Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಭಾರಿ ಹೆಚ್ಚಳ 

ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಭಾರಿ ಹೆಚ್ಚಳ
ಬ್ಯಾಂಕ್ ವಂಚನೆ ಪ್ರಕರಣಗಳಲ್ಲಿ ಭಾರಿ ಹೆಚ್ಚಳ 
Pratidhvani Dhvani

Pratidhvani Dhvani

August 30, 2019
Share on FacebookShare on Twitter

ಬ್ಯಾಂಕ್ ವಂಚನೆ ಹಿಂದಿನ ಸರಕಾರದಲ್ಲಿ ನಡೆಯುತ್ತಿತ್ತು. ಈಗ ನಡೆಯುವುದಿಲ್ಲ ಎಂಬ ಭಾವನೆ ಜನಸಾಮಾನ್ಯರಲ್ಲಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಅಧಿಕೃತ ವರದಿ ಪ್ರಕಾರ 2018ರ ಹಣಕಾಸು ವರ್ಷಕ್ಕಿಂತ 2019ರ ವಿತ್ತ ವರ್ಷದಲ್ಲಿ ಬ್ಯಾಂಕ್ ವಂಚನೆ ಮೊತ್ತದಲ್ಲಿ ಶೇಕಡ 74ರಷ್ಟು ಹೆಚ್ಚಳವಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಸಿಎಂ ಕೇಜ್ರಿವಾಲ್ ನಿವಾಸ ಧ್ವಂಸ ಪ್ರಕರಣ : ಸತತ 2 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ತೇಜಸ್ವಿ ಸೂರ್ಯ!

ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮಾತ್ರ PSI ಹಗರಣ ಬಗ್ಗೆ ನಿಷ್ಪಕ್ಷಪಾತ ತನಿಖೆ ಸಾಧ್ಯ : ರಾಹುಲ್‌ ಗಾಂಧಿ

ಉತ್ತರ ಪ್ರದೇಶ | ಎರಡನೇ ಅವಧಿಯ ಆದಿತ್ಯನಾಥ್ ಸರ್ಕಾರಕ್ಕೆ 100 ದಿನ : ಸಾಧನೆಗಳೇನು?

100 ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತದ ವಂಚನೆ ಪ್ರಕರಣ ಸಂಖ್ಯೆಯಲ್ಲೂ ಹೆಚ್ಚಳ ಉಂಟಾಗಿದ್ದು, ಒಂದು ಲಕ್ಷ ರೂಪಾಯಿಂದ ಕಡಿಮೆ ಮೊತ್ತದ ವಂಚನೆ ಪ್ರಕರಣಗಳು ಶೇಕಡ 1ಕ್ಕಿಂತಲೂ ಕಡಿಮೆ. ದೊಡ್ಡ ಕುಳಗಳೇ ದುರುದ್ದೇಶ ಪೂರಕವಾಗಿ ಪ್ರಭಾವ ಬಳಸಿ ಸಾಲ ಮಂಜೂರು ಮಾಡಿಸಿಕೊಂಡು ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

2018ರ ಹಣಕಾಸು ವರ್ಷದಲ್ಲಿ 41,167 ಕೋಟಿ ರೂಪಾಯಿ ಮೊತ್ತದ ಬ್ಯಾಂಕ್ ವಂಚನೆ ಆಗಿದ್ದರೆ, 2019ರ ಹಣಕಾಸು ವರ್ಷದಲ್ಲಿ 71,543 ಕೋಟಿ ರೂಪಾಯಿ ಮೊತ್ತ ವಂಚನೆ ಆಗಿದೆ. ಅಂದರೆ, ಶೇಕಡಾ 74ರಷ್ಟು ಹೆಚ್ಚಳ ಆಗಿದೆ. ಬ್ಯಾಂಕ್ ವಂಚನೆ ಪ್ರಕರಣಗಳ ಸಂಖ್ಯೆ ಕೂಡ ಶೇಕಡ 15ರಷ್ಟು ಹೆಚ್ಚಳ ಆಗಿದೆ. ಹಿಂದಿನ ಹಣಕಾಸು ಅವಧಿಯಲ್ಲಿ 5,900 ವಂಚನೆ ಪ್ರಕರಣಗಳು ನಡೆದಿದ್ದರೆ, 2019ರ ಹಣಕಾಸು ವರ್ಷ 6,800 ಬ್ಯಾಂಕ್ ವಂಚನೆ ಪ್ರಕರಣಗಳು ಪತ್ತೆ ಆಗಿವೆ. ಬಹುತೇಕ ಪ್ರಕರಣಗಳು ಹಿಂದಿನ ವರ್ಷಗಳಲ್ಲಿ ನಡೆದಿರುವ ವ್ಯವಹಾರಗಳಾಗಿವೆ ಎಂದು ಆಗಸ್ಟ್ 29, 2019ರಂದು ಆರ್ ಬಿ ಐ ಬಿಡುಗಡೆ ಮಾಡಿದ ವರದಿ ವಿವರಿಸಿದೆ.

ವಂಚನೆ ನಡೆದಿರುವ ಮತ್ತು ಪತ್ತೆ ಆಗಿರುವ ಅವಧಿ ಸರಾಸರಿ 22 ತಿಂಗಳು

ನೂರು ಕೋಟಿ ರೂಪಾಯಿಗಿಂತ ಹೆಚ್ಚಿನ ವಂಚನೆಗಳು ನಡೆದಿರುವುದು ಮತ್ತು ಪತ್ತೆ ಆಗಿರುವ ಅವಧಿ ಸರಾಸರಿ ನಾಲ್ಕೂವರೆ ವರ್ಷಗಳು. ನೂರು ಕೋಟಿ ರೂಪಾಯಿಗಿಂತ ಹೆಚ್ಚಿನ ಮೊತ್ತ ಒಳಗೊಂಡಿರುವ 2018-19ರಲ್ಲಿ ಪತ್ತೆಯಾದ ವಂಚನೆ ಪ್ರಕರಣಗಳಲ್ಲಿ ಒಳಗೊಂಡ ಒಟ್ಟು ಹಣ 52,000 ಕೋಟಿ ರೂಪಾಯಿ.

ಸರಕಾರಿ ವಲಯದ ರಾಷ್ಟ್ರೀಯ ಬ್ಯಾಂಕುಗಳಲ್ಲೇ ಅತೀ ಹೆಚ್ಚಿನ ಪ್ರಮಾಣದ ಮತ್ತು ಹಣದ ಅವ್ಯವಹಾರ ನಡೆದಿರುವುದಶಾಗಿ ವರದಿ ಹೇಳುತ್ತದೆ. ಶೇಕಡ 90ರಷ್ಟು ವಂಚನೆಗಳು ನಡೆದಿರುವುದು ಇಂತಹ ಬ್ಯಾಂಕುಗಳಲ್ಲಿ. ಆದರೆ, ಕಳೆದ ಅವಧಿಗಿಂತ ಈ ವರ್ಷ ಖಾಸಗಿ ಬ್ಯಾಂಕುಗಳಲ್ಲಿ ವಂಚನೆ ಪ್ರಕರಣಗಳಲ್ಲಿಯೂ ಹೆಚ್ಚಳ ಆಗಿದ್ದು, ಕಳೆದ ವರ್ಷದ 2,478 ಕೋಟಿ ರೂಪಾಯಿಯ ಹೋಲಿಕೆಗೆ ಈ ಬಾರಿ 5,515 ಕೋಟಿ ರೂಪಾಯಿಯಷ್ಟು ವಂಚನೆ ಪ್ರಕರಣಗಳು ಪತ್ತೆಯಾಗಿವೆ.

ಈ ಪೈಕಿ ಸಾಲ ಪಡೆದು ವಂಚನೆ ಮಾಡಿರುವ ಪ್ರಕರಣಗಳೇ ಹೆಚ್ಚಾಗಿದ್ದು, ಕಾರ್ಡ್ ಮತ್ತು ಆನ್ ಲೈನ್ ವ್ಯವಹಾರದಲ್ಲಿ ನಡೆದ ವಂಚನೆ ಪ್ರಕರಣಗಳು ಅತ್ಯಂತ ಕಡಿಮೆಯಾಗಿದೆ. 2018-19 ಹಣಕಾಸು ವರ್ಷದಲ್ಲಿ ಕಾರ್ಡ್ ಅಥವ ಆನ್ ಲೈನ್ ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಒಟ್ಟು ಪ್ರಕರಣಗಳ ಶೇಕಡ 0.3ಕ್ಕಿಂತ ಕಡಿಮೆ. ವಂಚನೆ ಮತ್ತು ಪೋರ್ಜರಿ ಪ್ರಕರಣಗಳು ಹೆಚ್ಚಿದ್ದು, ಅವ್ಯವಹಾರ, ವ್ಯವಹಾರಿಕ ಮೋಸದ ಪ್ರಕರಣಗಳು ಅನಂತರದ ಸ್ಥಾನದಲ್ಲಿವೆ.

2009 ರಿಂದ 2019 ರ ಅವಧಿಯಲ್ಲಿ ಒಟ್ಟು 50,000 ಬ್ಯಾಂಕ್ ವಂಚನೆ ಪ್ರಕರಣಗಳು ಪತ್ತೆ ಆಗಿವೆ ಎಂದು ಈ ಹಿಂದೆ ರಿಸರ್ವ್ ಬ್ಯಾಂಕ್ ವರದಿ ತಿಳಿಸಿತ್ತು. ಖಾಸಗಿ ವಲಯದ ಐಸಿಐಸಿಐ ಬ್ಯಾಂಕಿನಲ್ಲಿ ಅತೀ ಹೆಚ್ಚು 6,811 ಅವ್ಯವಹಾರಗಳು ನಡೆದಿದ್ದು, ಒಟ್ಟು 55,033 ಕೋಟಿ ರೂಪಾಯಿ ವಂಚನೆಯಲ್ಲಿ ಒಳಗೊಂಡ ಹಣ. ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಎಸ್ ಬಿ ಐ) ಮತ್ತು ಖಾಸಗಿ ರಂಗದ ಎಚ್ ಡಿಎಫ್ ಸಿ ಬ್ಯಾಂಕುಗಳಲ್ಲಿ ಕೂಡ ಹೆಚ್ಚಿನ ಪ್ರಮಾಣದ ವಂಚನೆಗಳು ನಡೆದಿತ್ತು.

ಕಳೆದ ಹನ್ನೊಂದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ನಡೆದ ಬ್ಯಾಂಕ್ ವಂಚನೆಯ ಹಣದ ಒಟ್ಟು ಮೊತ್ತ ಎರಡು ಲಕ್ಷ ಕೋಟಿ ರೂಪಾಯಿಗಳು. 2017-18 ಹಣಕಾಸು ವರ್ಷದಲ್ಲಿ 5,916 ಪ್ರಕರಣಗಳಲ್ಲಿ 41,167 ಕೋಟಿ ರೂಪಾಯಿ ಅವ್ಯವಹಾರ ಆಗಿದ್ದರೆ, 2016-17ರಲ್ಲಿ 23,933 ಕೋಟಿ ರೂಪಾಯಿ ಅವ್ಯವಹಾರ ನಡೆದಿತ್ತು. 2015-16ರಲ್ಲಿ ಬ್ಯಾಂಕ್ ವಂಚನೆಯಲ್ಲಿ ಒಳಗೊಂಡ ಹಣದ ಮೊತ್ತ 18,455 ಕೋಟಿ ರೂಪಾಯಿ ಆಗಿತ್ತು.

2012-2013ರಲ್ಲಿ 8,590 ಕೋಟಿ ರೂಪಾಯಿ ವಂಚನೆ ಆಗಿದ್ದರೆ, 2013-14ರಲ್ಲಿ ಈ ಮೊತ್ತ 10,170 ಕೋಟಿ ರೂಪಾಯಿಗೆ ಹೆಚ್ಚಳ ಆಗಿತ್ತು. ಹೀಗೆ ಕಳೆದ ಐದಾರು ವರ್ಷಗಳಲ್ಲಿ ಬ್ಯಾಂಕ್ ವಂಚನೆ ಪ್ರಕರಣಗಳು ಹೆಚ್ಚಳ ಆಗುತ್ತಿರುವುದು ಗಮನಾರ್ಹವಾಗಿದೆ. ಆಡಳಿತ ಪಕ್ಷ ಮತ್ತದರ ಹಿಂಬಾಲಕರು ಹೇಳುತ್ತಿರುವುದಕ್ಕೂ ವಾಸ್ತವಕ್ಕೂ ಅಜಗಜಾಂತರವಿದೆ.

RS 500
RS 1500

SCAN HERE

don't miss it !

ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಗಳೂ ಶಾಲಾ ಬಸ್ ಖರೀದಿಸಬಹುದು : ರಾಜ್ಯ ಸರ್ಕಾರ ಆದೇಶ
ಕರ್ನಾಟಕ

ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಗಳೂ ಶಾಲಾ ಬಸ್ ಖರೀದಿಸಬಹುದು : ರಾಜ್ಯ ಸರ್ಕಾರ ಆದೇಶ

by ಪ್ರತಿಧ್ವನಿ
July 2, 2022
ಶಸ್ತ್ರಚಿಕಿತ್ಸೆ ಬಳಿಕ ಮೊದಲಬಾರಿ ಅಭಿಮಾನಿಗಳ ಮುಂದೆ ಬಂದ ದೂದ್ ಪೇಡ ದಿಗಂತ್
ಸಿನಿಮಾ

ಶಸ್ತ್ರಚಿಕಿತ್ಸೆ ಬಳಿಕ ಮೊದಲಬಾರಿ ಅಭಿಮಾನಿಗಳ ಮುಂದೆ ಬಂದ ದೂದ್ ಪೇಡ ದಿಗಂತ್

by ಪ್ರತಿಧ್ವನಿ
July 3, 2022
‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?
ದೇಶ

‘ಬುಲ್ಲಿ ಬಾಯ್’ ಆ್ಯಪ್ ಸೃಷ್ಟಿಕರ್ತರಿಗೆ ಜಾಮೀನು: ಮಹಿಳೆಯರ ವಿರುದ್ಧದ ಹಿಂಸೆಯನ್ನು ಸಾಮಾನ್ಯೀಕರಿಸುವುದರ ಅಪಾಯವೆಷ್ಟು?

by ಪ್ರತಿಧ್ವನಿ
June 29, 2022
ಇಂಗ್ಲೆಂಡ್‌ ಟೆಸ್ಟ್‌ ನಿಂದ ರೋಹಿತ್‌ ಶರ್ಮ ಔಟ್:‌ ಜಸ್‌ ಪ್ರೀತ್‌ ಬುಮ್ರಾ ನಾಯಕ!
ಕ್ರೀಡೆ

ಇಂಗ್ಲೆಂಡ್‌ ಟೆಸ್ಟ್‌ ನಿಂದ ರೋಹಿತ್‌ ಶರ್ಮ ಔಟ್:‌ ಜಸ್‌ ಪ್ರೀತ್‌ ಬುಮ್ರಾ ನಾಯಕ!

by ಪ್ರತಿಧ್ವನಿ
June 29, 2022
ಜಮ್ಮು-ಕಾಶ್ಮೀರ; ಇಬ್ಬರು ಉಗ್ರರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು
ದೇಶ

ಜಮ್ಮು-ಕಾಶ್ಮೀರ; ಇಬ್ಬರು ಉಗ್ರರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

by ಪ್ರತಿಧ್ವನಿ
July 3, 2022
Next Post
ಬಿಜೆಪಿ ಅಸಮಾಧಾನಿತರನ್ನು ತಣ್ಣಗಾಗಿಸಿದರೇ ಜೆಡಿಎಸ್ ಶಾಸಕರು?

ಬಿಜೆಪಿ ಅಸಮಾಧಾನಿತರನ್ನು ತಣ್ಣಗಾಗಿಸಿದರೇ ಜೆಡಿಎಸ್ ಶಾಸಕರು?

1 ತಿಂಗಳಲ್ಲಿ 19 ಕೆರೆ ಮರು ನಿರ್ಮಾಣ ಯೋಜನೆ ಮಾಡಿ: ಬಿಬಿಎಂಪಿಗೆ ಹೈಕೋರ್ಟ್ 

1 ತಿಂಗಳಲ್ಲಿ 19 ಕೆರೆ ಮರು ನಿರ್ಮಾಣ ಯೋಜನೆ ಮಾಡಿ: ಬಿಬಿಎಂಪಿಗೆ ಹೈಕೋರ್ಟ್ 

ಆಶ್ಲೇಷ ಮಳೆಗೆ ಬಲಿಯಾದ ಹೆಗಲತ್ತಿ ಕಾನೂರಿನ ಅರಣ್ಯ ರೋಧನ

ಆಶ್ಲೇಷ ಮಳೆಗೆ ಬಲಿಯಾದ ಹೆಗಲತ್ತಿ ಕಾನೂರಿನ ಅರಣ್ಯ ರೋಧನ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist