Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಕೈಮೀರಿದ ಕೃಷ್ಣಾ ತೀರದ ಸ್ಥಿತಿ; ಒಪ್ಪಂದಕ್ಕೆ ಸಿದ್ಧ ಎಂದ ಕರ್ನಾಟಕ

ನೀರು ವಿನಿಮಯ ಒಪ್ಪಂದಕ್ಕೆ ಸಿದ್ಧ ಇರುವುದಾಗಿ ಕರ್ನಾಟಕ ಬರೆದ ಪತ್ರಕ್ಕೆ ಮಹಾರಾಷ್ಟ್ರ ಸರಕಾರದಿಂದ ಯಾವುದೇ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕೈಮೀರಿದ ಕೃಷ್ಣಾ ತೀರದ ಸ್ಥಿತಿ;  ಒಪ್ಪಂದಕ್ಕೆ ಸಿದ್ಧ ಎಂದ ಕರ್ನಾಟಕ
Pratidhvani Dhvani

Pratidhvani Dhvani

May 15, 2019
Share on FacebookShare on Twitter

ಕೃಷ್ಣಾ ನದಿ ತೀರದ ಜನತೆಯ ದಾಹ ನೀಗಿಸಲು ಕೊಯ್ನಾ ನೀರು ಬಿಡುಗಡೆಗಾಗಿ ‘ನೀರು ವಿನಿಮಯ ಒಪ್ಪಂದ’ ಮಾಡಿಕೊಳ್ಳಲು ಸಿದ್ಧವಿರುವುದಾಗಿ ತಿಳಿಸಿ ಕರ್ನಾಟಕ ಸರಕಾರ ಸೋಮವಾರ ಸಂಜೆ ಮಹಾರಾಷ್ಟ್ರಕ್ಕೆ ಪತ್ರ ಬರೆದಿದೆ. ರಾಜ್ಯ ನೀರಾವರಿ ಇಲಾಖೆಯಿಂದ ಈ ಪತ್ರ ಹೋಗಿದ್ದು, ಮಹಾರಾಷ್ಟ್ರ ಯಾವ ರೀತಿಯಿಂದ ಪ್ರತಿಕ್ರಿಯಿಸುವುದೆಂಬುದು ಇನ್ನೂ ಗೊತ್ತಾಗಿಲ್ಲ. ಮಹಾರಾಷ್ಟ್ರದ ಕೊಯ್ನಾ ಜಲಾಶಯ, ಸಾಂಗ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಇಂದಿನವರೆಗೂ ಅಲ್ಲಿಯ ಸರಕಾರದಿಂದ ಯಾವುದೇ ಆದೇಶ ಬಂದಿಲ್ಲ.

ಹೆಚ್ಚು ಓದಿದ ಸ್ಟೋರಿಗಳು

ಬೆಂಗಳೂರು ಜೈಲಿನಿಂದಲೇ ವಿಡಿಯೋ ಪೋಸ್ಟ್‌ ಮಾಡಿದ ಹರ್ಷ ಕೊಲೆ ಆರೋಪಿ!

ಸರಳ ವಾಸ್ತುಗೂ ಮುನ್ನ ಚಂದ್ರಶೇಖರ್‌ ಗುರೂಜಿ ಏನಾಗಿದ್ದರು ಗೊತ್ತಾ?

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಧರೆಗುರುಳಿದ ವಿದ್ಯುತ್ ಕಂಬಗಳು!

ಈ ಮಧ್ಯೆ, ಮಹಾರಾಷ್ಟ್ರದ ಶಿರೋಳ ಶಾಸಕ ಉಲ್ಹಾಸರಾವ ಪಾಟೀಲ ಅವರು ಸ್ವತಃ ರಾಜಾಪುರ ಬ್ಯಾರೇಜಿಗೆ ಹೋಗಿ, ಗೇಟ್ ತೆರೆದು, 500 ಕ್ಯೂಸೆಕ್ಸ್ ನೀರನ್ನು ಬಿಡುಗಡೆಗೊಳಿಸಿದ್ದು ಕೃಷ್ಣಾ ತೀರದ ಎರಡೂ ಬದಿಗಿರುವ ಕನ್ನಡ ಮತ್ತು ಮರಾಠಿ ಗ್ರಾಮಗಳ ಜನರಿಗೆ ಸಂತಸ ತಂದಿದೆ.

ಮಹಾರಾಷ್ಟ್ರದ ಟಾಕಳೆ ಮತ್ತು ಕರ್ನಾಟಕದ ಚಂದೂರಟೇಕ್ ಗ್ರಾಮಗಳ ಜನರು ತಮ್ಮಲ್ಲಿಗೆ ತಲುಪಿದ ರಾಜಾಪುರ ಬ್ಯಾರೇಜ್ ನೀರು ಮುಂದೆ ಹೋಗದಂತೆ ತಡೆಯಲು ಮಣ್ಣಿನ ಒಡ್ಡು ಹಾಕಿದ್ದಾರೆಂದು ಕೆಳಗಿನ ಭಾಗದ ಗ್ರಾಮಸ್ಥರು ಮಂಗಳವಾರ ಚಿಕ್ಕೋಡಿ ತಹಸಿಲ್ದಾರರಿಗೆ ತಕರಾರು ಮಾಡಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳ ಜಂಟಿ ಯೋಜನೆಯಾದ ದೂಧಗಂಗಾ ಯೋಜನೆಯ ಕಾಳಮ್ಮವಾಡಿ ಜಲಾಶಯದಿಂದ ಕಳೆದ ವಾರ ಬಿಟ್ಟ ನೀರು ಕಾರದಗಾ, ಸದಲಗಾ, ಬೋರಗಾಂವ, ಗೋಸರವಾಡಾ, ಮಲ್ಲಿಕವಾಡಾ ಬ್ಯಾರೇಜಗಳನ್ನು ಸೋಮವಾರವೇ ದಾಟಿದೆ. ಬರುವ ಗುರುವಾರದವರೆಗೆ ಈ ನೀರು ಕಲ್ಲೋಳ ಬಳಿ ಕೃಷ್ಣೆಗೆ ಸೇರಲಿದೆ.

ಎಪ್ಪತ್ತರ ದಶಕದಲ್ಲಿ ಅಸ್ತಿತ್ವಕ್ಕೆ ಬಂದ ದೂಧಗಂಗಾ ಯೋಜನೆಯ ಅನುಷ್ಠಾನಕ್ಕೆ ಕರ್ನಾಟಕವು ತನ್ನ ಪಾಲಿನ 390 ಕೋಟಿ ರೂ.ಗಳನ್ನು ತೊಡಗಿಸಿದೆ. ಡಿಸೆಂಬರ್‌ನಿಂದ ಜೂನ್‌ವರೆಗೆ ಈ ಯೋಜನೆಯಿಂದ ಕರ್ನಾಟಕಕ್ಕೆಸುಮಾರು 5 ಟಿಎಂಸಿ ನೀರು ಸಿಗುತ್ತಿದೆ. ಈ ಪಾಲಿನ ಪೈಕಿ ಇನ್ನೂ 0.55 ಟಿಎಂಸಿ ನೀರು ನಮಗೆ ಬರಬೇಕಾಗಿದೆ.

ರಾಯಬಾಗ ,ಅಥಣಿ ತಾಲೂಕಿನ ಗ್ರಾಮಗಳಲ್ಲಿಯ ಕೊಳವೆಬಾವಿಗಳಲ್ಲೂ ನೀರು ಬರುತ್ತಿಲ್ಲ. ಉಗಾರದ ಬ್ಯಾರೇಜ್ ಬಿಕೊ ಎನ್ನುತ್ತಿದ್ದು, ಜಾನವಾರುಗಳಂತೂ ನೀರಿಲ್ಲದೆ ಒದ್ದಾಡುತ್ತಿವೆ. ರಾಯಬಾಗದ ಬಳಿ ಒಣಗಿದ ನದಿಯ ಒಡಲಲ್ಲೇ ಬಾವಿ ತೆಗೆದು ನೀರು ಸೇದಲು ಜನರು ಯತ್ನಿಸುತ್ತಿದ್ದಾರೆ.

ಮೈತ್ರಿ ಸರಕಾರದ ಅಂಗಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಪ್ರತಿಪಕ್ಷವಾದ ಬಿಜೆಪಿ ನಾಯಕರು ಕುಂದಗೋಳ, ಚಿಂಚೋಳಿ ಉಪಚುನಾವಣೆಗಳಲ್ಲಿ ಮುಳುಗಿಹೋಗಿದ್ದು, ಬರಗಾಲ, ನೀರಿನ ತೀವ್ರ ಅಭಾವದತ್ತ ಗಮನಹರಿಸಲೂ ಅವರಿಗೆ ಸಮಯವಿಲ್ಲದಂತಾಗಿದೆ. ಕೊಯ್ನಾ ನೀರಿನ ಬಿಡುಗಡೆ ಸಂಬಂಧ ಸಂಪೂರ್ಣ ಹೊಣೆಯನ್ನು ಹಿರಿಯ ಅಧಿಕಾರಿಗಳ ಮೇಲೆಯೇ ಹೊರಿಸಲಾಗಿದೆ. ತಮಗೂ ಒಂದು ಮಿತಿಯಿದ್ದು, ಮಹಾರಾಷ್ಟ್ರಸರಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಸಚಿವರು, ಶಾಸಕರು ಮಾತ್ರ ಮಾಡಲು ಸಾಧ್ಯ ಎಂದು ಹಿರಿಯ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಮುಂಗಾರು ಮಳೆ ವಿಳಂಬವಾದಲ್ಲಿ ಕೃಷ್ಣಾ ತೀರದ ಅನೇಕ ಗ್ರಾಮಗಳ ಜನರು ಗುಳೆ ಹೋಗುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ.

RS 500
RS 1500

SCAN HERE

don't miss it !

IT ಸೆಲ್‌ ಫೋಟೋಶಾಪ್ ಮೂಲಕ ಅಭಿವೃದ್ಧಿಯ ಪರ್ವವನ್ನೇ ಹರಿಸಿದ್ದೀರಿ : ಪ್ರತಾಪ್‌ ಸಿಂಹಗೆ ಹೆಚ್‌.ಸಿ ಮಹದೇವಪ್ಪ ಟಾಂಗ್
ಕರ್ನಾಟಕ

IT ಸೆಲ್‌ ಫೋಟೋಶಾಪ್ ಮೂಲಕ ಅಭಿವೃದ್ಧಿಯ ಪರ್ವವನ್ನೇ ಹರಿಸಿದ್ದೀರಿ : ಪ್ರತಾಪ್‌ ಸಿಂಹಗೆ ಹೆಚ್‌.ಸಿ ಮಹದೇವಪ್ಪ ಟಾಂಗ್

by ಪ್ರತಿಧ್ವನಿ
June 30, 2022
ಹುಬ್ಬಳ್ಳಿಯಲ್ಲಿ ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗೂರೂಜಿ ಕಗ್ಗೊಲೆ
ಕರ್ನಾಟಕ

ಚಂದ್ರಶೇಖರ್‌ ಗುರೂಜಿಗೆ 60 ಬಾರಿ ಇರಿತ, ಹುಬ್ಬಳ್ಳಿ-ಧಾರವಾಡದಲ್ಲಿ ಹೈಅಲರ್ಟ್!

by ಪ್ರತಿಧ್ವನಿ
July 5, 2022
ಡಾಲರ್‌ ಎದುರು ಮತ್ತೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ!
ದೇಶ

ಡಾಲರ್‌ ಎದುರು ಸಾರ್ವಕಾಲಿಕ 79 ರೂ.ಗೆ ಕುಸಿದ ರೂಪಾಯಿ!

by ಪ್ರತಿಧ್ವನಿ
July 1, 2022
ದೇಶದ ಅತ್ಯಂತ ದುಬಾರಿ ನಗರಿ ಮುಂಬೈ!
ದೇಶ

ದೇಶದ ಅತ್ಯಂತ ದುಬಾರಿ ನಗರಿ ಮುಂಬೈ!

by ಪ್ರತಿಧ್ವನಿ
June 30, 2022
ಎರಡು ವರ್ಷದಲ್ಲಿ ಅಮೃತ ನಗರೋತ್ಥಾನ ಯೋಜನೆ ಪೂರ್ಣಗೊಳಿಸಲು ಸಿಎಂ ಬೊಮ್ಮಾಯಿ ಸೂಚನೆ
ಕರ್ನಾಟಕ

ಕನ್ನಡದ ಪತ್ರಿಕೋದ್ಯಮಕ್ಕೆ ಉತ್ತಮ ಭವಿಷ್ಯವಿದೆ : ಸಿಎಂ ಬಸವರಾಜ ಬೊಮ್ಮಾಯಿ

by ಪ್ರತಿಧ್ವನಿ
July 1, 2022
Next Post
ಕರ್ನಾಟಕದ ಕಣ್ಣಾಮುಚ್ಚಾಲೆಯಲ್ಲಿ ಯಾರ ಬಾಲ ಯಾರು ಅಲ್ಲಾಡಿಸುತ್ತಿದ್ದಾರೆ?

ಕರ್ನಾಟಕದ ಕಣ್ಣಾಮುಚ್ಚಾಲೆಯಲ್ಲಿ ಯಾರ ಬಾಲ ಯಾರು ಅಲ್ಲಾಡಿಸುತ್ತಿದ್ದಾರೆ?

ಹ್ಯಾಕರ್ ಕೈ ಸೇರುವ ಮುನ್ನ Whatsapp ಅಪ್ಡೇಟ್ ಮಾಡಿ

ಹ್ಯಾಕರ್ ಕೈ ಸೇರುವ ಮುನ್ನ Whatsapp ಅಪ್ಡೇಟ್ ಮಾಡಿ

ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ತೀರ್ಪಿನಲ್ಲಿ ಸುಪ್ರೀಂ ಹೇಳಿದ 5 ಮುಖ್ಯ ಮಾತು

ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ತೀರ್ಪಿನಲ್ಲಿ ಸುಪ್ರೀಂ ಹೇಳಿದ 5 ಮುಖ್ಯ ಮಾತು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist