Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕರೋನಾ ಬೆನ್ನಲ್ಲೇ ಹಂಟಾ ವೈರಸ್‌ ; ಚೀನಾದಲ್ಲಿ ಮತ್ತೆ ಆತಂಕ..!

ಕರೋನಾ ಬೆನ್ನಲ್ಲೇ ಹಂಟಾ ವೈರಸ್‌ ; ಚೀನಾದಲ್ಲಿ ಮತ್ತೆ ಆತಂಕ..!
ಕರೋನಾ ಬೆನ್ನಲ್ಲೇ ಹಂಟಾ ವೈರಸ್‌ ; ಚೀನಾದಲ್ಲಿ ಮತ್ತೆ ಆತಂಕ..!

March 24, 2020
Share on FacebookShare on Twitter

ಇಡೀ ವಿಶ್ವವೇ ಕರೋನಾ ವೈರಸ್‌ ದಾಳಿಗೆ ತತ್ತರಿ ಹೋಗಿದೆ, ಇದರ ಬೆನ್ನಲ್ಲೇ ಹಂದಿ ಜ್ವರ, ಹಕ್ಕಿಜ್ವರದಂತಹ ಬಾಧೆಗಳೂ ಅಪ್ಪಳಿಸಿವೆ. ಇವುಗಳ ಸಾಲಿಗೆ ಮರೆತುಹೋದ ಭೀಕರ ವೈರಸ್‌ ಉಲ್ಭಣವಾಗುವ ಲಕ್ಷಣಗಳು ಕಾಣುತ್ತಿವೆ. ಚೀನಾದಲ್ಲೇ ಟಿಸಿಲೊಡೆಯುತ್ತಿರುವ ಈ ಜ್ವರದ ವೈರಾಣುವಿಗೆ ಹಂಟಾವೈರಸ್‌ ಎಂದು ಹೆಸರು. ಎಂಟು ದಶಕಗಳ ಹಿಂದೆಯೇ ಈ ವೈರಾಣು ಸಾವಿರಾರು ಜನರನ್ನ ಬಲಿತೆಗೆದುಕೊಂಡಿತ್ತು. ಈಗದು ಅದೇ ಪ್ರಾಂತ್ಯದಲ್ಲಿ ಅಂದರೆ ಚೀನಾದಲ್ಲೇ ಕಾಣಿಸಿಕೊಂಡಿದೆ ಎಂಬ ಸುದ್ದಿ ಆಘಾತ ಮೂಡಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ಮೋದಿ ಹಿರಿಯಣ್ಣ, ಅವರೊಂದಿಗೆ ಕೆಲಸ ಮಾಡಲು ಬಯಸುತ್ತೇನೆ: ಕೇಜ್ರಿವಾಲ್‌

ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿಗೆ ಅಪಘಾತ : ಶಸ್ತ್ರಚಿಕಿತ್ಸೆ ಮುಗಿಸಿ ಆ್ಯಂಬುಲೆನ್ಸ್​ನಲ್ಲೇ ಪರೀಕ್ಷೆ ಬರೆದ ಸಾಹಸಿ

ಅಭಿವೃದ್ಧಿಯ ಮಾರ್ಗವೂ ಕಾರ್ಪೋರೇಟ್ ಬಂಡವಾಳವೂ ಸಮಾಜದ ಮೇಲ್ವರ್ಗಕ್ಕೆ ಮಾತ್ರವೇ ನಿಲುಕುವ ಅಭಿವೃದ್ಧಿ ಮಾದರಿಗಳೇ ನವಉದಾರವಾದದ ಜೀವಾಳ

ಹಂಟಾವೈರಸ್‌ ಮೂಲ, ವಿನಾಶ ಹಾಗೂ ವ್ಯಾಪ್ತಿಗೂ ಮುನ್ನ ಸುದ್ದಿ ಸ್ಫೋಟ ನೋಡುವುದಾದರೆ, ಚೀನಾದೇಶದ ಕಮ್ಯುನಿಷ್ಟ್‌ ಪಕ್ಷದ ಒಡೆತನದ ಗ್ಲೋಬಲ್‌ ಟೈಮ್ಸ್ ಹಂಟಾವೈರಸ್‌ ಬಗ್ಗೆ ಸುದ್ದಿ ಬಿತ್ತರಿಸಿದೆ. ಚೀನಾದ ಶಾನ್‌ಡಾಂಗ್‌ ಪ್ರಾಂತ್ಯಕ್ಕೆ ಹೊರಟಿದ್ದ ಯುನಾನ್‌ ಪ್ರಾಂತ್ಯದ ವ್ಯಕ್ತಿ ಬಸ್‌ನಲ್ಲಿಯೇ ಕುಸಿದು ಬಿದ್ದು ಮೃತನಾಗಿದ್ದಾನೆ. ಆತನ ಸಹ ಪ್ರಯಾಣಿಕರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಆತಂಕ ಹುಟ್ಟಿಸಿದೆ. ಏನದು ಹಂಟಾವೈರಸ್‌..? ಇದರ ವಾಹಿನಿ ಯಾವುದು..? ಔಷಧ ಇದೆಯಾ..?

ಹಂಟಾವೈರಸ್‌ ಧ್ವಂಸಕಗಳೆಂದು ಕರೆಯುವ ಇಲಿ ಹೆಗ್ಗಣಗಳನ್ನ ವಾಹಿನಿಯಾಗಿ ಬಳಸಿಕೊಳ್ಳುತ್ತೆ. ಈ ಬಗೆಯ ವೈರಸ್‌ ಮೊದಲು ಪತ್ತೆಯಾಗಿದ್ದು ೧೯೫೦ರಲ್ಲಿ ಅಮೆರಿಕಾ-ಕೊರಿಯಾ ಯುದ್ಧದ ಸಮಯದಲ್ಲಿ. ಇದರ ದಾಳಿಗೆ ಸುಮಾರು ಮೂರು ಸಾವಿರ ಜನರು ಮೃತಪಟ್ಟಿದ್ದರು. ದಕ್ಷಿಣ ಕೊರಿಯಾದ ಪ್ರಸಿದ್ಧ ನದಿ ಹಂಟನ್‌ ನ ತೀರದಲ್ಲಾದ ಮರಣ ಮೃದಂಗಕ್ಕಾಗಿ ಈ ವೈರಸ್‌ ಹಂಟಾವೈರಸ್‌ ಎಂದು ಕರೆದರು. ಇದನ್ನ ಎರಡು ಭಾಗಗಳಾಗಿ ವಿಂಗಡಿಸಿ ಸಂಬೋಧನೆ ಮಾಡಲಾಗುತ್ತೆ. ಯೂರೋಪ್‌ ಹಾಗೂ ಏಷ್ಯಾದಲ್ಲಿ ಓಲ್ಡ್‌ ವರ್ಲ್ಡ್‌ ಹಂಟಾವೈರಸ್‌ ಎಂದು ಕರೆದರೆ, ಅಮೆರಿಕದಲ್ಲಿ ಇದನ್ನ ನ್ಯೂವರ್ಲ್ಡ್‌ ಹಂಟಾವೈರಸ್‌ ಎಂದು ಕರೆಯಲಾಗುತ್ತೆ. ತೊಂಭತ್ತರ ದಶಕದಲ್ಲಿ ಹಾಗೂ ಇಪ್ಪತ್ತನೇ ಶತಮಾನದ ಆದಿಯಲ್ಲೂ ಈ ವೈರಸ್‌ ನೂರಾರು ಜನರನ್ನ ಬಲಿತೆಗೆದುಕೊಂಡಿತ್ತು.

ಕರೋನಾದಷ್ಟು ಕರಾಳವಾಗಿ ವ್ಯಾಪಿಸುವುದಿಲ್ಲ ಈ ಹಂಟಾವೈರಸ್‌. ನಾವು ಕನ್ನಡದಲ್ಲಿ ಧ್ವಂಸಕಗಳು ಎಂದು ಕರೆಯುವ ಇಲಿ, ಹೆಗ್ಗಣದಂತಹ ಪ್ರಾಣಿಗಳು ಈ ವೈರಸ್‌ ವಾಹಿನಿಗಳು. ಈ ಪ್ರಾಣಿಗಳಿಗೆ ಈ ವೈರಸ್‌ ಬಾಧಿಸುವುದಿಲ್ಲ ಆದರೆ ದೇಹದಲ್ಲಿ ಆಶ್ರಯಿಸಿರುತ್ತವೆ. ಇವುಗಳ ಮಲಮೂತ್ರದಿಂದ ಪಸರಿಸುವ ಹಂಟಾ ವೈರಾಣುಗಳು ಮನುಷ್ಯನ ದೇಹಕ್ಕೆ ಸೇರಿಕೊಂಡು ಶ್ವಾಸನಾಳಕ್ಕೆ ಬಾಧಿಸುತ್ತೆ. ಎಲ್ಲಾ ವೈರಾಣುಗಳಂತೆ ಇದೂ ಕೂಡ ಉಸಿರುಗಟ್ಟಿಸುವ ರೋಗವೇ ಆದರೆ ನಿಧಾನವಾಗಿ ಹರಡುತ್ತದೆ. ಕರೋನಾ ಹಾಗೂ ಹಂಟಾವೈರಸ್‌ಗಳ ರೋಗಚರ್ಯೆಯಲ್ಲಿ ಸಾಕಷ್ಟು ವ್ಯತ್ಯಾಸಗಳೇನು ಇಲ್ಲ. ಗಂಟಲು ನೋವಿನಿಂದ, ಥಂಡಿ-ಜ್ವರ, ತಲೆನೋವು, ಮೈಕೈನೋವು, ಹೊಟ್ಟೆನೋವು, ಊಟ ಸೇರದೇ ವಾಕರಿಕೆ, ದೇಹ ಆಯಾಸ ಕೊನೆಗೆ ಉಲ್ಭಣಗೊಂಡು ಉಸಿರಾಟಕ್ಕೆ ತೊಂದರೆ ಉಂಟಾಗುತ್ತೆ. ಹಂಟಾವೈರಸ್‌ ಪೀಡಿತನಿಗೆ ಮೂರ್ನಾಲ್ಕು ವಾರ ಐಸಿಯುನಲ್ಲೇ ಇಟ್ಟುಕೊಂಡು ಚಿಕಿತ್ಸೆ ನೀಡುತ್ತಾರೆ. ಇದಕ್ಕೆ ಎಪ್ಪತ್ತರ ದಶಕದಲ್ಲಿ ದಕ್ಷಿಣ ಕೊರಿಯಾದ ವೈರಾಣು ಸಂಶೋಧಕ ವಾಂಗ್‌ ಲೀ ಎಂಬುವರು ಚುಚ್ಚುಮದ್ದು ಕಂಡು ಹಿಡಿದು ಪ್ರತಿಬಂಧಿಸಿದ್ದರು. ಆದರೂ ನ್ಯೂವರ್ಲ್ಡ್‌ ಹಂಟವೈರಸ್‌ ತೊಂಭತ್ತರ ದಶಕದಲ್ಲಿ ಚಿಗುರಿಕೊಂಡಿತ್ತು.

ಹಂಟಾವೈರಸ್‌ ಬಗ್ಗೆ ಏಕೆ ಎಚ್ಚರದಿಂದ ನೋಡಬೇಕು ಎಂದರೆ, ನಮ್ಮ ದೇಶವೂ ಸಹ ರೋಗಗಳ ಆವಾಸ ಸ್ಥಾನ. ಪ್ಲೇಗ್‌ನಿಂದ ಕರೋನಾವರೆಗೆ ಎಲ್ಲಾ ರೋಗಗಳೂ ನಮ್ಮವರನ್ನ ಬಲಿತೆಗೆದುಕೊಂಡಿವೆ. ಇಲಿಗಳಿಂದ ಹಂಟಾವೈರಸ್‌ ಪಸರಿಸಬೇಕೆಂದೇನೂ ಇಲ್ಲ. ಇಲಿ, ಹೆಗ್ಗಣಗಳು ಸಾಕಷ್ಟು ರೋಗಗಳಿಗೆ ವಾಹಕಗಳಾಗಿವೆ. ನಮ್ಮ ದೇಶದಲ್ಲಿ ಇಲಿಜ್ವರ, ಹಕ್ಕಿಜ್ವರ, ಹಂದಿಜ್ವರ, ವೈರಲ್‌ ಫೀವರ್‌, ಡೆಂಗ್ಯೂ, ಚಿಕನ್‌ಗೂನ್ಯಾಗಳೂ ಪ್ರತಿವರ್ಷ ಸಾವಿರಾರು ಜನರ ಪ್ರಾಣ ತೆಗೆಯುತ್ತಿವೆ. ನಮಗೆ ರೋಗಗಳ ಸಾಮಾನ್ಯ ಜ್ಞಾನದ ಕೊರತೆ ಇದೆ. ಹಾಗೂ ಬೇಜವಾಬ್ದಾರಿತನ, ಅಸಡ್ಡೆಯಿಂದ ರೋಗವನ್ನ ಅಹ್ವಾನ ಮಾಡಿಕೊಳ್ಳುತ್ತಿದ್ದೇವೆ. ಇದರ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಮೈಖೆಲ್‌ ರೆಯಾನ್‌ ಭಾರತವನ್ನ ಹಾಗೂ ಕರೋನಾ ವಿರುದ್ಧ ಸಮರ ಸಾರಿರುವ ಪ್ರಧಾನಿಯನ್ನ ಹೊಗಳಿಬಿಟ್ಟಿದ್ದಾರೆ. ಸಿಡುಬು ಹಾಗೂ ಪೊಲೀಯೋ ಮುಕ್ತಗೊಳಿಸಿದ ಭಾರತಕ್ಕೆ ಕರೋನ ಕಟ್ಟಿಹಾಕುವ ಸಾಮರ್ಥ್ಯ ಇದೆ ಎಂದು ಹೇಳಿದ್ದಾರೆ. ಇಷ್ಟು ಜನಸಾಂದ್ರತೆ ಇರುವ ರಾಷ್ಟ್ರದಲ್ಲಿ ವೈರಸ್‌ ದಾಳಿಯನ್ನ ಲಘುವಾಗಿ ಪರಿಗಣಿಸದೇ ಕರೋನಾ ಜತೆಯಲ್ಲಿ ಇತರ ಸಾಂಕ್ರಮಿಕ ರೋಗಗಳ ಬಗ್ಗೆಯೂ ಗಮನ ಹರಿಸಬೇಕಿದೆ. ಸದ್ಯ ಮಾಧ್ಯಮಗಳ ಸುದ್ದಿಗೆ ಬೆಚ್ಚದೇ ಹಂಟಾವೈರಸ್‌ ಬಿಟ್ಟು ಕರೋನಾ ಮುಕ್ತಗೊಳಿಸಲು ನಾವುಗಳು ಪ್ರಯತ್ನಿಸಬೇಕು.

RS 500
RS 1500

SCAN HERE

Pratidhvani Youtube

Sorry, there was a YouTube error.

don't miss it !

ಪಲ್ಲವಿಸುವ ನಿಸರ್ಗವೂ ಮನುಷ್ಯನ ಪರಿಸರ ಪ್ರಜ್ಞೆಯೂ..ಯುಗಾದಿಯ ಆಚರಣೆಯನ್ನು ಬೇವು-ಬೆಲ್ಲದಿಂದಾಚೆಗೂ ವಿಸ್ತರಿಸಿದಾಗ ಪರಿಸರ ಉಳಿಯುತ್ತದೆ : UGADI
Top Story

ಪಲ್ಲವಿಸುವ ನಿಸರ್ಗವೂ ಮನುಷ್ಯನ ಪರಿಸರ ಪ್ರಜ್ಞೆಯೂ..ಯುಗಾದಿಯ ಆಚರಣೆಯನ್ನು ಬೇವು-ಬೆಲ್ಲದಿಂದಾಚೆಗೂ ವಿಸ್ತರಿಸಿದಾಗ ಪರಿಸರ ಉಳಿಯುತ್ತದೆ : UGADI

by ನಾ ದಿವಾಕರ
March 22, 2023
VARTHUR PRAKSH |ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ #PRATIDHVANI
ಇದೀಗ

VARTHUR PRAKSH |ಕೋಲಾರದಲ್ಲಿ ಗೆಲ್ಲಲು ಆಗುವುದಿಲ್ಲ ಅಂತ ಸಿದ್ದರಾಮಯ್ಯ ಯುಟರ್ನ್ : ವರ್ತೂರು ಪ್ರಕಾಶ್ #PRATIDHVANI

by ಪ್ರತಿಧ್ವನಿ
March 20, 2023
PRANAYAM MOVIE ‘ಪ್ರಣಯಂ’ ಚಿತ್ರದ ರಿಲಿಕಲ್ ಸಾಂಗ್ ಲಾಂಚ್ ಮಾಡಿದ ಅಶ್ವಿನಿ ಮೇಡಂ..! #pratidhavni
ಇದೀಗ

PRANAYAM MOVIE ‘ಪ್ರಣಯಂ’ ಚಿತ್ರದ ರಿಲಿಕಲ್ ಸಾಂಗ್ ಲಾಂಚ್ ಮಾಡಿದ ಅಶ್ವಿನಿ ಮೇಡಂ..! #pratidhavni

by ಪ್ರತಿಧ್ವನಿ
March 21, 2023
K. S. Eshwarappa | ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ
ಇದೀಗ

K. S. Eshwarappa | ಬಿಜೆಪಿ ಮಹಾಸಂಗಮ ಐತಿಹಾಸಿಕ ಸಮಾವೇಶಕ್ಕೆ ಚಾಲನೆ

by ಪ್ರತಿಧ್ವನಿ
March 23, 2023
ANTIBIOTIC | ಆಂಟಿಬಯಾಟಿಕ್ ಟ್ಯಾಬ್ಲೆಟ್ ಅರೋಗ್ಯಕೆ ಒಳ್ಳೆಯದಲ್ಲ #PRATIDHVANI
ಇದೀಗ

ANTIBIOTIC | ಆಂಟಿಬಯಾಟಿಕ್ ಟ್ಯಾಬ್ಲೆಟ್ ಅರೋಗ್ಯಕೆ ಒಳ್ಳೆಯದಲ್ಲ #PRATIDHVANI

by ಪ್ರತಿಧ್ವನಿ
March 23, 2023
Next Post
ಕರೋನಾ ಸೋಂಕು: ನಿಜಕ್ಕೂ ನಾವು ಯಾವ ಹಂತದಲ್ಲಿದ್ದೇವೆ?

ಕರೋನಾ ಸೋಂಕು: ನಿಜಕ್ಕೂ ನಾವು ಯಾವ ಹಂತದಲ್ಲಿದ್ದೇವೆ?

ದೇಶದ ಗಮನಸೆಳೆದ ಡಾ. ಕಾಮ್ನಾ ಕಕ್ಕರ್‌ ಟ್ವೀಟ್‌ ; ಅಸಲಿ

ದೇಶದ ಗಮನಸೆಳೆದ ಡಾ. ಕಾಮ್ನಾ ಕಕ್ಕರ್‌ ಟ್ವೀಟ್‌ ; ಅಸಲಿ, ನಕಲಿಯಾಚೆಗೆ..!?

ಹ್ಯಾಪಿ ಯುಗಾದಿ..! ಶೀಘ್ರದಲ್ಲೇ ಆಗಲಿದೆ ಪೆಟ್ರೋಲ್

ಹ್ಯಾಪಿ ಯುಗಾದಿ..! ಶೀಘ್ರದಲ್ಲೇ ಆಗಲಿದೆ ಪೆಟ್ರೋಲ್, ಡಿಸೇಲ್ ಬೆಲೆ 8 ರೂಪಾಯಿ ಏರಿಕೆ..!!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist