Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

`ಕೈ’ಯಿಂದ ಜಾರಿರುವ ಮುಂಬಯಿ – ಕರ್ನಾಟಕ ಬಿಜೆಪಿಗೆ ಸುಲಭ ತುತ್ತು

ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಜನತಾದಳ ಹುಟ್ಟಿತಾದರೂ ಆಂತರಿಕ ಕಲಹದಿಂದಾಗಿ ನಾಯಕರು ಕಾಂಗ್ರೆಸ್, ಬಿಜೆಪಿಯಲ್ಲಿ ಹಂಚಿಹೋದದ್ದು ಇತಿಹಾಸ.
`ಕೈ’ಯಿಂದ ಜಾರಿರುವ ಮುಂಬಯಿ - ಕರ್ನಾಟಕ ಬಿಜೆಪಿಗೆ ಸುಲಭ ತುತ್ತು
Pratidhvani Dhvani

Pratidhvani Dhvani

April 12, 2019
Share on FacebookShare on Twitter

ಎರಡು ದಶಕಗಳ ಹಿಂದಿನವರೆಗೂ ಕಾಂಗ್ರೆಸ್ಸಿನ ಭದ್ರ ಕೋಟೆಯಾಗಿದ್ದ ಮುಂಬಯಿ ಕರ್ನಾಟಕ (ಬೆಳಗಾವಿ,
ಧಾರವಾಡ, ವಿಜಯಪುರ ಮತ್ತು ಉತ್ತರ ಕನ್ನಡ ಜಿಲ್ಲೆಗಳು) ಕ್ರಮೇಣ ಬಿಜೆಪಿಯ ಮಡಿಲಿಗೆ ವಾಲುತ್ತಿದೆ. ಈ ನಾಲ್ಕು ಜಿಲ್ಲೆಗಳ ಪೈಕಿ ಧಾರವಾಡವನ್ನು ವಿಭಜಿಸಿ ಗದಗ ಮತ್ತು ಹಾವೇರಿ ಹಾಗೂ ವಿಜಯಪುರವನ್ನು ವಿಭಜಿಸಿ ಬಾಗಲಕೋಟೆ ಜಿಲ್ಲೆಗಳನ್ನು ರಚಿಸಲಾಗಿದೆ. ಇದರಿಂದಾಗಿ ಸದ್ಯ ಏಳು ಜಿಲ್ಲೆಗಳಾಗಿವೆ.

ಹೆಚ್ಚು ಓದಿದ ಸ್ಟೋರಿಗಳು

ನ್ಯಾಯ ವ್ಯವಸ್ಥೆಯನ್ನೂ ಬೆದರಿಸುವ ಭ್ರಷ್ಟಾಚಾರದ ಪೆಡಂಭೂತ

ಹಿಂದುತ್ವದ ಭ್ರಮೆ ಬಿತ್ತುವ ಮೂಲಕ ರಾಜಕೀಯದಲ್ಲಿ ಧರ್ಮದ ದುರ್ಬಳಕೆ

ಸ್ವಚ್ಚ ಭಾರತದ ಸವಿಗನಸೂ ಪೌರಕಾರ್ಮಿಕರ ಬವಣೆಯೂ – ನಾ ದಿವಾಕರ

ಕಾಂಗ್ರೆಸ್ಸಿಗೆ ಪರ್ಯಾಯವಾಗಿ ರಾಜ್ಯದಲ್ಲಿ ಜನತಾ ಪಕ್ಷ, ಜನತಾ ದಳ ಅಸ್ತಿತ್ವಕ್ಕೆ ಬಂದವಾದರೂ ಆಂತರಿಕ ಕಲಹಗಳ ಪರಿಣಾಮವಾಗಿ ಆ ಪಕ್ಷಗಳ ನಾಯಕರು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಹಂಚಿಹೋದದ್ದು ಈಗ ಇತಿಹಾಸ.

2004ರ ವಿಧಾನಸಭೆ ಚುನಾವಣೆಯ ಕಾಲಕ್ಕೆ ಜನತಾದಳದ ಅನೇಕ ನಾಯಕರು ಕಾಂಗ್ರೆಸ್‌ ಮುಖ್ಯಮಂತ್ರಿ ಎಸ್. ಎಮ್. ಕೃಷ್ಣರ  ಸೆಳೆತಕ್ಕೆ ಒಳಗಾದರೆ, ನಂತರ 2008ರ ಹೊತ್ತಿಗೆ ಇನ್ನು ಕೆಲವರು ಬಿಜೆಪಿಯತ್ತ ವಲಸೆ ಹೋದರು. ರಾಮಕೃಷ್ಣ ಹೆಗಡೆಯವರು ಇನ್ನೂ ಜೀವಂತವಾಗಿದ್ದಾಗಲೇ ಜನತಾದಳವು ಅವಸಾನಗೊಂಡಿತು. ದಕ್ಷಿಣ ಕರ್ನಾಟಕದಲ್ಲಿ ದೇವೇಗೌಡರು ಜನತಾದಳ (ಜಾತ್ಯಾತೀತ) ಉಳಿಸಿಕೊಂಡು ಕುಟುಂಬ ರಾಜಕಾರಣವನ್ನು ಮುಂದುವರಿಸಿದ್ದು ಕಟು ವಾಸ್ತವ.

ಉತ್ತರ ಕರ್ನಾಟಕದ ಪ್ರಭಾವಿ ಸಮಾಜವಾದ ಲಿಂಗಾಯತರು ಜನತಾದಳದ ಮತಬ್ಯಾಂಕ್ ಆಗಿದ್ದು ಸುಳ್ಳೇನಲ್ಲ. ಕಾಂಗ್ರೆಸ್ ವಿರುದ್ಧವೇ ರಾಜಕೀಯ ಮಾಡುತ್ತ ಬಂದಿದ್ದ ಜನತಾದಳದ ನಾಯಕರು ಬಿಜೆಪಿ ಆಶ್ರಯ ಪಡೆದಾಗ, ಸಹಜವಾಗಿ ಲಿಂಗಾಯತರು ಬಿಜೆಪಿಯ ಮತಬ್ಯಾಂಕ್ ಆಗಿ ಪರಿವರ್ತನೆಯಾದರು.

ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತುಸು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಸಮೀಪಕ್ಕೆ ಬಂದೂ ಅಧಿಕಾರದಿಂದ ವಂಚಿತರಾದ ಲಿಂಗಾಯತ ಸಮಾಜದ ಮತದಾರರು ಈ ಚುನಾವಣೆಯಲ್ಲಿ ಬಿಜೆಪಿ ಪರವಾಗಿಯೇ ಗಟ್ಟಿಯಾಗಿಯೇ ನಿಲ್ಲುವ ಸೂಚನೆಗಳಿವೆ. ಮೈತ್ರಿ ಸರಕಾರದ ಹತ್ತು ತಿಂಗಳ ಆಡಳಿತ ಮತ್ತು ಮೈತ್ರಿ ಪಕ್ಷಗಳ ಕಚ್ಚಾಟದ ದುಷ್ಪರಿಣಾಮ ಪ್ರಸಕ್ತ ಚುನಾವಣೆಯ ಮೇಲೆ ಬೀರುವ ಎಲ್ಲ ಸಾಧ್ಯತೆಗಳೂ ಇವೆ.

ಮುಂಬಯಿ ಕರ್ನಾಟಕದಲ್ಲಿ ಜೆಡಿಎಸ್ ಅಸ್ತಿತ್ವ ಬಹುತೇಕ ಕಡೆ ಇಲ್ಲ. ಆದರೂ ವಿಜಯಪುರ ಮತ್ತು ಉತ್ತರ ಕನ್ನಡ ಮತಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲಾಗಿದೆ. ಉಳಿದ ಕಡೆಗಳಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಅವಶ್ಯಕತೆಯೇ ಇಲ್ಲ. ಜೆಡಿಎಸ್ ಇಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ.

ಈ ಲೋಕಸಭೆ ಚುನಾವಣೆಯಲ್ಲಿ ಯಾವ ಪ್ರಮುಖ ಸಮಸ್ಯೆಗಳೂ ಚುನಾವಣಾ ವಿಷಯಗಳಾಗಿಲ್ಲ. ರಾಷ್ಟ್ರ ಮಟ್ಟದ ಭಾವನಾತ್ಮಕ ವಿಷಯಗಳನ್ನು ಮಾತ್ರ ಮತದಾರರು ಗಣನೆಗೆ ತೆಗೆದುಕೊಳ್ಳುತ್ತಿದ್ದಾರೆಯೇ ಹೊರತು ಮಹಾದಾಯಿ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆ, ನನೆಗುದಿಗೆ ಬಿದ್ದ ರೈಲು ಯೋಜನೆಗಳ ಬಗ್ಗೆ ಮತದಾರರು ತಲೆಕೆಡಿಸಿಕೊಂಡಿಲ್ಲ. ಮತದಾರರು ಮತ್ತು ಹೋರಾಟಗಾರರಿಗೆ ಈ ಬಗ್ಗೆ ಅನಾಸಕ್ತಿ ಇರುವುದು ರಾಜಕೀಯ ಪಕ್ಷಗಳಿಗೆ ಒಂದು ರೀತಿಯಲ್ಲಿ ಅನುಕೂಲವೇ ಆಗಿದೆ.

ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ನಾಯಕರಲ್ಲಿ ಕಳೆದ ವರ್ಷ ಉಂಟಾದ ರಾಜಕೀಯ ತಿಕ್ಕಾಟ, ಬಂಡಾಯ ಇನ್ನೂ ಶಮನವಾಗದಿರುವುದು ಪಕ್ಷದ ರಾಜ್ಯ ನಾಯಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿಯನ್ನು ಎದುರಿಸಲು ಒಗ್ಗಟ್ಟಿನ ಪ್ರದರ್ಶನ ಮಾಡುವುದು ಸಹ ಕಾಂಗ್ರೆಸ್ ನಾಯಕರಿಗೆ ಸಾಧ್ಯವಾಗುತ್ತಿಲ್ಲ.

ರಾಜ್ಯ ನಾಯಕರಾದ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರ ಕೈ ಮೀರಿದ ಬೆಳವಣಿಗೆಗಳು ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವುದು ಸ್ಪಷ್ಟವಾಗತೊಡಗಿದೆ. ಜಿಲ್ಲೆಯ ನಾಯಕರ ಒಣಪ್ರತಿಷ್ಠೆ ಮತ್ತು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದು ಜಿಲ್ಲೆಯಲ್ಲಿ ಪಕ್ಷಕ್ಕೆ ಹಿನ್ನಡೆಗೆ ಕಾರಣವಾದರೂ ಅಚ್ಚರಿಯೇನಲ್ಲ.

ಅಂಕಣಕಾರರು ಹಿರಿಯ ಪತ್ರಕರ್ತರು

RS 500
RS 1500

SCAN HERE

don't miss it !

ಪ್ರೈಂಟೈಂ ಡಿಸ್ಕಷನ್ ಬದಲು ರಿಯಾಲಿಟಿ ಶೋ ಮಾಡಿ ಅಥವಾ ಆ್ಯಂಕರ್ ಗಳನ್ನು ಕಿತ್ತಾಕಿ ಸುದ್ದಿ ನೀಡಿ
ದೇಶ

ಪ್ರೈಂಟೈಂ ಡಿಸ್ಕಷನ್ ಬದಲು ರಿಯಾಲಿಟಿ ಶೋ ಮಾಡಿ ಅಥವಾ ಆ್ಯಂಕರ್ ಗಳನ್ನು ಕಿತ್ತಾಕಿ ಸುದ್ದಿ ನೀಡಿ

by ಯದುನಂದನ
July 4, 2022
ರಸ್ತೆ ಮೇಲೆ ಮಳೆ ನೀರು ತಡೆಗಟ್ಟಲು ಕ್ರಾಸ್ ಕಲ್ವರ್ಟ್ಸ್ ಅಳವಡಿಕೆ : BBMP ಕಮಿಷನರ್ ತುಷಾರ್ ಗಿರಿನಾಥ್ !
ಕರ್ನಾಟಕ

ರಸ್ತೆ ಮೇಲೆ ಮಳೆ ನೀರು ತಡೆಗಟ್ಟಲು ಕ್ರಾಸ್ ಕಲ್ವರ್ಟ್ಸ್ ಅಳವಡಿಕೆ : BBMP ಕಮಿಷನರ್ ತುಷಾರ್ ಗಿರಿನಾಥ್ !

by ಕರ್ಣ
July 2, 2022
ಅಮರಾವತಿ ಕೊಲೆ ಪ್ರಕರಣ; ಮಾಸ್ಟರ್ ಮೈಂಡ್ ಬಂಧನ
ದೇಶ

ಅಮರಾವತಿ ಕೊಲೆ ಪ್ರಕರಣ; ಮಾಸ್ಟರ್ ಮೈಂಡ್ ಬಂಧನ

by ಪ್ರತಿಧ್ವನಿ
July 3, 2022
ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ
ಕರ್ನಾಟಕ

ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ

by ಪ್ರತಿಧ್ವನಿ
July 3, 2022
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮೇಲೆ ACB ದಾಳಿ : ಅಷ್ಟಕ್ಕೂ ACB ಕೆಲಸ ಏನು.!?
ಕರ್ನಾಟಕ

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮೇಲೆ ACB ದಾಳಿ : ಅಷ್ಟಕ್ಕೂ ACB ಕೆಲಸ ಏನು.!?

by ಕರ್ಣ
July 5, 2022
Next Post
ನಿಗೂಢ ನಮೋ ಟೀವಿ  ಮತ್ತು ‘ಅಸಹಾಯಕ’ ಚುನಾವಣಾ ಆಯೋಗ

ನಿಗೂಢ ನಮೋ ಟೀವಿ ಮತ್ತು ‘ಅಸಹಾಯಕ’ ಚುನಾವಣಾ ಆಯೋಗ

ಮೈತ್ರಿಯಲ್ಲಿ ಎಡವುತ್ತಲೇ ಬಂದ ಕಾಂಗ್ರೆಸ್‌ಗೆ ದುಬಾರಿ ಆಗಲಿದೆ 2019ರ ಚುನಾವಣೆ

ಮೈತ್ರಿಯಲ್ಲಿ ಎಡವುತ್ತಲೇ ಬಂದ ಕಾಂಗ್ರೆಸ್‌ಗೆ ದುಬಾರಿ ಆಗಲಿದೆ 2019ರ ಚುನಾವಣೆ

ಪಕ್ಷೇತರರ ಕಹಳೆ ಸದ್ದು  ಸಂಸತ್ತಿಗೆ ತಲುಪುವುದೇ?

ಪಕ್ಷೇತರರ ಕಹಳೆ ಸದ್ದು ಸಂಸತ್ತಿಗೆ ತಲುಪುವುದೇ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist