Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ರಾಜಕೀಯ ಅಸ್ಥಿರತೆಯ ಬೆಲೆ ತೆರುತ್ತಿರುವ ಪ್ರವಾಹ ಪೀಡಿತ ಮತದಾರ

ರಾಜಕೀಯ ಅಸ್ಥಿರತೆಯ ಬೆಲೆ ತೆರುತ್ತಿರುವ ಪ್ರವಾಹ ಪೀಡಿತ ಮತದಾರ
ರಾಜಕೀಯ ಅಸ್ಥಿರತೆಯ ಬೆಲೆ ತೆರುತ್ತಿರುವ ಪ್ರವಾಹ ಪೀಡಿತ ಮತದಾರ
Pratidhvani Dhvani

Pratidhvani Dhvani

August 21, 2019
Share on FacebookShare on Twitter

ಹಿಂದೆ ಎಂದೂ ಕಾಣದ ಮಹಾಮಳೆ ಮತ್ತು ಪ್ರವಾಹದಿಂದ ಕರ್ನಾಟಕದ ಜನ ಜನಜೀವನವೇ ಧ್ವಂಸವಾಗಿದೆ. ಅಭಿವೃದ್ದಿ ಮತ್ತು ಮೂಲಸೌಕರ್ಯಗಳ ದೃಷ್ಟಿಯಿಂದ ಮೊದಲೇ ಹಿಂದುಳಿದ ಪ್ರದೇಶವೆಂದು ತಲೆಪಟ್ಟಿ ಹೊಂದಿದ್ದ ಉತ್ತರ ಕರ್ನಾಟಕ, ಅಭಿವೃದ್ದಿ ದೃಷ್ಟಿಯಿಂದ ಸುಮಾರು 15-20 ವರ್ಷಗಳಷ್ಟು ಹಿಂದೆ ಹೋಗಿದೆ. ಈ ಹೊಡೆತಕ್ಕೆ ಸಿಕ್ಕಿದ ಜನ ತಮ್ಮ ಇವತ್ತಿನ ಊಟದ ಮತ್ತು ನಾಳಿನ ಜೀವನ ಹೇಗೆ ಎಂದು ಚಿಂತೆಯಲ್ಲಿದ್ದರೆ, ಅರ್ಧ ಸಚಿವ ಸಂಪುಟ ರಚನೆಯಿಂದ `ಅತೃಪ್ತಿಗೆ’ ಜಾರಿರುವ ಶಾಸಕರು ಬಿಜೆಪಿಯಲ್ಲಿ ಹೆಚ್ಚಿದರೆ, ಅಧಿಕಾರ ಕಳೆದುಕೊಂಡ ವ್ಯಥೆಯಲ್ಲಿ ಪ್ರತಿಪಕ್ಷಗಳಿವೆ. ನೈಸರ್ಗಿಕ ಪ್ರಕೋಪದಿಂದ ಜನ ತತ್ತರಿಸಿದ್ದರೂ, ರಾಜಕಾರಣಿಗಳು ಟೆಲಿಫೋನ್ ಕದ್ದಾಲಿಕೆಯ ಬಗ್ಗೆಯೇ ಮಾತನಾಡುತ್ತಾರೆ.

ಹೆಚ್ಚು ಓದಿದ ಸ್ಟೋರಿಗಳು

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

ಝೀ ವಾಹಿನಿಯಲ್ಲಿ ಅಂತರ್‌ ಕಲಹ; ಮತ್ತೊಂದು ಕೂಗುಮಾರಿ ವಾಹಿನಿಗೆ ಹಾದಿ

ಉಲ್ಬಣಿಸಿದ ಬಿಕ್ಕಟ್ಟು ಪಲಾಯನದ ಮಹಾಪೂರ

ಕಾಂಗ್ರೆಸ್/ಜೆಡಿಎಸ್ ಮೈತ್ರಿ ಸರಕಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗಳಿಸುವಲ್ಲಿ ವಿಫಲವಾದ ಮೇಲೆ, ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಲವಾರು ಕಾರಣಗಳಿಂದ ಸಚಿವ ಸಂಪುಟ ರಚನೆ ವಿಳಂಬವಾಯಿತು. ಆದರೀಗ, ಮಂತ್ರಿ ಪದವಿಯ ಮೇಲೆ ಕಣ್ಣಿಟ್ಟು ಕುಳಿತಿದ್ದ ಹಲವು ಶಾಸಕರಿಗೆ ನಿರಾಸೆಯಾಗಿದೆ. ಹೀಗಾಗಿ, ಬಿಜೆಪಿಯ ಏಕವ್ಯಕ್ತಿ ಮಂತ್ರಿ ಮಂಡಲದ ಯಡಿಯೂರಪ್ಪ, ಮೊದಲು ನೈಸರ್ಗಿಕ ಪ್ರಕೋಪ ಪರಿಸ್ಥಿತಿಯನ್ನು ಒಂಟಿಯಾಗಿ ನಿಭಾಯಿಸಿದರೂ, ಈಗ ಮಂತ್ರಿಗಿರಿ ಸಿಕ್ಕಿದವರ ಸಹಾಯವಷ್ಟೇ ಪಡೆಯುವಂತಾಗಿದೆ.

ಮೈತ್ರಿ ಸರ್ಕಾರದ ಪತನದೊಂದಿಗೆ ಅಧಿಕಾರ ಕಳೆದುಕೊಂಡ ಶಾಸಕರು ಒಬ್ಬಂಟಿಯಾಗಿದ್ದ ಯಡಿಯೂರಪ್ಪನವರ ಕೈ ಬಲಪಡಿಸಲಿಲ್ಲ. ಹೀಗಾಗಿ ಅಧಿಕಾರಿಗಳು ಮಾಡಿದ್ದೇ ಕೆಲಸವೇ ಹೊರತು, ಅವರಿಗೆ ಯಾವ ಮಾರ್ಗದರ್ಶನವೂ ಇರಲಿಲ್ಲ. ಹೀಗಾಗಿ ಪರಿಹಾರ ಕಾಮಗಾರಿಗಳು ಅಸಮರ್ಪಕ ರೀತಿಯಲ್ಲಿ ನಡೆಯುತ್ತಿದೆ ಎಂಬ ವರದಿಗಳು ಸಾಕಷ್ಟು ಬಂದವು. ಈಗ ಅಧಿಕಾರದಲ್ಲಿ ಇಲ್ಲದೇ ಇರುವುದರಿಂದ, ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ಬಿಜೆಪಿ ಮೇಲೆ ಹೊರಿಸಿ ಮೈತಿ ಪಕ್ಷಗಳು ನಿರಮ್ಮಳವಾಗಿ ಕುಳಿತಿವೆ. ಒಮ್ಮೊಮ್ಮೆ ಬಿಜೆಪಿ ಸರ್ಕಾರವನ್ನು ಕುಟುಕಿದರೆ ತನ್ನ ಕೆಲಸವಾಯಿತು ಎಂದು ಮಿತ್ರ ಪಕ್ಷಗಳ ನಾಯಕರು ತಿಳಿದಂತಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಕಣ್ಣು ನೋವಿನಿಂದ ಪ್ರವಾಸ ಮಾಡಲು ಆಗುವದಿಲ್ಲವೆಂದು ಹೇಳಿದರೂ, ಅವರು ಹೊಸದಿಲ್ಲಿಗೆ ಪಕ್ಷದ ವರಿಷ್ಠ ಮಂಡಳಿ ಸಭೆಗೆ ಹೋಗುವಲ್ಲಿ ಆರೋಗ್ಯ ಸಮಸ್ಯೆ ಅಡ್ಡಿ ಬಂದಿಲ್ಲ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್ ಮತ್ತು ಈಶ್ವರ ಖಂಡ್ರೆ ಅವರಿಗೆ ಜನರ ನೋವಿಗೆ ಸ್ಪಂದಿಸಲು ವೇಳೆಯೇ ಇರಲಿಲ್ಲ. ಕಮಲ ಕಾಯಾಚರಣೆಯನ್ನು ಬಿಜೆಪಿ ಮುಂದುವರಿಸುತ್ತಿದೆಯಾ ಎಂಬುದು ಕಾಂಗ್ರೆಸ್ ನ ದೊಡ್ಡ ಚಿಂತೆಯಾಗಿ ಕಾಣಿಸುತ್ತಿದೆ.

ಒಂದು ರೀತಿಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೂ ಪೂರ್ಣ ಜನಾದೇಶ ದೊರಕದಾಗ ರಾಜ್ಯದ ಜನತೆ ಅನುಭವಿಸಬೇಕಾಗಿ ಬರುವ ಸಂಕಷ್ಟವಿದು. ತಮ್ಮ ರಾಜಕೀಯ ಅಧಿಕಾರದ ಹಪಾಪಿತನದ ಭರದಲ್ಲಿ, ಮೂರೂ ಪಕ್ಷಗಳು ರಾಜ್ಯದ ಜನರ ಹಿತ ವನ್ನು ಮತ್ತು ಬವಣೆಯನ್ನು ಕಡೆಗೆಣಿಸಿವೆ. ಮೊದಲು ಸಮ್ಮಿಶ್ರ ಸರಕಾರ ಮಾಡಿದ ಕಾಂಗ್ರೆಸ್ ಮತ್ತು ಜೆಡಿಎಸ್ ಗಾಗಲೀ, ಮತ್ತು ಈಗ ಸರಕಾರ ರಚಿಸಿದ ಬಿಜೆಪಿ ಆಗಲೀ, 224 ಸದಸ್ಯರ ವಿಧಾನ ಸಭೆಯಲ್ಲಿ ಬಹುಮತವುಳ್ಳ ಪಕ್ಷಗಳಲ್ಲ. ಇವರು ಯಾರಿಗೂ ಸರಕಾರ ಮಾಡುವ ಹಕ್ಕು ಮತದಾರ ಕರುಣಿಸಿಲ್ಲ. ಬಿಜೆಪಿ ಇನ್ನೆರಡು ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆದ್ದಿರಬಹುದು. ಆದರೆ ಬಹುಮತ ಇಲ್ಲ. ಬಿಜೆಪಿಗಿಂತ ಕಡಿಮೆ ಸ್ಥಾನ ಗಳಿಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪರಿಸ್ಥಿತಿ ಇನ್ನೂ ಶೋಚನೀಯ. ವಿಧಾನಸಭೆಯಲ್ಲಿ ಅವರಿಗಿರುವುದು ಪ್ರತಿ ಏಳು ಸ್ಥಾನಗಳಲ್ಲಿ ಒಂದು ಮಾತ್ರ. ಹೀಗಿದ್ದರೂ, ಮೂರು ಪಕ್ಷದ ನಾಯಕರು ಮಾತೆತ್ತಿದರೆ ಪ್ರಜಾಪ್ರಭುತ್ವದ ಹಿರಿಮೆಯ ಬಗ್ಗೆ ಪುಂಖಾನುಪುಂಖ ಮಾತನಾಡುತ್ತಾರೆ.

ವಿಧಾನಸಭೆ ಚುನಾವಣೆಯಾಗಿ, ಒಂದು ವರ್ಷದ ತನಕ ಅಧಿಕಾರ ಹಂಚಿಕೆಯ ಗೊಂದಲ ಮತ್ತು ಜಗಳದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವೇಳೆ ಕಳೆದವು. ಅವರ ನಿರ್ಗಮನದ ನಂತರ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಗೆ ಸಚಿವ ಸಂಪುಟ ರಚಿಸಲು ಸುಮಾರು ಒಂದು ತಿಂಗಳು ಬೇಕಾಗಿದೆ. ಸರಕಾರ ಇನ್ನೂ ಪೂರ್ತಿಯಾಗಿಲ್ಲವೆಂದು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ. ಸರಿಯಾದ ಸರಕಾರ ಮತ್ತು ಸರಿಯಾದ ಧುರೀಣರಿದ್ದರೆ, ನೈಸರ್ಗಿಕ ಪ್ರಕೋಪದಂತಹ ಪ್ರಕರಣಗಳನ್ನು ಉತ್ತಮ ರೀತಿಯಿಂದ ರೀತಿಯಿಂದ ನಿಭಾಯಿಸಬಹುದಿತ್ತು. ಪಕ್ಷಗಳ ರಾಜಕೀಯ ಹಪಾಪಿತನಕ್ಕೆ ಕರ್ನಾಟಕದ ಮತದಾರ ಬಹಳ ದೊಡ್ಡಬೆಲೆ ತೆತ್ತಿದ್ದಾನೆ.

RS 500
RS 1500

SCAN HERE

don't miss it !

‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?
ದೇಶ

‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?

by ಪ್ರತಿಧ್ವನಿ
June 29, 2022
ಕ್ರಾಂತಿ ಚಿತ್ರತಂಡಕ್ಕೆ ಶುಭ ಹಾರೈಸಿದ ಸೈನಿಕರು
ಇದೀಗ

ಕ್ರಾಂತಿ ಚಿತ್ರತಂಡಕ್ಕೆ ಶುಭ ಹಾರೈಸಿದ ಸೈನಿಕರು

by ಪ್ರತಿಧ್ವನಿ
June 30, 2022
ಸಿಎಂ ಬೊಮ್ಮಾಯಿಯವರ ಮೇಲೆ ಭರವಸೆ ಇಟ್ಟು ಹೋರಾಟ ಮುಂದೂಡಲಾಗಿದೆ: ಮೃತ್ಯುಂಜಯ ಸ್ವಾಮೀಜಿ
ಕರ್ನಾಟಕ

ಸಿಎಂ ಬೊಮ್ಮಾಯಿಯವರ ಮೇಲೆ ಭರವಸೆ ಇಟ್ಟು ಹೋರಾಟ ಮುಂದೂಡಲಾಗಿದೆ: ಮೃತ್ಯುಂಜಯ ಸ್ವಾಮೀಜಿ

by ಪ್ರತಿಧ್ವನಿ
June 30, 2022
ಪಾಲಿಕೆ ಆವರಣದಲ್ಲೇ ಕ್ರಿಕೆಟ್ ಆಡಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಯುವಕರು
Uncategorized

ಪಾಲಿಕೆ ಆವರಣದಲ್ಲೇ ಕ್ರಿಕೆಟ್ ಆಡಿ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಯುವಕರು

by ಪ್ರತಿಧ್ವನಿ
June 30, 2022
ಭಾರತದಲ್ಲಿ ಕಳೆದ ವರ್ಷಕ್ಕಿಂತ 46% ರಷ್ಟು  ಕಡಿಮೆಯಾದ ಅಕ್ಕಿ ನಾಟಿ: ಕೃಷಿ ಸಚಿವಾಲಯದ ಅಂಕಿ ಅಂಶ
ದೇಶ

ಭಾರತದಲ್ಲಿ ಕಳೆದ ವರ್ಷಕ್ಕಿಂತ 46% ರಷ್ಟು ಕಡಿಮೆಯಾದ ಅಕ್ಕಿ ನಾಟಿ: ಕೃಷಿ ಸಚಿವಾಲಯದ ಅಂಕಿ ಅಂಶ

by ಫಾತಿಮಾ
June 30, 2022
Next Post
ಬಿ ಎಸ್ ವೈ ರಾಜಕೀಯ ಬದುಕಿಗೆ ನೆರೆ ಹಾಕಲಿದೆಯೇ ಬರೆ?

ಬಿ ಎಸ್ ವೈ ರಾಜಕೀಯ ಬದುಕಿಗೆ ನೆರೆ ಹಾಕಲಿದೆಯೇ ಬರೆ?

ಕಾರ್ಮಿಕರನ್ನು ಜೀತದಂತೆ ದುಡಿಸಿಕೊಳ್ಳುತ್ತಿರುವ ಗಾರ್ಮೆಂಟ್ಸ್ ಕಾರ್ಖಾನೆ

ಕಾರ್ಮಿಕರನ್ನು ಜೀತದಂತೆ ದುಡಿಸಿಕೊಳ್ಳುತ್ತಿರುವ ಗಾರ್ಮೆಂಟ್ಸ್ ಕಾರ್ಖಾನೆ

ಚಿದಂಬರಂ ಬಂಧನ ಸಾರುವ ಕಾಲ ಚಕ್ರದ ಪಾಠವೇನು?

ಚಿದಂಬರಂ ಬಂಧನ ಸಾರುವ ಕಾಲ ಚಕ್ರದ ಪಾಠವೇನು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist