Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಪ್ರಮೋದ್ ಮಧ್ವರಾಜ್, ರಘುಪತಿ ಭಟ್ ಭಾಷೆ ಬಗ್ಗೆ ಮನೋವೈದ್ಯರೊಬ್ಬರ ಟಿಪ್ಪಣಿ

ಉಡುಪಿಯ ಮಾಜಿ ಮತ್ತು ಹಾಲಿ ಶಾಸಕರ ನಡುವಿನ ಟ್ವಿಟರ್ ಕದನದಲ್ಲಿ ಬಳಕೆಯಾದ ಭಾಷೆ ಮನೋವೈದ್ಯರ ಗಮನಕ್ಕೆ ಬಂದಿದ್ದು...
ಪ್ರಮೋದ್ ಮಧ್ವರಾಜ್
Pratidhvani Dhvani

Pratidhvani Dhvani

May 4, 2019
Share on FacebookShare on Twitter

ಉಡುಪಿಯಲ್ಲಿ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ನಡುವೆ ಟ್ವಿಟ್ಟರ್ ಕಾಳಗವೊಂದನ್ನು ನೋಡಿದೆ. ನಾಲ್ಕೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದ ‘ಸುವರ್ಣ ತ್ರಿಭುಜ’ ಎಂಬ ಹೆಸರಿನ ಮೀನುಗಾರಿಕಾ ದೋಣಿಯ ಅವಶೇಷ ದೊರೆತ ಬಗ್ಗೆ ಮಾಜಿ ಶಾಸಕರು ಹಾಗೂ ಈ ಬಾರಿಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ಭಾರತದ ನೌಕಾಪಡೆಯನ್ನು ‘ಕೊಲೆಗಡುಕರು’ ಅನ್ನುವ ಅರ್ಥದಲ್ಲಿ ಬರೆದರೆ, ಇನ್ನೊಬ್ಬರು ‘ಎಂ.ಪಿ’ (ಮೈತ್ರಿ ಅಭ್ಯರ್ಥಿ ಎಂಪಿ ಆಕಾಂಕ್ಷಿ ಎಂಬರ್ಥದಲ್ಲೋ ಏನೋ) ಅಂದರೆ ಮಂಡೆ ಪೆಟ್ಟು’ ಎಂದು ಬರೆದಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

PSI ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ವಿಧಾನಸಭೆಗೆ ಸುಳ್ಳು ಹೇಳಿದ ಸಿಎಂ, ಮಂತ್ರಿಯನ್ನು ವಜಾಮಾಡಿ : ಸಿದ್ದರಾಮಯ್ಯ

ಡೊಲೊ 650 ಕಂಪನಿ ಬೆಂಗಳೂರು ಕಚೇರಿ ಸೇರಿ 40 ಕಡೆ ಐಟಿ ದಾಳಿ!

ಕೆಲವು ಪೋಸ್ಟ್‌ಗಳು, ಖಾತೆಗಳನ್ನು ನಿರ್ಬಂಧಿಸಿ: ಕೇಂದ್ರ ಆದೇಶದ ವಿರುದ್ಧ ಕೋರ್ಟ್ ಮೊರೆ ಹೋದ ಟ್ವಿಟರ್!

ಒಬ್ಬ ಮನೋವೈದ್ಯನಾಗಿ ನನಗೆ ಈ ಇಬ್ಬರ ಭಾಷೆಯ ಬಗ್ಗೆಯೇ ಸ್ವಲ್ಪ ಬೇಸರ. ಜನರನ್ನು ಮುನ್ನಡೆಸಬೇಕಾದವರು ಈ ರೀತಿಯಾಗಿ ಜಗಳ ಮಾಡಿಕೊಂಡು ಕೂತರೆ ಹೇಗೆ? ಎಲ್ಲದಕ್ಕಿಂತ ಹೆಚ್ಚಾಗಿ ಈ ‘ಮಂಡೆ ಪೆಟ್ಟು’ ಎಂಬ ಪದದ ಬಗ್ಗೆ ನನ್ನ ಕೆಲವು ಯೋಚನೆಗಳು.

‘ಮಂಡೆ ಪೆಟ್ಟು’ ಎಂಬ ಈ ಶಬ್ದ ಉಡುಪಿ-ದಕ್ಷಿಣ ಕನ್ನಡದಲ್ಲಿ ಬಹಳ ಪ್ರಚಲಿತ. ಬೆಂಗಳೂರಿನಲ್ಲಿ ‘ಮೆಂಟಲ್’ ಅಂದ ಹಾಗೆ, ಮುಂಬಯಿಯಲ್ಲಿ ‘ಸೈಕೋ’ ಅಂದಹಾಗೆ. ಇವೆಲ್ಲ ಸಾಲದು ಅನ್ನುವಾಗ, ‘ಮೆಂಟಲ್ ಹೇ ಕ್ಯಾ’ ಅನ್ನುವ ಚಲನಚಿತ್ರ ಬೇರೆ ಬರುತ್ತಿದೆ!

ಜನಸಾಮಾನ್ಯರು ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ, ಈ ‘ಮೆಂಟಲ್’ ಅನ್ನುವ ಶಬ್ದ ಮಾನಸಿಕ ಅಸ್ವಸ್ಥತೆಯನ್ನು ಬಣ್ಣಿಸಲು ನಮ್ಮ ಸ್ವಸ್ಥ (?) ಸಮಾಜ ಉಪಯೋಗಿಸುತ್ತಿರುವ ಶಬ್ದ. ಇಚ್ಛಿತ ಚಿತ್ತವಿಕಲತೆ (ಸ್ಕಿಜೋಫ್ರೇನಿಯಾ) ಎಂಬ ಕಾಯಿಲೆ, ಬೈಪೋಲಾರ್ ಕಾಯಿಲೆ, ತೀವ್ರ ಖಿನ್ನತೆ ಮುಂತಾದ ಕಾಯಿಲೆಗಳು ನಮ್ಮ ಮಿದುಳಿನ ನರವಾಹಕಗಳಲ್ಲಿ ಉಂಟಾಗುವ ತೊಂದರೆಯಿಂದ ಬರುವ ಸಮಸ್ಯೆಗಳು. ಈ ಕಾಯಿಲೆ ಇರುವವರು ರಕ್ತದೊತ್ತಡ (ಬಿಪಿ), ಸಕ್ಕರೆ ಕಾಯಿಲೆ ಇರುವವರು ಹೇಗೆ ಸಮಾಜದಲ್ಲಿ ತೊಡಕಿಲ್ಲದೆ ಬದುಕುತ್ತಾರೋ ಹಾಗೆಯೇ ಬದುಕುತ್ತಿದ್ದಾರೆ. ಇದನ್ನು ಜನಸಾಮಾನ್ಯರು ತಿಳಿದುಕೊಳ್ಳಬೇಕು. ನಮ್ಮ ನಾಯಕರಂತೂ ಇದರ ಬಗ್ಗೆ ಸ್ವಲ್ಪವಾದರೂ ತಲೆಕೆಡಿಸಿಕೊಳ್ಳುವುದು ತೀರಾ ಅಗತ್ಯ.

ಮಾನಸಿಕ ಕಾಯಿಲೆ ಇರುವವರನ್ನು ಕಡೆಗಣಿಸಿ ಮಾತನಾಡುವುದು ಅಥವಾ ತಮ್ಮ ಭಾಷೆಯಲ್ಲಿ ‘ಮೆಂಟಲ್’, ‘ಮಂಡೆ ಪೆಟ್ಟು’, ‘ಸೈಕೋ’ ಮುಂತಾದ ಶಬ್ದಗಳ ಉಪಯೋಗ ನಾಗರಿಕ ಸಮಾಜಕ್ಕೆ ಶೋಭೆ ತರುವ ವಿಚಾರವಲ್ಲ. ಸ್ಕಿಜೋಫ್ರೆನಿಯಾ ಕಾಯಿಲೆಯಿಂದ ಬಳಲುತ್ತಿದ್ದ ಜಾನ್ ನ್ಯಾಶ್, ನೊಬೆಲ್ ಬಹುಮಾನವನ್ನು ಪಡೆದದ್ದು ಎಲ್ಲರಿಗೂ ಗೊತ್ತೇ ಇದೆ. ಆತನ ಜೀವನದ ಬಗ್ಗೆ ‘A Beautiful Mind’ ಎಂಬ ಒಂದು ಚಲನಚಿತ್ರವೇ ಬಂದಿದೆ. ಮಾನಸಿಕ ಕಾಯಿಲೆಯ ಮಾತ್ರೆಗಳನ್ನು ತೆಗೆದುಕೊಂಡಾಗ ಆತ ಹೇಗೆ ಇದ್ದ, ಮಾತ್ರೆಗಳನ್ನು ಬಿಟ್ಟಾಗ ಆತನ ಜೀವನದಲ್ಲಿ ಏನೆಲ್ಲ ಆಯಿತು ಎಂಬುದರ ಬಗ್ಗೆ ಈ ಜೀವನ ವೃತ್ತಾಂತ ಸಾಕಷ್ಟು ಹೇಳುತ್ತದೆ. ಇದನ್ನು ಏಕೆ ಉಲ್ಲೇಖಿಸುತ್ತಿದ್ದೇನೆ ಎಂದರೆ, ‘ಮೆಂಟಲ್ ಹೇ ಕ್ಯಾ’ ಎಂಬ ಹೆಸರಿನ ಸಿನಿಮಾ ಬರುತ್ತಿರುವುದು ನಿಜಕ್ಕೂ ದುರದೃಷ್ಟಕರ.

ಪ್ರಮೋದ್ ಮಧ್ವರಾಜ್ ಮತ್ತು ರಘುಪತಿ ಭಟ್ ವಾಕ್ಸಮರ

ಸಾರ್ವಜನಿಕ ಜೀವನದಲ್ಲಿ ಬದುಕುವ ಜನನಾಯಕರುಗಳಾದ ಸಿದ್ದರಾಮಯ್ಯ ಇನ್ನೊಬ್ಬ ಪ್ರತಿಪಕ್ಷದ ಜನನಾಯಕರಿಗೆ ‘ಹುಚ್ಚು ಹಿಡಿದಿದೆ’ ಅನ್ನುವುದು ಅಥವಾ ಉಡುಪಿಯ ಶಾಸಕರು ಇನ್ನೊಬ್ಬರಿಗೆ ‘ಮಂಡೆ ಪೆಟ್ಟು’ ಎನ್ನುವುದು, ರಾಜಕೀಯ ಪಕ್ಷದ ಕಾರ್ಯಕರ್ತರು ಕೆಲವೊಮ್ಮೆ ತಮ್ಮ ವಿರೋಧಿಗಳನ್ನು ‘ನಿಮ್ಹಾನ್ಸ್‌ಗೆ ಸೇರಿಸಬೇಕು’ ಅನ್ನುವುದು ಮಾನಸಿಕ ಕಾಯಿಲೆಯ ಬಗ್ಗೆ ಬಹಳ ಹಗುರವಾದ ಮಾತು ಅಂತ ಅನ್ನಿಸುತ್ತದೆ. ಹಾಗಾಗಿ ಜನಸಾಮಾನ್ಯರಿಗೆ ಈ ಕೆಳಗಿನ ವಿಷಯಗಳನ್ನು ತಿಳಿಹೇಳಬಯಸುತ್ತೇನೆ.

ಬಿ.ಪಿ, ಸಕ್ಕರೆ ಕಾಯಿಲೆ ಹೇಗೆ ದೇಹದ ಕೆಲವು ರಸದೂತಗಳ ಅಸಮತೋಲನದಿಂದ ಬರುತ್ತದೆಯೋ ಹಾಗೆಯೇ ಮೆದುಳಿನ ನರವಾಹಕಗಳಲ್ಲಿ ಬದಲಾವಣೆಗಳಿಂದ ಮಾನಸಿಕ ಕಾಯಿಲೆಗಳು ಬರುತ್ತವೆ. ಬಿಪಿ, ಸಕ್ಕರೆ ಕಾಯಿಲೆಗೆ ಹೇಗೆ ಚಿಕಿತ್ಸೆ ಇದೆಯೋ ಹಾಗೆಯೇ ಮಾನಸಿಕ ಕಾಯಿಲೆಗಳಿಗೂ ಚಿಕಿತ್ಸೆ ಇದೆ. ಮಾನಸಿಕ ಕಾಯಿಲೆ ಇರುವವರು ಕೂಡ ಸಮಾಜದಲ್ಲಿ ಸಾಕಷ್ಟು ಜವಾಬ್ದಾರಿಯುತ ಸ್ಥಾನಗಳನ್ನು ವಹಿಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಮಾನಸಿಕ ಕಾಯಿಲೆಗಳ ಬಗ್ಗೆ ಹಗುರವಾದ ಮಾತುಗಳನ್ನು ಸಮಾಜದಲ್ಲಿ ತೇಲಿಬಿಟ್ಟರೆ ಹಲವರು ಮನೋರೋಗ ತಜ್ಞರಲ್ಲಿ ಚಿಕಿತ್ಸೆ ಪಡೆಯಲು ಹೆದರುತ್ತಾರೆ, ಹಿಂಜರಿಯುತ್ತಾರೆ. ಕಾಯಿಲೆಗೆ ಬೇಗ ಚಿಕಿತ್ಸೆ ಸಿಗದಿದ್ದರೆ ಆ ಕಾಯಿಲೆ ದೀರ್ಘಕಾಲ ಉಳಿಯಬಹುದು.

ಇಷ್ಟೆಲ್ಲ ಬರೆಯುವಾಗ ನನ್ನ ನೆನಪಿಗೆ ಬರುವುದು, ಉಡುಪಿ ಸಮೀಪದ ಬ್ರಹ್ಮಾವರ ಎಂಬ ಊರಿನಲ್ಲಿ ಪ್ರತಿ ತಿಂಗಳು ನಾವು ನಡೆಸುವ ಉಚಿತ ಮಾನಸಿಕ ಆರೋಗ್ಯ ಶಿಬಿರದ ಒಂದು ಘಟನೆ. ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧೆಯೊಬ್ಬರು ಒಂದು ವೃದ್ಧಾಶ್ರಮದಲ್ಲಿ ಜೀವನ ಮಾಡುತ್ತಾರೆ. ಅಲ್ಲಿ ಇನ್ನೂ ಇಬ್ಬರು ವೃದ್ಧರನ್ನು ಅವರು ನೋಡಿಕೊಳ್ಳುತ್ತಾರೆ. ಹಾಗೆಯೇ, ಕ್ರೋಶ ನೀಡಲ್‌ಗಳಿಂದ ಸ್ವೆಟ್ಟರ್, ಫೋನ್ ಕವರ್ ಹೊಲಿದು ಮಾರುತ್ತಾರೆ. ತನ್ನ ಕಾಲುಗಳ ಮೇಲೆ ತಾನು ನಿಂತಿದ್ದಾರೆ.

ಆದ್ದರಿಂದ, ಜನಪ್ರತಿನಿಧಿಗಳೇ, ದಯವಿಟ್ಟು ನೀವು ಮಾತನಾಡುವಾಗ ಸ್ವಲ್ಪ ಯೋಚನೆ ಮಾಡಿ ಮಾತನಾಡಿ. ಜನಸಾಮಾನ್ಯರೇ, ನೀವು ಕೂಡ ತಿಳಿದುಕೊಳ್ಳಿ- ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಇದೆ.

ಲೇಖಕರು ಮನೋವೈದ್ಯರು

RS 500
RS 1500

SCAN HERE

don't miss it !

ನಮ್ಮ ಕ್ಷೇತ್ರ ಎಂದು ಮೆರೆಯುತ್ತಿದ್ದ ಬಿಜೆಪಿ, ಜೆಡಿಎಸ್‌ ಭದ್ರಕೋಟೆಯನ್ನು ಕಸಿದುಕೊಂಡಿದ್ದೇವೆ : ಸಿದ್ದರಾಮಯ್ಯ
ಕರ್ನಾಟಕ

PSI ಹಗರಣದಲ್ಲಿ ಇಡೀ ಸರ್ಕಾರವೇ ಭಾಗಿ : ಸಿಎಂ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿದ ಸಿದ್ದರಾಮಯ್ಯ

by ಪ್ರತಿಧ್ವನಿ
July 5, 2022
ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಆದೇಶ ಹೊರಡಿಸಿದ ಅಖಿಲೇಶ್ ಯಾದವ್
ದೇಶ

ಪಕ್ಷದ ಎಲ್ಲಾ ಘಟಕಗಳನ್ನು ವಿಸರ್ಜಿಸಿ ಆದೇಶ ಹೊರಡಿಸಿದ ಅಖಿಲೇಶ್ ಯಾದವ್

by ಪ್ರತಿಧ್ವನಿ
July 3, 2022
ಶಾಸಕ ಜಮೀರ್ ಅಹಮ್ಮದ್ ಮೇಲೆ ACB ದಾಳಿ : ನ್ಯಾಷನಲ್ ಟ್ರಾವೆಲ್ಸ್ ಕಚೇರಿಯಲ್ಲಿ ಶೋಧ !
ಇದೀಗ

ಶಾಸಕ ಜಮೀರ್ ಅಹಮ್ಮದ್ ಮೇಲೆ ACB ದಾಳಿ : ನ್ಯಾಷನಲ್ ಟ್ರಾವೆಲ್ಸ್ ಕಚೇರಿಯಲ್ಲಿ ಶೋಧ !

by ಪ್ರತಿಧ್ವನಿ
July 5, 2022
ಹಿಂದುತ್ವದ ಭ್ರಮೆ ಬಿತ್ತುವ ಮೂಲಕ ರಾಜಕೀಯದಲ್ಲಿ ಧರ್ಮದ ದುರ್ಬಳಕೆ
ಅಭಿಮತ

ಹಿಂದುತ್ವದ ಭ್ರಮೆ ಬಿತ್ತುವ ಮೂಲಕ ರಾಜಕೀಯದಲ್ಲಿ ಧರ್ಮದ ದುರ್ಬಳಕೆ

by ಡಾ | ಜೆ.ಎಸ್ ಪಾಟೀಲ
July 6, 2022
ಗುವಾಹಟಿಯಿಂದ ಮುಂಬೈಗೆ ಮರಳಿದ ಶಿವಸೇನೆ ಬಂಡಾಯ ಶಾಸಕರು!
ದೇಶ

ಸಂಪುಟ ಸಭೆಯಲ್ಲಿ ಅಗಲಿದ ಮಕ್ಕಳನ್ನು ನೆನೆದು ಕಣ್ಣೀರಿಟ್ಟ ಸಿಎಂ ಏಕನಾಥ್ ಶಿಂಧೆ

by ಪ್ರತಿಧ್ವನಿ
July 5, 2022
Next Post
ಪ್ರತಿಧ್ವನಿಯ ಟಾಪ್ 10 ವಿಶ್ಲೇಷಣೆಗಳು  

ಪ್ರತಿಧ್ವನಿಯ ಟಾಪ್ 10 ವಿಶ್ಲೇಷಣೆಗಳು  

ಟಿಡಿಆರ್: ತನಿಖೆ ಆಗಲಿರುವ 20 ಪ್ರಕರಣಗಳ ಅವ್ಯವಹಾರ ಬರೋಬ್ಬರಿ 700 ಕೋಟಿ ರೂ.

ಟಿಡಿಆರ್: ತನಿಖೆ ಆಗಲಿರುವ 20 ಪ್ರಕರಣಗಳ ಅವ್ಯವಹಾರ ಬರೋಬ್ಬರಿ 700 ಕೋಟಿ ರೂ.

ತನಿಖಾ ಪತ್ರಕರ್ತ ಅಸಾಂಜ್ ವಿರುದ್ಧ ವಿಶ್ವ ಪಿತೂರಿ

ತನಿಖಾ ಪತ್ರಕರ್ತ ಅಸಾಂಜ್ ವಿರುದ್ಧ ವಿಶ್ವ ಪಿತೂರಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist