Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಪಿಸ್ತೂಲ್ ಹಿಡಿದ ಪಾತಕಿಯನ್ನು ಲಾಠಿಯಲ್ಲೇ ಎದುರಿಸಿದ ಈ ಪೊಲೀಸಪ್ಪನ ಶೌರ್ಯಕ್ಕೊಂದು ಮೆಚ್ಚುಗೆ ಇರಲಿ

ಪಿಸ್ತೂಲ್ ಹಿಡಿದ ಪಾತಕಿಯನ್ನು ಲಾಠಿಯಲ್ಲೇ ಎದುರಿಸಿದ ಈ ಪೊಲೀಸಪ್ಪನ ಶೌರ್ಯಕ್ಕೊಂದು ಮೆಚ್ಚುಗೆ ಇರಲಿ
ಪಿಸ್ತೂಲ್ ಹಿಡಿದ ಪಾತಕಿಯನ್ನು ಲಾಠಿಯಲ್ಲೇ ಎದುರಿಸಿದ ಈ ಪೊಲೀಸಪ್ಪನ ಶೌರ್ಯಕ್ಕೊಂದು ಮೆಚ್ಚುಗೆ ಇರಲಿ

February 27, 2020
Share on FacebookShare on Twitter

ಲಾಠಿ ಹಿಡಿದ ಪೊಲೀಸಪ್ಪ ಏನು ತಾನೇ ಮಾಡಬಲ್ಲ ಎಂಬ ತಾತ್ಸಾರದ ಮಾತುಗಳನ್ನಾಡುವ ಸಾಕಷ್ಟು ಮಂದಿಯನ್ನು ನಮ್ಮ ಸುತ್ತ ದಿನಬೆಳಗಾದರೆ ನೋಡುತ್ತಲೇ ಇರುತ್ತೇವೆ. ನಮ್ಮ ಪೊಲೀಸ್ ವ್ಯವಸ್ಥೆಯೂ ಹಾಗೇ ಇದೆ ಬಿಡಿ.

ಹೆಚ್ಚು ಓದಿದ ಸ್ಟೋರಿಗಳು

ಬಿರುಗಾಳಿಯಾಗಿರುವ ರಾಹುಲ್ ಗಾಂಧಿ ಸುನಾಮಿ ಆಗುಬಲ್ಲರೆ?

ಯಾರಾದರೂ ಒಳಗೆ ಬಂದರೆ ಅಟ್ಟಾಡಿಸಿ ಹೊಡಿರಿ, ಮಿಕ್ಕಿದ್ದು ನಾನು ನೋಡಿಕೊಳ್ಳುತ್ತೇನೆ’ : ಸಚಿವ ಮುನಿರತ್ನ ವಿವಾದಾತ್ಮಕ ಹೇಳಿಕೆ

ನಂದಿನಿ ಮೊಸರು ಪ್ಯಾಕೆಟ್‌ ಮೇಲೆ ‘ದಹಿ’ ಮುದ್ರಣ ಆದೇಶ ಹಿಂಪಡೆದ FSSAI.. ಕನ್ನಡಿಗರು ಟೀಕೆ ಬೆನ್ನಲ್ಲೇ ನಿರ್ಧಾರ..!

ಪ್ರಥಮ ವಿಶ್ವ ಮಹಾಯುದ್ಧದ ಕಾಲದ ಆಂಟಿಕ್‌ ಪೀಸ್‌ಗಳಾದ 0.302 ರೈಫಲ್‌ಗಳನ್ನೇ ಇನ್ನೂ ಪೊಲೀಸ್‌ ಸ್ಟೇಷನ್‌ಗಳಲ್ಲಿ ಸ್ಟಾಂಡರ್ಡ್ ವೆಪನ್ ಆಗಿಟ್ಟುಕೊಂಡಿರುವುದಲ್ಲದೇ, ಈ ಪೊಲೀಸ್ ಪೇದೆಗಳನ್ನು ವಿಐಪಿಗಳ ಕಾವಲಿಗೆ ಸೀಮಿತ ಮಾಡಿಕೊಂಡಿರುವ ನಮ್ಮದೇ ವ್ಯವಸ್ಥೆಯ ಸೀಮಿತತೆಗಳನ್ನೂ ಮೀರಿ ಅಪ್ರತಿಮ ಸಾಧನೆಗಳು ಮಾಡಿದ್ದ ಅದೆಷ್ಟೋ ಪೊಲೀಸಪ್ಪಂದಿರು ಇತಿಹಾಸ ಪುಟಗಳಲ್ಲಿ ತಮ್ಮ ಶೌರ್ಯದ ಗಾಥೆಗಳನ್ನು ಸುವರ್ಣಾಕ್ಷರಗಳಲ್ಲಿ ಬರೆದು ಹೋಗಿದ್ದಾರೆ.

2008ರ 26/11 ಮುಂಬಯಿ ದಾಳಿ ಸಂದರ್ಭದಲ್ಲಿ ಜೀವಂತ ಸೆರೆ ಹಿಡಿಯಲಾದ ಪಾಕಿಸ್ತಾನದ ಭಯೋತ್ಪಾದ ಅಜ್ಮಲ್ ಕಸಬ್‌ನನ್ನು ಹಿಡಿದುಕೊಟ್ಟಿದ್ದು ಯಾರು ಗೊತ್ತೇ? ತುಕಾರಾಂ ಒಂಬ್ಳೆ ಎಂಬ ಮುಖ್ಯ ಪೇದೆ… ಅದೂ ಕೈಯಲ್ಲಿ ಲಾಠಿ ಹಿಡಿದುಕೊಂಡು, AK-47 ಸಜ್ಜಿತ ಕಸಾಬ್‌ ತನ್ನ ಮೇಲೆ ಗುಂಡಿನ ಮಳೆಗರೆದರೂ ಸಹ, ಆತನ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದುಕೊಂಡು, ತನ್ನ ಸಹೋದ್ಯೋಗಿಗಳ ಪ್ರಾಣಕ್ಕೆ ಸಂಚಕಾರ ಬಾರದಂತೆ ಮಾಡಿದ ಒಂಬ್ಳೆ ಸಾಹಸ ನಿಜಕ್ಕೂ ಅಪ್ರತಿಮವಾದದು.

ಅಂತಹ ಧೀರರನ್ನು ಕಂಡ ಈ ದೇಶದಲ್ಲಿ, ಪ್ರಜೆಗಳು ಹಾಗೂ ಸಹೋದ್ಯೋಗಿಗಳ ಜೀವಗಳಿಗೆ ಮೊದಲ ಆದ್ಯತೆ ಕೊಟ್ಟು, ತಮ್ಮದೇ ಪ್ರಾಣವನ್ನು ಒತ್ತೆ ಇಟ್ಟು ಹೋರಾಡುವ ಧೀರ ಪೇದೆಗಳ ಸಾಲಿಗೆ ಸೇರಿಕೊಂಡಿರುವ ಮತ್ತೊಂದು ಹೆಸರು ಈ ದೀಪಕ್ ದಹಿಯಾ.

ಪೌರತ್ವ ತಿದ್ದುಪಡಿ ಕಾಯಿದೆ (CAA) ವಿರೋಧಿ ಪ್ರತಿಭಟನೆ ವೇಳೆ ಈಶಾನ್ಯದ ದೆಹಲಿಯ ಜಫರಾಬಾದ್‌ನಲ್ಲಿ ಪಿಸ್ತೂಲ್ ಹಿಡಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಲು ಬಂದ ಪಾತಕಿಯನ್ನು ಬರೀ ಲಾಠಿಯಲ್ಲಿ ಇದ್ದ ಪೊಲೀಸ್ ಸಿಬ್ಬಂದಿಯೊಬ್ಬರು ದಿಟ್ಟವಾಗಿ ಎದುರಿಸುತ್ತಿದ್ದ ಚಿತ್ರವೊಂದು ವೈರಲ್ ಆಗಿದ್ದು, ದೇಶವಾಸಿಗಳು ಆ ದಿಟ್ಟತನಕ್ಕೆ ಸಲ್ಯೂಟ್ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಪೊಲೀಸ್‌ ಸಿಬ್ಬಂದಿಯತ್ತ ಪಾತಕಿ ಶಾಹ್‌ರುಖ್‌ ಪಿಸ್ತೂಲ್ ತೋರುತ್ತಾ ನಿಂತಿದ್ದು, ಇದಕ್ಕೆ ಬೆದರದ ಪೊಲೀಸ್‌ ಪೇದೆ ದೀಪಕ್ ದಹಿಯಾ ಒಂಚೂರೂ ಅಲುಗಾಡದೇ, ಆ ಪಾತಕಿಯ ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ.

ಪೊಲೀಸ್ ಇಲಾಖೆಗೆ ತನ್ನ ಮಕ್ಕಳನ್ನು ತಲೆಮಾರುಗಳಿಂದ ಕಳುಹಿಸುತ್ತಲೇ ಇರುವ ಕುಟುಂಬದಿಂದ ಬಂದ ದಹಿಯಾ, “ಇಂಥ ಪರಿಸ್ಥಿತಿಗಳನ್ನು ಎದುರಿಸಲು ಪೊಲೀಸರಿಗೆ ತರಬೇತಿ ಕೊಡಲಾಗುತ್ತದೆ. ತನ್ನ ಜೀವಕ್ಕಿಂತಲೂ ನಾಗರೀಕರ ಜೀವಗಳನ್ನು ಮೊದಲು ಎನ್ನುವ ರೀತಿಯಲ್ಲಿ ಇವರಿಗೆ ತರಬೇತಿ ಕೊಡಲಾಗುತ್ತದೆ,” ಎಂದು ಹೇಳುತ್ತಾರೆ.

ಮೌಜ್ಪುರ ಚೌಕದಲ್ಲಿ ತಾವು ಎದುರಿಸಿದ ಆ ಕ್ಷಣಗಳ ಬಗ್ಗೆ ದಹಿಯಾ ಹೇಳುವುದು ಹೀಗೆ — “ಆತನ ಗಮನವನ್ನು ಬೇರೆಡೆ ಸೆಳೆಯಲು ನಾನು ಅವನತ್ತ ಹೋದೆ. ಆತನ ಹಾದಿಯಲ್ಲಿ ಬೇರೆ ಯಾರನ್ನೂ ಹತ್ತಿರ ಬರಲು ಬಿಡಲು ಸಾಧ್ಯವಿರಲಿಲ್ಲ. ಯಾರಿಗೂ ಗಾಯಗಳಾಗದಂತೆ ನೋಡಿಕೊಳ್ಳುವುದು ನನ್ನ ಪ್ರಾಶಸ್ತ್ಯವಾಗಿತ್ತು. ಇದು ನನ್ನ ಕರ್ತವ್ಯ ಮತ್ತು ನಾನು ಅದನ್ನೇ ಮಾಡುತ್ತಿದ್ದೆ.”

ಪ್ರತಿಭಟನೆಗಳು ತೀವ್ರ ಹಿಂಸಾಚಾರಕ್ಕೆ ತಿರುಗಿದವು ಎಂದ ಈ ಮುಖ್ಯ ಪೇದೆ, “ಜನರು ಒಬ್ಬರಿಗೊಬ್ಬರು ಕಲ್ಲು ಎಸೆದುಕೊಳ್ಳಲು ಆರಂಭಿಸಿದ್ದರು. ಗಲಭೆ ನಡೆಯುತ್ತಿದ್ದ ಜಾಗದತ್ತ ನಾನು ಹೋಗುತ್ತಿದ್ದಂತೆ , ಗನ್‌ ಶಾಟ್‌ ಸದ್ದು ಕೇಳಿತು. ಕೆಂಪು ಬಣ್ಣದ ಶರ್ಟ್‌ನಲ್ಲಿದ್ದ ವ್ಯಕ್ತಿಯೊಬ್ಬನನ್ನು ನೋಡಿದೆ. ಅವನು ಪಿಸ್ತೂಲ್ ಹೊಂದಿದ್ದ. ಆತನ ಗಮನವನ್ನು ಬೇರೆಡೆ ಸೆಳೆಯಲು ನಾನು ತಕ್ಷಣ ಅಲ್ಲಿಗೆ ಹೋದೆ,” ಎನ್ನುತ್ತಾರೆ.

ಖುದ್ದು ದಹಿಯಾ ಹೇಳುವ ಪ್ರಕಾರ, ಮೊನ್ನಿನ ಘಟನೆಯ ಬಗ್ಗೆ ಹರಿಯಾಣಾದಲ್ಲಿರುವ ಅವರ ಕುಟುಂಬಕ್ಕೆ ಏನೂ ತಿಳಿದಿಲ್ಲ.ಈ ಬಗ್ಗೆ ತಮ್ಮ ಕುಟುಂಬದ ಬಳಿ ಏನೂ ಹೇಳದಿರಲು ಅವರು ನಿರ್ಧರಿಸಿದ್ದಾರೆ. ಆದರೆ, ಪ್ರತಿಷ್ಠಿತ ಪತ್ರಿಕೆಯೊಂದರ ವರದಿಯಿಂದಾಗಿ ಅವರ ಕುಟುಂಬಕ್ಕೆ ಈ ವಿಚಾರ ತಿಳಿದುಬಿಟ್ಟಿದೆ. ಈ ಚಿತ್ರದಲ್ಲಿ ದಹಿಯಾ ಮುಖ ಕಾಣದೇ ಇದ್ದರೂ ಸಹ ಅವರು ಧರಿಸಿದ್ದ ಬ್ಲೂ ಸ್ಟ್ರೈಪ್‌ ಇದ್ದ ಜಾಕೆಟ್‌ ಅವರ ಪತ್ನಿಯ ಗಮನ ಸೆಳೆದಿದ್ದು, ಅದರಿಂದ ಸಂಗತಿ ಇನ್ನಷ್ಟು ಸ್ಪಷ್ಟವಾಗಿದೆ.

“ಬಹಳ ಚಿಂತಿತಳಾಗಿದ್ದ ನನ್ನ ಪತ್ನಿ ಕರೆ ಮಾಡಿದ್ದಳು. ಆಕೆಯ ಪ್ರಶ್ನೆಗಳಿಗೆ ಹಾರಿಕೆ ಉತ್ತರ ಕೊಟ್ಟು ಆಕೆಯ ಗಮನ ಬೇರೆಡೆ ಸೆಳೆಯಲು ಯತ್ನಿಸಿದೆ. ನನ್ನ ಮುಖವು ಪೇಪರ್‌ಗಳಲ್ಲಿ ಒಂದ ಚಿತ್ರಗಳಲ್ಲಿ ಕಾಣದೇ ಇದ್ದರೂ ಸಹ ನಾನು ಧರಿಸಿದ್ದ ನೀಲಿ ಬಣ್ಣದ ಅಂಗಿಯಿಂದ ಆಕೆ ನನ್ನ ಗುರುತು ಹಿಡಿದಿದ್ದಾಳೆ. ನನ್ನ ಮೇಲೆ ಆಕೆಗೆ ಪೂರ್ಣ ನಂಬಿಕೆ ಇರುವ ಕಾರಣ ನಾನು ಸುಮ್ಮನೇ ಆದೆ,” ಎಂದು ತಮ್ಮ ಪತ್ನಿ ಪಟ್ಟ ಪಾಡನ್ನು ವಿವರಿಸುತ್ತಾರೆ ದಹಿಯಾ.

”ಗಲಾಟೆಯಲ್ಲಿ ಒಂದು ವೇಳೆ ನನ್ನ ಮುಂದೆ ಯಾರಾದರೂ ಮೃತಪಟ್ಟಿದ್ದರೆ ನನಗೆ ಎಂದಿಗೂ ಮರೆಯಲಾಗದಷ್ಟು ನೋವಾಗುತ್ತಿತ್ತು,” ಎಂದು ಮನದಾಳದ ಮಾತುಗಳನ್ನಾಡಿದ್ದಾರೆ ಈ ಮುಖ್ಯ ಪೇದೆ.

RS 500
RS 1500

SCAN HERE

Pratidhvani Youtube

«
Prev
1
/
3821
Next
»
loading
play
PadmaAwards2023| ಕರ್ನಾಟಕದ ಮಾಜಿ ಮುಖ್ಯಮಂತ್ರಿ SM ಕೃಷ್ಣ ಅವರಿಗೆ, ಪದ್ಮ ಪ್ರಶಸ್ತಿ ಪ್ರಧಾನ ಮಾಡಿದ ರಾಷ್ಟ್ರಪತಿ .
play
ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿರುವ ಮೋಹನ್ ಭಾಗವತ್‌ರನ್ನು ದೇಶದ್ರೋಹಿ ಎನ್ನಲು ಧೈರ್ಯವಿದೆಯೇ? ಹನುಮೇಗೌಡ ಸವಾಲು
«
Prev
1
/
3821
Next
»
loading

don't miss it !

ಶ್ರೀಸಾಮಾನ್ಯನ ಸಮಸ್ಯೆಗಳೂ ಮಾರುಕಟ್ಟೆ ಆರ್ಥಿಕತೆಯೂ..ನಿತ್ಯ  ಬದುಕು ದುಸ್ತರವಾಗುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಏಕೆ ಮೌನ ಆವರಿಸಿದೆ ?
Top Story

ಶ್ರೀಸಾಮಾನ್ಯನ ಸಮಸ್ಯೆಗಳೂ ಮಾರುಕಟ್ಟೆ ಆರ್ಥಿಕತೆಯೂ..ನಿತ್ಯ  ಬದುಕು ದುಸ್ತರವಾಗುತ್ತಿದ್ದರೂ ಸಾರ್ವಜನಿಕ ವಲಯದಲ್ಲಿ ಏಕೆ ಮೌನ ಆವರಿಸಿದೆ ?

by ನಾ ದಿವಾಕರ
April 1, 2023
ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ : ಸುಳ್ಯ ಪಿಎಫ್​ಐ ಕಚೇರಿ ಸೀಝ್​
ಇದೀಗ

ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣ : ಸುಳ್ಯ ಪಿಎಫ್​ಐ ಕಚೇರಿ ಸೀಝ್​

by ಮಂಜುನಾಥ ಬಿ
March 27, 2023
ಸಿ.ಟಿ ರವಿ ಮಾತು ಹಿಡಿತ ತಪ್ಪುತ್ತಿರೋದಕ್ಕೆ ಕಾರಣ ಏನು..?
Top Story

ಸಿ.ಟಿ ರವಿ ಮಾತು ಹಿಡಿತ ತಪ್ಪುತ್ತಿರೋದಕ್ಕೆ ಕಾರಣ ಏನು..?

by ಪ್ರತಿಧ್ವನಿ
March 26, 2023
ಏ.9ಕ್ಕೆ ಕೋಲಾರದಲ್ಲಿ ರಾಹುಲ್ ಗಾಂಧಿ ರ‍್ಯಾಲಿ ; ಮೋದಿ ಉಪನಾಮ ಹೇಳಿಕೆಯ ಸ್ಥಳದಿಂದಲೇ ಅಬ್ಬರಿಸೋಕೆ ಕಾಂಗ್ರೆಸ್ ಸಿದ್ಧತೆ
Top Story

ಏ.9ಕ್ಕೆ ಕೋಲಾರದಲ್ಲಿ ರಾಹುಲ್ ಗಾಂಧಿ ರ‍್ಯಾಲಿ ; ಮೋದಿ ಉಪನಾಮ ಹೇಳಿಕೆಯ ಸ್ಥಳದಿಂದಲೇ ಅಬ್ಬರಿಸೋಕೆ ಕಾಂಗ್ರೆಸ್ ಸಿದ್ಧತೆ

by ಪ್ರತಿಧ್ವನಿ
April 1, 2023
ನಮ್ಮ ತಂದೆಯಂತೆ ನನ್ನ ಮೇಲೂ ನಂಬಿಕೆಯಿಡಿ ಉಳಿಸಿಕೊಳ್ಳುತ್ತೇನೆ: ದರ್ಶನ್‌ ಧ್ರುವನಾರಾಯಣ
Top Story

ನಮ್ಮ ತಂದೆಯಂತೆ ನನ್ನ ಮೇಲೂ ನಂಬಿಕೆಯಿಡಿ ಉಳಿಸಿಕೊಳ್ಳುತ್ತೇನೆ: ದರ್ಶನ್‌ ಧ್ರುವನಾರಾಯಣ

by ಪ್ರತಿಧ್ವನಿ
March 29, 2023
Next Post
ಪ್ರತಿಸ್ಪರ್ಧಿ ರಾಜಕೀಯದಲ್ಲಿ ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದ ತಣ್ಣಗಾಗುತ್ತಿದೆಯೇ?

ಪ್ರತಿಸ್ಪರ್ಧಿ ರಾಜಕೀಯದಲ್ಲಿ ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದ ತಣ್ಣಗಾಗುತ್ತಿದೆಯೇ?

ಇಂಗಾಲ ದಾಸ್ತಾನು ಕಡಿಮೆಯಾದರೂ ಅರಣ್ಯ ವಿಸ್ತರಣೆ! ಗೊಂದಲದ ವರದಿ ನೀಡಿದ ಕೇಂದ್ರ 

ಇಂಗಾಲ ದಾಸ್ತಾನು ಕಡಿಮೆಯಾದರೂ ಅರಣ್ಯ ವಿಸ್ತರಣೆ! ಗೊಂದಲದ ವರದಿ ನೀಡಿದ ಕೇಂದ್ರ 

ಕೊರೊನಾ ಇಫೆಕ್ಟ್ ಈಗ ರಾಯಚೂರಿನ ಮುದಗಲ್‌ಗೆ!

ಕೊರೊನಾ ಇಫೆಕ್ಟ್ ಈಗ ರಾಯಚೂರಿನ ಮುದಗಲ್‌ಗೆ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist