Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಕಾಲಹರಣದ ಮೇಲೆ ರಾಜಭವನದ ಹದ್ದಿನ ಕಣ್ಣು!

ರಾಜ್ಯಾಂಗ ಬಿಕ್ಕಟ್ಟು” ಆಧರಿಸಿ ರಾಷ್ಟ್ರಪತಿ ಆಳ್ವಿಕೆಯ ಸಾಧ್ಯತೆ ಇದೆಯೇ?
ಕಾಲಹರಣದ ಮೇಲೆ ರಾಜಭವನದ ಹದ್ದಿನ ಕಣ್ಣು!
Pratidhvani Dhvani

Pratidhvani Dhvani

July 18, 2019
Share on FacebookShare on Twitter

ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ವಿಶ್ವಾಸಮತ ಗೊತ್ತುವಳಿಯ ಮೇಲಿನ ಚರ್ಚೆಗೆ ಹೊಸತಿರುವು ಬಂದಿದ್ದು ದೋಸ್ತಿ ಪಕ್ಷಗಳ ನಾಯಕರು ಕ್ರಿಯಾಲೋಪಗಳನ್ನು ಎತ್ತುವ ಮೂಲಕ ಕಾಲಹರಣ ತಂತ್ರದಲ್ಲಿ ತೊಡಗಿದ್ದು ಸ್ಪಷ್ಟವಾಗುತ್ತಿದೆ. ಈ ತಂತ್ರಕ್ಕೆ ಪ್ರತಿತಂತ್ರವಾಗಿ ಬಿಜೆಪಿ ನಾಯಕರು ರಾಜಭವನದ ಬಾಗಿಲು ತಟ್ಟಿದ್ದಾರೆ.

ಹೆಚ್ಚು ಓದಿದ ಸ್ಟೋರಿಗಳು

ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ ಶಿಂಧೆ ಬಣ

ಶೀಘವ್ರೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು : ಫಡ್ನವೀಸ್

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಸಕರೊಬ್ಬರ ಮೇಲೆ ACB ದಾಳಿ : ಅಷ್ಟಕ್ಕೂ ACB ಕೆಲಸ ಏನು.!?

24 ಗಂಟೆಗಳಲ್ಲಿ ವಿಶ್ವಾಸಮತ ಯಾಚಿಸುವಂತೆ ಸ್ಪೀಕರ್ ಗೆ ಸೂಚಿಸಬೇಕೆಂದು ರಾಜ್ಯಪಾಲ ವಜೂಭಾಯಿವಾಲಾ ಅವರನ್ನು ಬಿಜೆಪಿ ಮನವಿ ಮಾಡಿದ್ದು ರಾಜ್ಯಪಾಲರು ತಮ್ಮ ವಿಶೇಷ ಅಧಿಕಾರಿಯನ್ನು ವಿಧಾನಸಭೆಗೆ ಕಳಿಸುವ ಮೂಲಕ ಕಲಾಪಗಳು ಸಾಗುವ ರೀತಿಯ ಮೇಲೆ ಹದ್ದಿನ ಕಣ್ಣು ಇರಿಸಿದ್ದಾರೆ. ಸ್ಪೀಕರ್ ಅವರಿಗೆ ನಿರ್ದೇಶನ ನೀಡುವ ಅಧಿಕಾರ ರಾಜ್ಯಪಾಲರಿಗೆ ಇಲ್ಲವಾದರೂ ರಾಜ್ಯಾಂಗ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ರಾಜ್ಯಪಾಲರು ವಿಧಾನಸಭೆಯನ್ನು ಅಮಾನತ್ತಿನಲ್ಲಿಟ್ಟು ರಾಷ್ಟ್ರಪತಿ ಆಳಿಕೆಯನ್ನು ವಿಧಿಸಲು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಬಹುದಾಗಿದೆ.

ರಾಜ್ಯಾಂಗ ಬಿಕ್ಕಟ್ಟಿನ ಸಂದರ್ಭದಲ್ಲಿ ವಿಧಾನಸಭೆಯನ್ನು ವಿಸರ್ಜಿಸಿದ ಪ್ರಸಂಗಗಳು ವಿವಿಧ ರಾಜ್ಯಗಳಲ್ಲಿ ನಡೆದಿವೆ. 1967 ರ ಮಾರ್ಚ್ 7 ರಂದು ಪಂಜಾಬ್ ವಿಧಾನಸಭಾಧ್ಯಕ್ಷರು ಎರಡು ತಿಂಗಳವರೆಗೆ ಸದನವನ್ನು ಮುಂದೂಡಿದರು. ಇದರಿಂದ ಅಲ್ಲಿ ರಾಜ್ಯಾಂಗ ಬಿಕ್ಕಟ್ಟು ಉಂಟಾದಾಗ ಮಾರ್ಚ 12 ರಂದು ಪಂಜಾಬ್ ರಾಜ್ಯಪಾಲರಾಗಿದ್ದ ಕನ್ನಡಿಗ ಡಾ.ಡಿ.ಸಿ.ಪಾವಟೆ ಅವರು ವಿಧಾನ ಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆಳಿಕೆ ವಿಧಿಸಿದರು.

ಬಾಕಿಯಿರುವ ಮಸೂದೆಗಳ ಬಗ್ಗೆ ರಾಜ್ಯಪಾಲರು ವಿಧಾನಸಭೆಗೆ ಸೂಚನೆ, ಸಂದೇಶಗಳನ್ನು ಕಳಿಸಬಹುದಾಗಿದೆ. ಕಳೆದ ಅಧಿವೇಶನದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಹಣಕಾಸು ಮಸೂದೆಗೆ ಸರಕಾರ ಇನ್ನೂ ಒಪ್ಪಿಗೆ ಪಡೆದಿಲ್ಲ. ಪಡೆಯದಿದ್ದರೆ ಸರಕಾರವು ಒಂದು ರೂಪಾಯಿಯನ್ನೂ ಖರ್ಚು ಮಾಡಲು ಸಾಧ್ಯವಿಲ್ಲ. ನೌಕರರ ಸಂಬಳವನ್ನೂ ಮಾಡುವಂತಿಲ್ಲ. ಹೀಗಾದರೆ ರಾಜ್ಯಾಂಗ ಬಿಕ್ಕಟ್ಟು ಸೃಷ್ಠಿಯಾಗುವದು ನಿಶ್ಚಿತ.

ಸದ್ಯ ವಿಶ್ವಾಸಮತಯಾಚನೆ ಗೊತ್ತುವಳಿಯ ಮೇಲಿನ ಚರ್ಚೆ ಸರಿಯಾದ ದಿಕ್ಕಿನಲ್ಲಿ ಸಾಗದಿದ್ದರೆ ಸದನದಲ್ಲಿ ಬಂದು (ಕಪ್ಪು ಕೋಟಿನ ಅಧಿಕಾರಿ) ಕುಳಿತಿರುವ ಅಧಿಕಾರಿ ಇಂದು ಸಂಜೆ ರಾಜ್ಯಪಾಲರಿಗೆ ಸಮಗ್ರ ವರದಿ ಸಲ್ಲಿಸಲಿದ್ದಾರೆ. ನಂತರ ಮುಂದಿನ ಬೆಳವಣಿಗೆಗಳು ದೋಸ್ತಿ ಸರಕಾರಕ್ಕೆ ಕಂಟಕಪ್ರಾಯವಾಗಬಹುದು.
” ವಿಶ್ವಾಸ ಮತವನ್ನು ಇಂದೇ ಮುಗಿಸಿ” ಎಂದು ರಾಜ್ಯಪಾಲರು ಸ್ಪೀಕರ್ ಗೆ ತಿಳಿಸಿದ್ದು ಅಚ್ಚರಿಯ ಬೆಳವಣಿಗೆಯಾಗಿದೆ. ಆದರೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ನಡುವಣ ಶೀತಲ ಸಮರದಲ್ಲಿ ಏನಾದರೂ ಆಗಬಹುದಾಗಿದೆ.

ರಾಜ್ಯಪಾಲರ ಮಧ್ಯಪ್ರವೇಶವು ರಾಷ್ಟ್ರಪತಿ ಆಳಿಕೆಗೆ ಹಾದಿ ಮಾಡಿಕೊಡಬಹುದೆ?

RS 500
RS 1500

SCAN HERE

don't miss it !

ಕೋವಿಡ್-19: ತಮಿಳುನಾಡಿನ 1,800 ವೈದ್ಯರಿಗೆ ಕೆಲಸ ಕಳೆದುಕೊಳ್ಳುವ ಆತಂಕ
ಕರ್ನಾಟಕ

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 16,103 ಕರೋನಾ ಪಾಸಿಟಿವ್, 31 ಮಂದಿ ಸಾವು

by ಪ್ರತಿಧ್ವನಿ
July 3, 2022
ಕಾಂಗ್ರೆಸ್ಸಿಗೂ ನನಗೂ ಇಂದಿಗೆ ಸಂಬಂಧ ಮುಗಿಯಿತು : ಸಿಎಂ ಇಬ್ರಾಹಿಂ
ಕರ್ನಾಟಕ

ಸಿಎಂ ಅಭ್ಯರ್ಥಿಗಳನ್ನು ಘೋಷಿಸಿ: ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಿ.ಎಂ.ಇಬ್ರಾಹಿಂ ಸವಾಲು

by ಪ್ರತಿಧ್ವನಿ
July 2, 2022
ಬಿಜೆಪಿಗರು ನಮ್ಮ ಸಂವಿಧಾನವನ್ನೇ ಅಪಾಯಕ್ಕೆ ಸಿಲುಕಿಸಿದ್ದಾರೆ : ಡಿ.ಕೆ. ಶಿವಕುಮಾರ್
ಕರ್ನಾಟಕ

ಅಕ್ರಮ ಹಣ ವರ್ಗಾವಣೆ ಪ್ರಕರಣ : ಡಿಕೆ ಶಿವಕುಮಾರ್‌ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

by ಪ್ರತಿಧ್ವನಿ
July 1, 2022
ದಕ್ಷಿಣದತ್ತ ದೃಷ್ಟಿ ನೆಟ್ಟ ಕಮಲ ಪಡೆ
ದೇಶ

ದಕ್ಷಿಣದತ್ತ ದೃಷ್ಟಿ ನೆಟ್ಟ ಕಮಲ ಪಡೆ

by ಮಂಜುನಾಥ ಬಿ
July 1, 2022
ನನ್ನ ಸಿನಿಮಾಗೆ A ಸರ್ಟಿಫಿಕೇಟ್‌ ಕೊಟ್ಟಿದೆ ನನ್ನಗೆ ಬೇಸರವಾಗಿದೆ : ತರಂಗ ವಿಶ್ವ
ಇದೀಗ

ನನ್ನ ಸಿನಿಮಾಗೆ A ಸರ್ಟಿಫಿಕೇಟ್‌ ಕೊಟ್ಟಿದೆ ನನ್ನಗೆ ಬೇಸರವಾಗಿದೆ : ತರಂಗ ವಿಶ್ವ

by ಪ್ರತಿಧ್ವನಿ
July 4, 2022
Next Post
ಅಧಿಕಾರದವಸರದ ಬಿಜೆಪಿಗೆ `ಸಮ್ಮಿಶ್ರ’ ಸೇಡು

ಅಧಿಕಾರದವಸರದ ಬಿಜೆಪಿಗೆ `ಸಮ್ಮಿಶ್ರ’ ಸೇಡು, ಸದನ ಗೊಂದಲದ ಗೂಡು

ತ್ರಿವಳಿಗಳ “ಕ್ರಿಯಾಲೋಪ ತಂತ್ರ”

ತ್ರಿವಳಿಗಳ “ಕ್ರಿಯಾಲೋಪ ತಂತ್ರ”, ಮೊದಲ ದಿನದಂತ್ಯಕ್ಕೆ ಕೈ ಮೇಲು

ಸದ್ಯ ಪಾರಾದ ಕುಲಭೂಷಣ- ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನ ಮತ್ತೆ ಒಂಟಿ

ಸದ್ಯ ಪಾರಾದ ಕುಲಭೂಷಣ- ವಿಶ್ವ ವೇದಿಕೆಯಲ್ಲಿ ಪಾಕಿಸ್ತಾನ ಮತ್ತೆ ಒಂಟಿ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist