Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಮರಾಠಿ ಭಾಷಿಕ ಮತದಾರರ ಓಲೈಕೆಗೆ ಕನ್ನಡ ಮರೆತ ಮಂತ್ರಿ ಸುರೇಶ ಅಂಗಡಿ!

ಮರಾಠಿ ಭಾಷಿಕ ಮತದಾರರ ಓಲೈಕೆಗೆ ಕನ್ನಡ ಮರೆತ ಮಂತ್ರಿ ಸುರೇಶ ಅಂಗಡಿ!
ಮರಾಠಿ ಭಾಷಿಕ ಮತದಾರರ ಓಲೈಕೆಗೆ ಕನ್ನಡ ಮರೆತ ಮಂತ್ರಿ ಸುರೇಶ ಅಂಗಡಿ!
Pratidhvani Dhvani

Pratidhvani Dhvani

June 19, 2019
Share on FacebookShare on Twitter

ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾದ 28 ಸಂಸದರ ಪೈಕಿ 27 ಸದಸ್ಯರು (ಹಾಸನದ ಸಂಸದ ಪ್ರಜ್ವಲ್ ಹೊರತುಪಡಿಸಿ) ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಇವರಲ್ಲಿ ಬೆಳಗಾವಿ ಬಿಜೆಪಿ ಸಂಸದ ಸುರೇಶ ಅಂಗಡಿ ಒಬ್ಬರೇ ಇಂಗ್ಲೀಷಿನಲ್ಲಿ ಪ್ರಮಾಣ ವಚನ ಸ್ವೀಕರಿದ್ದಾರೆ. ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಸಂಸ್ಕೃತದಲ್ಲಿ ಸ್ವೀಕರಿಸಿದ್ದಾರೆ. ಉಳಿದ ಎಲ್ಲ 25 ಸದಸ್ಯರೂ ಅಚ್ಚ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ! ತಮಗೆ ಮತ ನೀಡಿದ ಮರಾಠಿ ಭಾಷಿಕರು ಅಸಮಾಧಾನಗೊಂಡಾರು ಎಂಬ ಅಳುಕಿನಿಂದಾಗಿಯೇ ಅಂಗಡಿಯವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸದಿರುವುದು ಸ್ಪಷ್ಟವಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ನ್ಯಾಯ ವ್ಯವಸ್ಥೆಯನ್ನೂ ಬೆದರಿಸುವ ಭ್ರಷ್ಟಾಚಾರದ ಪೆಡಂಭೂತ

ಹಿಂದುತ್ವದ ಭ್ರಮೆ ಬಿತ್ತುವ ಮೂಲಕ ರಾಜಕೀಯದಲ್ಲಿ ಧರ್ಮದ ದುರ್ಬಳಕೆ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಜಾತಿ, ಭಾಷೆ ಮತ್ತು ಧರ್ಮ ಮೀರಿದ ಮೋದಿ ಅವರ ಪರವಾದ ಅಲೆ ಇತ್ತು ಎಂಬುದು ಬಿಜೆಪಿಯ ವಾದವಾಗಿತ್ತು. ಸ್ವತಃ ಮೋದಿಯವರೇ ಇದನ್ನು ಹಲವಾರು ಬಾರಿ ಹೇಳಿದ್ದಾರೆ. ಮೋದಿಯವರಿಗೆ ಮತ್ತು ಬಿಜೆಪಿಗೆ ಅರ್ಥವಾಗಿದ್ದು ಅಂಗಡಿಯವರಿಗೆ ಅರ್ಥವಾಗಿಲ್ಲವೆ? ಆದರೂ ಅವರು ಮರಾಠಿ ಭಾಷಿಕರ ಓಲೈಕೆಗೆ ಮುಂದಾಗಿದ್ದೇಕೆ?
ಅಂಗಡಿಯವರು ಆಯ್ಕೆಯಾಗಿದ್ದು ನಾಲ್ಕನೇ ಬಾರಿ. ಈ ಹೊತ್ತಿಗೆ ಅವರು ಸಾಕಷ್ಟು ಪಕ್ವವಾಗಬೇಕಿತ್ತು, ಮುತ್ಸದ್ದಿಯೆನಿಸಬೇಕಾಗಿತ್ತು. ಮಂತ್ರಿಯಾದ ಮೇಲಂತೂ ಅವರು ಒಂದೊಂದು ಹೆಜ್ಜೆಯನ್ನೂ ಎಚ್ಚರಿಕೆಯಿಂದ ಇಡಬೇಕಾಗಿತ್ತು.ಆದರೆ ಮಂತ್ರಿಯಾಗಿ ಒಂದು ತಿಂಗಳೂ ಆಗಿಲ್ಲ. ಈಗಲೇ ಮೈಮೇಲೆ ವಿವಾದ ಎಳೆದುಕೊಂಡಿದ್ದಾರೆ.

ಪ್ರಾದೇಶಿಕ ಭಾಷೆಗಳ ಸಂರಕ್ಷಣೆಯ ಹೊಣೆಯು ಕೇಂದ್ರ ಸರಕಾರದ ಮೇಲಿದೆ.ಸ್ವತಃ ಪ್ರಧಾನಿ ಮೋದಿಯವರು ತಮ್ಮ ಗುಜರಾತಿ ಭಾಷೆಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದಾರೆ. ಅದರ ಉಳಿವಿಗಾಗಿ ಬದ್ಧರಾಗಿದ್ದಾರೆ. ಪ್ರಾದೇಶಿಕ ಭಾಷೆಯ ಸಂರಕ್ಷಣೆಗಾಗಿ ಕೈಕೊಳ್ಳಬೇಕಾದ ಕ್ರಮಗಳ ಬಗ್ಗೆ ಚಿಂತನೆಯೊಂದು ಕೇಂದ್ರ ಸರಕಾರದ ಮುಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2014 ರಲ್ಲಿ ಮೋದಿಯವರ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಅಂಗಡಿಯವರು ಈಗ ಕೇಂದ್ರ ಸರಕಾರದ ಒಂದು ಭಾಗ. ಕೇಂದ್ರದ ನಿಲುವಿಗೆ ಅವರು ಬದ್ಧರಾಗಿರಬೇಕಾಗುತ್ತದೆ.

ಸಂಸದಅಂಗಡಿ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ
ಸಂಸದ ಅಂಗಡಿ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ
ಸಂಸದ ಅಂಗಡಿ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ

ಲೋಕಸಭೆಯಲ್ಲಿ 1967 ರಲ್ಲಿ ಮೊಟ್ಟ ಮೊದಲು ಕನ್ನಡದಲ್ಲಿ ಮಾತನಾಡಿದ ಕೀರ್ತಿ ದಿ. ಜೆ. ಎಚ್. ಪಟೇಲರಿಗೆ ಸಲ್ಲುತ್ತದೆ. ಸಂಸದ ಶಿವಣ್ಣ, ದಿ. ಅನಂತಕುಮಾರ ಅವರು ಲೋಕಸಭೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದಾರೆ. ಸುರೇಶ ಅಂಗಡಿಯವರು ಇಂಗ್ಲೀಷಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ ಮರಾಠಿಗರು `ಖುಷ್’ ಆಗುತ್ತಾರೆಯೆ? ಮರಾಠಿ ಭಾಷಿಕ ಕನ್ನಡ ಮತದಾರರು ಭಾಷೆಯ ಗಡಿ ಮೀರಿ, ಅಂಗಡಿಯವರ ನಿರೀಕ್ಷೆಯನ್ನೂ ಮೀರಿ ಮತ ನೀಡಿದ್ದಾರೆ. ಎಮ್.ಇ.ಎಸ್ .ನಾಯಕರು ಎಷ್ಟೇ ಹೊಯ್ಕೊಂಡರೂ ಮರಾಠಿ ಭಾಷಿಕರು ಅವರ ಬೆನ್ನು ಹತ್ತದೇ ರಾಜಕೀಯ ಪಕ್ಷಗಳತ್ತ ಮುಖ ಮಾಡಿದ್ದಾರೆ . ಈ ರಾಜಕೀಯ ಧ್ರುವೀಕರಣ ಸ್ವಾಗತಾರ್ಹವೇ. ಸುರೇಶ ಅಂಗಡಿಯವರು ಮಂತ್ರಿಯಾಗಿ ಇಷ್ಟು ಬೇಗ ಮೈಮೇಲೆ ರಾಡಿ ಸಿಡಿಸಿಕೊಳ್ಳುವರೆಂದು ನಾನು ಭಾವಿಸಿರಲಿಲ್ಲ. ಕೇವಲ ಸಂಸದರಾಗಿ ಅವರು ಮೂರು ಅವಧಿಯಲ್ಲಿ ಸಾಕಷ್ಟು ಬಾರಿ ವಿವಾದಕ್ಕೆ ಒಳಗಾಗಿದ್ದರು .ಆದರೆ ಮಂತ್ರಿಯಾಗಿ ವಿವಾದಕ್ಕೆ ಒಳಗಾಗುವುದರಿಂದ ಪ್ರಧಾನಿಯವರ ಗಮನಕ್ಕೆ ಬಂದೇ ಬರುತ್ತದೆ. ಇಂಥ ಸಂದರ್ಭಕ್ಕೆ ಅವರ ಪಕ್ಷದ ನಾಯಕರೇ ಕಾಯುತ್ತಿರುತ್ತಾರೆ. ಅಂಗಡಿಯವರು ಈಗಾಗಿರುವ ತಪ್ಪನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಅವರ ಮಂತ್ರಿಗಿರಿಗೇ ಹೊಡೆತ ಬಿದ್ದೀತು.

ಅಂಕಣಕಾರರು ಹಿರಿಯ ಪತ್ರಕರ್ತರು

RS 500
RS 1500

SCAN HERE

don't miss it !

WHO Report | ‘ಮೋದಿ ಸುಳ್ಳು ಹೇಳಬಹುದು ಆದರೆ ವಿಜ್ಞಾನ ಸುಳ್ಳು ಹೇಳುವುದಿಲ್ಲ’ : ರಾಹುಲ್ ಗಾಂಧಿ
ದೇಶ

‘ಆಳುವ ಸರ್ಕಾರ ಈ ವಾತಾವರಣವನ್ನು ಸೃಷ್ಟಿಸಿದೆ’ : ರಾಹುಲ್ ಗಾಂಧಿ

by ಪ್ರತಿಧ್ವನಿ
July 1, 2022
ಪಂತ್- ಜಡೇಜಾ ಭರ್ಜರಿ ಜೊತೆಯಾಟ: ಭಾರತಕ್ಕೆ ದಿನದ ಗೌರವ!
ಕ್ರೀಡೆ

ಸಚಿನ್‌ ಹೆಸರಿನಲ್ಲಿದ್ದ 100 ಸಿಕ್ಸರ್ ದಾಖಲೆ ಮುರಿದ ರಿಷಭ್‌ ಪಂತ್!

by ಪ್ರತಿಧ್ವನಿ
July 2, 2022
ಸಿಎಂ ಬೊಮ್ಮಾಯಿಯವರ ಮೇಲೆ ಭರವಸೆ ಇಟ್ಟು ಹೋರಾಟ ಮುಂದೂಡಲಾಗಿದೆ: ಮೃತ್ಯುಂಜಯ ಸ್ವಾಮೀಜಿ
ಕರ್ನಾಟಕ

ಸಿಎಂ ಬೊಮ್ಮಾಯಿಯವರ ಮೇಲೆ ಭರವಸೆ ಇಟ್ಟು ಹೋರಾಟ ಮುಂದೂಡಲಾಗಿದೆ: ಮೃತ್ಯುಂಜಯ ಸ್ವಾಮೀಜಿ

by ಪ್ರತಿಧ್ವನಿ
June 30, 2022
ಬಾಗಲಕೋಟೆ | ಅನ್ಯಕೋಮಿನ ಗುಂಪುಗಳ ನಡುವೆ ಮಾರಮಾರಿ, ಇಬ್ಬರಿಗೆ ಚಾಕು ಇರಿತ : 144 ಸಕ್ಷನ್‌ ಜಾರಿ!
ಕರ್ನಾಟಕ

ಬಾಗಲಕೋಟೆ | ಅನ್ಯಕೋಮಿನ ಗುಂಪುಗಳ ನಡುವೆ ಮಾರಮಾರಿ, ಇಬ್ಬರಿಗೆ ಚಾಕು ಇರಿತ : 144 ಸಕ್ಷನ್‌ ಜಾರಿ!

by ಪ್ರತಿಧ್ವನಿ
July 7, 2022
ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್ : ಹವಾಮಾನ ಇಲಾಖೆ
ಕರ್ನಾಟಕ

ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್ : ಹವಾಮಾನ ಇಲಾಖೆ

by ಕರ್ಣ
July 1, 2022
Next Post
ರೋಷನ್ ಬೇಗ್ ಅಮಾನತು ಕಾಂಗ್ರೆಸ್ ಪುನರುತ್ಥಾನದ ಹಾದಿ ಆದೀತೆ?

ರೋಷನ್ ಬೇಗ್ ಅಮಾನತು ಕಾಂಗ್ರೆಸ್ ಪುನರುತ್ಥಾನದ ಹಾದಿ ಆದೀತೆ?

ದಿಢೀರ್‌ ಭೇಟಿ

ದಿಢೀರ್‌ ಭೇಟಿ, ಅರೆಬರೆ ಮಾಹಿತಿ, ಬರ ಪ್ರವಾಸದ ತಪ್ಪು ಟ್ವೀಟ್‌

ಮುಂಗಾರು ಇಷ್ಟು ವಿಳಂಬವಾಗಿರುವುದು ದಶಕದ ದಾಖಲೆ   

ಮುಂಗಾರು ಇಷ್ಟು ವಿಳಂಬವಾಗಿರುವುದು ದಶಕದ ದಾಖಲೆ   

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist