Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಯಾರ ದೋಸೆಯಲ್ಲಿದೆ ಹೆಚ್ಚು ತೂತು?

ಯಾರ ದೋಸೆಯಲ್ಲಿದೆ ಹೆಚ್ಚು ತೂತು?
ಯಾರ ದೋಸೆಯಲ್ಲಿದೆ ಹೆಚ್ಚು ತೂತು?
Pratidhvani Dhvani

Pratidhvani Dhvani

August 18, 2019
Share on FacebookShare on Twitter

ಇದೊಂದು ಪರಸ್ಪರರು ದೋಸೆಯ ತೂತುಗಳನ್ನು ಎಣಿಸುವ ಕೆಲಸ. ಮಾಡಲು ಸಾಧ್ಯವಾಗದಷ್ಟು ಮೈತುಂಬ ಕೆಲಸಗಳಿರುವಾಗ ಟೆಲಿಫೋನ್ ಕದ್ದಾಲಿಕೆಯಂತಹ ಪ್ರಕರಣಗಳನ್ನು ಸಿಬಿಐ ಗೆ ವಹಿಸಿ ರಾಜಕೀಯದ ಕಾವು ಉಳಿಸಿಕೊಳ್ಳುವ ವ್ಯರ್ಥ ಕಸರತ್ತಲ್ಲದೇ ಮತ್ತೇನೂ ಅಲ್ಲ.

ಹೆಚ್ಚು ಓದಿದ ಸ್ಟೋರಿಗಳು

ಹಿಂದುತ್ವದ ಭ್ರಮೆ ಬಿತ್ತುವ ಮೂಲಕ ರಾಜಕೀಯದಲ್ಲಿ ಧರ್ಮದ ದುರ್ಬಳಕೆ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

ಝೀ ವಾಹಿನಿಯಲ್ಲಿ ಅಂತರ್‌ ಕಲಹ; ಮತ್ತೊಂದು ಕೂಗುಮಾರಿ ವಾಹಿನಿಗೆ ಹಾದಿ

ಹಿಂದಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೂರಾರು ರಾಜಕಾರಣಿಗಳ, ಅಧಿಕಾರಿಗಳ ಮತ್ತು ಪತ್ರಕರ್ತರ ದೂರವಾಣಿಗಳಿಗೆ ಕಳ್ಳಗಿವಿ ಹಚ್ಚುವ ಮೂಲಕ ತಮ್ಮ ವಿರುದ್ಧ ನಡೆದ ರಾಜಕೀಯ ಪಿತೂರಿಗಳನ್ನು, ಸಂಚುಗಳ ಮಾಹಿತಿ ಪಡೆದುಕೊಳ್ಳುತ್ತಿದ್ದರೆಂಬುದು ಈಗ ಬಹಿರಂಗವಾಗುತ್ತಿರುವ “ಸತ್ಯ”! ಈ ಎಲ್ಲ “ಕಿವಿಗಳ್ಳತನವನ್ನು” ಸಿಬಿಐ ಗೆ ವಹಿಸುವ ಮೂಲಕ ಕುಮಾರಸ್ವಾಮಿ ಅವರನ್ನು ಇಕ್ಕಟ್ಟಿಗೆ ಸಿಕ್ಕಿಸಬೇಕೆಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿರುವದು ಸ್ಪಷ್ಟ.

ಸಿಬಿಐ ಗೆ ವಹಿಸಿದರೆ ಏನಾಗಬಹುದು, ಏನಾಗಲಿಕ್ಕಿಲ್ಲ ಎಂಬ ಬಗ್ಗೆ ಚರ್ವಿತ-ಚರ್ವಣ ಚರ್ಚೆ ಈಗ ರಾಜಕೀಯ ವಲಯದಲ್ಲಿ ನಡೆದಿದೆ. ದೂರವಾಣಿ ಕದ್ದಾಲಿಕೆಯ ವಿಚಾರಣೆ ಒಮ್ಮೆ ಆರಂಭವಾದರೆ ಯಾವ ಹಂತದಲ್ಲಿ ಯಾವ ತಿರುವು ಪಡೆದುಕೊಳ್ಳಬಹುದೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಸಿಬಿಐ ಗೆ ವಹಿಸುವ ಇಚ್ಛೆ ಸ್ವತಃ ಯಡಿಯೂರಪ್ಪ ಅವರಿಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಏಕೆಂದರೆ, ಅವರೇ ಇಂಥ ಆರೋಪಗಳಿಂದ ಮುಕ್ತರಾದವರಲ್ಲ.

ಕುಮಾರಸ್ವಾಮಿ ಅವರ ಸರಕಾರವನ್ನು ಪತನಗೊಳಿಸುವ ಯತ್ನವಾಗಿ ಅವರು ಜೆಡಿಎಸ್ ಶಾಸಕರೊಬ್ಬರ ಪುತ್ರನ ಜೊತೆಗೆ ನಡೆಸಿದ ಆಡಿಯೊ ಸಂಭಾಷಣೆ ಬಹಿರಂಗಗೊಂಡಾಗ ಆಗಿರುವ ಅನಾಹುತ ಅಷ್ಟಿಷ್ಟಲ್ಲ. ವಿಧಾನ ಸಭಾಧ್ಯಕ್ಷರೇ ಆ ಪ್ರಕರಣದ ಬಗ್ಗೆ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ ಐ ಟಿ) ರಚಿಸಬೇಕೆಂದೂ, 15 ದಿನದೊಳಗೆ ತಂಡ ವರದಿ ನೀಡಬೇಕೆಂದೂ ವಿಧಾನಸಭೆಯಲ್ಲೇ ಸರಕಾರಕ್ಕೆ ನಿರ್ದೇಶನ ನೀಡಿದ್ದರು. ಆದರೆ, ತೆರೆಯ ಮರೆಯಲ್ಲಿ ನಡೆದ ಹೊಂದಾಣಿಕೆ ರಾಜಕಾರಣದ ಫಲವಾಗಿ ಎಸ್ ಐ ಟಿ ರಚನೆ ಆಗಲೇ ಇಲ್ಲ. ಯಡಿಯೂರಪ್ಪ ಪೇಚಿಗೆ ಸಿಕ್ಕಿಹಾಕಿಕೊಳ್ಳುವ ಪ್ರಸಂಗವೇ ಬರಲಿಲ್ಲ!

“ಹೊಂದಾಣಿಕೆ ರಾಜಕಾರಣ” ನಮ್ಮ ರಾಜ್ಯದ ರಾಜಕೀಯಕ್ಕೆ ಹೊಸದೇನಲ್ಲ. ದೇವರಾಜ ಆರಸು ಕಾಲದಿಂದಲೂ ಇದು ನಡೆದುಬಂದಿದೆ. ಯಡಿಯೂರಪ್ಪ ಅವರ “ಸಂಕಷ್ಟದ” ಸಮಯದಲ್ಲಿ ಕಾಂಗ್ರೆಸ್ಸಿಗರೇ ಅವರನ್ನು ಯಾವುದ್ಯಾವುದೊ ಕಾರಣದಿಂದ ರಕ್ಷಿಸಿದ ಬಗ್ಗೆ ವದಂತಿಗಳಿವೆ. ಅಂಥದ್ದರಲ್ಲಿ ದೂರವಾಣಿ ಕದ್ದಾಲಿಕೆಯಂಥ ಪ್ರಕರಣಗಳನ್ನು ಸಿಬಿಐ ಗೆ ವಹಿಸುವಂಥ ಅಪಕ್ವ ರಾಜಕಾರಣಿ ಅವರಲ್ಲ ಎಂಬುದು ಅವರನ್ನು ಬಲ್ಲವರಿಗೆಲ್ಲ ಚೆನ್ನಾಗಿ ಗೊತ್ತು! ಹಾಗಾದರೆ ಸಿಬಿಐ ಗೆ ವಹಿಸುವಂಥ ನಿರ್ಧಾರವನ್ನು ಕೇಂದ್ರ ಸರಕಾರ ಕೈಗೊಂಡಿರುವುದರ ಹಿಂದೆ ಕೆಲಸ ಮಾಡಿದ ಕೈಗಳು ಯಾವುವು? ರಾಜ್ಯ ಬಿಜೆಪಿಯ ಕೆಲವರು ಯಡಿಯೂರಪ್ಪ ಅವರನ್ನು ಪೇಚಿಗೆ ಸಿಲುಕಿಸಲು ಕೇಂದ್ರವೇ ಈ ಕೆಲಸ ಮಾಡಿದೆ ಎನ್ನುತ್ತಿದ್ದಾರೆ. ಈ ಪ್ರಶ್ನೆ ಈಗ ರಾಜಕೀಯ ವಲಯದಲ್ಲಿ ಗುಸು ಗುಸು ಚರ್ಚೆಗೆ ಎಡೆ ಮಾಡಿ ಕೊಟ್ಟಿದೆ.

ಕುಮಾರಸ್ವಾಮಿ ಸುಮ್ಮನಿರುತ್ತಾರೆಯೇ?

ಸಿಬಿಐ ತನಿಖೆ ಆರಂಭವಾದ ನಂತರ ಕುಮಾರಸ್ವಾಮಿ ಅವರು ಸುಮ್ಮನೇ ಕೈಕಟ್ಟಿ ಕುಳಿತುಬಿಡುತ್ತಾರೆಯೆ? ಸಾಧ್ಯವೇ ಇಲ್ಲ. ಆರು ತಿಂಗಳ ಹಿಂದೆ ಅವರ ಸರಕಾರವನ್ನು ಕೆಡವಲು ಕಾಂಗ್ರೆಸ್ ಬಂಡುಕೋರರು ಏನೆಲ್ಲ ಕಸರತ್ತು ನಡೆಸಿದಾಗ ಕುಮಾರಸ್ವಾಮಿ ಅವರು ತಮ್ಮ ಬಳಿಯಿರುವ ಆಡಿಯೊ ಮತ್ತು ವಿಡಿಯೊಗಳ ಬಗ್ಗೆ ಸೂಚ್ಯವಾಗಿ ತಿಳಿಸಿದ್ದರು. ಮಹಾರಾಷ್ಟ್ರದಲ್ಲಿ ನಡೆದ ಚಟುವಟಿಕೆಗಳ ಬಗ್ಗೆ ತಮ್ಮಲ್ಲಿ ಎಲ್ಲ ದಾಖಲೆಗಳಿವೆಯೆಂದೂ ಅವರು ಬಂಡುಕೋರ ಶಾಸಕರೊಬ್ಬರಿಗೆ ನೇರವಾಗಿಯೇ ಹೇಳಿದ್ದರಂತೆ!

ಸಿಬಿಐ ತನಿಖೆಯ ವ್ಯಾಪ್ತಿಯನ್ನು ನಿಗದಿಗೊಳಿಸುವ ಅಧಿಕಾರ ರಾಜ್ಯ ಸರಕಾರಕ್ಕಿದ್ದರೂ ಸಹಿತ ತನಿಖೆಯ ಸಂದರ್ಭದಲ್ಲಿ ಮಾಧ್ಯಮದಲ್ಲಿ,ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಸಿಡಿಯುವ ವಿಡಿಯೊ ಮತ್ತು ಆಡಿಯೊ ಬಾಂಬ್ ಗಳನ್ನು ಎದುರಿಸುವ ಶಕ್ತಿ ಅಧಿಕಾರಸ್ಥರಲ್ಲಿ ಇರಲಿದೆಯೆ? ಒಂದು ವೇಳೆ ಯಡಿಯೂರಪ್ಪ ಅವರಿಗೇ ಸಂಬಂಧಿಸಿದ ಆಡಿಯೊ ಅಥವಾ ವಿಡಿಯೊ ಬಹಿರಂಗವಾದಲ್ಲಿ ಈ ಬಗ್ಗೆ ತನಿಖೆ ನಡೆಸಲು ಕೇಂದ್ರಕ್ಕೆ ಸಾಧ್ಯವೆ?

1988 ರಲ್ಲಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಸ್ವಪಕ್ಷಿಯರ ಮತ್ತು ಪ್ರತಿಪಕ್ಷಗಳ ನಾಯಕರ ದೂರವಾಣಿ ಕದ್ದಾಲಿಕೆ ಮಾಡಿದರೆಂದು ಆರೋಪ ಬಂದಿತ್ತು.ಈ ಪ್ರಕರಣ ಲೋಕಸಭೆಯಲ್ಲಿ ಭಾರೀ ಸದ್ದು ಮಾಡಿತ್ತು. ಕೊನೆಗೆ ನೈತಿಕತೆ ಆಧಾರದ ಮೇಲೆ ಹೆಗಡೆಯವರು ರಾಜಿನಾಮೆ ನೀಡಿ ಅಧಿಕಾರದಿಂದ ನಿರ್ಗಮಿಸಬೇಕಾಯಿತು. ಈಗ ಬಿಜೆಪಿ ಯಲ್ಲಿಯ ಕೆಲವರಿಗೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ನೋಡುವುದೇ ಬೇಡವಾಗಿದೆ. ಆದರೂ ಅವರನ್ನು ಅಲ್ಲಿ ಕೂಡಿಸಲೇಬೇಕಾಗಿರುವದು ಕೇಂದ್ರ ನಾಯಕರಿಗೆ ಇರುವ ಅನಿವಾರ್ಯತೆ. ದೂರವಾಣಿ ಕದ್ದಾಲಿಕೆ ಪ್ರಕರಣ ಸಿಬಿಐ ತನಿಖೆಗೆ ಒಳಗಾಗಿ ಯಡಿಯೂರಪ್ಪ ಅವರಿಗೆ ತಿರುಗುಬಾಣವಾದಲ್ಲಿ ಅದನ್ನೇ ನೆಪವನ್ನಾಗಿಸಿ ಅವರನ್ನು ಕುರ್ಚಿಯಿಂದ ಕೆಳಗಿಳಿಸುವ ಸಂಚನ್ನು ಅವರ ವಿರೋಧಿಗಳೇನಾದರೂ ನಡೆಸಿದ್ದಾರೆಯೆ ಎಂಬ ಸಂದೇಹ ಉಂಟಾಗಿದ್ದರೆ ಅತಿಶಯೋಕ್ತಿಯೇನಲ್ಲ.

ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಂಡು ಇನ್ನೂ ಗಟ್ಟಿಯಾಗಿ ನಿಲ್ಲುವ ಮೊದಲೇ ಯಡಿಯೂರಪ್ಪ ಅವರಿಗೆ ಪ್ರಕೃತಿ ವಿಕೋಪ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವೂ ಅವರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಹಕಾರ, ಬೆಂಬಲ ನೀಡುತ್ತಿಲ್ಲ ಎಂಬ ಭಾವನೆ ರಾಜ್ಯದ ಜನರಲ್ಲಿ ಮೂಡತೊಡಗಿದೆ. 76 ವರ್ಷ ವಯಸ್ಸಿನ ಯಡಿಯೂರಪ್ಪ ಅವರೊಬ್ಬ ಪಟ್ಟು ಬಿಡದ ಛಲಗಾರನಾಗಿದ್ದರೂ ಅವರನ್ನು ಒಂದಿಲ್ಲೊಂದು ನೆಪದಲ್ಲಿ ಕಟ್ಟಿಹಾಕಬೇಕೆಂದು ಕೆಲವರು ಪ್ರಯತ್ನಿಸುತ್ತಲೇ ಇದ್ದಾರೆ. ಈ ನೆಪಗಳಲ್ಲಿ ದೂರವಾಣಿ ಕದ್ದಾಲಿಕೆ ಪ್ರಕರಣದ ಸಿಬಿಐ ತನಿಖೆಯೂ ಒಂದಾಗಿದ್ದರೆ ಅಚ್ಚರಿಯೇನಲ್ಲ.

RS 500
RS 1500

SCAN HERE

don't miss it !

ವಾಯುಪಡೆ ಯುದ್ಧ ವಿಮಾನ ಹಾರಿಸಿದ ಅಪ್ಪ-ಮಗಳು: ಫೋಟೊ ವೈರಲ್!
ದೇಶ

ವಾಯುಪಡೆ ಯುದ್ಧ ವಿಮಾನ ಹಾರಿಸಿದ ಅಪ್ಪ-ಮಗಳು: ಫೋಟೊ ವೈರಲ್!

by ಪ್ರತಿಧ್ವನಿ
July 6, 2022
ಎರಡು ವರ್ಷದಲ್ಲಿ ಅಮೃತ ನಗರೋತ್ಥಾನ ಯೋಜನೆ ಪೂರ್ಣಗೊಳಿಸಲು ಸಿಎಂ ಬೊಮ್ಮಾಯಿ ಸೂಚನೆ
ಕರ್ನಾಟಕ

ಮೀನುಗಾರಿಕೆಯಿಂದ ರಾಜ್ಯದ ಒಟ್ಟು ಜಿಡಿಪಿಯಲ್ಲಿ ವೃದ್ಧಿ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
July 4, 2022
5ನೇ ಟೆಸ್ಟ್: ಇಂಗ್ಲೆಂಡ್ 284ಕ್ಕೆ ಆಲೌಟ್, ಭಾರತಕ್ಕೆ ಭಾರೀ ಮುನ್ನಡೆ
ಕ್ರೀಡೆ

5ನೇ ಟೆಸ್ಟ್: ಇಂಗ್ಲೆಂಡ್ 284ಕ್ಕೆ ಆಲೌಟ್, ಭಾರತಕ್ಕೆ ಭಾರೀ ಮುನ್ನಡೆ

by ಪ್ರತಿಧ್ವನಿ
July 3, 2022
ಉಲ್ಬಣಿಸಿದ ಬಿಕ್ಕಟ್ಟು ಪಲಾಯನದ ಮಹಾಪೂರ
ಅಭಿಮತ

ಉಲ್ಬಣಿಸಿದ ಬಿಕ್ಕಟ್ಟು ಪಲಾಯನದ ಮಹಾಪೂರ

by ನಾ ದಿವಾಕರ
July 3, 2022
ಭೀಮಾ ಕೊರೆಗಾಂವ್‌ ಪ್ರಕರಣದಲ್ಲಿ ಶಾಶ್ವತ ಜಾಮೀನು ಕೋರಿ ಸುಪ್ರೀಂ ಮೊರೆ ಹೋದ‌ ಹೋರಾಟಗಾರ ವರವರ ರಾವ್
ದೇಶ

ಭೀಮಾ ಕೊರೆಗಾಂವ್‌ ಪ್ರಕರಣದಲ್ಲಿ ಶಾಶ್ವತ ಜಾಮೀನು ಕೋರಿ ಸುಪ್ರೀಂ ಮೊರೆ ಹೋದ‌ ಹೋರಾಟಗಾರ ವರವರ ರಾವ್

by ಪ್ರತಿಧ್ವನಿ
July 2, 2022
Next Post
ರಾಜ್ಯ

ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಟೋಲ್ ಬರೆ

Karnataka Phone Tapping

Karnataka Phone Tapping | ಫೋನ್ ಕದ್ದಾಲಿಕೆ ಎಂಬ ‘Open Secret’  

ಯಡಿಯೂರಪ್ಪ ಸಂಪುಟ ರಚನೆ ಸಂಕಟ ದೂರ ಮಾಡಿತೇ ಅಮಿತ್ ಶಾ ಸಂದೇಶ?

ಯಡಿಯೂರಪ್ಪ ಸಂಪುಟ ರಚನೆ ಸಂಕಟ ದೂರ ಮಾಡಿತೇ ಅಮಿತ್ ಶಾ ಸಂದೇಶ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist