Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮಾಲ್ ಗಳು  ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ – ಗುಜರಾತ್ ಹೈ ಕೋರ್ಟ್

ಮಾಲ್ ಗಳು  ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ - ಗುಜರಾತ್ ಹೈ ಕೋರ್ಟ್
ಮಾಲ್ ಗಳು  ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ - ಗುಜರಾತ್ ಹೈ ಕೋರ್ಟ್
Pratidhvani Dhvani

Pratidhvani Dhvani

July 12, 2019
Share on FacebookShare on Twitter

ಮಾಲ್ ಗಳು ಹಾಗೂ ಮಲ್ಟಿಪ್ಲೆಕ್ಸ್ ಗಳ ಆದಾಯದಲ್ಲಿ ಗಣನೀಯ ಪಾಲು ಪಾರ್ಕಿಂಗ್ ಶುಲ್ಕದಿಂದ ಬರುತ್ತದೆ. ಮಾಲ್ ಗಳು ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಕಾನೂನು ಬಾಹಿರ ಎಂದಿರುವ ಗುಜರಾತ್ ಹೈ ಕೋರ್ಟ್ ಉಚಿತವಾಗಿ ಪಾರ್ಕಿಂಗ್ ಸೌಲಭ್ಯ ಒದಗಿಸುವಂತೆ ಆದೇಶಿಸಿದೆ. ಪಾರ್ಕಿಂಗ್ ಸಂಬಂಧ ಗುಜರಾತ್ ಬಿಲ್ಡಿಂಗ್ ಮತ್ತು ನಗರ ಯೋಜನಾ ಕಾಯ್ದೆಯ (Gujarat Building and Town Planning) ಅಂಶಗಳನ್ನು ಪರಿಶೀಲಿಸಿದ ಹೈಕೋರ್ಟ್ ನ ದ್ವಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಬೇಡ ಜಂಗಮರನ್ನ ಪರಿಶಿಷ್ಟ ಜಾತಿಗೆ ಸೇರಿಸಬೇಡಿ : ಸಿಎಂ ಎದುರೇ ಕೂಗಾಡಿದ ಸಿದ್ದರಾಜು!

ಬೆಂಗಳೂರು ಜೈಲಿನಿಂದಲೇ ವಿಡಿಯೋ ಪೋಸ್ಟ್‌ ಮಾಡಿದ ಹರ್ಷ ಕೊಲೆ ಆರೋಪಿ!

ಸರಳ ವಾಸ್ತುಗೂ ಮುನ್ನ ಚಂದ್ರಶೇಖರ್‌ ಗುರೂಜಿ ಏನಾಗಿದ್ದರು ಗೊತ್ತಾ?

ಕಾಯ್ದೆಯಲ್ಲಿ `ಒದಗಿಸು’ (to provide) ಎಂದು ಹೇಳಲಾಗಿರುವುದನ್ನು ವಿಶ್ಲೇಸಿರುವ ಹೈ ಕೋರ್ಟ್ ಇದರ ಅರ್ಥ ಪಾರ್ಕಿಂಗ್ ಉಚಿತವಾಗಿ ಒದಗಿಸುವುದು ಎಂದು ಹೇಳಿದೆ. “ಗುಜರಾತ್ ಸಮಗ್ರ ಅಭಿವೃದ್ಧಿ ನಿಯಮಗಳಂತೆ (Gujarat Comprehensive General Development Regulations – GCDR), ಪಾರ್ಕಿಂಗ್ ನಂತಹ ವ್ಯವಸ್ಥೆಯಲ್ಲಿ `ಒದಗಿಸು’ ಎಂಬುದರ ಅರ್ಥ ಮಾಲ್ ಅಥವಾ ಅಲ್ಲಿರುವ ಅಂಗಡಿ ಮಾಲಿಕರು ಗ್ರಾಹಕರಿಗೆ ಉಚಿತವಾಗಿ ಒದಗಿಸುವುದು,’’ ಎಂದು ಕೋರ್ಟ್ ವಿವರಿಸಿದೆ.

ಏನಿದು ಪ್ರಕರಣ?

ಗುಜರಾತ್ ನ ಕೆಲವು ನಗರಗಳಲ್ಲಿ ಸಂಚಾರಿ ಪೊಲೀಸರು ಪಾರ್ಕಿಂಗ್ ಶುಲ್ಕ ವಿಧಿಸದಂತೆ ಮಾಲ್ ಗಳಿಗೆ ನೊಟೀಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಮಾಲ್ ಮಾಲಿಕರು ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠ ಮಾಲ್ ಗಳ ಅರ್ಜಿಯನ್ನು ಪುರಸ್ಕರಿಸಿತು. ಕಾಯ್ದೆಯಲ್ಲಿ ಎಲ್ಲಿಯೂ ಪಾರ್ಕಿಂಗ್ ಉಚಿತ ಸೌಲಭ್ಯ ಎಂದು ಸ್ಪಷ್ಟ ಶಬ್ದಗಳಲ್ಲಿ ಹೇಳಿಲ್ಲವಾದ್ದರಿಂದ ಸಂಚಾರಿ ಪೊಲೀಸರ ಕ್ರಮ ಸರಿಯಲ್ಲ ಎಂದು ಏಕ ಸದಸ್ಯ ಪೀಠ ಆದೇಶಿಸಿತ್ತು. ಇದರ ಜೊತೆಗೆ, ಪಾರ್ಕಿಂಗ್ ಶುಲ್ಕ ನಿಯಂತ್ರಿಸುವಂತಹ ನಿಯಮಾವಳಿಗಳನ್ನು ರೂಪಿಸಿ ಎಂದೂ ಹೈ ಕೋರ್ಟ್ ಪೀಠ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಈ ನಿರ್ದೇಶನವನ್ನು ಪ್ರಶ್ನಿಸಿ ಮಾಲ್ ಗಳು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು. ಆದರೆ, ದ್ವಿಸದಸ್ಯ ಪೀಠ ಅರ್ಜಿಯನ್ನು ಮತ್ತೆ ಸಮಗ್ರ ವಿಚಾರಣೆಗೆ ಒಳಪಡಿಸಿ `ಪಾರ್ಕಿಂಗ್ ಒದಗಿಸುವುದು’ ಎಂಬ ಶಬ್ದ ಬಳಕೆಯನ್ನು ವ್ಯಾಖ್ಯಾನಿಸಿ ಆದೇಶ ನೀಡಿದೆ.

ಮಾಲ್ ಗಳ ಮಾಲಿಕರು ಸಂವಿಧಾನದ 19 (1) (g) ಪರಿಚ್ಛೇದವನ್ನು (ಯಾವುದೇ ಉದ್ಯೋಗ, ವ್ಯವಹಾರ ಮಾಡುವ ಸ್ವಾತಂತ್ರ್ಯ) ಆಧರಿಸಿ ಪಾರ್ಕಿಂಗ್ ಶುಲ್ಕವೂ ಈ ಪರಿಚ್ಛೇದದಡಿ ಅನ್ವಯಿಸುತ್ತದೆ ಎಂದು ವಾದಿಸಿದ್ದರು. ಈ ವಾದವನ್ನು ಒಪ್ಪದ ಹೈ ಕೋರ್ಟ್ ಪೀಠ, ಕಟ್ಟಡದ ಮಾಲಿಕರು ಪಾರ್ಕಿಂಗ್ ಜಾಗ ನಿರ್ಮಿಸುವಾಗ ಮಹಡಿಗಳ ಅನುಪಾತ (Floor Area Ratio/Floor Space Index) ನಿಯಮದಿಂದ ವಿನಾಯಿತಿ ಪಡೆದಿರುತ್ತಾರೆ ಎಂದಿದೆ. ಅಲ್ಲದೇ, ಕಟ್ಟಡವನ್ನು ಬಳಸುವ ಅನುಮತಿ ಪತ್ರ (Occupation Certificate) ಪಡೆಯುವಾಗಲೂ ಈ ವಿನಾಯಿತಿ ಅನ್ವಯಿಸುವುದರಿಂದ, ಪಾರ್ಕಿಂಗ್ ಜಾಗದ ಸೌಲಭ್ಯ ಗ್ರಾಹಕರಿಗೆ ಉಚಿತವಾಗಿಯೇ ಸಲ್ಲಬೇಕು ಎಂದಿದೆ. ಈ ಪಾರ್ಕಿಂಗ್ ಜಾಗದ ನಿರ್ವಹಣೆಯನ್ನೂ ಮಾಲ್ ಮಾಲಿಕ ಹಾಗೂ ಅಂಗಡಿ ಮಾಲಿಕರು ಸಮಾನವಾಗಿ ಭರಿಸಬೇಕು ಎಂದೂ ಕೋರ್ಟ್ ಹೇಳಿದೆ.

ಕರ್ನಾಟಕದಲ್ಲಿ ಹೇಗಿದೆ?

ಕರ್ನಾಟಕದ ಹೆಚ್ಚಿನ ಬಹು ಮಹಡಿ ವಾಣಿಜ್ಯ ಸಂಕೀರ್ಣಗಳು, ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಗಳು ಯಾವುದೇ ನಿಯಂತ್ರಣವಿಲ್ಲದ ಪಾರ್ಕಿಂಗ್ ಶುಲ್ಕ ವಿಧಿಸುತ್ತವೆ. ಬೆಂಗಳೂರಿನ ಕೆಲವು ಮಾಲ್ ಗಳಲ್ಲಿಯಂತೂ ಕಾರ್ ಪಾರ್ಕಿಂಗ್ ಶುಲ್ಕ ಅತ್ಯಂತ ದುಬಾರಿ. ಉದಾಹರಣೆಗೆ, ಮಲ್ಲೇಶ್ವರಂನ ಮಂತ್ರಿ ಮಾಲ್ ನಲ್ಲಿ ಕಾರ್ ಪಾರ್ಕಿಂಗ್ ಶುಲ್ಕ ಪ್ರತಿ ಗಂಟೆಗೆ ರೂ 30. ಅದೇ, ಕನ್ಹಿಂಗ್ ಹ್ಯಾಮ್ ರಸ್ತೆಯಲ್ಲಿರುವ ಸಿಗ್ಮಾ ಮಾಲ್ ನಲ್ಲಿ ಕಾರ್ ಗಳ ಪ್ರವೇಶಕ್ಕೇ ರೂ 100 ಶುಲ್ಕ, ಅದೇ ದ್ವಿಚಕ್ರ ವಾಹನಕ್ಕೆ ರೂ 50. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾವರು ಸಂಚಾರಿ ಪೊಲೀಸರೋ ಅಥವಾ ಬಿಬಿಎಂಪಿಯೋ ಎಂಬ ಬಗ್ಗೆಯೇ ಗೊಂದಲವಿದೆ.

ಮೈಸೂರು ಮಾದರಿ:

ಮೈಸೂರು ನಗರದಲ್ಲಿ ಮಾಲ್ ಗಳು ವಿಧಿಸುವ ಪಾರ್ಕಿಂಗ್ ಶುಲ್ಕವನ್ನು ನಿಷೇಧಿಸಲಾಗಿದೆ. 2017ರಲ್ಲಿ ಮೈಸೂರು ಮಹಾನಗರ ಪಾಲಿಕೆ ಈ ಆದೇಶ ಹೊರಡಿಸಿ ಯಾವುದೇ ವಾಣಿಜ್ಯ ಪ್ರದೇಶದ ಕಟ್ಟಡದಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸುವಂತಿಲ್ಲ ಎಂದು ಹೇಳಿದೆ. ಪತ್ರಿಕೆಗಳ ವರದಿಗಳ ಪ್ರಕಾರ, ಅಲ್ಲಲ್ಲಿ ಕೆಲವು ಮಾಲ್ ಗಳು ಶುಲ್ಕ ವಿಧಿಸುತ್ತಿವೆಯಾದರೂ ಜನರಲ್ಲಿ ಈ ಬಗ್ಗೆ ಅರಿವು ಮೂಡಿದೆ.

ವಸತಿ ಸಮುಚ್ಛಯಗಳಲ್ಲಿಯೂ ಇದೇ ಸಮಸ್ಯೆ:

ಬಹುಮಹಡಿ ವಸತಿ ಸಮುಚ್ಛಯಗಳಲ್ಲಿಯೂ ಅನಧಿಕೃತ ಪಾರ್ಕಿಂಗ್ ಜಾಗ ಶುಲ್ಕಗಳ ಹಾವಳಿ ಹೆಚ್ಚಿದೆ. ರೇರಾ (Real Estate Regulatory Authority Karnataka) ನಿಯಮಗಳ ಪ್ರಕಾರ ಪಾರ್ಕಿಂಗ್ ಕೂಡ ಕಾಮನ್ ಎರಿಯಾ ಎಂದೇ ಪರಿಗಣಿಸಲ್ಪಡುತ್ತದೆ. ಅಂದರೆ, ಲಿಪ್ಟ್, ಪಾರ್ಕ್, ತಳಮಹಡಿಯಂತೆ ಇದೂ ಕೂಡ ಉಚಿತವಾಗಿ ಉಪಯೋಗಿಸಲ್ಪಡುವಂತದ್ದು. ಹಲವು ಅಪಾರ್ಟ್ ಮೆಂಟ್ ಗಳು ಕಾರ್ ಪಾರ್ಕಿಂಗ್ ಗೆ ಪ್ರತ್ಯೇಕ ದರ ನಿಗದಿಪಡಿಸಿರುತ್ತದೆ.

RS 500
RS 1500

SCAN HERE

don't miss it !

ಅಪಾರ್ಟ್ಮೆಂಟ್‌ಗಳಲ್ಲಿ ಕರೋನಾ ಸ್ಫೋಟ : BBMPಯಿಂದ ವಿಶೇಷ ಮಾರ್ಗಸೂಚಿ ಸಾಧ್ಯತೆ!
ಕರ್ನಾಟಕ

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 826 ಮಂದಿಗೆ ಕರೋನಾ ಪಾಸಿಟಿವ್

by ಪ್ರತಿಧ್ವನಿ
July 4, 2022
ಭ್ರಷ್ಟಾಚಾರ ಪ್ರಕರಣ; ಹೈಕೋರ್ಟ್ ತರಾಟೆ ನಂತರ ಜಿಲ್ಲಾಧಿಕಾರಿಗೆ ಸಮನ್ಸ್ ನೀಡಿದ ಎಸಿಬಿ
ಕರ್ನಾಟಕ

ಭ್ರಷ್ಟಾಚಾರ ಪ್ರಕರಣ; ಹೈಕೋರ್ಟ್ ತರಾಟೆ ನಂತರ ಜಿಲ್ಲಾಧಿಕಾರಿಗೆ ಸಮನ್ಸ್ ನೀಡಿದ ಎಸಿಬಿ

by ಪ್ರತಿಧ್ವನಿ
June 30, 2022
ಶ್ರೇಷ್ಠ ತಾಂತ್ರಿಕ ಬೆಂಬಲ ವ್ಯವಸ್ಥೆಯನ್ನು ರೂಪಿಸಿ : ಬಾಷ್ ಸಂಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ
ಕರ್ನಾಟಕ

ಶ್ರೇಷ್ಠ ತಾಂತ್ರಿಕ ಬೆಂಬಲ ವ್ಯವಸ್ಥೆಯನ್ನು ರೂಪಿಸಿ : ಬಾಷ್ ಸಂಸ್ಥೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಲಹೆ

by ಪ್ರತಿಧ್ವನಿ
June 30, 2022
ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಸ್ಪೈಸ್ ಜೆಟ್ ವಿಮಾನ
ಇದೀಗ

ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಸ್ಪೈಸ್ ಜೆಟ್ ವಿಮಾನ

by ಪ್ರತಿಧ್ವನಿ
July 5, 2022
ಭಾರತ- ಇಂಗ್ಲೆಂಡ್‌ ಟೆಸ್ಟ್‌ ಗೆ ಮಳೆ ಅಡ್ಡಿ: ಭಾರತಕ್ಕೆ ಆರಂಭಿಕ ಆಘಾತ
ಕ್ರೀಡೆ

ಭಾರತ- ಇಂಗ್ಲೆಂಡ್‌ ಟೆಸ್ಟ್‌ ಗೆ ಮಳೆ ಅಡ್ಡಿ: ಭಾರತಕ್ಕೆ ಆರಂಭಿಕ ಆಘಾತ

by ಪ್ರತಿಧ್ವನಿ
July 1, 2022
Next Post
ಮುಖ್ಯಮಂತ್ರಿ ವಿಶ್ವಾಸ ಮತ ಯಾಚನೆ ಹಿಂದಿನ ಮರ್ಮ ಏನು?

ಮುಖ್ಯಮಂತ್ರಿ ವಿಶ್ವಾಸ ಮತ ಯಾಚನೆ ಹಿಂದಿನ ಮರ್ಮ ಏನು?

ಐಎಂಎ ಪ್ರಕರಣ: ಅಧಿಕಾರಗಳ ವಿರುದ್ಧ ಭ್ರಷ್ಟಾಚಾರ ತನಿಖೆ ಯಾಕಿಲ್ಲ?

ಐಎಂಎ ಪ್ರಕರಣ: ಅಧಿಕಾರಗಳ ವಿರುದ್ಧ ಭ್ರಷ್ಟಾಚಾರ ತನಿಖೆ ಯಾಕಿಲ್ಲ?

ಗದುಗಿನಲ್ಲಿ ಕೇವಲ 5 ರೂ ಗೆ ಹೊಟ್ಟೆ ತುಂಬಾ ಊಟ

ಗದುಗಿನಲ್ಲಿ ಕೇವಲ 5 ರೂ ಗೆ ಹೊಟ್ಟೆ ತುಂಬಾ ಊಟ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist