Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಚುನಾವಣೆ ಪ್ರಚಾರ ಸಭೆಗಳೋ, ಜಾತಿ ಮೇಲಿನ ವಿಚಾರ ಸಂಕಿರಣಗಳೋ?

ಸತೀಶ್ ಜಾರಕಿಹೊಳಿ ಮೇಲ್ಜಾತಿಗಳನ್ನು ಟೀಕಿಸಿ ಮಾಡಿದ ಭಾಷಣಕ್ಕೆ ದಿನೇಶ್ ಗುಂಡೂ ರಾವ್, ಆರ್ ವಿ ದೇಶಪಾಂಡೆ ಅವರ ಸಹಮತ ಇರಬಹುದೇ?
ಚುನಾವಣೆ ಪ್ರಚಾರ ಸಭೆಗಳೋ
Pratidhvani Dhvani

Pratidhvani Dhvani

April 17, 2019
Share on FacebookShare on Twitter

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಚುನಾವಣೆ ಪ್ರಚಾರ ಸಭೆಗಳಲ್ಲಿ ಆಡಿದ ಮಾತುಗಳು ಸುಪ್ರೀಂ ಕೋರ್ಟ್ ತಲುಪಿದ್ದವು. ಚುನಾವಣಾ ಆಯೋಗವು ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಾದಾಗ ಕೋರ್ಟ್ ಆಯೋಗಕ್ಕೆ ಬೆಂಡೆತ್ತಿತ್ತು. ಪರಿಣಾಮವಾಗಿ, ಇಬ್ಬರ ಮೇಲೂ ನಿರ್ದಿಷ್ಟ ಅವಧಿಯ ಪ್ರಚಾರ ನಿಷೇಧವನ್ನು ಆಯೋಗವು ಹೇರಿದೆ. ಇಂಥ ಕ್ರಮ ಕೈಗೊಂಡ ನಂತರವಷ್ಟೇ ನ್ಯಾಯಾಲಯ ತನ್ನ ತೃಪ್ತಿ ವ್ಯಕ್ತಪಡಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಮನುಜ ಸಂವೇದನೆಯೂ ಸಾಮಾಜಿಕ ಪ್ರಜ್ಞೆಯೂ – ನಾ ದಿವಾಕರ

ಯುವಪೀಳಿಗೆಗೊಂದು ಕಾಯಕಲ್ಪ ನೀಡಲು ಇದು ಸಕಾಲ

ರಾಜಕೀಯ ಮೇಲಾಟದ ಕೇಂದ್ರವಾದ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಕೂಲ್‌ ಆಫ್ ಎಕನಾಮಿಕ್ಸ್

ರಾಜ್ಯ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಗಳವಾರ (ಏ.16) ರಾತ್ರಿ ಬೆಳಗಾವಿ ಸಮೀಪದ ಕಡೋಲಿಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ, “ಬ್ರಾಹ್ಮಣರ ಸಹಿತ ಮೇಲ್ವರ್ಗದವರು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿಲ್ಲ,” ಎಂದು ಹೇಳಿದ್ದಾಗಿ ಪತ್ರಿಕೆಗಳಲ್ಲಿ ವರದಿಯಾಗಿವೆ. ಸಾಮಾಜಿಕ ಜಾಲತಾಣಗಳಲ್ಲೂ ಅವರ ಹೇಳಿಕೆ ಹರಿದಾಡಿದೆ.

ಸತೀಶ್ ಅವರು ಚುನಾವಣೆ ಪ್ರಚಾರ ಸಭೆಯಲ್ಲಿ ಇಂಥ ಹೇಳಿಕೆ ನೀಡಿದ್ದು ಬ್ರಾಹ್ಮಣ ಸಮಾಜ ಸಹಿತ ಮೇಲ್ವರ್ಗದವರಿಗೆ ಅಸಮಾಧಾನ ಉಂಟುಮಾಡಿದ್ದರೆ ಅದು ಸಹಜವೂ ಆಗಿದೆ. ಅವರ ಹೇಳಿಕೆ ತೀವ್ರ ಚರ್ಚೆಗೆ ಒಳಪಡುವಂಥ ರಾಷ್ಟ್ರ ಮಟ್ಟದ ವಿಷಯ.

ದೇಶಕ್ಕಾಗಿ ಯಾರು, ಎಷ್ಟು ಪ್ರಮಾಣದಲ್ಲಿ ತ್ಯಾಗ ಮಾಡಿದರು, ಎಷ್ಟು ಜನರು ಪ್ರಾಣ ಕಳೆದುಕೊಂಡರು ಎಂಬುದನ್ನು ನಿಖರವಾಗಿ  ಹೇಳಲೇಬೇಕಾದರೆ ಅದು ಚುನಾವಣೆ ಸಮಯದಲ್ಲಿ ಅಲ್ಲ. ಚುನಾವಣೆ ಎಂದರೆ ಸಮಾಜದ ಎಲ್ಲ ಮತದಾರರ ಎದುರು ಮತಯಾಚನೆ ಮಾಡುವ ಮೂಲಕ ತಮ್ಮ ಅಭ್ಯರ್ಥಿಯು ಗೆಲ್ಲುವಂತೆ ಮಾಡುವುದು. ಯಾವುದೇ ಸಮಾಜವನ್ನು ವೈರಿಯಂತೆ ಕಾಣುವುದಾಗಲೀ, ಪೂರ್ವಗ್ರಹಪೀಡಿತರಾಗಿ ಮಾತನಾಡುವುದಾಗಲೀ ಚುನಾವಣಾ ಪ್ರಚಾರಕನು ಮಾಡುವ ಕೆಲಸವಲ್ಲ. ಇಂಥ ಮಾತು ಆಡುವವರು ಅಭ್ಯರ್ಥಿಯ ತಲೆಯ ಮೇಲೆ ಕಲ್ಲು ಚಪ್ಪಡಿ ಹಾಕಿದಂತೆಯೇ.

ಬ್ರಾಹ್ಮಣರನ್ನು ಮತ್ತು ಇತರ ಮೇಲ್ವರ್ಗದವರನ್ನು ನಿಂದಿಸುವ ಮೂಲಕ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳನ್ನು ಮತ್ತಷ್ಟು ಗಟ್ಟಿಗೊಳಿಸಬಹುದೆಂದು ಕಾಂಗ್ರೆಸ್ ನಾಯಕರು ತಿಳಿದಿರಬಹುದು. ಆದರೆ, ಮೇಲ್ವರ್ಗದ ಮತದಾರರು ನಿರ್ಣಾಯಕರಾಗಿರುವ ಅನೇಕ ಮತಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಆರಿಸಿ ಬಂದಿಲ್ಲವೇ?

ಬೆಳಗಾವಿ ಮತ್ತು ಚಿಕ್ಕೋಡಿ ಮತಕ್ಷೇತ್ರಗಳಲ್ಲಿ ವ್ಯಾಪಕ ಪ್ರಚಾರ ಕೈಕೊಂಡಿರುವ ಸತೀಶ್ ಅವರ ಹೇಳಿಕೆ ಸಾಕಷ್ಟು ವಿವಾದ ಹುಟ್ಟುಹಾಕಬಹುದು. ಕಾಂಗ್ರೆಸ್ಸಿನ ರಾಜ್ಯ ಘಟಕದ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಹುಟ್ಟಾ ಕಾಂಗ್ರೆಸ್ಸಿಗರು, ಬ್ರಾಹ್ಮಣರು. ಇನ್ನೊಬ್ಬ ಹಿರಿಯ ಮುಖಂಡ, ಸಚಿವ ಆರ್ ವಿ ದೇಶಪಾಂಡೆ ಸಹ ಬ್ರಾಹ್ಮಣರೇ. ಬಿ ಕೆ ಚಂದ್ರಶೇಖರ್ ಅವರೂ ಬ್ರಾಹ್ಮಣರೇ. ನನಗೆ ತಿಳಿದಂತೆ ಈ ಮೂವರು ಬಿಜೆಪಿಯ ಕಟ್ಟಾ ವಿರೋಧಿಗಳು. ಸತೀಶ್ ಅವರ ಹೇಳಿಕೆಯು ಈ ಮೂವರಿಗೆ ಮುಜುಗರ ತಂದರೂ ಅಚ್ಚರಿಯೇನಿಲ್ಲ.

ಸತೀಶ್ ಅವರು ಪ್ರತಿವರ್ಷ ಮೂಢನಂಬಿಕೆಗಳ ವಿರುದ್ಧ ನಡೆಸುವ ಕಾರ್ಯಕ್ರಮದ ಭಾಗವಾಗಿ ಬೆಳಗಾವಿಯ ಸ್ಮಶಾನದಲ್ಲಿ ನಡೆಸುವ ವಿಚಾರ ಸಂಕಿರಣದಲ್ಲಿ ಆಡುವ ಮಾತುಗಳನ್ನೇ ಚುನಾವಣಾ ಪ್ರಚಾರ ಸಭೆಗಳಲ್ಲಿ ಆಡಿದರೆ ವ್ಯತಿರಿಕ್ತ ಪರಿಣಾಮಗಳಾಗುವುದು ಸಹಜವೇ ಆಗಿದೆ.

ಅಂಕಣಕಾರರು ಹಿರಿಯ ಪತ್ರಕರ್ತರು

RS 500
RS 1500

SCAN HERE

don't miss it !

ಜುಲೈ 25ಕ್ಕೆ  ವಸತಿ ಇಲಾಖೆಯ 1967 ಮನೆಗಳ  ಲೋಕಾರ್ಪಣೆ : ವಿ ಸೋಮಣ್ಣ
ಕರ್ನಾಟಕ

ಜುಲೈ 25ಕ್ಕೆ ವಸತಿ ಇಲಾಖೆಯ 1967 ಮನೆಗಳ ಲೋಕಾರ್ಪಣೆ : ವಿ ಸೋಮಣ್ಣ

by ಪ್ರತಿಧ್ವನಿ
June 24, 2022
ಗುಜರಾತ್ ಗಲಭೆ 2002 : ಪ್ರಧಾನಿ ಮೋದಿಗೆ ಕ್ಲೀನ್ ಚಿಟ್, ಜಫ್ರಿ ಅರ್ಜಿ ವಜಾಗೊಳಿಸಿದ ಸುಪ್ರಿಂ ಕೋರ್ಟ್
ದೇಶ

ಗುಜರಾತ್ ಗಲಭೆ 2002 : ಪ್ರಧಾನಿ ಮೋದಿಗೆ ಕ್ಲೀನ್ ಚಿಟ್, ಜಫ್ರಿ ಅರ್ಜಿ ವಜಾಗೊಳಿಸಿದ ಸುಪ್ರಿಂ ಕೋರ್ಟ್

by ಪ್ರತಿಧ್ವನಿ
June 24, 2022
ದೇಶದ ಅತ್ಯಂತ ದುಬಾರಿ ನಗರಿ ಮುಂಬೈ!
ದೇಶ

ದೇಶದ ಅತ್ಯಂತ ದುಬಾರಿ ನಗರಿ ಮುಂಬೈ!

by ಪ್ರತಿಧ್ವನಿ
June 30, 2022
FD ಮೇಲಿನ ಬಡ್ಡಿ ಹೆಚ್ಚಿಸಿದ ಕರ್ಣಾಟಕ ಬ್ಯಾಂಕ್!
ಕರ್ನಾಟಕ

FD ಮೇಲಿನ ಬಡ್ಡಿ ಹೆಚ್ಚಿಸಿದ ಕರ್ಣಾಟಕ ಬ್ಯಾಂಕ್!

by ಪ್ರತಿಧ್ವನಿ
June 30, 2022
ಗುವಾಹಟಿಯಿಂದ ಮುಂಬೈಗೆ ಮರಳಿದ ಶಿವಸೇನೆ ಬಂಡಾಯ ಶಾಸಕರು!
ದೇಶ

ಗುವಾಹಟಿಯಿಂದ ಮುಂಬೈಗೆ ಮರಳಿದ ಶಿವಸೇನೆ ಬಂಡಾಯ ಶಾಸಕರು!

by ಪ್ರತಿಧ್ವನಿ
June 28, 2022
Next Post
ಕರಾವಳಿಯ ಅಪೂರ್ಣ ಫ್ಲೈಓವರ್ ಚುನಾವಣಾ ವಿಷಯವೇ?

ಕರಾವಳಿಯ ಅಪೂರ್ಣ ಫ್ಲೈಓವರ್ ಚುನಾವಣಾ ವಿಷಯವೇ?

ನಿಮ್ಮ ಅಂತರಂಗದ ಮತ ಬಹಿರಂಗಗೊಂಡಿದೆ; ರಾಜಕೀಯ ಪಕ್ಷಗಳ ಬಂಧಿಯಾಗಿದೆ!

ನಿಮ್ಮ ಅಂತರಂಗದ ಮತ ಬಹಿರಂಗಗೊಂಡಿದೆ; ರಾಜಕೀಯ ಪಕ್ಷಗಳ ಬಂಧಿಯಾಗಿದೆ!

ಜಮ್ಮು ಕಾಶ್ಮೀರ: ನಿಮಗೆ ಗೊತ್ತಿಲ್ಲದೆ ಇರಬಹುದಾದ ಕೆಲವು ಸಂಗತಿಗಳು

ಜಮ್ಮು ಕಾಶ್ಮೀರ: ನಿಮಗೆ ಗೊತ್ತಿಲ್ಲದೆ ಇರಬಹುದಾದ ಕೆಲವು ಸಂಗತಿಗಳು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist