Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಲಕ್ಷ ಕೋಟಿ ನಷ್ಟದಲ್ಲಿರುವ ಮೊಬೈಲ್ ಕಂಪನಿಗಳ ಉಚಿತ ಸೇವೆ ಎಷ್ಟು ದಿನಾ?

ಲಕ್ಷ ಕೋಟಿ ನಷ್ಟದಲ್ಲಿರುವ ಮೊಬೈಲ್ ಕಂಪನಿಗಳ ಉಚಿತ ಸೇವೆ ಎಷ್ಟು ದಿನಾ?
ಲಕ್ಷ ಕೋಟಿ ನಷ್ಟದಲ್ಲಿರುವ ಮೊಬೈಲ್ ಕಂಪನಿಗಳ ಉಚಿತ ಸೇವೆ ಎಷ್ಟು ದಿನಾ?
Pratidhvani Dhvani

Pratidhvani Dhvani

November 16, 2019
Share on FacebookShare on Twitter

ಈಗಾಗಲೇ ಸರ್ಕಾರಕ್ಕೆ ನೀಡಬೇಕಾದ ಸ್ಪೆಕ್ಟ್ರಂ ಶುಲ್ಕ ಪಾಲತಿಗೆ ಕಾಲಾವಕಾಶವನ್ನು ಏರ್ಟೆಲ್ ಮತ್ತು ವೊಡಾಫೋನ- ಐಡಿಯಾ ಕೋರಿವೆ. ಜತೆಗೆ ದೂರಸಂಪರ್ಕ ಇಲಾಖೆಯು ತಮ್ಮ ನೆರವಿಗೆ ಬರುವಂತೆಯೂ ಮನವಿ ಮಾಡಿವೆ. ಅರ್ಧಲಕ್ಷ ಕೋಟಿಗೂ ಹೆಚ್ಚು ನಷ್ಟ ಘೋಷಣೆ ಮಾಡಿದ ವೋಡಾಫೋನ್- ಐಡಿಯಾ ಕೇಂದ್ರ ಸರ್ಕಾರ ನೆರವು ನೀಡದಿದ್ದರೆ, ದಿವಾಳಿ ಸಂಹಿತೆ ಮಂಡಳಿ (ಐಬಿಸಿ) ಮುಂದೆ ಹೋಗುವುದಾಗಿ ಹೇಳಿದೆ. ಈ ನಡುವೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಯಾವುದೇ ಕಂಪನಿಯು ಬಾಗಿಲು ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ನಷ್ಟದಲ್ಲಿರುವ ಈ ಕಂಪನಿಗಳಿಗೆ ಸರ್ಕಾರ ಯಾವ ರೀತಿ ನೆರವು ನೀಡಲಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಈ ಕಂಪನಿಗಳಿಗೆ ಸರ್ಕಾರ ನೆರವು ನೀಡುವುದರ ವಿರುದ್ಧ ರಿಲಯನ್ಸ್ ಜಿಯೋ ಆಕ್ಷೇಪ ಎತ್ತಿದೆ. ಈ ಕಂಪನಿಗಳಿಗೆ ನೆರವು ನೀಡಬಾರದು, ಉದ್ದೇಶಪೂರ್ವಕವಾಗಿ ಹೆಚ್ಚಿನ ನಷ್ಟ ಘೋಷಣೆ ಮಾಡಿಕೊಂಡಿವೆ ಎಂದು ದೂರಿದೆ.

ಹೆಚ್ಚು ಓದಿದ ಸ್ಟೋರಿಗಳು

ಗೋಧಿ ರಫ್ತು ನಿಯಮಗಳನ್ನು ಮಾರ್ಪಾಡು ಮಾಡಿದ ಕೇಂದ್ರ ಸರ್ಕಾರ

ಸಂಘ ಪರಿವಾರ ಭಾರತವನ್ನು ನಾಶ ಮಾಡಲು ಬಯಸುತ್ತಿದೆ, ಆದರೆ ಹಿಂದುತ್ವ ಎಂದಿಗೂ ಭಾರತವಾಗಲು ಸಾಧ್ಯವಿಲ್ಲ : ಲೀನಾ ಮಣಿಮೇಕಲೈ

ವೈದ್ಯೆ ಗುರುಪ್ರೀತ್‌ರನ್ನು ವರಿಸಿದ ಪಂಜಾಬ್ ಸಿಎಂ ಮಾನ್

ಹೊಂದಾಣಿಕೆ ಮಾಡಲಾದ ಒಟ್ಟು ಆದಾಯ ಕುರಿತಂತೆ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಿರುವ ಕಂಪನಿಗಳು ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಘೋಷಣೆ ಮಾಡಿರುವ ನಷ್ಟದ ಮೊತ್ತವು ಸೇರಿದಂತೆ ಈ ಕಂಪನಿಗಳ ಮೇಲೆ ಇರುವ ಸಾಲದ ಹೊರೆಯನ್ನು ಗಮನಿಸಿದರೆ ಈ ಕಂಪನಿಗಳ ಭವಿಷ್ಯವೇನು ಎಂಬ ಪ್ರಶ್ನೆ ಕಾಡುತ್ತದೆ. ಇಲ್ಲಿ ಗ್ರಾಹಕ ಕೇಂದ್ರಿತ ಪ್ರಶ್ನೆ ಏನೆಂದರೆ- ಗ್ರಾಹಕರು ಈಗ ಪಡೆಯುತ್ತಿರುವ ಉಚಿತ ಕರೆ, ಮೆಸೆಜ್ ಮತ್ತು ಅತ್ಯಲ್ಪ ದರದ ಡೇಟಾ ಸೇವೆಯ ಭವಿಷ್ಯವೇನು? ಎಷ್ಟು ತಿಂಗಳ ಕಾಲ ಗ್ರಾಹಕರು ಈ ಉಚಿತ ಸೇವೆಯನ್ನು ಪಡೆಯಬಹುದು? ಇನ್ನು ಎಷ್ಟು ತಿಂಗಳ ಕಾಲ ಅಲ್ಪದರದ ಮೊಬೈಲ್ ಸೇವೆ ಲಭ್ಯವಾಗಬಹುದು?

ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಬಹಳ ಕಾಲ ಗ್ರಾಹಕರಿಗೆ ಉಚಿತ ಸೇವೆಗಳು ಲಭ್ಯವಾಗುವುದಿಲ್ಲ. ಏಕೆಂದರೆ ಈಗ ಮೊಬೈಲ್ ಸೇವಾ ಮಾರುಕಟ್ಟೆ ಸ್ಥಿರತೆಯತ್ತ ದಾಪುಗಾಲು ಹಾಕುತ್ತಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಬಿಟ್ಟರೆ, ಉಳಿದಿರುವುದು ಮೂರೇ ಕಂಪನಿಗಳು- ಏರ್ಟೆಲ್, ಜಿಯೋ ಮತ್ತು ಮತ್ತು ವೋಡಾ-ಐಡಿಯಾ. ಈ ಕಂಪನಿಗಳು ಗ್ರಾಹಕರ ಪಾಲನ್ನು ಹಂಚಿಕೊಂಡು ಸ್ಥಿರವಾದ ನಂತರ ದರ ಏರಿಕೆ ಪ್ರಾರಂಭವಾಗುತ್ತದೆ. ಈಗ ಇರುವ ಸುಮಾರು 1.20 ಕೋಟಿ ಸಂಪರ್ಕಗಳಲ್ಲಿ ಶೇ.50ರಷ್ಟು ಪಾಲು ಪಡೆಯುವ ಹುನ್ನಾರವನ್ನು ರಿಲಯನ್ಸ್ ಜಿಯೋ ನಡೆಸುತ್ತಿದೆ. ಸರ್ಕಾರದ ಪರೋಕ್ಷ ಬೆಂಬಲ ಇರುವ ರಿಲಯನ್ಸ್ ಜಿಯೋ ಒಂದು ಬಾರಿ ದರ ಏರಿಕೆ ಮಾಡಲಾರಂಭಿಸಿದರೆ, ಉಳಿದ ಕಂಪನಿಗಳು ಅದೇ ಹಾದಿಯನ್ನು ಹಿಡಿಯುತ್ತವೆ.

ಗ್ರಾಹಕರಿಗೆ ಇಷ್ಟವಿರಲಿ ಬಿಡಲಿ, ಸದ್ಯಕ್ಕೆ ದೊರೆಯುತ್ತಿರುವ ಮೊಬೈಲ್ ಸೇವೆಗಳು ಬಹಳ ಕಾಲ ಇರುವುದಿಲ್ಲ. ಆರು ತಿಂಗಳೋ ಅಥವಾ ಒಂದು ವರ್ಷದ ನಂತರ ಮೊಬೈಲ್ ಸೇವೆಗಳ ದರ ಏರಿಕೆ ಆಗಲಿದೆ. ಯಾವ ಪ್ರಮಾಣದಲ್ಲಿ ಏರಿಕೆಯಾಗುತ್ತದೆ ಎಂಬುದನ್ನು ಈಗ ಹೇಳಲು ಸಾಧ್ಯವಿಲ್ಲ. ಆದರೆ, ದರ ಏರಿಕೆಗೆ ಗ್ರಾಹಕರು ಸಿದ್ಧರಾಗುವುದು ಅನಿವಾರ್ಯ. ಇನ್ನೂ ಕೆಲವು ವರ್ಷಗಳ ಕಾಲ ಮೊಬೈಲ್ ಕಂಪನಿಗಳು ಹೀಗೆ ಉಚಿತ ಮತ್ತು ಕಡಮೆ ದರದ ಸೇವೆ ಒದಗಿಸಿದರೆ ಕಂಪನಿಗಳು ದಿವಾಳಿಯಾಗುತ್ತವೆ. ಆದರೆ, ಒಂದಂತೂ ಸ್ಪಷ್ಟ ಈಗ ಕಂಪನಿಗಳ ಮೇಲಿರುವ ಲಕ್ಷ ಕೋಟಿ ರುಪಾಯಿಗಳ ಹೊರೆಯು ಭವಿಷ್ಯದಲ್ಲಿ ಗ್ರಾಹಕರ ಹೆಗಲಿಗೆ ಬೀಳಲಿದೆ. ಗ್ರಾಹಕರು ಹೆಚ್ಚಿನ ದರ ಭರಿಸುವ ಮೂಲಕ ಈ ಕಂಪನಿಗಳ ಸಾಲದ ಹೊರೆಯನ್ನು ಇಳಿಸಬೇಕಾಗುತ್ತದೆ.

RS 500
RS 1500

SCAN HERE

don't miss it !

ಮಹಾರಾಷ್ಟ್ರ ರಾಜಕೀಯ : ವಿಶ್ವಾಸಮತ ಗೆದ್ದ ಏಕನಾಥ್ ಶಿಂಧೆ!
ದೇಶ

ಮಹಾರಾಷ್ಟ್ರ ರಾಜಕೀಯ : ವಿಶ್ವಾಸಮತ ಗೆದ್ದ ಏಕನಾಥ್ ಶಿಂಧೆ!

by ಪ್ರತಿಧ್ವನಿ
July 4, 2022
ಎರಡು ವರ್ಷದಲ್ಲಿ ಅಮೃತ ನಗರೋತ್ಥಾನ ಯೋಜನೆ ಪೂರ್ಣಗೊಳಿಸಲು ಸಿಎಂ ಬೊಮ್ಮಾಯಿ ಸೂಚನೆ
ಕರ್ನಾಟಕ

ಮೀನುಗಾರಿಕೆಯಿಂದ ರಾಜ್ಯದ ಒಟ್ಟು ಜಿಡಿಪಿಯಲ್ಲಿ ವೃದ್ಧಿ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
July 4, 2022
ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ : ಅಮಿತ್ ಶಾ
ದೇಶ

ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ : ಅಮಿತ್ ಶಾ

by ಪ್ರತಿಧ್ವನಿ
July 3, 2022
ಫ್ಯಾಸಿಷ್ಟರ ಬೆಳವಣಿಗೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪಾತ್ರ
ಅಭಿಮತ

ಫ್ಯಾಸಿಷ್ಟರ ಬೆಳವಣಿಗೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪಾತ್ರ

by ಡಾ | ಜೆ.ಎಸ್ ಪಾಟೀಲ
July 2, 2022
ಸಿಎಂ ಬೊಮ್ಮಾಯಿಯವರಿಗೆ ಗಂಡಸ್ತನ ಇದ್ದರೆ ಇಂತಹ ಸಮಯದಲ್ಲಿ ಮೌನವಾಗಿರಬೇಡಿ : ಹೆಚ್‌ಡಿ ಕುಮಾರಸ್ವಾಮಿ | HDK |  Bommai
ಕರ್ನಾಟಕ

2023ರ ಚುನಾವಣೆ ನಂತರ ನಾನು ಮುಖ್ಯಮಂತ್ರಿ ಆಗಿಯೇ ಆಗುತ್ತೇನೆ: ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
July 2, 2022
Next Post
ಬಂಡೀಪುರದಲ್ಲಿ ವಾಹನ ಸಂಚಾರ ರಾತ್ರಿ ಮಾತ್ರವಲ್ಲ

ಬಂಡೀಪುರದಲ್ಲಿ ವಾಹನ ಸಂಚಾರ ರಾತ್ರಿ ಮಾತ್ರವಲ್ಲ, ಸಂಪೂರ್ಣ ನಿಷೇಧ?

ಹೈಕೋರ್ಟಿನಲ್ಲಿ ನ್ಯಾಯಾಧೀಶರ ಕೊರತೆಯಿಂದ ನ್ಯಾಯದಾನ ವಿಳಂಬ

ಹೈಕೋರ್ಟಿನಲ್ಲಿ ನ್ಯಾಯಾಧೀಶರ ಕೊರತೆಯಿಂದ ನ್ಯಾಯದಾನ ವಿಳಂಬ

ಬಿಜೆಪಿಯಲ್ಲಿ ಅಕ್ರಮ ಇಲ್ಲವೇ?

ಬಿಜೆಪಿಯಲ್ಲಿ ಅಕ್ರಮ ಇಲ್ಲವೇ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist