Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಗದುಗಿನಲ್ಲಿ ಕೇವಲ 5 ರೂ ಗೆ ಹೊಟ್ಟೆ ತುಂಬಾ ಊಟ

ಗದುಗಿನಲ್ಲಿ ಕೇವಲ 5 ರೂ ಗೆ ಹೊಟ್ಟೆ ತುಂಬಾ ಊಟ
ಗದುಗಿನಲ್ಲಿ ಕೇವಲ 5 ರೂ ಗೆ ಹೊಟ್ಟೆ ತುಂಬಾ ಊಟ
Pratidhvani Dhvani

Pratidhvani Dhvani

July 13, 2019
Share on FacebookShare on Twitter

ಗದುಗಿಗೆ ಬರುವ ಹಲವರ ಹಸಿವು ನೀಗಿಸಲು ಜನರಿಂದ ಜನರಿಗಾಗಿ ಎಂಬ ವಿಶಿಷ್ಟ ಯೋಜನೆಯ ಪ್ರಯತ್ನಯೊಂದು ಸಮಾನ ಮನಸ್ಕರಿಂದ ಶುರುವಾಯಿತು. ಕೇವಲ 5 ರೂಪಾಯಿಗೆ ಹೊಟ್ಟೆ ತುಂಬಾ ಊಟ ಕೊಡುವ ಯೋಜನೆ ಸಿದ್ಧಗೊಂಡಿತು. ಹಾಗಾದರೆ ನಮ್ಮ ನಮ್ಮ ಕೈಯಿಂದ ಸ್ವಲ್ಪದುಡ್ಡು ಹಾಕಿ ಶುಭ ಕಾರ್ಯ ಪ್ರಾರಂಭ ಮಾಡೋಣ ಮುಂದೆನಾಗುತ್ತೋ ನೋಡೋಣ ಎಂದು ಶುರು ಮಾಡಿಯೇ ಬಿಟ್ಟರು.

ಹೆಚ್ಚು ಓದಿದ ಸ್ಟೋರಿಗಳು

ಮೀಸಲಾತಿ ನೀಡದಿದ್ದರೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾದೀತು : ವೀಣಾ ಕಾಶಪ್ಪನವರ

ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಮಾತ್ರ PSI ಹಗರಣ ಬಗ್ಗೆ ನಿಷ್ಪಕ್ಷಪಾತ ತನಿಖೆ ಸಾಧ್ಯ : ರಾಹುಲ್‌ ಗಾಂಧಿ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

ಇದು ಮೂರುವರೆ ವರ್ಷಗಳ ಹಿಂದಿನ ಮಾತು. ಇಂದು ಆ ಒಂದು ಚಿಕ್ಕ ಪ್ರಯತ್ನ ನೂರಾರು ಜನರಿಗೆ ಕೇವಲ 5 ರೂಪಾಯಿಗೆ ಹೊಟ್ಟೆ ತುಂಬಾ ಊಟ ನೀಡುತ್ತಿದೆ. ಇದರ ಹೆಸರು ಅನ್ನಪೂರ್ಣ ಪ್ರಸಾದ ನಿಲಯ. ಅಂದು ಧೈರ್ಯ ಮಾಡಿ ಶುರು ಮಾಡಿದ ಈ ಪ್ರಯತ್ನವನ್ನು ಮೆಚ್ಚಿಕೊಂಡ ಕೆಲವರು ತಾವೇ ಖುದ್ದು ಮುಂದೆ ಬಂದ ಸಹಾಯ ಧನ ನೀಡತೊಡಗಿದರು. ಪ್ರತಿದಿನ ನೂರಾರು ಜನರು ಇಲ್ಲಿ ಊಟ ಮಾಡುತ್ತಿದ್ದಾರೆ. ಆಶಕ್ತ ವೃದ್ಧರು ಬಂದರೆ ಇಲ್ಲಿ ಊಟ ಉಚಿತ, ಚಿಕ್ಕ ಮಕ್ಕಳು ಹಾಗೂ ಶಾಲಾ ಮಕ್ಕಳು ಬಂದರೆ ಕೇವಲ 2 ರೂಪಾಯಿ.

ಹೌದು ಇದು ನಿಜ. ಗದುಗಿನ ಪತ್ರಕರ್ತರಾದ ಮಂಜುನಾಥ ಬೊಮ್ಮನಕಟ್ಟಿ, ಕಳಸಾಪೂರ ಶೆಟ್ಟರು ಮತ್ತು ಕೆಲವರು ಸೇರಿ ಈ ಯೋಜನೆಯನ್ನು ಸಾಕಾರಗೊಳಿಸಿದ್ದಾರೆ. ಗದುಗಿನ ಹಳೆಯ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ನಡೆಯುವ ಈ ಅನ್ನ ಸಂತರ್ಪಣೆ ಗದುಗಿನ ಜನರನ್ನು ಮಂತ್ರಮುಗ್ಧಗೊಳಿಸಿದೆ. ಇಂದು ಮಿನೆರಲ್ ವಾಟರ್ ಬಾಟಲ್ ಗೆ 20 ರೂ ತೆತ್ತಬೇಕು, ಬೇರೆ ಬೇರೆ ಹೊಟೆಲ್‍ಗಳಲ್ಲಿ 10 ರೂ ಗೆ ಕಾಫಿ, ಟೀ ಅಂದರೆ ಒಂದು ಸಣ್ಣ ಕಪ್ ನಲ್ಲಿ ಅದೂ ಅರ್ಧದ ಮೇಲಿರುವಂತೆ ಕೊಡುತ್ತಾರೆ. ಕೆಲವು ಪ್ರತಿಷ್ಠಿತ ಹೋಟೆಲ್ ಗಳಿಗೆ ಕಾಲಿಟ್ಟರೆ ಅನ್ನ ಸಾಂಬಾರಗೆ 40 ರೂ ತೆತ್ತಬೇಕು. ಇಂತಹ ಕಾಲದಲ್ಲಿ ಬರಿ ಐದೇ ರೂಪಾಯಿಗೆ ಹೊಟ್ಟೆ ತುಂಬಿಸುವ ಈ ಯೋಜನೆ ಶ್ಲಾಘನೀಯ.

ಹಾಗಂತ ಗುಣಮಟ್ಟ ಕಡಿಮೆಯೇನಿಲ್ಲ:

ಬರೀ 5 ರೂಪಾಯಿಗೆ ಕೊಡಬೇಕು ಅಂಥ ಅನ್ನ ಸಾಂಬಾರಿನ ಗುಣಮಟ್ಟ ಕಡಿಮೆ ಇರುವುದಿಲ್ಲ. ಉತ್ತಮ ಗುಣಮಟ್ಟದ ಅಕ್ಕಿ, ಬೇಳೆಯನ್ನು ಬಳಸುತ್ತಾರೆ. ಜೊತೆಗೆ ಒಂದು ಉಪ್ಪಿನಕಾಯಿಯೂ ಇರುತ್ತದೆ. ಇವರ ಬಿನ್ನಹವಿಷ್ಟೇ. ತಟ್ಟೆಯಲ್ಲಿ ಅನ್ನ ಬಿಡುವಂತಿಲ್ಲ, ಸ್ವಲ್ಪ ಸ್ವಲ್ಪ ದಂತೆ ನಾಲ್ಕೈದು ಬಾರಿ ಹಾಕಿಸಿಕೊಂಡರೂ ಪರವಾಗಿಲ್ಲ, ಆದರೆ, ಅನ್ನ ಬಿಡುವಂತಿಲ್ಲ.

ಸರಿಯಾಗಿ 1 ಗಂಟೆಗೆ ಆರಂಭವಾಗುವ ಈ ಸೇವೆ ಮಧ್ಯಾಹ್ನ 3 ರ ವರೆಗೂ ನಡೆಯುತ್ತದೆ. ಪ್ರತಿದಿನ 200 ರಿಂದ 300 ಜನರು ಇಲ್ಲಿ ಊಟ ಮಾಡುತ್ತಾರೆ.

ಜನರ ಮತ್ತು ಜನಪ್ರತಿನಿಧಿಗಳ ಪ್ರೀತಿಪೂರ್ವಕ ದೇಣಿಗೆ ಇವರಿಗೆ ಸಹಾಯ ಹಸ್ತ ಚಾಚಿದೆ. ಹಸಿದು ಬಂದ ಜನರ ಹಸಿವು ತೀರಿಸುವ ಇವರ ಕಾರ್ಯ ನಿಜಕ್ಕೂ ಅಭಿನಂದನಾರ್ಹ.

ಈ ಯೋಜನೆಯನ್ನು ಅನ್ನಪೂರ್ಣೇಶ್ವರಿ ಪ್ರಸಾದ ನಿಲಯವು ಜನವರಿ 2016 ರಲ್ಲಿ ಆರಂಭಿಸಿತು. ಅಂದಿನಿಂದ ಇವತ್ತಿನವರೆಗೂ ನಿತ್ಯ ತಪ್ಪದೇ ಅನ್ನ ದಾಸೋಹ ನಡೆಯುತ್ತಿದೆ. ಆಸ್ಪತ್ರೆಯಲ್ಲಿರುವ ರೋಗಿಗಳ ಸಹವರ್ತಿಗಳು ಸಂಬಂಧಿತ ರಸೀದಿಗಳನ್ನು ತೋರಿಸಿದರೆ ರೋಗಿಗಳಿಗೆ ಮತ್ತು ಸಹವರ್ತಿಗಳಿಗೆ ಉಚಿತ ಪಾರ್ಸಲ್ ಊಟವನ್ನು ನೀಡಲಾಗುವುದು. ಇಲ್ಲಿಯವರೆಗೆ ಅಂದಾಜು ಮುನ್ನೂರಕ್ಕೂ ಹೆಚ್ಚಿನ ಜನರು ಸ್ವಯಂ ಪ್ರೇರಣೆಯಿಂದ ಈ ಒಳ್ಳೆಯ ಕೆಲಸಕ್ಕೆ ದಾನ ಮಾಡಿದ್ದಾರೆ. ಪ್ರತಿದಿನ ಸುಮಾರು 600 ಜನರು ಅನ್ನ ಪ್ರಸಾದವನ್ನು ಸ್ವೀಕರಿಸುತ್ತಾರೆ ಎಂಬುದು ಪ್ರಸಾದ ನಿಲಯದ ಸೇವಕರ ಅಂಬೋಣ.

“ವೃತ್ತಿಯಿಂದ ನಾನೊಬ್ಬ ಪತ್ರಕರ್ತ, ಪ್ರವೃತ್ತಿಯಿಂದ ಸಮಾಜ ಸೇವಕ, ಮೊದಲಿನಿಂದಲೂ ಸಮಾಜ ಸೇವಾ ಕೈಂಕರ್ಯದಲ್ಲಿ ತೊಡಗಿದ್ದೇನೆ. ಏನಾದರೊಂದು ವಿನೂತನ ಸಮಾಜ ಸೇವೆಯನ್ನು ಮಾಡುವ ತುಡಿತ ನನ್ನ ಮನದಲ್ಲಿತ್ತು. ಹೀಗಾಗಿ ಸಮಾನ ಮನಸ್ಕರ ಜೊತೆಗೆ ಈ ಕಾರ್ಯವನ್ನು ಪ್ರಾರಂಭಿಸಿದೆ. ಜನರ ಬೆಂಬಲ ಮತ್ತು ಹಾರೈಕೆಯೂ ಸಿಕ್ಕಿತು. ನಿತ್ಯ ಜನರು ಇಲ್ಲಿ ಊಟ ಮಾಡಿ ನಮ್ಮನ್ನು ಹರಸಿ ಹೋಗುತ್ತಾರೆ. ಇದಕ್ಕಿಂತ ಹೆಚ್ಚಿನದೇನು ಬೇಕು,’’ ಎನ್ನುತ್ತಾರೆ ಪತ್ರಕರ್ತ ಮಂಜುನಾಥ ಬೊಮ್ಮನಕಟ್ಟಿ.

ಈ ಕೆಲಸದಲ್ಲಿ ಇವರಿಗೆ ಇಬ್ಬರು ಮಹಿಳೆಯರು – ಸುಭದ್ರಕ್ಕ ಮತ್ತು ಶೈಲಜಾ – ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅನ್ನ ಮತ್ತು ಸಾರು ನೀಡಲು ಪ್ರತಿದಿನ ಬರುತ್ತಾರೆ.

ಇಲ್ಲಿ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ಹಿರಿಯರ ಪುಣ್ಯಸ್ಮರಣೆ, ಗೃಹಪ್ರವೇಶ ಹಾಗೂ ಇನ್ನಿತರ ಆಚರಣೆಗಳನ್ನು ಆಚರಿಸಬಹುದು. ಒಂದು ದಿನದ ಪ್ರಸಾದ ವ್ಯವಸ್ಥೆಗೆ 9,000 ಸಾವಿರ ರೂಪಾಯಿ. ಸಿಹಿ ಪ್ರಸಾದಕ್ಕೆ 11,500 ರೂಪಾಯಿ ನೀಡಬಹುದು. ಇಲ್ಲಿ ಇಷ್ಟೇ ಕೊಡಬೇಕು ಎಂಬುದಿಲ್ಲ. ನಿಮ್ಮ ಮನದಿಚ್ಛೆ ಹಾಗೂ ಶಕ್ತ್ಯಾನುಸಾರ 5 ರೂ ಯಿಂದ ಎಷ್ಟಾದರೂ ಕೊಡಬಹುದು ಮತ್ತು ವಸ್ತುಗಳ ರೂಪದಲ್ಲಿಯೂ ದಾನ ಮಾಡಬಹುದು.

“ನನ್ನ ಹೆಂಡತಿ ಆಸ್ಪತ್ರೆಯಲ್ಲಿದ್ದಾಳೆ. ನಾನು ಅವಳೊಡನೆ ಇಲ್ಲೇ ವಾರದಿಂದ ಇದ್ದೇನೆ. ಬೇರೆ ಹೋಟೆಲ್ ಹೋದರೆ ರೂ 50 ರವರೆಗೂ ಊಟಕ್ಕಾಗಿ ಕೊಡಬೇಕು. ಇಲ್ಲಿ ಬರೀ 5 ರೂ ಗೆ ಹೊಟ್ಟೆ ತುಂಬಾ ಊಟ ಸಿಗುತ್ತೆ. ನನ್ನ ಹೆಂಡತಿಗೂ ಇಲ್ಲಿಂದಲೇ ಪಾರ್ಸಲ್ಲು ಒಯ್ಯುತ್ತೇನೆ,’’ ಎನ್ನುತ್ತಾರೆ ಮಲ್ಲಪ್ಪ ಎಂಬ ಮುಳಗುಂದದ ನಿವಾಸಿ.

“ಇಲ್ಲಿ ಮೊದಲು ಜನರು ಸಾಲುಗಟ್ಟಿ ನಿಲ್ಲುತ್ತಿದ್ದನ್ನು ನೋಡುತ್ತಿದ್ದೆ. 5 ರೂಗೆ ಇವರೆಂಥ ಊಟ ಕೊಡಬಹುದು ಎಂದು ಒಂದು ಸಾರಿ ರುಚಿ ನೋಡಲು ಬಂದಿದ್ದೇನೆ. ತಿಂದ ಮೇಲೆ ಅನಿಸಿತು ಇದು ನಿಜಕ್ಕೂ ಚೆನ್ನಾಗಿದೆ,’’ ಎನ್ನುತ್ತಾರೆ ಹಾತಲಗೇರಿಯ ಮಾರುತಿ ಬೇಲೇರಿ.

ಇಷ್ಟೆಲ್ಲ ವಿವಿರಗಳನ್ನರಿತ ಮೇಲೆ ಇದು ಎಲ್ಲಿದೆ ಎಂಬ ಕಾತುರವೇ – ಗದುಗಿನ ಗಾಂಧೀ ವೃತ್ತದ ಹತ್ತಿರವಿರುವ ಹಳೆಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಬಣ್ಣ ಬಣ್ಣದ ಆಸನಗಳು ಕಾಣಿಸುತ್ತವೆ. ಇದೇ ಶ್ರೀ ಅನ್ನಪೂರ್ಣೇಶ್ವರಿ ಪ್ರಸಾದ ನಿಲಯ.

RS 500
RS 1500

SCAN HERE

don't miss it !

ಕರ್ನಾಟಕಕ್ಕೆ ಕಾಲಿಡುವುದೇ ಶರದ್‌ ಪವಾರ್‌ ಸಾರಥ್ಯದ ಎನ್‌ ಸಿಪಿ?
ದೇಶ

6 ತಿಂಗಳಲ್ಲಿ ಸರಕಾರ ಪತನ: ಶರದ್‌ ಪವಾರ್‌ ಭವಿಷ್ಯ

by ಪ್ರತಿಧ್ವನಿ
July 4, 2022
ಪಂತ್- ಜಡೇಜಾ ಭರ್ಜರಿ ಜೊತೆಯಾಟ: ಭಾರತಕ್ಕೆ ದಿನದ ಗೌರವ!
ಕ್ರೀಡೆ

ಪಂತ್- ಜಡೇಜಾ ಭರ್ಜರಿ ಜೊತೆಯಾಟ: ಭಾರತಕ್ಕೆ ದಿನದ ಗೌರವ!

by ಪ್ರತಿಧ್ವನಿ
July 2, 2022
ರಿಲಯನ್ಸ್‌ ಜಿಯೊದಿಂದ ಹೊರನಡೆದ ಮುಖೇಶ್‌ ಅಂಬಾನಿ; ಪುತ್ರ ಆಕಾಶ್‌ ಮುಖ್ಯಸ್ಥ!
ವಾಣಿಜ್ಯ

ರಿಲಯನ್ಸ್‌ ಜಿಯೊದಿಂದ ಹೊರನಡೆದ ಮುಖೇಶ್‌ ಅಂಬಾನಿ; ಪುತ್ರ ಆಕಾಶ್‌ ಮುಖ್ಯಸ್ಥ!

by ಪ್ರತಿಧ್ವನಿ
June 28, 2022
ಕರ್ನಾಟಕದಾದ್ಯಂತ ಮುಂದಿನ 4 ದಿನಗಳ ಕಾಲ ಅಧಿಕ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
ಕರ್ನಾಟಕ

ಕರ್ನಾಟಕದಾದ್ಯಂತ ಮುಂದಿನ 4 ದಿನಗಳ ಕಾಲ ಅಧಿಕ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

by ಪ್ರತಿಧ್ವನಿ
June 30, 2022
ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಗಳೂ ಶಾಲಾ ಬಸ್ ಖರೀದಿಸಬಹುದು : ರಾಜ್ಯ ಸರ್ಕಾರ ಆದೇಶ
ಕರ್ನಾಟಕ

ಮಕ್ಕಳ ಅನುಕೂಲಕ್ಕಾಗಿ ಸರ್ಕಾರಿ ಶಾಲೆಗಳೂ ಶಾಲಾ ಬಸ್ ಖರೀದಿಸಬಹುದು : ರಾಜ್ಯ ಸರ್ಕಾರ ಆದೇಶ

by ಪ್ರತಿಧ್ವನಿ
July 2, 2022
Next Post
ಮೌಲ್ಯ ರಹಿತ ರಾಜಕಾರಣದ ಪಟ್ಟಿಗೆ ಕರ್ನಾಟಕವೂ ಸೇರಿತು

ಮೌಲ್ಯ ರಹಿತ ರಾಜಕಾರಣದ ಪಟ್ಟಿಗೆ ಕರ್ನಾಟಕವೂ ಸೇರಿತು

ಹೊಸ ಸಂಪ್ರದಾಯ ಪರಿಚಯಿಸುವ ಹೊಸ ಸಮಸ್ಯೆಗಳು

ಹೊಸ ಸಂಪ್ರದಾಯ ಪರಿಚಯಿಸುವ ಹೊಸ ಸಮಸ್ಯೆಗಳು

ಮತ್ತೊಮ್ಮೆ “ಮಾದರಿ” ಎನಿಸಲಿದೆಯೇ ಕರ್ನಾಟಕ

ಮತ್ತೊಮ್ಮೆ “ಮಾದರಿ” ಎನಿಸಲಿದೆಯೇ ಕರ್ನಾಟಕ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist