ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಧರಿಸಿದ್ದ ಸೇನಾ ಬಲಿದಾನ ಲಾಂಛನವಿರುವ ಗ್ಲೌಸ್ ತೊಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಗ್ಲೌಸ್ ನಿಂದ ಸೇನಾ ಲಾಂಛನ ತೆಗೆಯುವುದಕ್ಕೆ ಸೂಚನೆ ನೀಡಿ ಎಂಬ ಐಸಿಸಿ ಬಿಸಿಸಿಐಗೆ ಸೂಚನೆಯೂ ಬಂದಿದೆ.ಸೌದಾಂಪ್ಟನ್ ನ ರೋಸ್ ಬಾಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಎಂಎಸ್ ಧೋನಿ ವಿಶೇಷ ಗ್ಲೌಸ್ ಧರಿಸಿದ್ದರು. ಇದರ ಮೇಲೆ ಭಾರತೀಯ ಸೇನೆಯ ಬಲಿದಾನದ ಲೋಗೋ ಅಚ್ಚು ಹಾಕಲಾಗಿತ್ತು.
ಪಂದ್ಯದ ಆರಂಭದಿಂದಲೂ ಇದು ಯಾರ ಕಣ್ಣಿಗೂ ಬಿದ್ದಿರಲಿಲ್ಲ.ಧೋನಿ, ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಪೆಹ್ಲುಕ್ವಾಯೋ ಅವರನ್ನು ಸ್ಟಂಪೌಟ್ ಮಾಡಿದಾಗ, ಟಿವಿ ರೀಪ್ಲೆ ವೇಳೆ ಧೋನಿ ಸ್ಟಂಪೌಂಟ್ ಅನ್ನು ಜೂಮ್ ಮಾಡಿ ತೋರಿಸುವಾಗ ಧೋನಿ ಗ್ಲೌಸ್ ಮೇಲಿದ್ದ ಸೈನಿಕರ ಬಲಿದಾನದ ಲೋಗೋ ಕೂಡ ಕಂಡಿತು. ಧೋನಿ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ಕೂಡ ವ್ಯಕ್ತವಾಯಿತು.
ಇನ್ನು ತಮ್ಮ ಅದ್ಬುತ ಕ್ರಿಕೆಟ್ ಪ್ರದರ್ಶನದಿಂದಲೇ ಧೋನಿ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವಕ್ಕೆ ಪಾತ್ರರಾಗಿದ್ದರು. ಅಲ್ಲದೆ ಧೋನಿ ಅಗ್ರಾದಲ್ಲಿ ಕೆಲ ದಿನಗಳ ಕಾಲ ಸೇನಾ ತರಬೇತಿಯಲ್ಲಿ ಕೂಡ ಪಾಲ್ಗೊಂಡಿದ್ದರು. ಐಸಿಸಿ ತಕರಾರು ಕುರಿತು ಬಿಸಿಸಿಐ ಸ್ಪಷ್ಟ ನಿಲುವು ಇನ್ನು ತಳೆದಿಲ್ಲ. ಆದರೆ ಧೋನಿಯ ಪರವಾಗಿ ನಿಲ್ಲುವು ಸಾಧ್ಯತೆ ಹೆಚ್ಚಾಗಿ ಕಂಡು ಬಂದಿದೆ.
ಕಮಿಟಿ ಆಫ್ ಆಡ್ಮಿನಿಸ್ಟ್ರೇಟರ್ಸ್ ನ ಅಧ್ಯಕ್ಷ ವಿನೋದ್ ರಾಯ್ ಧೋನಿಗೆ ಸೇನಾ ಬಲಿದಾನದ ಬ್ಯಾಡ್ಜ್ ನ್ನು ಧರಿಸಿ ಪಂದ್ಯವನ್ನಾಡಲು ಅನುಮತಿ ನೀಡಬೇಕೆಂದು ಬಿಸಿಸಿಐ ಐಸಿಸಿಗೆ ಮನವಿ ಮಾಡುವುದಾಗಿ ತಿಳಿಸಿರುವುದು ಬಿಸಿಸಿಐ ಧೋನಿ ಪರ ನಿಲುವಿಗೆ ಬಲ ನೀಡಿದೆ.
ಐಸಿಸಿ ವರ್ಲ್ಡ್ ಕಪ್ ಕೂಡ ಸೈನ್ಯ ಮತ್ತು ದೇಶಪ್ರೇಮದ ಚರ್ಚೆಯ ವೇದಿಕೆಯಾಗಿದೆ. ಇದಕ್ಕೆಲ್ಲಾ ಕಾರಣ ಭಾರತ ಕ್ರಿಕೆಟ್ ತಂಡದ ಆಟಗಾರ ಧೋನಿ ತೊಟ್ಟ ಗ್ಲೌಸ್!
ಕಳೆದ ಕೆಲವು ದಿನಗಳಿಂದ ದೇಶದಲ್ಲಿ ದೇಶಭಕ್ತಿಯದ್ದೇ ಸದ್ದು. ಅದೀಗ ಕ್ರಿಕೆಟ್ನಲ್ಲೂ ಕಾಣಿಸಿಕೊಂಡಿದ್ದು, ಹೆಮ್ಮೆಯ ಕ್ರಿಕೆಟಿಗ ಎಂ ಎಸ್ ಧೋನಿಯವರನ್ನು ವಿವಾದದ ಕೇಂದ್ರವಾಗಿಸಿದೆ.
ಇನ್ನೊಂದೆಡೆ ಪಾಕ್ ಸಚಿವ ಫವಾಜ್ ಹುಸೇನ್ ಧೋನಿಯನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ, ‘ಎಂ ಎಸ್ ಧೋನಿ ಇಂಗ್ಲೆಂಡ್ ಗೆ ತೆರಳಿರುವುದು ಕ್ರಿಕೆಟ್ ಆಡಲಿಕ್ಕೆ ಹೊರತು ಮಹಾಭಾರತ ಯುದ್ಧ ಮಾಡಲಿಕ್ಕಲ್ಲ. ಭಾರತೀಯ ಮಾಧ್ಯಮಗಳಲ್ಲಿ ಎಂತಹ ವಿಡಂಬನಾತ್ಮಕ ಚರ್ಚೆ, ಭಾರತೀಯ ಮಾಧ್ಯಮದ ಒಂದು ವಿಭಾಗವು ಯುದ್ಧದ ಬಗ್ಗೆ ತುಂಬಾ ಗೀಳನ್ನು ಹೊಂದಿದೆ. ಹಾಗಾಗಿ, ಅವರನ್ನು ಸಿರಿಯಾ, ಅಫ್ಘಾನಿಸ್ತಾನ ಹಾಗೂ ರವಾಂಡ್ ಗೆ ಕೂಲಿ ಸೈನಿಕರನ್ನಾಗಿ ಕಳುಹಿಸಬೇಕು. ಮೂರ್ಖರು.!”
ಮೂಲ ಟ್ವೀಟ್ ಇಲ್ಲಿದೆ:
#DhoniKeepTheGlove | This is neither political or religious. MS Dhoni is actually Lt. Col MS Dhoni. Dhoni's wearing an insignia that is part of his regiment: Major Gaurav Arya (Retd.), Consulting Editor, Strategic Affairs pic.twitter.com/GDaylxOxV7
— Republic (@republic) June 6, 2019
Dhoni is in England to play cricket not to for MahaBharta , what an idiotic debate in Indian Media,a section of Indian media is so obsessed with War they should be sent to Syria, Afghanistan Or Rawanda as mercenaries…. #Idiots https://t.co/WIcPdK5V8g
— Ch Fawad Hussain (@fawadchaudhry) June 6, 2019