Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಕಿತ್ತಾಟದ ನಡುವೆಯೂ ಬೆಳಗಾವಿ ಕೆಎಂಎಫ್‌ಗೆ ಮಗನನ್ನು ತಲುಪಿಸಿದ ರ.ಜಾರಕಿಹೊಳಿ!

ಬಾಲಚಂದ್ರ ಜಾರಕಿಹೊಳಿ ನೆರವಿನಿಂದ ಪುತ್ರ ಅಮರನನ್ನು ಬೆಳಗಾವಿ ಕೆಎಂಎಫ್‌ಗೆ ಅವಿರೋಧವಾಗಿ ಆರಿಸಿಕಳಿಸುವಲ್ಲಿ ರಮೇಶ ಯಶಸ್ವಿ.
ಕಿತ್ತಾಟದ ನಡುವೆಯೂ ಬೆಳಗಾವಿ  ಕೆಎಂಎಫ್‌ಗೆ ಮಗನನ್ನು ತಲುಪಿಸಿದ ರ.ಜಾರಕಿಹೊಳಿ!
Pratidhvani Dhvani

Pratidhvani Dhvani

April 27, 2019
Share on FacebookShare on Twitter

ಲೋಕಸಭೆ ಚುನಾವಣೆಯ ಗಲಾಟೆಯಲ್ಲಿ ಇಂಥದ್ದೊಂದು ಬೆಳವಣಿಗೆ ನಡೆದಿರುವುದು ಜಿಲ್ಲಾ ರಾಜಕೀಯದ ಮೇಲೆ ಪರಿಣಾಮ ಬೀರುವ ಸೂಚನೆಗಳಿವೆ!

ಹೆಚ್ಚು ಓದಿದ ಸ್ಟೋರಿಗಳು

ಮನುಜ ಸಂವೇದನೆಯೂ ಸಾಮಾಜಿಕ ಪ್ರಜ್ಞೆಯೂ – ನಾ ದಿವಾಕರ

ಯುವಪೀಳಿಗೆಗೊಂದು ಕಾಯಕಲ್ಪ ನೀಡಲು ಇದು ಸಕಾಲ

ರಾಜಕೀಯ ಮೇಲಾಟದ ಕೇಂದ್ರವಾದ ಬಾಬಾ ಸಾಹೇಬ್ ಅಂಬೇಡ್ಕರ್ ಸ್ಕೂಲ್‌ ಆಫ್ ಎಕನಾಮಿಕ್ಸ್

ಬೆಳಗಾವಿ ಜಿಲ್ಲೆಯ ರಾಜಕೀಯದ ಮೇಲೆ ಪರಿಣಾಮ ಬೀರುವ ಎರಡು ಮಹತ್ವದ ಸಹಕಾರಿ ಸಂಸ್ಥೆಗಳೆಂದರೆ ಡಿಸಿಸಿ ಬ್ಯಾಂಕು ಮತ್ತು ಹಾಲು ಒಕ್ಕೂಟ (ಕೆಎಂಎಫ್). ಇವೆರಡೂ ಸಂಸ್ಥೆಗಳು ಜಿಲ್ಲೆಯ ರಾಜಕೀಯದಲ್ಲಿ ತಮ್ಮದೇ ಆದ ಪ್ರಭಾವ ಬೀರುತ್ತವೆ. ಜಿಲ್ಲೆಯ ಅನೇಕ ರಾಜಕಾರಣಿಗಳು ಇವೇ ಸಂಸ್ಥೆಗಳಿಗೆ ಪ್ರವೇಶ ಪಡೆದ ನಂತರವೇ ರಾಜಕೀಯ ರಂಗಕ್ಕೆ ಧುಮುಕಿದೆ ಉದಾಹರಣೆಗಳಿವೆ.

ಸದ್ಯ ರಾಜ್ಯ ರಾಜಕೀಯದಲ್ಲಿ ಭಾರಿ ಸುದ್ದಿ ಮಾಡುತ್ತಿರುವ ಗೋಕಾಕ ಕಾಂಗ್ರೆಸ್ ಶಾಸಕ ರಮೇಶ ಜಾರಕಿಹೊಳಿ ಅವರು, ಲೋಕಸಭೆ ಚುನಾವಣೆಯ ಸಂದರ್ಭದಲ್ಲೇ, ಏಪ್ರಿಲ್ 21ರಂದು ನಡೆದ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಯಲ್ಲಿ ತಮ್ಮ ಪುತ್ರ ಅಮರನನ್ನು ಗೋಕಾಕದಿಂದ ಅವಿರೋಧವಾಗಿ ಆರಿಸಿಕಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು 14 ನಿರ್ದೇಶಕರ ಸ್ಥಾನಗಳ ಪೈಕಿ 7 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಇನ್ನೂ ಏಳು ಸ್ಥಾನಗಳಿಗೆ ಇದೇ ರವಿವಾರ ಏಪ್ರಿಲ್ 28ರಂದು ಚುನಾವಣೆ ನಡೆಯಲಿದೆ. ಅವಿರೋಧವಾಗಿ ಆಯ್ಕೆಗೊಂಡವರೆಂದರೆ ವಿವೇಕ ಪಾಟೀಲ (ರಾಯಬಾಗ), ಅಮರ ರಮೇಶ ಜಾರಕಿಹೊಳಿ (ಗೋಕಾಕ), ಮಲ್ಲಪ್ಪ ಪಾಟೀಲ (ಮೂಡಲಗಿ), ಸೋಮಲಿಂಗಪ್ಪ ಮುಗಳಿ (ಸವದತ್ತಿ), ಬಾಬೂರಾವ ವಾಗ್ಮೋಡಿ (ಕಾಗವಾಡ), ರಾಯಪ್ಪ ಡೋಂಗ (ಹುಕ್ಕೇರಿ), ಖಾನಪ್ಪಗೋಳ (ನಾಗನೂರ). ಇನ್ನು ಖಾನಾಪುರ, ರಾಮದುರ್ಗ, ಕಿತ್ತೂರು, ಬೈಲಹೊಂಗಲ, ಅಥಣಿ, ಚಿಕ್ಕೋಡಿ ಹಾಗೂ ಬೆಳಗಾವಿ ನಿರ್ದೇಶಕರ ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ.

ಸರಕಾರದಿಂದ ಒಬ್ಬರು ನಾಮನಿರ್ದೇಶನಗೊಳ್ಳಲಿದ್ದಾರೆ. ಸಹಕಾರ ಇಲಾಖೆಯ ಉಪನಿಬಂಧಕರು, ರಾಜ್ಯ ಕೆಎಂಎಫ್‌ನಿಂದ ಒಬ್ಬರು ನಿರ್ದೇಶಕರು, ಪಶುಸಂಗೋಪನಾ ಇಲಾಖೆಯ ನಿರ್ದೇಶಕರು ಹಾಗೂ ಎನ್‌ಡಿಡಿಬಿಯಿಂದ ಒಬ್ಬರು ಅಧ್ಯಕ್ಷ ಸ್ಥಾನದ ಚುನಾವಣೆಯ ಕಾಲಕ್ಕೆ ಮತದಾನದ ಹಕ್ಕು ಹೊಂದಿದ್ದಾರೆ. ಒಟ್ಟು 19 ಮತಗಳು.

ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಹಿಡಿತದಲ್ಲಿರುವ ಕೆಎಂಎಫ್‌ಗೆ ಸದ್ಯ ವಿವೇಕ ರಾವ್ ಪಾಟೀಲ ಅಧ್ಯಕ್ಷರಾಗಿದ್ದಾರೆ. ರಮೇಶ ಜಾರಕಿಹೊಳಿ ಅವರ ಪುತ್ರನ ಪ್ರವೇಶದಿಂದಾಗಿ ಕೆಎಂಎಫ್ ರಾಜಕೀಯದಲ್ಲಿ ಹೊಸ-ಹೊಸ ಬೆಳವಣಿಗೆಗಳು ನಡೆಯುವ ಎಲ್ಲ ಸಾಧ್ಯತೆಗಳಿವೆ. ಅಮರನನ್ನು ಅಧ್ಯಕ್ಷ ಸ್ಥಾನದಲ್ಲಿ ಕೂಡಿಸಲು, ಅಮರನ ಚಿಕ್ಕಪ್ಪ ಬಾಲಚಂದ್ರ ಪ್ರಯತ್ನಿಸುವುದು ಸಹಜವಾಗಿದೆ. ರಾಜಕೀಯ ಸಂಘರ್ಷದಲ್ಲಿ ಮುಳುಗಿರುವ ಚಿಕ್ಕಪ್ಪಂದಿರು ಅಮರನ ವಿಷಯದಲ್ಲಿ ಒಂದಾದರೂ ಅಚ್ಚರಿ ಇಲ್ಲ.

ಅಂಕಣಕಾರರು ಹಿರಿಯ ಪತ್ರಕರ್ತರು

RS 500
RS 1500

SCAN HERE

don't miss it !

ರಾಜ್ಯ ಬಿಜೆಪಿಯಲ್ಲಿ ಪದೇ ಪದೇ ಸಿಎಂ ಬದಲಾವಣೆ ಕೂಗು ಕೇಳಿ ಬರುತ್ತಿರೋದ್ಯಾಕೆ ?
ಕರ್ನಾಟಕ

ವಿಭಜನೆ ಅಲ್ಲ, ಜನಸಂಖ್ಯೆ ಅನುಗುಣವಾಗಿ ರಾಜ್ಯ ನಿರ್ಮಾಣ ; ಇದನ್ನು ನಾನಲ್ಲ ಪಿಎಂ ಮೋದಿಯೇ ಹೇಳಿದ್ದಾರೆ : ಕತ್ತಿ

by ಪ್ರತಿಧ್ವನಿ
June 27, 2022
ಫ್ಯಾಕ್ಟ್‌ ಚೆಕ್ಕರ್‌ ಜುಬೇರ್‌ ಕೂಡಲೇ ಬಿಡುಗಡೆ ಮಾಡಿ: ಸಂಪಾದಕರ ಮಂಡಳಿ ಆಗ್ರಹ
ದೇಶ

ಫ್ಯಾಕ್ಟ್‌ ಚೆಕ್ಕರ್‌ ಜುಬೇರ್‌ ಕೂಡಲೇ ಬಿಡುಗಡೆ ಮಾಡಿ: ಸಂಪಾದಕರ ಮಂಡಳಿ ಆಗ್ರಹ

by ಪ್ರತಿಧ್ವನಿ
June 28, 2022
ಅಕ್ರಮ ಹಣ ವರ್ಗಾವಣೆ; ಸತ್ಯೇಂದ್ರ ಜೈನ್ 2ವಾರ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ ನ್ಯಾಯಾಲಯ
ದೇಶ

ಅಕ್ರಮ ಹಣ ವರ್ಗಾವಣೆ; ಸತ್ಯೇಂದ್ರ ಜೈನ್ 2ವಾರ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ ನ್ಯಾಯಾಲಯ

by ಪ್ರತಿಧ್ವನಿ
June 27, 2022
ಹಿರಿಯ ನಟ ರೈಮೋಹನ್‌ ಫರೀದಾ ಶವ ಪತ್ತೆ; ತನಿಖೆಗೆ ಆದೇಶ
ದೇಶ

ಹಿರಿಯ ನಟ ರೈಮೋಹನ್‌ ಫರೀದಾ ಶವ ಪತ್ತೆ; ತನಿಖೆಗೆ ಆದೇಶ

by ಪ್ರತಿಧ್ವನಿ
June 24, 2022
FD ಮೇಲಿನ ಬಡ್ಡಿ ಹೆಚ್ಚಿಸಿದ ಕರ್ಣಾಟಕ ಬ್ಯಾಂಕ್!
ಕರ್ನಾಟಕ

FD ಮೇಲಿನ ಬಡ್ಡಿ ಹೆಚ್ಚಿಸಿದ ಕರ್ಣಾಟಕ ಬ್ಯಾಂಕ್!

by ಪ್ರತಿಧ್ವನಿ
June 30, 2022
Next Post
ನಿರುದ್ಯೋಗ ಹೆಚ್ಚುತ್ತಲೇ ಇದೆ ನಿಜ; ಹಾಗಾದರೆ ಯಾರು ಈ ನಿರುದ್ಯೋಗಿಗಳು?

ನಿರುದ್ಯೋಗ ಹೆಚ್ಚುತ್ತಲೇ ಇದೆ ನಿಜ; ಹಾಗಾದರೆ ಯಾರು ಈ ನಿರುದ್ಯೋಗಿಗಳು?

ಟಿಡಿಆರ್ ಅಕ್ರಮ: ಎಸಿಬಿ ಮುಂದಿದೆ ಹಲವು ಪ್ರಕರಣ ಬಯಲಿಗೆಳೆಯುವ ಸದವಕಾಶ

ಟಿಡಿಆರ್ ಅಕ್ರಮ: ಎಸಿಬಿ ಮುಂದಿದೆ ಹಲವು ಪ್ರಕರಣ ಬಯಲಿಗೆಳೆಯುವ ಸದವಕಾಶ

Invitation ಕಲ್ಲಂಗಡಿ

Invitation ಕಲ್ಲಂಗಡಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist