Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

‘ಕನ್ನಡಿಗ’ ವಿವಾದ: ಉದ್ದೇಶಪೂರ್ವಕ ಎಡವಟ್ಟು ಮಾಡಿದರೇ ಹಿರಿಯ ಅಧಿಕಾರಿಗಳು?

ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ಕರಡು ಅಧಿಸೂಚನೆ ವಿವಾದಕ್ಕೆ ತುತ್ತಾಗಿದೆ.
‘ಕನ್ನಡಿಗ’ ವಿವಾದ: ಉದ್ದೇಶಪೂರ್ವಕ ಎಡವಟ್ಟು ಮಾಡಿದರೇ ಹಿರಿಯ ಅಧಿಕಾರಿಗಳು?
Pratidhvani Dhvani

Pratidhvani Dhvani

June 8, 2019
Share on FacebookShare on Twitter

ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡಿಗರಿಗೇ ಸಿಗಬೇಕೆಂಬ ಆಗ್ರಹದ ಅಭಿಯಾನವೊಂದು ಇತ್ತೀಚೆಗಷ್ಟೆ ಸದ್ದು ಮಾಡಿತ್ತು. ಅದರ ಹಿಂದೆಯೇ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಕುರಿತೂ ಚರ್ಚೆ ಜೋರು ನಡೆದಿತ್ತು. ಇವೆರಡರ ಕಾವು ಆರುವ ಮುನ್ನವೇ, ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆಯು ದೊಡ್ಡ ಎಡವಟ್ಟಿನಿಂದಾಗಿ ವಿವಾದಕ್ಕೆ ತುತ್ತಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ

ಸರ್ಕಾರದ ಆಸ್ತಿ ಕಾಪಾಡಬೇಕಾದ BMTF ನಿಂದಲೇ ಭೂಗಳ್ಳರ ರಕ್ಷಣೆ ಆಗ್ತಿದ್ಯಾ.!?

ಚಾರ್ಲಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್‌ : ಬೇರೆ ಭಾಷೆಯಲ್ಲೂ ಮಿಂಚಲಿದೆಯ ಚಾರ್ಲಿ?

ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಸಿಗಬೇಕಾದ ಉದ್ಯೋಗ ಮೀಸಲಾತಿ ಕುರಿತು ಮಾತನಾಡುವ ಸರೋಜಿನಿ ಮಹಿಷಿ ವರದಿ (1986) ಪ್ರಕಾರ, ಕರ್ನಾಟಕದಲ್ಲಿ ಕನಿಷ್ಠ 15 ವರ್ಷ ವಾಸವಿರುವ ಹಾಗೂ ಕನಿಷ್ಠ 10ನೇ ತರಗತಿವರೆಗೆ ಕನ್ನಡ ಕಲಿತಿರುವವರು ಮಾತ್ರವೇ ‘ಕನ್ನಡಿಗರು.’ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವಾಗ ಅಭ್ಯರ್ಥಿಯು ‘ಕನ್ನಡಿಗ’ನೇ ಅಲ್ಲವೇ ಎಂದು ನಿರ್ಧಾರವಾಗಬೇಕೆಂದರೆ ಈ ಎರಡು ಅಂಶಗಳು ಇರಲೇಬೇಕು ಎಂಬುದು ಮಹಿಷಿ ವರದಿಯ ಕಟ್ಟಪ್ಪಣೆ. ಆದರೆ, ಸದ್ಯ ರಾಜ್ಯ ಸರ್ಕಾರ ಹೊರಡಿಸಿರುವ ಕರ್ನಾಟಕ ಕೈಗಾರಿಕಾ ಉದ್ಯೋಗ ಕಾಯ್ದೆ ತಿದ್ದುಪಡಿಯ ಕರಡು ಅಧಿಸೂಚನೆಯಲ್ಲಿ (ಮೇ 24) ಈ ಎರಡೂ ವಿಷಯಗಳಲ್ಲೂ ದೊಡ್ಡ ಮಟ್ಟದ ಸಡಿಲಿಕೆ ಮಾಡಲಾಗಿದೆ. ಕರ್ನಾಟಕದಲ್ಲಿ ಕನಿಷ್ಠ 10 ವರ್ಷ ವಾಸವಿರುವ ಹಾಗೂ ಕನ್ನಡ ಓದಲು ಮತ್ತು ಬರೆಯಲು ಬಲ್ಲವ ‘ಕನ್ನಡಿಗ’ ಎನ್ನುತ್ತದೆ ಕರಡು ಅಧಿಸೂಚನೆ. ಈ ಸಡಿಲಿಕೆಯು ಪರೋಕ್ಷವಾಗಿ ಕನ್ನಡಿಗರ ಉದ್ಯೋಗ ಕಸಿದುಕೊಳ್ಳಲಿದೆ ಎಂದು ಟೀಕಿಸಿರುವ ಕನ್ನಡಪರ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗುತ್ತಿವೆ.

ಈ ಕುರಿತು ‘ಪ್ರತಿಧ್ವನಿ’ಯೊಂದಿಗೆ ಮಾತನಾಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್ ಜಿ ಸಿದ್ದರಾಮಯ್ಯ, “ಈ ಬಗ್ಗೆ ರಾಜಕಾರಣಿಗಳನ್ನು ದೂರಿ ಪ್ರಯೋಜನವಿಲ್ಲ. ಇದು ಹಿರಿಯ ಅಧಿಕಾರಿಗಳು ಉದ್ದೇಶಪೂರ್ವಕ ಮಾಡಿರುವ ಎಡವಟ್ಟು,” ಎಂದು ನೇರ ಆರೋಪ ಮಾಡಿದ್ದಾರೆ.

ಎಸ್ ಜಿ ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಕ್ಕೆ ಸಲ್ಲಿಸಿದ (ಸರೋಜಿನಿ ಮಹಿಷಿ ವರದಿಯ) ಪರಿಷ್ಕೃತ ವರದಿಯಲ್ಲಿ ಮೂಲ ಶಿಫಾರಸನ್ನು ಯಥಾಪ್ರಕಾರ ಉಳಿಸಿಕೊಳ್ಳಲಾಗಿತ್ತು. ಕನಿಷ್ಠ 15 ವರ್ಷ ಕರ್ನಾಟಕದಲ್ಲಿ ವಾಸ ಮತ್ತು 10ನೇ ತರಗತಿವರೆಗೆ ಕನ್ನಡ ಕಲಿತ ಅಭ್ಯರ್ಥಿಯನ್ನು ಮಾತ್ರವೇ ಮೀಸಲಾತಿ ವೇಳೆ ‘ಕನ್ನಡಿಗ’ ಎಂದು ಪರಿಗಣಿಸಬೇಕು ಎಂಬುದನ್ನು ನಮ್ಮ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿತ್ತು. ಆದರೆ, ಈಗ ಈ ವಿಷಯದಲ್ಲಿ ಸಡಿಲಿಕೆ ಮಾಡಲಾಗಿದೆ. ಇದರ ಹೊಣೆಯನ್ನು ಹಿರಿಯ ಅಧಿಕಾರಿಗಳೇ ಹೊರಬೇಕು. ಕನ್ನಡದ ಬಗ್ಗೆ ಆಸಕ್ತಿ ಇಲ್ಲದ ಉನ್ನತ ಅಧಿಕಾರಿಗಳು ಅನ್ಯಭಾಷೆಯವರಿಗೆ ಉದ್ಯೋಗ ಸಿಗುವಂತೆ ಮಾಡುವ ಹುನ್ನಾರದ ಭಾಗವಿದು. ರಾಜಕಾರಣಿಗಳು ಈ ಬಗ್ಗೆ ಗಮನಹರಿಸಿ, ತುರ್ತಾಗಿ ಕರಡು ಅಧಿಸೂಚನೆ ತಿದ್ದುಪಡಿ ಮಾಡಬೇಕು.

ಅಸಲಿಗೆ, ಕರ್ನಾಟಕದಲ್ಲಿನ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಇದುವರೆಗೂ ಯಾವ ಸರ್ಕಾರವೂ ಅಗತ್ಯ ಧೈರ್ಯ ತೋರಿಲ್ಲ. ಖಾಸಗಿ ಕಂಪನಿಗಳೊಂದಿಗಿನ ರಾಜಕಾರಣಿಗಳ ದೋಸ್ತಿ ಮತ್ತು ಖಾಸಗಿ ಕಂಪನಿಗಳು ರಾಜ್ಯದಿಂದ ಕಾಲು ಕೀಳಬಹುದು ಎಂಬ ಹಿಂಜರಿಕೆ ಇದಕ್ಕೆ ಕಾರಣ. 2017ರ ಬಜೆಟ್‌ನಲ್ಲಿ ಈ ಬಗ್ಗೆ ಆಶಾದಾಯಕ ಭರವಸೆ ನೀಡಿದ್ದು ಆಗಿನ ಸಿಎಂ ಸಿದ್ದರಾಮಯ್ಯ. “ಖಾಸಗಿ ವಲಯದ ಉದ್ದಿಮೆಗಳ ಸಿ ಮತ್ತು ಡಿ ದರ್ಜೆ ನೇಮಕದಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲು ಕಲ್ಪಿಸಲಾಗುವುದು; ಈ ಪೈಕಿ ವಿಕಲಚೇತನರಿಗೆ ಶೇ.5ರಷ್ಟು ಆದ್ಯತೆ ನೀಡಲಾಗುವುದು,” ಎಂದು ಬಜೆಟ್‌ ಪುಸ್ತಕದಲ್ಲಿ ಉಲ್ಲೇಖಿಸಲಾಗಿತ್ತು. ಇದಕ್ಕೂ ಮೊದಲು, ಖಾಸಗಿ ಕ್ಷೇತ್ರದಲ್ಲಿ ಈ ಮೀಸಲು ಸ್ವರೂಪ ಹೇಗಿರಬೇಕೆಂಬ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಇದರ ಮುಂದುವರಿದ ಭಾಗವಾಗಿಯೇ ಮೈತ್ರಿ ಸರ್ಕಾರ ಸಂಪುಟ ಸಭೆ ನಡೆಸಿ, ಕರಡು ಅಧಿಸೂಚನೆ ಹೊರಡಿಸುವ ತೀರ್ಮಾನ ಮಾಡಿತ್ತು.

ಫೆಬ್ರವರಿ 14ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವು ‘ಕರ್ನಾಟಕ ಔದ್ಯೋಗಿಕ ಕೈಗಾರಿಕೆ ಉದ್ಯೋಗಗಳ ನಿಯಮಾವಳಿಗಳ ನಿಯಮಗಳು-2018’ಕ್ಕೆ ಅನುಮೋದನೆ ನೀಡಿತು. ಈ ಕುರಿತು ಕರಡು ಅಧಿಸೂಚನೆ ಹೊರಡಿಸುವುದು ಮಾತ್ರ ಬಾಕಿ ಇತ್ತು. ಆದರೆ, ಸಚಿವ ಸಂಪುಟ ನಡೆದ ಬಳಿಕ ಈ ಕುರಿತು ವಿವರಣೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇ ಗೌಡ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದ್ದು ಆಗ ಸುದ್ದಿಯಾಗಿತ್ತು ಕೂಡ. “ಖಾಸಗಿ ಕ್ಷೇತ್ರದಲ್ಲಿ ಸಿ ಮತ್ತು ಡಿ ದರ್ಜೆ ಉದ್ಯೋಗಗಳು ಎಷ್ಟು ಖಾಲಿ ಇವೆ ಮತ್ತು ‘ಕಡ್ಡಾಯ’ ಎಂಬ ಪದ ಬಳಕೆ ಮಾಡದೆ ಇರುವುದರಿಂದ ಕೈಗಾರಿಕಾ ಸಂಸ್ಥೆಗಳಿಗೆ ಜಾರಿಕೊಳ್ಳಲು ಅವಕಾಶವಾಗುವುದಿಲ್ಲವೇ?” ಎಂಬ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಲು ಸಚಿವರು ನಿರಾಕರಿಸಿದ್ದರು. ಹೀಗಾಗಿ, ಹೊಸ ನಿಯಮದ ಮೂಲಕ ರಾಜ್ಯ ಸರ್ಕಾರವು ಕನ್ನಡಿಗರ ಕಣ್ಣೊರೆಸುವ ತಂತ್ರ ನಡೆಸುತ್ತಿದೆ ಎಂದೇ ಊಹಿಸಲಾಗಿತ್ತು. ಆ ಊಹೆ ಇದೀಗ ನಿಜವಾಗಿದೆ.

ಆದರೆ, ಸದ್ಯದ ಅಧಿಸೂಚನೆ ಕೇವಲ ಕರಡು ಆದ್ದರಿಂದ ತಿದ್ದುಪಡಿ ಮಾಡುವ ಅವಕಾಶವಂತೂ ಇದ್ದು, ಸರ್ಕಾರ ಖಾಸಗಿ ಸಂಸ್ಥೆಗಳ ಪರ ತೀರ್ಮಾನ ಕೈಗೊಳ್ಳಲಿದೆಯೋ ಅಥವಾ ಕನ್ನಡಿಗರ ಪರ ನಿಲುವು ತಾಳಲಿದೆಯೋ ಕಾದುನೋಡಬೇಕಿದೆ.

RS 500
RS 1500

SCAN HERE

don't miss it !

ಈದ್ಗಾ ಮೈದಾನ ವಕ್ಫ್ ಬೋರ್ಡ್ ಸ್ವತ್ತಲ್ಲ: ಯೂಟರ್ನ್ ಹೊಡೆದ ಬಿಬಿಎಂಪಿ !
ಕರ್ನಾಟಕ

ಈದ್ಗಾ ಮೈದಾನ ವಕ್ಫ್ ಬೋರ್ಡ್ ಸ್ವತ್ತಲ್ಲ: ಯೂಟರ್ನ್ ಹೊಡೆದ ಬಿಬಿಎಂಪಿ !

by ಕರ್ಣ
June 29, 2022
ಬಿಬಿಎಂಪಿ ಡಿ ಲಿಮಿಟೇಷನ್ ವಿರೋಧಿಸಿ ಸಾರ್ವಜನಿಕರು ನೀಡುತ್ತಿರುವ ಕಾರಣವೇನು ಗೊತ್ತಾ !
ಕರ್ನಾಟಕ

ಬಿಬಿಎಂಪಿ ಡಿ ಲಿಮಿಟೇಷನ್ ವಿರೋಧಿಸಿ ಸಾರ್ವಜನಿಕರು ನೀಡುತ್ತಿರುವ ಕಾರಣವೇನು ಗೊತ್ತಾ !

by ಕರ್ಣ
June 30, 2022
ಡಾ ಎಸ್.ಎಲ್. ಭೈರಪ್ಪನವರ ಮಾತಿನಲ್ಲಿ ರಾಜಕೀಯ ದುರ್ನಾತ ಬರುತ್ತಿದೆ : ಹೆಚ್.ವಿಶ್ವನಾಥ್ ಕಿಡಿ
ಕರ್ನಾಟಕ

ಡಾ ಎಸ್.ಎಲ್. ಭೈರಪ್ಪನವರ ಮಾತಿನಲ್ಲಿ ರಾಜಕೀಯ ದುರ್ನಾತ ಬರುತ್ತಿದೆ : ಹೆಚ್.ವಿಶ್ವನಾಥ್ ಕಿಡಿ

by ಪ್ರತಿಧ್ವನಿ
June 27, 2022
ಜಮ್ಮುವಿನಲ್ಲಿ ಸಿಕ್ಕಿಬಿದ್ದ ಲಷ್ಕರೆ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!
ದೇಶ

ಜಮ್ಮುವಿನಲ್ಲಿ ಸಿಕ್ಕಿಬಿದ್ದ ಲಷ್ಕರೆ ಉಗ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ!

by ಪ್ರತಿಧ್ವನಿ
July 3, 2022
ಪೃಥ್ವಿ ಅಂಬರ್ ‘ದೂರದರ್ಶನ’ ಸಿನಿಮಾಗೆ ಆಯಾನಾ ನಾಯಕಿ!
ಸಿನಿಮಾ

ಪೃಥ್ವಿ ಅಂಬರ್ ‘ದೂರದರ್ಶನ’ ಸಿನಿಮಾಗೆ ಆಯಾನಾ ನಾಯಕಿ!

by ಪ್ರತಿಧ್ವನಿ
July 2, 2022
Next Post
ಕಬ್ಬು ಬೆಳೆಗಾರರ ಸಮಸ್ಯೆ

ಕಬ್ಬು ಬೆಳೆಗಾರರ ಸಮಸ್ಯೆ | JSW Steel ಕಂಪೆನಿಗೆ `ಭೂದಾನ’

ಜಾತ್ರೆ

ಜಾತ್ರೆ, ಉತ್ಸವಗಳಲ್ಲಿ ಓಡಾಡಿ ದಣಿದವರ ದಾಹ ತೀರಿಸುವ ಈಶಯ್ಯ

ಇನ್ಮುಂದೆ ಶಾಲೆ

ಇನ್ಮುಂದೆ ಶಾಲೆ, ಆಸ್ಪತ್ರೆ, ಕೆರೆ-ಕಾಲುವೆ ವಲಯದಲ್ಲಿ ಮೊಬೈಲ್ ಟವರ್ ಇರೋಲ್ಲ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist