Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಕಾಣೆಯಾದವರ ಬಗ್ಗೆ ಮದ್ರಾಸ್ ಹೈಕೋರ್ಟ್ ಕೇಳಿದ ಹನ್ನೊಂದು ಗಂಭೀರ ಪ್ರಶ್ನೆಗಳು

ಕಾಣೆಯಾದವರ ಕುರಿತ ದೂರುಗಳ ಸಂಬಂಧ ಪೊಲೀಸ್ ತನಿಖೆ ಕಡ್ಡಾಯ ಆಗಬೇಕೆಂಬ ಮದ್ರಾಸ್ ಹೈಕೋರ್ಟ್ ಮಾತು ಮೆಚ್ಚುಗೆಗೆ ಪಾತ್ರವಾಗಿದೆ.
ಕಾಣೆಯಾದವರ ಬಗ್ಗೆ ಮದ್ರಾಸ್ ಹೈಕೋರ್ಟ್ ಕೇಳಿದ ಹನ್ನೊಂದು ಗಂಭೀರ ಪ್ರಶ್ನೆಗಳು
Pratidhvani Dhvani

Pratidhvani Dhvani

June 14, 2019
Share on FacebookShare on Twitter

ಕಾಣೆಯಾದವರ ಬಗೆಗಿನ ಪ್ರಕಟಣೆಗಳು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಇನ್ನೂ ನಿಂತಿಲ್ಲ. ಹಾಗೆಯೇ, ಕಾಣೆಯಾದವರ ಕುರಿತ ದೂರುಗಳು ಕೂಡ ಪೊಲೀಸ್ ಠಾಣೆಗಳಿಗೆ ಎಡತಾಕುವುದು ತಪ್ಪಿಲ್ಲ. ಆದರೆ, ಹೀಗೆ ಕಾಣೆಯಾದ ಎಷ್ಟು ಮಂದಿಯನ್ನು ಪೊಲೀಸರು ಪತ್ತೆ ಮಾಡಿದರು ಮತ್ತು ಎಷ್ಟು ಕೇಸುಗಳನ್ನು ಪತ್ತೆಯಾಗಲಿಲ್ಲವೆಂದು ಮುಗಿಸಿದರು ಎಂಬ ಪ್ರಶ್ನೆ ಮಾತ್ರ ಎಲ್ಲರನ್ನೂ ಕಾಡುತ್ತಲೇ ಇದೆ. ಇಂಥದ್ದೇ ಕೇಳ್ವಿಯ ಜಾಡು ಹಿಡಿದ ಮದ್ರಾಸ್ ಹೈಕೋರ್ಟ್, ಲಲಿತಕುಮಾರಿ ಎಂಬುವವರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ, ಪೊಲೀಸರು ಮತ್ತು ಸರ್ಕಾರಗಳ ಎದುರು ಕೆಲವು ಗಂಭೀರ ಪ್ರಶ್ನೆಗಳನ್ನು ಇಟ್ಟಿದೆ.

ಹೆಚ್ಚು ಓದಿದ ಸ್ಟೋರಿಗಳು

ಬಹುರಾಷ್ಟ್ರೀಯ ಕಂಪನಿಗಳು ಭಾರತವನ್ನು ಏಕೆ ತೊರೆಯುತ್ತಿವೆ?

ಅಗ್ನಿಪಥ್ ಯೋಜನೆ ವಿರುದ್ಧ ಪಂಜಾಬ್ ಸರ್ಕಾರ ನಿರ್ಣಯ!

ದೇಶದ ಅತ್ಯಂತ ದುಬಾರಿ ನಗರಿ ಮುಂಬೈ!

ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಹೇಳುವಂತೆ, ಭಾರತದಲ್ಲಿ ಪ್ರತಿದಿನ ನಾಪತ್ತೆ ಆಗುತ್ತಿರುವ ಮಹಿಳೆಯರ ಸಂಖ್ಯೆ ಸರಾಸರಿ 270. ಹಾಗೆಯೇ, ಪ್ರತಿದಿನ ಕಾಣೆಯಾಗುತ್ತಿರುವ ಮಕ್ಕಳ ಸರಾಸರಿ ಸಂಖ್ಯೆ 170. ಈ ಆಘಾತಕಾರಿ ಅಂಕಿ-ಅಂಶಗಳ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಈ ಕುರಿತು ಆಡಿರುವ ಮಾತುಗಳು ಗಮನಾರ್ಹ ಎನಿಸಿವೆ.

ಇದುವರೆಗೂ ಕಾಣೆಯಾದವರ ಬಗೆಗೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿದರೆ, ಅವರನ್ನು ಹುಡುಕುವ ಕೆಲಸವನ್ನಷ್ಟೆ ಮಾಡಲಾಗುತ್ತಿತ್ತು. ಸಿಕ್ಕಿದರೆ ಸಿಕ್ಕಿದರೆಂದೂ, ಸಿಕ್ಕಿಲ್ಲವಾದರೆ ಸಿಕ್ಕಲ್ಲವೆಂದೂ ಕೇಸು ಮುಗಿಸುವ ಪರಿಪಾಠವಿತ್ತು. ಇದೇ ಪದ್ಧತಿ ಈಗಲೂ ಇದೆ. ಆದರೆ, ಮದ್ರಾಸ್ ಹೈಕೋರ್ಟ್ ಮಾತಿನಂತೆ, ಸಿಆರ್‌ಪಿಸಿ ಸೆಕ್ಷನ್ 174ನ್ನು ತಿದ್ದುಪಡಿ ಮಾಡಿ, ಕಾಣೆಯಾದವರ ಕುರಿತ ದೂರುಗಳನ್ನು ಇದರಡಿ ತಂದರೆ ಪೊಲೀಸ್ ತನಿಖೆ ಕಡ್ಡಾಯ ಆಗಲಿದ್ದು, ಕಾಣೆಯಾದವರ ಕುರಿತ ಬಹುತೇಕ ದೂರುಗಳನ್ನು ಆಶಾದಾಯಕ ಅಂತ್ಯ ಕಾಣಿಸಬಹುದು. ಲಕ್ಷಾಂತರ ಕುಟುಂಬಗಳಿಗೆ ನೆಮ್ಮದಿ ದೊರಕಿಸಬಹುದು.

ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿ ಕಾಣೆಯಾದವರ ದೂರುಗಳ ಕುರಿತು ವಿಚಾರಣೆ ನಡೆಸಲು ಅವಕಾಶವಿಲ್ಲ ಎಂಬುದನ್ನು ಉಲ್ಲೇಖಿಸಿದ ಮದ್ರಾಸ್ ಹೈಕೋರ್ಟ್‌, ಕೇಂದ್ರ ಮತ್ತು ತಮಿಳುನಾಡು ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿ, ಸಿಆರ್‌ಪಿಸಿ ಸೆಕ್ಷನ್ 174ನ್ನು ತಿದ್ದುಪಡಿ ಮಾಡಿ ಕಾಣೆಯಾದವರ ಕುರಿತ ಪ್ರಕರಣಗಳಲ್ಲಿ ವಿಚಾರಣೆ ಕಡ್ಡಾಯ ಮಾಡುವ ಕುರಿತು ಪ್ರತಿಕ್ರಿಯಿಸುವಂತೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿ ಎನ್ ಕಿರುಬಕಾರನ್ ಮತ್ತು ನ್ಯಾಯಮೂರ್ತಿ ಅಬ್ದುಲ್ ಕ್ಯೂ ಅವರಿದ್ದ ಪೀಠದಿಂದ ಇಂಥದ್ದೊಂದು ಮಹತ್ವದ ನಿರ್ದೇಶನ ಹೊರಬಿದ್ದಿದೆ. ಇದುವರೆಗೂ ಐಪಿಸಿ ಅಡಿ ಇದ್ದ ಕಾಣೆಯಾದವರ ಕುರಿತ ಕೇಸುಗಳಲ್ಲಿ ‘ಅಪಹರಣ’ ಎಂದು ದೂರುದಾರರು ಉಲ್ಲೇಖಿಸಿದರೆ ಮಾತ್ರ ತನಿಖೆ ಕಡ್ಡಾಯ ಮಾಡಲಾಗುತ್ತಿತ್ತು. ಅಪಹರಣ ಎಂದು ಉಲ್ಲೇಖಿಸದ ಕೇಸುಗಳು ಕೇವಲ ಹುಡುಕಾಟಗಳಲ್ಲಿ ಕೊನೆಯಾಗುತ್ತಿದ್ದವು. ಇದಕ್ಕೆ ಮೂಲ ಕಾರಣ, ಕಾಣೆಯಾದವರನ್ನು ಹುಡುಕಿಕೊಡುವ ಕೆಲಸವನ್ನು ‘ಪೊಲೀಸರ ಸಮುದಾಯ ಸೇವೆ’ ಎಂದಷ್ಟೇ ಗುರುತಿಸಲಾಗುತ್ತಿರುವುದು.

ಮದ್ರಾಸ್ ಹೈಕೋರ್ಟ್ಕಾಣೆಯಾದವರನ್ನು ಹುಡುಕಿಕೊಡಿ ಎಂದು ಕೇಳಿಕೊಳ್ಳುವ ಹೇಬಿಯಸ್ ಕಾರ್ಪಸ್ ಅರ್ಜಿಗಳು ಈ ಕೋರ್ಟಿನ ಎದುರು ಪ್ರತಿದಿನ ಬರುತ್ತಲೇ ಇರುತ್ತವೆ. ಕಾಣೆಯಾದವರ ಕುರಿತ ಕೇಸುಗಳು ಐಪಿಸಿ ಅಡಿ ‘ಅಪರಾಧ ವ್ಯಾಪ್ತಿ’ಗೆ ಬರುವುದಿಲ್ಲ ಎಂದಾದರೆ, ಅದನ್ನು ಕಾಯ್ದೆ ರೂಪಿಸುವವರ ಗಮನಕ್ಕೆ ತರಬೇಕಲ್ಲವೇ? ಇನ್ನು, ಕಾಣೆಯಾದವರ ಪ್ರಕರಣಗಳನ್ನು ವಿಚಾರಣೆ ನಡೆಸುವ ಹಂತದಲ್ಲಿ ಕೂಡ, ಹಾಗೆ ಕಾಣೆಯಾದವರು ಇನ್ನೂ ಬದುಕಿದ್ದಾರೋ ಇಲ್ಲವೋ, ಅವರು ನಾಪತ್ತೆಯಾಗಲು ಕಾರಣಗಳೇನು ಎಂಬ ಮಾಹಿತಿ ಗೊತ್ತೇ ಇರುವುದಿಲ್ಲ! ಹಾಗಾಗಿ, ಕೋಡ್‌ ಆಫ್ ಕ್ರಿಮಿನಲ್ ಪ್ರೊಸೀಜರ್ (ಸಿಆರ್‌ಪಿಸಿ) ಸೆಕ್ಷನ್ 174ನ್ನು ತಿದ್ದುಪಡಿ ಮಾಡಿ, ಕಾಣೆಯಾದವರ ಕುರಿತ ಪ್ರಕರಣಗಳಲ್ಲಿ ತನಿಖೆ ಕಡ್ಡಾಯ ಮಾಡಬೇಕಿದೆ.

ಈ ವೇಳೆ, ತಮಿಳುನಾಡು ಪೊಲೀಸರ ತನಿಖಾ ವೈಖರಿ ಕುರಿತೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಈ ಹಿಂದೆಯೇ ಸಾಕಷ್ಟು ಬಾರಿ, ಕಾಣೆಯಾದವರ ಕುರಿತು ಕೇಸುಗಳನ್ನು ಅಪರಾಧ ದಂಡ ಸಂಹಿತೆಯಂತೆ ನೋಡಬೇಕೋ ಬೇಡವೋ ಎಂದು ನೋಡಿಕೊಂಡು ಕೂರುವುದು ಬೇಡವೆಂದು ಪೊಲೀಸರಿಗೆ ಕೋರ್ಟ್ ಸಾಕಷ್ಟು ಸಾರಿ ಎಚ್ಚರಿಸಿತ್ತು. “ದೂರು ಪಡೆದು ರಶೀದಿ ಕೊಟ್ಟು ಕಳಿಸುವಷ್ಟಕ್ಕೆ ಕೆಲಸ ಮುಗಿಯಿತೆಂದು ಸುಮ್ಮನಾಗುವುದಲ್ಲ, ಎಫ್‌ಐಆರ್ ದಾಖಲಿಸಬೇಕು. ಕೇಸು ಮುಂದುವರಿಸಬೇಕು,” ಎಂಬುದು ಕೋರ್ಟ್ ಚಾಟಿ.

ಮದ್ರಾಸ್ ಹೈಕೋರ್ಟ್ಕಾಣೆಯಾದವರ ಪೋಷಕರ ನೋವನ್ನು ಪೊಲೀಸ್ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ವಿಶೇಷವಾಗಿ ಹೆಣ್ಣುಮಕ್ಕಳು ಕಾಣೆಯಾದಾಗ ಇಡೀ ಕುಟುಂಬ ಅನುಭವಿಸುವ ಯಾತನೆ ಪೊಲೀಸ್ ಅಧಿಕಾರಿಗಳಿಗೆ ಅರ್ಥವಾಗಬೇಕಿದೆ. ಒಂದು ವೇಳೆ, ಅದೇ ಅಧಿಕಾರಿಗಳ ಮಕ್ಕಳು ಅಥವಾ ಸಂಬಂಧಿಗಳ ಮಕ್ಕಳು ಹೀಗೆ ಕಾಣೆಯಾದರೂ ಇವರು ಸುಮ್ಮನಿರುತ್ತಾರೆಯೇ? ಬಹುಶಃ ಅವರಿಗೆ ಮುಖ್ಯವಾದ ವ್ಯಕ್ತಿಗಳು ನಾಪತ್ತೆಯಾದಾಗ ಮಾತ್ರವೇ ಅವರು ಈ ಬಗ್ಗೆ ಆಸಕ್ತಿ ತೋರಿಸುತ್ತಾರೇನೋ!

ತಮಿಳುನಾಡು ಪೊಲೀಸರು ವಿರುದ್ಧ ಚಾಟಿ ಬೀಸಿದ ನಂತರ, ಕಾಣೆಯಾದವರ ಕುರಿತು ಕೇಸರು ದಾಖಲಿಸುವ ಮತ್ತು ಆ ಕೇಸುಗಳನ್ನು ನಿಭಾಯಿಸುವ ವಿಷಯದಲ್ಲಿ ಕೆಲವು ಅತ್ಯಗತ್ಯ ಬದಲಾವಣೆ ಆಗಬೇಕೆಂದು ಅಭಿಪ್ರಾಯಪಟ್ಟ ಕೋರ್ಟ್, ಕೇಂದ್ರ ಕಾನೂನು ಸಚಿವಾಲಯ, ತಮಿಳುನಾಡು ಗೃಹ ಇಲಾಖೆ, ತಮಿಳುನಾಡು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಈ ಕೆಳಗಿನ ಪ್ರಶ್ನೆಗಳನ್ನು ನೋಟಿಸ್ ರೂಪದಲ್ಲಿ ಕಳಿಸಲು ಸೂಚಿಸಿದೆ.

  1. ಇಂಡಿಯನ್‌ ಪೀನಲ್ ಕೋಡ್ (ಐಪಿಸಿ) ಅಡಿ, ಕಾಣೆಯಾದವರ ಕುರಿತ ಪ್ರಕರಣಗಳ ತನಿಖೆಗೆ ಅವಕಾಶ ಇದೆಯೇ?
  2. ಐಪಿಸಿಯಲ್ಲಿ ಆ ಅವಕಾಶ ಇಲ್ಲವಾದರೆ ಮತ್ಯಾವ ಕಾಯ್ದೆಯಲ್ಲಿ ಅದಕ್ಕೆ ಅವಕಾಶವಿದೆ?
  3. ಸಿಆರ್‌ಪಿಸಿ ಸೆಕ್ಷನ್ 174ನ್ನು ತಿದ್ದುಪಡಿ ಮಾಡಿ, ಕಾಣೆಯಾದವರ ಕುರಿತ ಪ್ರಕರಣಗಳಲ್ಲಿ ತನಿಖೆ ಕಡ್ಡಾಯ ಮಾಡುವಂತೆ ಅವಕಾಶ ಕಲ್ಪಿಸಬಾರದೇಕೆ?
  4. ಸಿಆರ್‌ಪಿಸಿ ಸೆಕ್ಷನ್ 174ನ್ನು ಸರ್ಕಾರ ಯಾವಾಗ ತಿದ್ದುಪಡಿ ಮಾಡಬಹುದು?
  5. ತಮಿಳುನಾಡು ಮತ್ತು ಇಡೀ ದೇಶದಲ್ಲಿ ಇದುವರೆಗೂ ಎಷ್ಟು ನಾಪತ್ತೆ ಪ್ರಕರಣ ದಾಖಲಾಗಿವೆ?
  6. ಇದುವರೆಗೂ ಎಷ್ಟು ಮಂದಿಯನ್ನು ಸಂರಕ್ಷಿಸಲಾಗಿದೆ ಅಥವಾ ಪತ್ತೆ ಮಾಡಲಾಗಿದೆ?
  7. ಎಷ್ಟು ಕೇಸುಗಳನ್ನು ಮುಕ್ತಾಯಗೊಳಿಸಲಾಗಿದೆ?
  8. ಎಷ್ಟು ಕೇಸುಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಿದೆ?
  9. ಕಳೆದ ಹತ್ತು ವರ್ಷಗಳಲ್ಲಿ ತಮಿಳುನಾಡಿನಲ್ಲಿ ಎಷ್ಟು ಕೇಸುಗಳಲ್ಲಿ ಸಿಎಸ್‌ಆರ್ (ಕಮ್ಯುನಿಟಿ ಸರ್ವಿಸ್) ಎಂದು ದಾಖಲಿಸಲಾಗಿದೆ?
  10. ಸಿಎಸ್‌ಆರ್ ದಾಖಲಾದ ನಂತರದಲ್ಲಿ ಎಷ್ಟು ಕೇಸುಗಳನ್ನು ಮುಕ್ತಾಯ ಮಾಡಲಾಗಿದೆ?
  11. ಎಷ್ಟು ಕೇಸುಗಳು ಸಿಎಸ್‌ಆರ್‌ನಿಂದ ಎಫ್‌ಐಆರ್ ಆಗುವ ಹಂತಕ್ಕೆ ತಲುಪಿ ತನಿಖೆ ನಡೆದಿದೆ?
RS 500
RS 1500

SCAN HERE

don't miss it !

ಫ್ಯಾಕ್ಟ್‌ ಚೆಕ್ಕರ್‌ ಜುಬೇರ್‌ ಕೂಡಲೇ ಬಿಡುಗಡೆ ಮಾಡಿ: ಸಂಪಾದಕರ ಮಂಡಳಿ ಆಗ್ರಹ
ದೇಶ

ಫ್ಯಾಕ್ಟ್‌ ಚೆಕ್ಕರ್‌ ಜುಬೇರ್‌ ಕೂಡಲೇ ಬಿಡುಗಡೆ ಮಾಡಿ: ಸಂಪಾದಕರ ಮಂಡಳಿ ಆಗ್ರಹ

by ಪ್ರತಿಧ್ವನಿ
June 28, 2022
ಡಾಲರ್‌ ಎದುರು ಮತ್ತೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ!
ದೇಶ

ಡಾಲರ್‌ ಎದುರು ಮತ್ತೆ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ!

by ಪ್ರತಿಧ್ವನಿ
June 28, 2022
ಉಪಚುನಾವಣೆಯಲ್ಲಿ 4 ಸ್ಥಾನ ಗೆದ್ದು ಬೀಗಿದ ಬಿಜೆಪಿ: ಆಪ್‌, ಸಮಾಜವಾದಿಗೆ ಆಘಾತ
ದೇಶ

ಉಪಚುನಾವಣೆಯಲ್ಲಿ 4 ಸ್ಥಾನ ಗೆದ್ದು ಬೀಗಿದ ಬಿಜೆಪಿ: ಆಪ್‌, ಸಮಾಜವಾದಿಗೆ ಆಘಾತ

by ಪ್ರತಿಧ್ವನಿ
June 26, 2022
ಪ್ರಮುಖರ ಹಾಜರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ದ್ರೌಪದಿ ಮುರ್ಮು
ದೇಶ

ಪ್ರಮುಖರ ಹಾಜರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ ದ್ರೌಪದಿ ಮುರ್ಮು

by ಪ್ರತಿಧ್ವನಿ
June 24, 2022
ಸಿಎಂ ಬೊಮ್ಮಾಯಿಯವರ ಮೇಲೆ ಭರವಸೆ ಇಟ್ಟು ಹೋರಾಟ ಮುಂದೂಡಲಾಗಿದೆ: ಮೃತ್ಯುಂಜಯ ಸ್ವಾಮೀಜಿ
ಕರ್ನಾಟಕ

ಸಿಎಂ ಬೊಮ್ಮಾಯಿಯವರ ಮೇಲೆ ಭರವಸೆ ಇಟ್ಟು ಹೋರಾಟ ಮುಂದೂಡಲಾಗಿದೆ: ಮೃತ್ಯುಂಜಯ ಸ್ವಾಮೀಜಿ

by ಪ್ರತಿಧ್ವನಿ
June 30, 2022
Next Post
ಚದರಡಿಗೆ 40

ಚದರಡಿಗೆ 40,000 ಎಲ್ಲಿ, 2.80 ರೂ. ಎಲ್ಲಿ? ಜಿಂದಾಲ್‌ಗೆ ಭೂದಾನದ ಕತೆ-ವ್ಯಥೆ

IAS

IAS, KAS ಕನಸುಗಳಿಗೆ ಸಾರ್ವಜನಿಕ ಗ್ರಂಥಾಲಯಗಳ ಕೊಡುಗೆ 

ಅನುದಾನಿತ ಕಾಲೇಜು ಪ್ರಾಧ್ಯಾಪಕರ ನೇಮಕ: ‘ಅಡ್ಡ ದಾರಿ’ಯಿಂದ ಆಚೆ ಬಾರದ ವಿವಿಗಳು

ಅನುದಾನಿತ ಕಾಲೇಜು ಪ್ರಾಧ್ಯಾಪಕರ ನೇಮಕ: ‘ಅಡ್ಡ ದಾರಿ’ಯಿಂದ ಆಚೆ ಬಾರದ ವಿವಿಗಳು

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist