Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಕುಂಬಾರ ಬೀದಿಯ ಕುಟುಂಬವನ್ನು ಬೀದಿಗೆ ತಂದ ಮಳೆ

ಕುಂಬಾರ ಬೀದಿಯ ಕುಟುಂಬವನ್ನು ಬೀದಿಗೆ ತಂದ ಮಳೆ
ಕುಂಬಾರ ಬೀದಿಯ ಕುಟುಂಬವನ್ನು ಬೀದಿಗೆ ತಂದ ಮಳೆ
Pratidhvani Dhvani

Pratidhvani Dhvani

August 15, 2019
Share on FacebookShare on Twitter

ಆರ್ಡರ್‌ ತೆಗೆದುಕೊಂಡಿದ್ದ ಇನ್ನೂರು ಗಣಪತಿಗಳೂ ಸಿದ್ಧವಾಗಿದ್ವು, ನೂರಕ್ಕೂ ಅಧಿಕ ಮೂರ್ತಿಗಳು ಮಾರುಕಟ್ಟೆಗೆ ಹೊಗಬೇಕಿತ್ತು, ಮುದ್ದೆಯಾಗಿಬಿಟ್ಟವಲ್ಲ ಸಾರ್‌ ಎಂದು ಕುಂಬಾರಬೀದಿಯ ಮೊಗಸಾಲೆಯಲ್ಲಿ ಥಂಡಿಯಾದ ಮನೆಯಲ್ಲಿ ಕೂತು ಗಣೇಶ್‌ ರೋಧಿಸುತ್ತಿದ್ದರು. ಶಿವಮೊಗ್ಗದ ತುಂಗಾನದಿ ಸೃಷ್ಟಿಸಿದ ಪ್ರವಾಹ ಕುಂಬಾರ ಬೀದಿಯ ನಾಲ್ಕು ಕುಟುಂಬದವರನ್ನು ಕೂಡ ಬೀದಿಗೆ ತಂದಿದೆ.

ಹೆಚ್ಚು ಓದಿದ ಸ್ಟೋರಿಗಳು

ಬೇಡ ಜಂಗಮರನ್ನ ಪರಿಶಿಷ್ಟ ಜಾತಿಗೆ ಸೇರಿಸಬೇಡಿ : ಸಿಎಂ ಎದುರೇ ಕೂಗಾಡಿದ ಸಿದ್ದರಾಜು!

ಬೆಂಗಳೂರು ಜೈಲಿನಿಂದಲೇ ವಿಡಿಯೋ ಪೋಸ್ಟ್‌ ಮಾಡಿದ ಹರ್ಷ ಕೊಲೆ ಆರೋಪಿ!

ಸರಳ ವಾಸ್ತುಗೂ ಮುನ್ನ ಚಂದ್ರಶೇಖರ್‌ ಗುರೂಜಿ ಏನಾಗಿದ್ದರು ಗೊತ್ತಾ?

ತುಂಗಾ ತೀರದಲ್ಲಿರುವ ಕುಂಬಾರಬೀದಿ ಮೊನ್ನೆ ಸುರಿದ ಮಳೆ ಹಾಗೂ ತುಂಗಾ ಜಲಾಶಯದ ಹೊರಹರಿವಿನಿಂದ ಜಲಾವೃತವಾಗಿತ್ತು. ಎರಡು ತಲೆಮಾರಿನಿಂದ ಶಿವಮೊಗ್ಗವೂ ಸೇರಿ ಅಕ್ಕಪಕ್ಕದ ಜಿಲ್ಲೆಗಳಿಗೂ ಗಣೇಶನ ಮೂರ್ತಿ ಕಳಿಸುತ್ತಿದ್ದ ಕುಟುಂಬಗಳೀಗ ತಲೆ ಮೇಲೆ ಕೈಹೊತ್ತು ಕುಳಿತುಕೊಂಡಿವೆ. ಎರಡು ತಲೆಮಾರಿನಿಂದ ಗಣೇಶನ ವಿಗ್ರಹಗಳನ್ನು ತಯಾರಿಸುತ್ತಿದ್ದ ಮಧ್ಯವಯಸ್ಸಿನ ಗಣೇಶ್‌ ಕೈ ಕೆಸರು ಮಾಡಿಕೊಂಡು ಮುದ್ದೆಯಾಗಿದ್ದ ಗಣೇಶನ ಮೂರ್ತಿಯ ಡೋಲಾಕಾರದ ಹೊಟ್ಟೆಗೆ ಮರುರೂಪ ನೀಡುತ್ತಿದ್ದರು. ಈ ಗಣೇಶನೇ ಇವರಿಗೆ ಈ ವರ್ಷದ ಆದಾಯ. ಆದರೆ, ಅದರಿಂದ ಎಷ್ಟು ಬರುತ್ತೆ ಎಂದು ಇವರಿಗೆ ಗೊತ್ತಿಲ್ಲ. ಗಣೇಶನ ಆರ್ಡರ್‌ ಪಡೆದ ಹಿಂದೂ ಮಹಾಸಭಾ ಕಾರ್ಯಕರ್ತರು ಎಷ್ಟು ನೀಡುತ್ತಾರೋ ಗೊತ್ತಿಲ್ಲ.

ತಮ್ಮ ವರ್ಷದ ಆದಾಯ ಮಣ್ಣಾದ ಬಗ್ಗೆ ಗಣೇಶ್‌ ಮನಕಲುಕುವಂತೆ ಹೇಳುತ್ತಾರೆ. ಸುಮಾರು ಮುನ್ನೂರು ಗಣೇಶನ ಮೂರ್ತಿಗಳಿಗೆ ಅಂತಿಮ ಹಂತದ ಕೆಲಸ ಬಾಕಿ ಇತ್ತು. ಪೇಂಟ್‌ ಬಳಿದೊಡನೆ ಅವುಗಳನ್ನೆಲ್ಲಾ ಭಕ್ತರಿಗೆ ಹಾಗೂ ಅಂಗಡಿಯವರಿಗೆ ರವಾನಿಸುವುದಿತ್ತು. ಆದರೆ, ಅವೆಲ್ಲಾ ನಿರ್ಜೀವವಾಗಿವೆ. ಗಣೇಶನ ತಯಾರಿಕೆಯಲ್ಲಿ ಬಳಸುವ ಮಣ್ಣನ್ನು ಟ್ರ್ಯಾಕ್ಟರ್‌ ಮೂಲಕ ತರಿಸಿಕೊಳ್ಳಲಾಗುತ್ತದೆ. ಹಾಗೆ ತರಿಸಿಕೊಂಡ ಮಣ್ಣಿಗೆ ತೊಂಬತ್ತು ಸಾವಿರ ತಗುಲಿತ್ತು. ಆದರೆ, ಆ ಹಣವೂ ಬಾರದಂತಾಯ್ತು, ಹಾಳಾದ ಮೂರ್ತಿಗಳನ್ನ ಸಾಗಿಸಿ ಮುಳುಗಿಸುವ ಬಾಡಿಗೆ ಹೊರೆಯೂ ತಲೆಮೇಲೆ ಬಂತು ಎನ್ನುತ್ತಾರೆ.

ಇವರ ಜೀವನವೇ ರೋಚಕ, ಬಿಬಿ ಸ್ಟ್ರೀಟ್‌ ಬದಿಯ ಕುಂಬಾರ ಬೀದಿ ಇವರ ಕಾಯಕಕ್ಕೇ ಇಟ್ಟ ಹೆಸರು. ವರ್ಷವಿಡೀ ಗಣೇಶನ ಮೂರ್ತಿ ತಯಾರು ಮಾಡುವುದೇ ಇವರ ಕೆಲಸ. ನಾಲ್ಕು ತಿಂಗಳ ಮೊದಲೇ ಕೆಲಸ ಆರಂಭಿಸುತ್ತಾರೆ. ಪ್ರತಿದಿನ ಗಣೇಶನ ಮೂರ್ತಿಗಳು ಸಿದ್ಧವಾಗುತ್ತಾ ಶೆಡ್‌ ಸೇರುತ್ತವೆ. ಅದರಲ್ಲೂ ಗಣೇಶ್‌ ಕುಟುಂಬ ಹಿಂದೂ ಮಹಾಸಭಾ ಗಣಪತಿಯ ಮೂರ್ತಿಯನ್ನ ವಿಶೇಷವಾಗಿ ಮಣ್ಣೆತ್ತಿನ ಹುಣ್ಣಿಮೆಯ ದಿನದಂದು ಪೂಜೆಯೊಂದಿಗೆ ಸಿದ್ಧಪಡಿಸಲು ಅಣಿಯಾಗುತ್ತಾರೆ. ಇದರ ಉಸ್ತುವಾರಿಯನ್ನು ತಲತಲಾಂತರದಿಂದಲೂ ಹೊತ್ತುಕೊಂಡಿರುವ ಇವರು ಮೂರ್ತಿಗೆ ಹಣ ಕೇಳುವುದಿಲ್ಲ. ಆದರೆ, ಹಿಂದೂ ಮಹಾಸಭಾದವರು ಉತ್ತಮ ಕಾಣಿಕೆಯನ್ನೇ ನೀಡುತ್ತಾರೆ. ಶಿವಮೊಗ್ಗದಲ್ಲಿ ಹಿಂದೂ ಮಹಾಸಭಾ ಗಣಪತಿ ಉತ್ಸವ ಎಂದರೆ ಬೆಂಗಳೂರಿನಲ್ಲಿ ಕೂತ ಗೃಹಸಚಿವರಿಗೂ ನಡುಕ. ಅಲ್ಲದೇ, ಗಣೇಶ್‌ ಮಾಡುವ ಮೂರ್ತಿಗಳಿಗೆ ಚಿಕ್ಕಮಗಳೂರಿನಲ್ಲೂ ಬೇಡಿಕೆ ಇತ್ತು.

ಹದಿನೈದು ದಿನಗಳಲ್ಲಿ ಹಬ್ಬ ಬಂದೇ ಬಿಡ್ತು, ಅಷ್ಟು ಬೇಗನೆ ಗಣೇಶನ ಮೂರ್ತಿಗಳನ್ನ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರ ಸಿಗಬಹುದಾ ಎಂಬುದೂ ಗೊತ್ತಿಲ್ಲ. ಈ ನಷ್ಟವನ್ನು ಹೇಗೆ ಪರಿಗಣಿಸುತ್ತಾರೆ. ಶಾಸಕ ಕೆ ಎಸ್‌ ಈಶ್ವರಪ್ಪನವರು ಬಂದಿದ್ದರು, ಭರವಸೆ ನೀಡಿದ್ರು. ಆದರೆ ನಮಗೆ ಪರಿಹಾರ ಸಿಗತ್ತಾ ಎಂಬುದು ಗೊತ್ತಿಲ್ಲ. ವರ್ಷವಿಡೀ ನಮ್ಮ ಜೀವನ ಗಣೇಶನ ಮೂರ್ತಿಗೆ ಮೀಸಲು. ಮೊದಲೆಲ್ಲಾ ಮಡಕೆಗಳನ್ನು ಮಾಡಿ ಜೀವನ ಸರಿದೂಗಿಸುತ್ತಿದ್ದೆವು. ಆದರೀಗ ಮಡಕೆಗಳನ್ನು ಕೇಳುವವರೇ ಇಲ್ಲ. ಕುಂಬಾರಿಕೆಯಲ್ಲಿ ಹೊಸತನವನ್ನು ಹುಟ್ಟು ಹಾಕಲು ಸಾಧ್ಯವಿಲ್ಲ. ೨೦೦ ಮೂರ್ತಿಗಳನ್ನು ಮಾಡಿ ಎರಡು ಲಕ್ಷ ಹೊರೆ ಹೊತ್ತುಕೊಂಡೆ, ಎನ್ನುತ್ತಾ ಭಿನ್ನಗೊಂಡ ಮೂರ್ತಿಗಳನ್ನೆಲ್ಲಾ ಆಟೋದಲ್ಲಿ ಸಾಗಿಸಿದರು ಗಣೇಶ್.

RS 500
RS 1500

SCAN HERE

don't miss it !

ನಾನು ತುಂಬಾ ಚಿಕ್ಕವಳು ನಾನು ಏನು ಸಾಧನೆ ಮಾಡಿಲ್ಲ.!
ಇದೀಗ

ನಾನು ತುಂಬಾ ಚಿಕ್ಕವಳು ನಾನು ಏನು ಸಾಧನೆ ಮಾಡಿಲ್ಲ.!

by ಪ್ರತಿಧ್ವನಿ
July 4, 2022
ಕನ್ಹಯ್ಯ ಹತ್ಯೆ ಖಂಡಿಸಿ ಗದಗನಲ್ಲಿ ಪ್ರತಿಭಟನೆ
ಇದೀಗ

ಕನ್ಹಯ್ಯ ಹತ್ಯೆ ಖಂಡಿಸಿ ಗದಗನಲ್ಲಿ ಪ್ರತಿಭಟನೆ

by ಪ್ರತಿಧ್ವನಿ
June 30, 2022
ಕ್ರೆಡಿಟ್‌ ಪಾಲಿಟಿಕ್ಸ್‌ : ಗಂಧದ ಜೊತೆ ಗುದ್ದಾಡಬೇಕು, ಹಂದಿಯ ಜೊತೆಯಲ್ಲ ಎಂದ ಸಂಸದ ಪ್ರತಾಪ್‌ ಸಿಂಹ
ಕರ್ನಾಟಕ

ಕ್ರೆಡಿಟ್‌ ಪಾಲಿಟಿಕ್ಸ್‌ : ಗಂಧದ ಜೊತೆ ಗುದ್ದಾಡಬೇಕು, ಹಂದಿಯ ಜೊತೆಯಲ್ಲ ಎಂದ ಸಂಸದ ಪ್ರತಾಪ್‌ ಸಿಂಹ

by ಪ್ರತಿಧ್ವನಿ
June 29, 2022
ಅಮರಾವತಿ ಕೊಲೆ ಪ್ರಕರಣ; ಮಾಸ್ಟರ್ ಮೈಂಡ್ ಬಂಧನ
ದೇಶ

ಅಮರಾವತಿ ಕೊಲೆ ಪ್ರಕರಣ; ಮಾಸ್ಟರ್ ಮೈಂಡ್ ಬಂಧನ

by ಪ್ರತಿಧ್ವನಿ
July 3, 2022
ಬರ್ಮಿಂಗ್‌ ಹ್ಯಾಂ ಟೆಸ್ಟ್:‌ ಜಡೇಜಾ ಶತಕ, ಭಾರತ 416ಕ್ಕೆ ಆಲೌಟ್
ಕ್ರೀಡೆ

ಬರ್ಮಿಂಗ್‌ ಹ್ಯಾಂ ಟೆಸ್ಟ್:‌ ಜಡೇಜಾ ಶತಕ, ಭಾರತ 416ಕ್ಕೆ ಆಲೌಟ್

by ಪ್ರತಿಧ್ವನಿ
July 2, 2022
Next Post
ನಾನು ವಿಜ್ಞಾನದ ಪರಿಸರದಲ್ಲಿ ಬೆಳೆದವನು: ನಿರ್ದೇಶಕ ಜಗನ್‌ ಶಕ್ತಿ

ನಾನು ವಿಜ್ಞಾನದ ಪರಿಸರದಲ್ಲಿ ಬೆಳೆದವನು: ನಿರ್ದೇಶಕ ಜಗನ್‌ ಶಕ್ತಿ

73ನೇ ಸ್ವಾತಂತ್ರ್ಯ ದಿವಸ: ನಿವೃತ್ತ ಲೋಕಾಯುಕ್ತ  ಸಂತೋಷ್ ಹೆಗ್ಡೆಯವರ ಮಾತು

73ನೇ ಸ್ವಾತಂತ್ರ್ಯ ದಿವಸ: ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆಯವರ ಮಾತು

ಹಾಗಿದ್ದರೆ ಪೆಹಲೂಖಾನ್ ಹಂತಕರು ಯಾರು? ಕಾಡುವ 25 ಪ್ರಶ್ನೆಗಳು

ಹಾಗಿದ್ದರೆ ಪೆಹಲೂಖಾನ್ ಹಂತಕರು ಯಾರು? ಕಾಡುವ 25 ಪ್ರಶ್ನೆಗಳು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist