Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ನಾಲ್ಕು ವರ್ಷಗಳಲ್ಲಿ ವ್ಯಯಿಸಲಾದ CSR ಹಣ 47,199  ಕೋಟಿ

ನಾಲ್ಕು ವರ್ಷಗಳಲ್ಲಿ ವ್ಯಯಿಸಲಾದ CSR ಹಣ 47,199  ಕೋಟಿ
ನಾಲ್ಕು ವರ್ಷಗಳಲ್ಲಿ ವ್ಯಯಿಸಲಾದ CSR ಹಣ 47
Pratidhvani Dhvani

Pratidhvani Dhvani

July 17, 2019
Share on FacebookShare on Twitter

ಈ ವಾರವಷ್ಟೇ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ವಲಯ ನೀಡುತ್ತಿರುವ ಧಾರಾಳ ದೇಣಿಗೆಯ ವರದಿಯನ್ನು ಅಸೋಷಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic Reforms – ADR) ಪ್ರಕಟಿಸಿತ್ತು. ಇದೀಗ ಕಾರ್ಪೊರೇಟ್ ವಲಯ (ಸರ್ಕಾರ ಸ್ವಾಮ್ಯ ಹಾಗೂ ಖಾಸಗಿ) ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ (Corporate Social Responsibility – CSR) ವ್ಯಯಿಸಿರುವ ಒಟ್ಟು ಮೊತ್ತದ ವಿವರ ಲಭ್ಯವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ (2014-15 ರಿಂದ 2017-18 ರವರೆಗೆ) ಒಟ್ಟು ರೂ 47,199 ಕೋಟಿ ಹಣ ಬಳಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಇದರ ಜೊತೆಗೆ, ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಟಾನದ ಸಂಬಂಧ ಅನುಮಾನವೂ ಹೆಚ್ಚಿದೆ. ಇದಕ್ಕೆ ಪೂರಕ ಎಂಬಂತೆ 366 ಕಾರ್ಯಕ್ರಮಗಳ ಬಗ್ಗೆ ಮೇಲ್ನೋಟದ ತನಿಖೆ ಬಳಿಕ ಅಭಿಯೋಜನಾ ಮಂಜೂರಾತಿ ನೀಡಲಾಗಿದೆ ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೇಳಿದೆ.

ಹೆಚ್ಚು ಓದಿದ ಸ್ಟೋರಿಗಳು

ಜಮ್ಮುವಿನಲ್ಲಿ ಸಿಕ್ಕಿಬಿದ್ದ ಲಷ್ಕರೆ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!

ಟಿಆರ್‌ಎಸ್‌ ಟ್ವೀಟ್‌ಗೆ ಉರ್ದುವಿನಲ್ಲಿ ಟಕ್ಕರ್‌ ಕೊಟ್ಟ ಬಿಜೆಪಿ

ತೆಲಂಗಾಣ, ಪಶ್ಚಿಮ ಬಂಗಾಳದಲ್ಲಿ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ : ಅಮಿತ್ ಶಾ

Also Read: ಕಳೆದ 2 ವರ್ಷಗಳಲ್ಲಿ ರಾಜಕೀಯ ಪಕ್ಷಗಳಿಗೆ ವ್ಯಾಪಾರಿಗಳ ದೇಣಿಗೆ 985 ಕೋಟಿ!

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯನ್ನು ಅನುಷ್ಟಾನಗೊಳಿಸಿದ ಮೊದಲ ದೇಶ ಭಾರತ. 2013ರ ನೂತನ ಕಂಪೆನಿ ಕಾಯ್ದೆಯ (Companies Act) ಪ್ರಕಾರ ಕಂಪೆನಿಗಳು ಮೂರು ವರ್ಷಗಳ ಸರಾಸರಿ ಆದಾಯದ ಶೇಕಡಾ 2 ರಷ್ಟು ಮೊತ್ತವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಗಳಿಗೆ ಒದಗಿಸಬೇಕು. ವಾರ್ಷಿಕ 1 ಸಾವಿರ ಕೋಟಿ ಅಥವಾ ಹೆಚ್ಚಿನ ವಹಿವಾಟು ನಡೆಸುವ, 500 ಕೋಟಿ ಅಥವಾ ಹೆಚ್ಚಿನ ಮೌಲ್ಯದ ಕಂಪೆನಿಗಳು, ವಾರ್ಷಿಕ 5 ಕೋಟಿಗೂ ಹೆಚ್ಚಿನ ನಿವ್ವಳ ಲಾಭ ಗಳಿಸುತ್ತಿರುವ ಕಂಪೆನಿಗಳು ಶೇಕಡಾ 2ರಷ್ಟು ಲಾಭಾಂಶವನ್ನು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಕಾರ್ಯಗಳಿಗೆ ಒದಗಿಸಬೇಕು.

2016-17 ರಲ್ಲಿ 21,063 ಖಾಸಗಿ ಕಾರ್ಪೊರೇಟ್ ಕಂಪೆನಿಗಳು ದೇಶದಲ್ಲೆಡೆ CSR ಕಾರ್ಯಕ್ರಮದಡಿ ವ್ಯಯಿಸಿದ ಒಟ್ಟು ಮೊತ್ತ ರೂ. 10,956 ಕೋಟಿ. 407 ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆಗಳು (Public Sector Undertakings – PSU) ಇದೇ ವರ್ಷದಲ್ಲಿ ವ್ಯಯಿಸಿದ ಒಟ್ಟು ಹಣ ರೂ. 3,285 ಕೋಟಿ. 2017-18 (ಅಕ್ಟೋಬರ್ 2018ರವರೆಗೆ) ರ ಅವಧಿಯಲ್ಲಿ 3041 ಖಾಸಗಿ ಕಾರ್ಪೊರೇಟ್ ಕಂಪೆನಿಗಳು ರೂ. 6,886 ಕೋಟಿ ವ್ಯಯಿಸಿದರೆ, 76 ಸರ್ಕಾರಿ ಸ್ವಾಮ್ಯದ ಉದ್ಯಮ ಸಂಸ್ಥೆಗಳು ರೂ 1,479 ಕೋಟಿ ವ್ಯಯಿಸಿವೆ.

ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಯೋಜನೆಯ ಸರಿಯಾದ ಅನುಷ್ಟಾನಕ್ಕಾಗಿ ಕೇಂದ್ರ ಸರ್ಕಾರ ಇತ್ತೀಚೆಗೆ ಕೇಂದ್ರೀಕೃತ ಪರಿಶೀಲನೆ ಮತ್ತು ಅಭಿಯೋಜನೆ ಕಾರ್ಯವಿಧಾನ (Centralised Scrutiny and Prosecution Mechanism) ರೂಪಿಸಿದೆ. ಅದರಂತೆ, 2014-15ರ ಅವಧಿಯಲ್ಲಿ ಕಂಪೆನಿ ಕಾಯ್ದೆಯ ಪ್ರಕಾರ CSR ಪಾಲಿಸದ ಕಂಪೆನಿಗಳ ವಿರುದ್ಧದ 366 ಪ್ರಕರಣಗಳಲ್ಲಿ ಅಭಿಯೋಜನೆಗೆ (Prosecution) ಅನುಮತಿ ನೀಡಲಾಗಿದೆ. ಕಾರ್ಪೊರೇಟ್ ಸಚಿವಾಲಯದ ಪ್ರಕಾರ ನ್ಯೂನತೆಗಳು ಗಮನಕ್ಕೆ ಬಂದಾಗ ಆಯಾ ಕಂಪೆನಿಗಳಿಂದ ವಿವರ ಕೋರಿ ಪತ್ರ ಬರೆಯಲಾಗುತ್ತದೆ. ಈ ಸಂಬಂಧ 2015-16 ರಲ್ಲಿ ಬರೆಯಲಾಗಿರುವ ಪತ್ರಗಳ ಸಂಖ್ಯೆ 5,382. ಅಂದರೆ, ವರ್ಷದಿಂದ ವರ್ಷಕ್ಕೆ ನಿಯಮ ಪಾಲಿಸದಿರುವ ಅಥವಾ ನಿಯಮ ಉಲ್ಲಂಘಿಸಿ CSR ಚಟುವಟಿಕೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ಇತ್ತೀಚಿಗಿನ ಒಂದು ವರದಿಯ ಪ್ರಕಾರ CSR ಚಟುವಟಿಕೆಗಳಿಗೆ ಖಾಸಗಿ ಕಾರ್ಪೊರೇಟ್ ವಲಯಗಳು ಕೆಲವು ಆಯ್ದ ಎನ್ ಜಿ ಒ ಗಳನ್ನು ಬಳಸುತ್ತಿರುವ ಪ್ರಕರಣಗಳು ಕಂಡು ಬರುತ್ತಿವೆ. ಜೊತೆಗೆ, ಚುನಾವಣಾ ದೇಣಿಗೆ ನೀಡಲು ಮಧ್ಯವರ್ತಿ ಟ್ರಸ್ಟ್ ಗಳು ಸ್ಥಾಪನೆ ಆದಂತೆ CSR ಚಟುವಟಿಕೆಗಳಿಗೂ ಇಂತಹ ಟ್ರಸ್ಟ್ ಗಳು ಕಾರ್ಯ ನಿರ್ವಹಿಸುತ್ತಿರುವುದೂ ಬೆಳಕಿಗೆ ಬಂದಿದೆ.

ಯಾವ ಕ್ಷೇತ್ರಕ್ಕೆ ಎಷ್ಟು ಹಣ:

CSR ಚಟುವಟಿಕೆಗಳಿಗಳ ಪೈಕಿ ಶಿಕ್ಷಣ ಕ್ಷೇತ್ರದಲ್ಲಿ ಅತಿ ಹೆಚ್ಚು ಹಣ ವ್ಯಯಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಶಿಕ್ಷಣ ಕ್ಷೇತ್ರಕ್ಕೆ 2015-16 ರಲ್ಲಿ ರೂ 4,081 ಕೋಟಿ, 2016-17ರಲ್ಲಿ ರೂ. 4,459 ಕೋಟಿ ಹಾಗೂ 2017-18ರಲ್ಲಿ ರೂ 2,703 ಕೋಟಿ ಖರ್ಚು ಮಾಡಲಾಗಿದೆ. ಎರಡನೇ ಮತ್ತು ಮೂರನೆಯ ಅತಿ ಹೆಚ್ಚು CSR ಹಣ ಪಡೆದ ಕ್ಷೇತ್ರಗಳು ಗ್ರಾಮೀಣಾಭಿವೃದ್ಧಿ (ಮೂರು ವರ್ಷಗಳಲ್ಲಿ ರೂ 3,993 ಕೋಟಿ) ಮತ್ತು ಪರಿಸರ (ಮೂರು ವರ್ಷಗಳಲ್ಲಿ ರೂ 2,718 ಕೋಟಿ).

RS 500
RS 1500

SCAN HERE

don't miss it !

ಈದ್ಗಾ ಮೈದಾನ ವಕ್ಫ್ ಬೋರ್ಡ್ ಸ್ವತ್ತಲ್ಲ: ಯೂಟರ್ನ್ ಹೊಡೆದ ಬಿಬಿಎಂಪಿ !
ಕರ್ನಾಟಕ

ಈದ್ಗಾ ಮೈದಾನ ವಕ್ಫ್ ಬೋರ್ಡ್ ಸ್ವತ್ತಲ್ಲ: ಯೂಟರ್ನ್ ಹೊಡೆದ ಬಿಬಿಎಂಪಿ !

by ಕರ್ಣ
June 29, 2022
ಡಾಲರ್‌ ಎದುರು ಮತ್ತೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ!
ದೇಶ

ಡಾಲರ್‌ ಎದುರು ಸಾರ್ವಕಾಲಿಕ 79 ರೂ.ಗೆ ಕುಸಿದ ರೂಪಾಯಿ!

by ಪ್ರತಿಧ್ವನಿ
July 1, 2022
ಕರ್ನಾಟಕ ಹೈಕೋರ್ಟ್‌ ಹಂಗಾಮಿ ಸಿಜೆ ಅಗಿ ಅಲೋಕ್‌ ಆರಾಧೆ ನೇಮಕ
ಕರ್ನಾಟಕ

ಕರ್ನಾಟಕ ಹೈಕೋರ್ಟ್‌ ಹಂಗಾಮಿ ಸಿಜೆ ಅಗಿ ಅಲೋಕ್‌ ಆರಾಧೆ ನೇಮಕ

by ಪ್ರತಿಧ್ವನಿ
June 30, 2022
ಆಂಧ್ರಪ್ರದೇಶ ಕೆಮಿಕಲ್‌ ಫ್ಯಾಕ್ಟರಿ ಸ್ಫೋಟ: 6 ಕಾರ್ಮಿಕರು ಬಲಿ
ಕರ್ನಾಟಕ

ಹಾಡುಹಗಲೇ ದೇವಸ್ಥಾನ ಮುಂದೆಯೇ ಕುಖ್ಯಾತ ರೌಡಿಯ ಬರ್ಬರ ಹತ್ಯೆ

by ಪ್ರತಿಧ್ವನಿ
June 27, 2022
ಬೆಂಗಳೂರು: ಮಗು ಕತ್ತು ಹಿಸುಕಿ ಕೊಂದು ತಾಯಿ ಆತ್ಮಹತ್ಯೆ!
ಕರ್ನಾಟಕ

ದೊಣ್ಣೆಯಿಂದ ಹೊಡೆದು ಅಣ್ಣ-ತಮ್ಮಂದಿರನ್ನು ಕೊಂದ ಕೆಲಸದಾಳು!

by ಪ್ರತಿಧ್ವನಿ
July 1, 2022
Next Post
ಮಿತ್ರಪಕ್ಷಗಳಿಗೇ “ವಿಪ್” ಜಾರಿ ಮಾಡಿತೆ ಸುಪ್ರೀಂ ಕೋರ್ಟ್?

ಮಿತ್ರಪಕ್ಷಗಳಿಗೇ “ವಿಪ್” ಜಾರಿ ಮಾಡಿತೆ ಸುಪ್ರೀಂ ಕೋರ್ಟ್?

ವಸತಿ ವಲಯಗಳ ಶಬ್ದ ಮಾಲಿನ್ಯ `ಮೂಲದಲ್ಲೇ’ ತಡೆಯಬೇಕಂತೆ

ವಸತಿ ವಲಯಗಳ ಶಬ್ದ ಮಾಲಿನ್ಯ `ಮೂಲದಲ್ಲೇ’ ತಡೆಯಬೇಕಂತೆ

ಸುಪ್ರೀಂ ಆದೇಶದಿಂದ ಅತೃಪ್ತ ಶಾಸಕರು ಸುರಕ್ಷಿತರೇ?

ಸುಪ್ರೀಂ ಆದೇಶದಿಂದ ಅತೃಪ್ತ ಶಾಸಕರು ಸುರಕ್ಷಿತರೇ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist