರುದ್ಧ ರಿಲಯನ್ಸ್ ಜಿಯೋ ಆಕ್ಷೇಪ ಎತ್ತಿದೆ. ಈ ಕಂಪನಿಗಳಿಗೆ ನೆರವು ನೀಡಬಾರದು, ಉದ್ದೇಶಪೂರ್ವಕವಾಗಿ ಹೆಚ್ಚಿನ ನಷ್ಟ ಘೋಷಣೆ ಮಾಡಿಕೊಂಡಿವೆ ಎಂದು ದೂರಿದೆ.

ADVERTISEMENT

ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿರುವ ಕಂಪನಿಗಳು ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಘೋಷಣೆ ಮಾಡಿರುವ ನಷ್ಟದ ಮೊತ್ತವು ಸೇರಿದಂತೆ ಈ ಕಂಪನಿಗಳ ಮೇಲೆ ಇರುವ ಸಾಲದ ಹೊರೆಯನ್ನು ಗಮನಿಸಿದರೆ ಈ ಕಂಪನಿಗಳ ಭವಿಷ್ಯವೇನು ಎಂಬ ಪ್ರಶ್ನೆ ಕಾಡುತ್ತದೆ. ಇಲ್ಲಿ ಗ್ರಾಹಕ ಕೇಂದ್ರಿತ ಪ್ರಶ್ನೆ ಏನೆಂದರೆ- ಗ್ರಾಹಕರು ಈಗ ಪಡೆಯುತ್ತಿರುವ ಉಚಿತ ಕರೆ, ಮೆಸೆಜ್ ಮತ್ತು ಅತ್ಯಲ್ಪ ದರದ ಡೇಟಾ ಸೇವೆಯ ಭವಿಷ್ಯವೇನು? ಎಷ್ಟು ತಿಂಗಳ ಕಾಲ ಗ್ರಾಹಕರು ಈ ಉಚಿತ ಸೇವೆಯನ್ನು ಪಡೆಯಬಹುದು? ಇನ್ನು ಎಷ್ಟು ತಿಂಗಳ ಕಾಲ ಅಲ್ಪದರದ ಮೊಬೈಲ್ ಸೇವೆ ಲಭ್ಯವಾಗಬಹುದು?

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಬಹಳ ಕಾಲ ಗ್ರಾಹಕರಿಗೆ ಉಚಿತ ಸೇವೆಗಳು ಲಭ್ಯವಾಗುವುದಿಲ್ಲ. ಏಕೆಂದರೆ ಈಗ ಮೊಬೈಲ್ ಸೇವಾ ಮಾರುಕಟ್ಟೆ ಸ್ಥಿರತೆಯತ್ತ ದಾಪುಗಾಲು ಹಾಕುತ್ತಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಬಿಟ್ಟರೆ, ಉಳಿದಿರುವುದು ಮೂರೇ ಕಂಪನಿಗಳು- ಏರ್ಟೆಲ್, ಜಿಯೋ ಮತ್ತು ಮತ್ತು ವೋಡಾ-ಐಡಿಯಾ. ಈ ಕಂಪನಿಗಳು ಗ್ರಾಹಕರ ಪಾಲನ್ನು ಹಂಚಿಕೊಂಡು ಸ್ಥಿರವಾದ ನಂತರ ದರ ಏರಿಕೆ ಪ್ರಾರಂಭವಾಗುತ್ತದೆ. ಈಗ ಇರುವ ಸುಮಾರು 1.20 ಕೋಟಿ ಸಂಪರ್ಕಗಳಲ್ಲಿ ಶೇ.50ರಷ್ಟು ಪಾಲು ಪಡೆಯುವ ಹುನ್ನಾರವನ್ನು ರಿಲಯನ್ಸ್ ಜಿಯೋ ನಡೆಸುತ್ತಿದೆ. ಸರ್ಕಾರದ ಪರೋಕ್ಷ ಬೆಂಬಲ ಇರುವ ರಿಲಯನ್ಸ್ ಜಿಯೋ ಒಂದು ಬಾರಿ ದರ ಏರಿಕೆ ಮಾಡಲಾರಂಭಿಸಿದರೆ, ಉಳಿದ ಕಂಪನಿಗಳು ಅದೇ ಹಾದಿಯನ್ನು ಹಿಡಿಯುತ್ತವೆ.

ಗ್ರಾಹಕರಿಗೆ ಇಷ್ಟವಿರಲಿ ಬಿಡಲಿ, ಸದ್ಯಕ್ಕೆ ದೊರೆಯುತ್ತಿರುವ ಮೊಬೈಲ್ ಸೇವೆಗಳು ಬಹಳ ಕಾಲ ಇರುವುದಿಲ್ಲ. ಆರು ತಿಂಗಳೋ ಅಥವಾ ಒಂದು ವರ್ಷದ ನಂತರ ಮೊಬೈಲ್ ಸೇವೆಗಳ ದರ ಏರಿಕೆ ಆಗಲಿದೆ. ಯಾವ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ. ಆದರೆ, ದರ ಏರಿಕೆಗೆ ಗ್ರಾಹಕರು ಸಿದ್ಧರಾಗುವುದು ಅನಿವಾರ್ಯ. ಇನ್ನೂ ಕೆಲವು ವರ್ಷಗಳ ಕಾಲ ಮೊಬೈಲ್ ಕಂಪನಿಗಳು ಹೀಗೆ ಉಚಿತ ಮತ್ತು ಕಡಮೆ ದರದ ಸೇವೆ ಒದಗಿಸಿದರೆ ಕಂಪನಿಗಳು ದಿವಾಳಿಯಾಗುತ್ತವೆ. ಆದರೆ, ಒಂದಂತೂ ಸ್ಪಷ್ಟ ಈಗ ಕಂಪನಿಗಳ ಮೇಲಿರುವ ಲಕ್ಷ ಕೋಟಿ ರುಪಾಯಿಗಳ ಹೊರೆಯು ಭವಿಷ್ಯದಲ್ಲಿ ಗ್ರಾಹಕರ ಹೆಗಲಿಗೆ ಬೀಳಲಿದೆ. ಗ್ರಾಹಕರು ಹೆಚ್ಚಿನ ದರ ಭರಿಸುವ ಮೂಲಕ ಈ ಕಂಪನಿಗಳ ಸಾಲದ ಹೊರೆಯನ್ನು ಇಳಿಸಬೇಕಾಗುತ್ತದೆ.

Tags: averageideaNetworksupreme courttelecomvodafoneಐಡಿಯಾದೂರಸಂಪರ್ಕಮೊಬೈಲ್‌ ಸೇವೆವೊಡಾಫೋನ್ಸರಾಸರಿಸುಪ್ರೀಂ ಕೋರ್ಟ್
Previous Post

ಪಕ್ಷಾಂತರ ನಿಷೇಧ ಕಾಯ್ದೆ ಬಲ ತುಂಬುವಲ್ಲಿ ವಿಫಲ

Next Post

ಬಂಡೀಪುರದಲ್ಲಿ ವಾಹನ ಸಂಚಾರ ರಾತ್ರಿ ಮಾತ್ರವಲ್ಲ, ಸಂಪೂರ್ಣ ನಿಷೇಧ?

Related Posts

40 ಲಕ್ಷ ರೂಪಾಯಿ ವರ್ಗಾವಣೆ ಆಗಿದ್ದು ಎಲ್ಲಿಗೆ..? ಪರಮೇಶ್ವರ್​ ಏನಂತಾರೆ..?
Top Story

ED ದಾಳಿ ಅಂತ್ಯ.. ಪರಂಗೆ ಕಾಂಗ್ರೆಸ್​ ನಾಯಕರ ಸಂಪೂರ್ಣ ಸಪೋರ್ಟ್​..

by ಕೃಷ್ಣ ಮಣಿ
May 22, 2025
0

ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಮೇಲೆ ಇ.ಡಿ ದಾಳಿ ಪ್ರಕರಣ ಸಂಬಂಧ ಅಧಿಕಾರಿಗಳ ಪರಿಶೀಲನೆ ಮುಕ್ತಾಯವಾಗಿದೆ. 27 ಗಂಟೆಗಳ ಬಳಿಕ ED ಶೋಧ ಪೂರ್ಣಗೊಳಿಸಿ ಕಾಲೇಜಿನ ಹಿಂಬದಿಯ ಗೇಟ್‌ನಿಂದ...

Read moreDetails
ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

May 22, 2025
ಜಾತಿ ಜನಗಣತಿ – ಕೇಂದ್ರ ಸರ್ಕಾರದ ಮುಂದಿನ ಸವಾಲುಗಳು

ಜಾತಿ ಜನಗಣತಿ – ಕೇಂದ್ರ ಸರ್ಕಾರದ ಮುಂದಿನ ಸವಾಲುಗಳು

May 20, 2025

ಕಾಂಗ್ರೆಸ್​ 2ನೇ ವರ್ಷದ ಸಂಭ್ರಮಾಚರಣೆ.. ಜನರ ಸಂಕಷ್ಟಕ್ಕೆ ಮುಕ್ತಿ ಯಾವಾಗ..?

May 20, 2025
ನವಾಜ್ ಷರೀಫ್ ಮಗಳನ್ನು ಭೇಟಿಯಾಗಿದ್ದ ಜ್ಯೋತಿ ಮಲ್ಹೋತ್ರಾ ! ಬಗೆದಷ್ಟು ಬಯಲಾಗ್ತಿದೆ ಯೂಟ್ಯೂಬರ್ ಗೂಢಚಾರಿಕೆ ರಹಸ್ಯ ! 

ನವಾಜ್ ಷರೀಫ್ ಮಗಳನ್ನು ಭೇಟಿಯಾಗಿದ್ದ ಜ್ಯೋತಿ ಮಲ್ಹೋತ್ರಾ ! ಬಗೆದಷ್ಟು ಬಯಲಾಗ್ತಿದೆ ಯೂಟ್ಯೂಬರ್ ಗೂಢಚಾರಿಕೆ ರಹಸ್ಯ ! 

May 19, 2025
Next Post
ಬಂಡೀಪುರದಲ್ಲಿ ವಾಹನ ಸಂಚಾರ ರಾತ್ರಿ ಮಾತ್ರವಲ್ಲ

ಬಂಡೀಪುರದಲ್ಲಿ ವಾಹನ ಸಂಚಾರ ರಾತ್ರಿ ಮಾತ್ರವಲ್ಲ, ಸಂಪೂರ್ಣ ನಿಷೇಧ?

Please login to join discussion

Recent News

ರಾಮನಗರ ಹೆಸರು ಬದಲಾವಣೆಗೆ ರಾಜ್ಯ ಸಂಪುಟ ಅಸ್ತು ..! ಸದ್ಯದಲ್ಲೇ ಬೆಂಗಳೂರು ದಕ್ಷಿಣ ಮಾಡ್ತೀವಿ : ಡಿಕೆ ಶಿವಕುಮಾರ್ ! 
Top Story

ರಾಮನಗರ ಹೆಸರು ಬದಲಾವಣೆಗೆ ರಾಜ್ಯ ಸಂಪುಟ ಅಸ್ತು ..! ಸದ್ಯದಲ್ಲೇ ಬೆಂಗಳೂರು ದಕ್ಷಿಣ ಮಾಡ್ತೀವಿ : ಡಿಕೆ ಶಿವಕುಮಾರ್ ! 

by Chetan
May 23, 2025
ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್ ಸ್ಥಿತಿ ಹೇಗಿದೆ..?
Top Story

ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್ ಸ್ಥಿತಿ ಹೇಗಿದೆ..?

by ಪ್ರತಿಧ್ವನಿ
May 23, 2025
RCB V/S SRH ಹಣಾಹಣಿ..! – ಅಗ್ರಸ್ಥಾನಕ್ಕೆ ಕಣ್ಣಿಟ್ಟ ರಾಯಲ್ ಚಾಲೆಂಜರ್ಸ್ ! 
Top Story

RCB V/S SRH ಹಣಾಹಣಿ..! – ಅಗ್ರಸ್ಥಾನಕ್ಕೆ ಕಣ್ಣಿಟ್ಟ ರಾಯಲ್ ಚಾಲೆಂಜರ್ಸ್ ! 

by Chetan
May 23, 2025
40 ಲಕ್ಷ ರೂಪಾಯಿ ವರ್ಗಾವಣೆ ಆಗಿದ್ದು ಎಲ್ಲಿಗೆ..? ಪರಮೇಶ್ವರ್​ ಏನಂತಾರೆ..?
Top Story

ED ದಾಳಿ ಅಂತ್ಯ.. ಪರಂಗೆ ಕಾಂಗ್ರೆಸ್​ ನಾಯಕರ ಸಂಪೂರ್ಣ ಸಪೋರ್ಟ್​..

by ಕೃಷ್ಣ ಮಣಿ
May 22, 2025
ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ
Top Story

ಪಿಎಂ ಇ-ಡ್ರೈವ್; ಬೆಂಗಳೂರಿಗೆ 4500 ಎಲೆಕ್ಟ್ರಿಕ್ ಬಸ್ ಹಂಚಿಕೆ ಭರವಸೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
May 22, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರಾಮನಗರ ಹೆಸರು ಬದಲಾವಣೆಗೆ ರಾಜ್ಯ ಸಂಪುಟ ಅಸ್ತು ..! ಸದ್ಯದಲ್ಲೇ ಬೆಂಗಳೂರು ದಕ್ಷಿಣ ಮಾಡ್ತೀವಿ : ಡಿಕೆ ಶಿವಕುಮಾರ್ ! 

ರಾಮನಗರ ಹೆಸರು ಬದಲಾವಣೆಗೆ ರಾಜ್ಯ ಸಂಪುಟ ಅಸ್ತು ..! ಸದ್ಯದಲ್ಲೇ ಬೆಂಗಳೂರು ದಕ್ಷಿಣ ಮಾಡ್ತೀವಿ : ಡಿಕೆ ಶಿವಕುಮಾರ್ ! 

May 23, 2025
ಕಾಮಿಡಿ ಕಿಲಾಡಿ ಸೆಟ್​ನಲ್ಲಿ ಏನಾಗ್ತಿದೆ..? ಮತ್ತೊಂದು ಆಡಿಯೋ ರಿಲೀಸ್

ಕಾಮಿಡಿ ಕಿಲಾಡಿ ಸೆಟ್​ನಲ್ಲಿ ಏನಾಗ್ತಿದೆ..? ಮತ್ತೊಂದು ಆಡಿಯೋ ರಿಲೀಸ್

May 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada