Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ತಳ ಕಂಡ ತುಂಗಾ ಜಲಾಶಯ, ಏಳೆಂಟು ದಿನದಲ್ಲಿ ಶಿವಮೊಗ್ಗಕ್ಕೆ ಕಾದಿದೆ ಗಂಡಾಂತರ

ತುಂಗಾ ಜಲಾಶಯದ ಸಾಮರ್ಥ್ಯ 3.24 ಟಿಎಂಸಿ. ಸದ್ಯ 1.25 ಟಿಎಂಸಿ ಸಂಗ್ರಹ ಇದೆ. ಇದು ಒಂದು ಟಿಎಂಸಿಗಿಂತ ಕಡಿಮೆ ಇಳಿದಲ್ಲಿ ಅಪಾಯ ಕಾದಿದೆ.
ತಳ ಕಂಡ ತುಂಗಾ ಜಲಾಶಯ
Pratidhvani Dhvani

Pratidhvani Dhvani

June 1, 2019
Share on FacebookShare on Twitter

“ಕುಡಿಯೋದಕ್ಕೆ ಬಿಟ್ರೆ ಹೊಲ, ಗದ್ದೆ, ತೋಟಗಳಿಗೆ ಒಂದು ಹನಿಯೂ ನೀರು ಬಿಡೋಲ್ಲ. ತುಂಗಾ ಜಲಾಶಯ ಡೆಡ್ ಸ್ಟೋರೇಜ್ ಹಂತ ತಲುಪಿದೆ. ಹೇಗೋ ಇನ್ನೊಂದಿಷ್ಟು ದಿನ ಕುಡಿಯಲು ನೀರು ಪೂರೈಸಬಹುದು, ಅಷ್ಟರಲ್ಲಿ ಮಳೆಯಾಗಲಿ ಅಂತ ನಾನೂ ಬೇಡಿಕೊಳ್ತೇನೆ,” ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಕೆ ಎ ದಯಾನಂದ ಮಾಧ್ಯಮದವರ ಎದುರು ನೇರಾನೇರ ಹೇಳಿಬಿಟ್ಟರು. ಅವರು ಹೇಳಿದ್ದು ಅಕ್ಷರಶಃ ವಾಸ್ತವವಾಗಿತ್ತು. ಜಲಾಶಯದ ಆಸುಪಾಸಿನ ತೋಟಗಳೆಲ್ಲ ಗರಿಕೆಯಾಗುತ್ತಿದ್ದು, ಪಂಪ್‌ಸೆಟ್ ಹಾಕಿ ನೀರು ಎತ್ತಲೂ ಆಗದ ರೀತಿಯಲ್ಲಿ ಹಿನ್ನೀರು ಬತ್ತಿಹೋಗಿದೆ.

ಹೆಚ್ಚು ಓದಿದ ಸ್ಟೋರಿಗಳು

PSI ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲ ಎಂದು ವಿಧಾನಸಭೆಗೆ ಸುಳ್ಳು ಹೇಳಿದ ಸಿಎಂ, ಮಂತ್ರಿಯನ್ನು ವಜಾಮಾಡಿ : ಸಿದ್ದರಾಮಯ್ಯ

ಡೊಲೊ 650 ಕಂಪನಿ ಬೆಂಗಳೂರು ಕಚೇರಿ ಸೇರಿ 40 ಕಡೆ ಐಟಿ ದಾಳಿ!

ಕೆಲವು ಪೋಸ್ಟ್‌ಗಳು, ಖಾತೆಗಳನ್ನು ನಿರ್ಬಂಧಿಸಿ: ಕೇಂದ್ರ ಆದೇಶದ ವಿರುದ್ಧ ಕೋರ್ಟ್ ಮೊರೆ ಹೋದ ಟ್ವಿಟರ್!

ಸಾಧಾರಣ ಮಳೆಗೂ ತುಂಬಿಕೊಳ್ಳುವ ತುಂಗಾ ಜಲಾಶಯದ (ಗಾಜನೂರು ಜಲಾಶಯ) ಸಾಮರ್ಥ್ಯ ಕೇವಲ 3.24 ಟಿಎಂಸಿ. ವನ್ಯಜೀವಿ ವಲಯದಲ್ಲಿರುವುದರಿಂದ ತುಂಬಾ ಚಿಕ್ಕ ಗಾತ್ರದಲ್ಲಿ ನಿರ್ಮಿಸಲಾಗಿದೆ, ಈಗ ಇದರಲ್ಲಿ ಕೇವಲ 1.25 ಟಿಎಂಸಿ ನೀರಿನ ಸಂಗ್ರಹ ಇದೆ. ಇದು ಒಂದು ಟಿಎಂಸಿಗಿಂತ ಕಡಿಮೆ ಇಳಿದಲ್ಲಿ ನಗರಕ್ಕೆ ನೀರು ಪೂರೈಸುವ ಜಾಕ್ವೆಲ್‌ಗೂ ಸಿಗದ ಹಾಗೆ ಪಾತಾಳ ಕಾಣಲಿದೆ. ಅಲ್ಲಿಗೆ, ಶಿವಮೊಗ್ಗ ನಗರದ ಜನ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಬರಲಿದೆ.

ಬರಿದಾಗುತ್ತಿರುವ ತುಂಗಾ ಜಲಾಶಯ

ಶಿವಮೊಗ್ಗಕ್ಕೆ ಜಲಾಶಯದ ಸಮೀಪದಿಂದ ನೀರು ಎತ್ತಿ ಸರಬರಾಜು ಮಾಡುವ ಯೋಜನೆ ಇರಲಿಲ್ಲ. ಶಿವಮೊಗ್ಗ ನಗರದ ಬಳಿಯ ಮಂಡ್ಲಿ ಏರಿಯಾದಲ್ಲಿ ನೀರೆತ್ತಲಾಗುತ್ತಿತ್ತು. ಎಸ್ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ನಗರಕ್ಕೆ ಸಮಗ್ರವಾಗಿ ನೀರು ಹರಿಸುವಂತೆ ಜಲಾಶಯದಿಂದ ನೀರೆತ್ತುವ ಯೋಜನೆ ರೂಪಿಸಲಾಯಿತು. ಹೊಸ ಜಲಾಶಯದ ನಿರ್ಮಾಣ ಸಂಧರ್ಭದಲ್ಲಿ ಮಧ್ಯ ಕರ್ನಾಟಕಕ್ಕೆ ತುಂಗಭದ್ರಾ) ನೀರಿನ ಹರಿವು ಕಡಿಮೆಯಾಗುತ್ತದೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಕೂಡ ಕಡಿಮೆ ಸಾಮರ್ಥ್ಯದ ಜಲಾಶಯ ನಿರ್ಮಾಣ ಮಾಡಲಾಯಿತು.

ಸುಮಾರು ಮೂವತ್ತು ವರ್ಷದಿಂದ ನೀರು ಪೂರೈಕೆ ಘಟಕದಲ್ಲಿ ಕೆಲಸ ಮಾಡುವ ಗುರುರಾಜ್ ಹಲವು ವರ್ಷಗಳಿಂದ ಈ ತರಹದ ಪರಿಸ್ಥಿತಿ ನೋಡಿಯೇ ಇರಲಿಲ್ಲವಂತೆ. “ಮರಳು ಚೀಲಗಳನ್ನೆಲ್ಲ ಹಾಕಿ ಜಾಕ್ವೆಲ್ ಬಳಿ ತಡೆಯೊಡ್ಡಿದ್ದೇವೆ, ಏನು ಮಾಡಿದರೂ ನೀರೇ ಇಲ್ಲದಿದ್ದರೆ ಮೇಲೆತ್ತುವುದಾದರೂ ಹೇಗೆ?” ಎನ್ನುತ್ತಾರೆ.

ತುಂಗಾ ಜಲಾಶಯದ ಹಿನ್ನೀರಿನ ಪ್ರದೇಶ

ನೀರು ಸರಬರಾಜು ಇಲಾಖೆ ಎಂಜಿನಿಯರ್ ರಮೇಶ್, ಒಂದು ತಿಂಗಳವರೆಗೆ ಹೇಗೋ ಸುಧಾರಿಸಬಹುದೇನೋ ಎಂಬ ಲೆಕ್ಕಾಚಾರದಲ್ಲಿದ್ದು, “ಶಿವಮೊಗ್ಗ ಹೊರವಲಯ ಬೊಮ್ಮನಕಟ್ಟೆ, ಶಾಂತಿನಗರಕ್ಕೆ ಬದಲಿ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೇವೆ, ಸರ್ಕಾರದ ಆದೇಶವೇ ಇರುವುದರಿಂದ ಒಂದು ಹನಿ ನೀರನ್ನೂ ಬೇರೆ ಕೆಲಸಕ್ಕೆ ಬಿಡುವುದಿಲ್ಲ,” ಎನ್ನುತ್ತಾರೆ.

“ಜಲಾಶಯದಲ್ಲಿ ತುಂಬಿಕೊಂಡಿರುವ ಮರಳಿನ ರಾಶಿ, ಗಿಡಗಂಟಿಗಳ ಅವಶೇಷಗಳು ನೀರಿನ ಸಂಗ್ರಹಕ್ಕೆ ತೊಡಕು ಉಂಟುಮಾಡಿದೆ. ಈಗ ಹೇಳುವ ಡೆಡ್ ಸ್ಟೋರೇಜ್‌ಗಿಂತಲೂ ಕಡಿಮೆ ನೀರಿರಬಹುದು,” ಎಂಬುದು ಪರಿಸರ ಹೋರಾಟಗಾರ ಅಜಯ್ ಕುಮಾರ್ ಶರ್ಮಾ ಅಭಿಪ್ರಾಯ.

ಶಿವಮೊಗ್ಗ ನಗರದಲ್ಲಿ ಟ್ಯಾಂಕರ್ ನೀರಿನ ಬಳಕೆ

ಭೌಗೋಳಿಕವಾಗಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರದಲ್ಲಿ ಮಲೆನಾಡಿನ ಕುರುಹುಗಳೇ ಇಲ್ಲ, ಬೇಸಿಗೆಯ ಬಿಸಿಲ ಧಗೆಗೆ ಸುತ್ತಲಿನ ಜಲಮೂಲಗಳೆಲ್ಲ ಬೇಗನೆ ಬರಿದಾಗಿಬಿಟ್ಟಿರುತ್ತವೆ. ನೂರಾರು ಕೆರೆ ನುಂಗಿ ಹೆಬ್ಬಾವಂತೆ ಬೆಳೆದಿರುವ ನಗರದಲ್ಲಿ 3.50 ಲಕ್ಷ ಜನರಿದ್ದಾರೆ ಎಂದಾದರೆ, ನೀರೆಷ್ಟು ಬೇಕು ಎಂಬದನ್ನು ಊಹಿಸಲಾಗದು. ತುಂಗಾ ನದಿಯೊಂದೇ ಕುಡಿಯುವ ನೀರಿನ ಮೂಲವಾದ್ದರಿಂದ 100 ಎಂಎಲ್‌ಡಿ (millions of liter per day) ನೀರೆತ್ತಲಾಗುತ್ತಿದೆ. ಹಿಂದೆ ಜಲಾಶಯವನ್ನು ಎತ್ತರಿಸುವ ಕಾಯಕಕ್ಕೆ ಕೈಹಾಕಿದಾಗಲೆಲ್ಲ ವಿರೋಧಗಳೇ ಹೆಚ್ಚಾಗಿದ್ದವು. ಸಾಲದು ಎಂಬಂತೆ ಆಂಧ್ರಪ್ರದೇಶದಿಂದಲೂ ದಾವೆ ಹೂಡಲಾಗಿತ್ತು (ತುಂಗಭದ್ರಾ ಕೊರತೆ).

ಕಳೆದ ಐದಾರು ವರ್ಷಗಳಿಂದಲೂ ಮಳೆ ಸರಿಯಾದ ಸಮಯಕ್ಕೆ ಬೀಳುತ್ತಿಲ್ಲ, ಕಳೆದ ವರ್ಷ ಏಪ್ರಿಲ್ ತಿಂಗಳಲ್ಲೇ ಮಳೆ ಆರಂಭವಾಗಿತ್ತು. ಈ ಬಾರಿ ಜೂನ್ ಬಂದರೂ ಮಳೆ ಬರುವ ಕುರುಹುಗಳೂ ಕಾಣುತ್ತಿಲ್ಲ. ಈ ನಡುವೆ, ಜಲಮಂಡಳಿಯ ಪ್ರಥಮ ದರ್ಜೆ ಸಹಾಯಕರೊಬ್ಬರು ಜಲಾಶಯದಲ್ಲಿ ಮುಳುಗಡೆಯಾಗಿರುವ ದೇವರಿಗೆ ಪೂಜೆ ಸಲ್ಲಿಸಿಯಾದರೂ ವರುಣನ ಕೃಪೆಗೆ ಪಾತ್ರರಾಗುವ ತವಕದಲ್ಲಿದ್ದಾರೆ!

RS 500
RS 1500

SCAN HERE

don't miss it !

ಹಲ್ಲು ಉಜ್ಜದೇ ಮುತ್ತು ಕೊಡಬೇಡ ಅಂದಿದ್ದಕ್ಕೆ ಪತ್ನಿಯನ್ನೇ ಕೊಂದ!
ದೇಶ

ಹಲ್ಲು ಉಜ್ಜದೇ ಮುತ್ತು ಕೊಡಬೇಡ ಅಂದಿದ್ದಕ್ಕೆ ಪತ್ನಿಯನ್ನೇ ಕೊಂದ!

by ಪ್ರತಿಧ್ವನಿ
June 29, 2022
ʼನಮ್ಮ ಕೆಲಸವನ್ನು ದಮನಿಸುವ ಪ್ರಯತ್ನವಿದು’ : ದೆಹಲಿ ಪೊಲೀಸರ  ಆರೋಪಗಳನ್ನು ತಳ್ಳಿಹಾಕಿದ  ಆಲ್ಟ್ ನ್ಯೂಸ್
ದೇಶ

ʼನಮ್ಮ ಕೆಲಸವನ್ನು ದಮನಿಸುವ ಪ್ರಯತ್ನವಿದು’ : ದೆಹಲಿ ಪೊಲೀಸರ  ಆರೋಪಗಳನ್ನು ತಳ್ಳಿಹಾಕಿದ  ಆಲ್ಟ್ ನ್ಯೂಸ್

by ಪ್ರತಿಧ್ವನಿ
July 4, 2022
ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್ : ಹವಾಮಾನ ಇಲಾಖೆ
ಕರ್ನಾಟಕ

ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಹೈ ಅಲರ್ಟ್ : ಹವಾಮಾನ ಇಲಾಖೆ

by ಕರ್ಣ
July 1, 2022
ಮಹಾ ರಾಜಕೀಯ ಬಿಕ್ಕಟ್ಟಿನ ನಂತರ ಮುರ್ಮುಗೆ ಗೆಲುವಿನ ಅವಕಾಶ ಜಾಸ್ತಿಯಿದೆ : ಮಮತಾ ಬ್ಯಾನರ್ಜಿ
ದೇಶ

ಮಹಾ ರಾಜಕೀಯ ಬಿಕ್ಕಟ್ಟಿನ ನಂತರ ಮುರ್ಮುಗೆ ಗೆಲುವಿನ ಅವಕಾಶ ಜಾಸ್ತಿಯಿದೆ : ಮಮತಾ ಬ್ಯಾನರ್ಜಿ

by ಪ್ರತಿಧ್ವನಿ
July 1, 2022
ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗೂರೂಜಿ ಕಗ್ಗೊಲೆ
ಕರ್ನಾಟಕ

ಚಂದ್ರಶೇಖರ್‌ ಗುರೂಜಿಗೆ 60 ಬಾರಿ ಇರಿತ, ಹುಬ್ಬಳ್ಳಿ-ಧಾರವಾಡದಲ್ಲಿ ಹೈಅಲರ್ಟ್!

by ಪ್ರತಿಧ್ವನಿ
July 5, 2022
Next Post
ಸಿಎಂ ಎಚ್‌ಡಿಕೆ ಸಂದರ್ಶನ

ಸಿಎಂ ಎಚ್‌ಡಿಕೆ ಸಂದರ್ಶನ | ‘ಬಿಜೆಪಿ ಬಿಟ್ಟು ಬರ್ತೀನಿ ಅಂದಿದ್ರು ಬಿಎಸ್‌ವೈ!’

ಸಮಸ್ಯೆಗಳ ಪರಿಹಾರಕ್ಕಿಂತ ಆಕರ್ಷಕ ಬದಲಾವಣೆಗಳ ಕಡೆ ವಾಲಿದ ನೂತನ ಶಿಕ್ಷಣ ನೀತಿ

ಸಮಸ್ಯೆಗಳ ಪರಿಹಾರಕ್ಕಿಂತ ಆಕರ್ಷಕ ಬದಲಾವಣೆಗಳ ಕಡೆ ವಾಲಿದ ನೂತನ ಶಿಕ್ಷಣ ನೀತಿ

ಹಸುರು ಓದು ಪಸರಿಸಲು ಪಣ ತೊಟ್ಟ ಧಾರವಾಡದ ‘ಪರಾಗ’

ಹಸುರು ಓದು ಪಸರಿಸಲು ಪಣ ತೊಟ್ಟ ಧಾರವಾಡದ ‘ಪರಾಗ’

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist