Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಐದು ಸ್ಮಾರಕಗಳ ಸಂರಕ್ಷಣೆಗೆ ಸಂಕಲ್ಪ

ಐದು ಸ್ಮಾರಕಗಳ ಸಂರಕ್ಷಣೆಗೆ ಸಂಕಲ್ಪ
ಐದು ಸ್ಮಾರಕಗಳ ಸಂರಕ್ಷಣೆಗೆ ಸಂಕಲ್ಪ

February 3, 2020
Share on FacebookShare on Twitter

2020-21ರ ಆಯವ್ಯಯಗಳನ್ನು ಸಂಸತ್ತಿನ ಮುಂದಿಡುವ ಸಂದರ್ಭದಲ್ಲಿ ದೇಶದ ಕಾಲಾತೀತ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಐದು ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ವಿಚಾರವೊಂದನ್ನು ಪ್ರಸ್ತಾಪಿಸಲಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ನೀರಿನ ಬಾಟಲ್‌ ಗಾಗಿ ಜಗಳ: ಚಲಿಸುವ ರೈಲಿನಿಂದ ಪ್ರಯಾಣಿಕನ್ನು ಹೊರಗೆ ಎಸೆದ ಸಿಬ್ಬಂದಿ!

ಬಿಜೆಪಿ ಜೊತೆಗಿನ ಮೈತ್ರಿ: ನಿತೀಶ್‌ ಕುಮಾರ್ ನಾಳೆ ನಿರ್ಧಾರ ಪ್ರಕಟ!

ಉಚಿತ ಶಿಕ್ಷಣ ವಿರುದ್ಧ ಇರುವವರು ದೇಶದ್ರೋಹಿಗಳು: ಅರವಿಂದ್‌ ಕೇಜ್ರಿವಾಲ್‌

ಸಹಸ್ರಮಾನಗಳು ಹಾಗೂ ಯುಗಗಳಷ್ಟು ಹಳೆಯ ಇತಿಹಾಸವನ್ನು ಕಂಡ ಭರತವರ್ಷವು, “ಮಾನವ ಜನಾಂಗದ ತೊಟ್ಟಿಲಾಗಿದ್ದು, ಭಾಷೆಯ ಉಗಮಸ್ಥಾನ, ಇತಿಹಾಸ ತಾಯಿ, ದಂತಕಥೆಗಳ ಅಜ್ಜಿ, ಹಾಗೂ ಸಂಪ್ರದಾಯಗಳ ಮುತ್ತಜ್ಜಿ. ಮಾನವನ ಇತಿಹಾಸದ ಕುರಿತ ಅತ್ಯಂತ ಮೌಲ್ಯಯುತವಾದ ನಿರ್ದೇಶನಾ ಸಂಪನ್ಮೂಲಗಳೆಲ್ಲವೂ ಭಾರತದಲ್ಲಿಯೇ ಸೇರಿಕೊಂಡಿವೆ,” ಎಂದು ಶ್ರೇಷ್ಠ ಬರಹಗಾರ, ಉದ್ಯಮಿ ಹಾಗೂ ಪ್ರಾಧ್ಯಾಪಕ ಮಾರ್ಕ್ ಟ್ವೈನ್ ಹೇಳಿದ್ದ ಮಾತುಗಳು ಎಂದೆಂದಿಗೂ ಪ್ರಸ್ತುತ.

ಯುಗಯುಗಳ ಇತಿಹಾಸದ ಕುರುಹುಗಳಾಗಿ ಉಳಿದುಕೊಂಡಿರುವ ಅನೇಕ ಸ್ಮಾರಕಗಳು ಭಾರತೀಯ ನಾಗರೀಕತೆ ನಡೆದು ಬಂದ ಹಾದಿಯನ್ನು ಥಟ್ಟೆಂದು ಹಾಗೇ ಕಣ್ಣ ಮುಂದೆ ತರಬಲ್ಲಷ್ಟು ಪ್ರಖರವಾದ ವಿಚಾರಗಳನ್ನು ತಮ್ಮಲ್ಲಿ ಹುದುಗಿಸಿಟ್ಟುಕೊಂಡಿವೆ.

ದ್ವಾಪರಯುಗದ ಮಹಾಭಾರತದಿಂದ ಹಿಡಿದು, ಮಣ್ಣಿನ ಮಡಿಕೆಗಳ ಬಳಕೆಯ ಆರಂಭಿಕ ದಿನಗಳು, ಹರಪ್ಪ-ಮೊಹೆಂಜೋದಾರೋ ನಾಗರೀಕತೆಯ ಸಂದರ್ಭದ ನಗರ ಯೋಜನೆಗಳ ಕುರಿತಂತೆ ಬೆಳಕು ಚೆಲ್ಲುವಂತಹ 5 ಐತಿಹಾಸಿಕ & ಪೌರಾಣಿಕ ಕ್ಷೇತ್ರಗಳ ಪುನರುಜ್ಜೀವನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.

ಭಾರತೀಯ ಪ್ರವಾಸೋದ್ಯಮದಲ್ಲಿರುವ ಅಗಾಧವಾದ ಸಾಧ್ಯತೆಗಳನ್ನು ಸಾಕಾರಗೊಳಿಸಲು ಇಂಥ ಸಾಕಷ್ಟು ಕ್ರಮಗಳ ಅಗತ್ಯವಿದೆ.

ಅಂದ ಹಾಗೆ, ಇವೇ ಆ ಐದು ತಾಣಗಳು….

ಹಸ್ತಿನಾಪುರ

ಉತ್ತರ ಪ್ರದೇಶದ ಮೀರತ್‌ ಬಳಿ ಇರುವ ಹಸ್ತಿನಾಪುರದ ಇತಿಹಾಸ ಯುಗಗಳಷ್ಟು ಹಳೆಯದು. ಮಹಾಭಾರತದ ಪಾಂಡವರು ಹಾಗೂ ಕೌರವರ ರಾಜಧಾನಿಯಾಗಿದ್ದ ಈ ಊರಿನಲ್ಲಿ ದ್ವಾಪರಯುಗದ ಕುರುಹುಗಳನ್ನು ಈಗಲೂ ಕಾಣಬಹುದಾಗಿದೆ. ಹಸ್ತಿನಾಪುರವು ಸಾಮ್ರಾಟ ಭರತನ ರಾಜಧಾನಿಯೂ ಆಗಿತ್ತು ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ. ಜೈನ ಭಕ್ತರಿಗೂ ಪವಿತ್ರ ಕ್ಷೇತ್ರವಾದ ಹಸ್ತಿನಾಪುರ, ದೇಶದ ಗತಕಾಲದ ದಿನಗಳನ್ನು ಕಣ್ಣ ಮುಂದೆ ತಂದು ನಿಲ್ಲಿಸಬಲ್ಲ ಜಾಗಗಳಲ್ಲಿ ಒಂದು.

ರಾಖಿಗರ್ಹಿ

ಹರಿಯಾಣಾದ ಹಿಸಾರ್‌ನಲ್ಲಿರುವ ರಾಖಿಗರ್ಹಿ ಸಿಂಧೂ ನಾಗರಿಕತೆಗಿಂತ ಹಳೆಯದಾಗಿದ್ದು, ಕ್ರಿಸ್ತ ಪೂರ್ವ 6500ದ ಕಾಲಕ್ಕೆ ಸೇರಿದೆ. ಅಲ್ಲದೇ ಸಿಂಧೂ ಕಣಿವೆ ನಾಗರಿಕತೆಯ ಪ್ರಬುದ್ಧ ಘಟ್ಟದ ಭಾಗವಾಗಿಯೂ (ಕ್ರಿ.ಪೂ 2600-1900) ಇರುವ ಈ ಜಾಗವನ್ನು ದೇಶದ ಅತ್ಯಂತ ಸೂಕ್ಷ್ಮ ಐತಿಹಾಸಿಕ ಸ್ಮಾರಕಗಳಲ್ಲಿ ಒಂದಾಗಿದೆ.

ಶಿವಸಾಗರ, ಅಸ್ಸಾಂ

ಶಿವನ ಸಾಗರ ಎಂಬ ಅರ್ಥದ ಈ ಊರು ಅಸ್ಸಾಂ ರಾಜ್ಯದಲ್ಲಿದೆ. 1699-1788ರ ನಡುವೆ ಅಹೋಮ್‌ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಶಿವಸಾಗರ್‌‌, ದೇಹಿಂಗ್ ಮಳೆಕಾಡುಗಳ ನಡುವೆ ಇರುವ ನಗರವಾಗಿದ್ದು, ’ಪೂರ್ವದ ಅಮೇಝಾನ್‌’ ಎಂದು ಕರೆಯಲ್ಪಡುತ್ತಿದೆ.

ಆದಿಚನಲ್ಲೂರು

ತಮಿಳುನಾಡಿದ ತೂತ್ತುಕುಡಿ ಜಿಲ್ಲೆಯಲ್ಲಿರುವ ಆದಿಚನಲ್ಲೂರು, ಪ್ರಾಚ್ಯವಸ್ತು ಸ್ಮಾರಕವಾಗಿದೆ. ಇಂದಿನ ದಿನಮಾದಲ್ಲೂ ಸಹ ಸಿಗಲಾರದಷ್ಟು ಉತ್ಕೃಷ್ಟ ಗುಣಮಟ್ಟ ಮಡಿಕೆಗಳು, ಕಬಿಣದ ಅಸ್ತ್ರಗಳು, ಮಾನವರ ಅಸ್ಥಿಯನ್ನು ಹೊಂದಿದ್ದ ಜೇಡಿಮಣ್ಣಿನ ಕುಡಿಕೆಗಳು ಇಲ್ಲಿ ಕಂಡುಬಂದಿದ್ದು, ಇವೆಲ್ಲಾ ಕನಿಷ್ಠ 38,000 ವರ್ಷಗಳಷ್ಟು ಹಳೆಯದಾಗಿವೆ ಎನ್ನಲಾಗಿದೆ.

ಧೋಲವಿರಾ

ಗುಜರಾತ್‌ನ ಕಚ್ಛ್‌ ಜಿಲ್ಲೆಯ ಧೊಲವಿರಾ ಹರಪ್ಪ ನಾಗರಿಕತೆಯ ಸ್ಮಾರಕಗಳ ಪೈಕಿ ಅತ್ಯಂತ ದೊಡ್ಡದಾದ ಎರಡು ಸ್ಮಾರಕಗಳಲ್ಲಿ ಒಂದಾಗಿದೆ. ಈ ಜಾಗವನ್ನು 1967ರಲ್ಲಿ ಪ್ರಾಚ್ಯ ವಸ್ತು ಇಲಾಖೆ ಹೊರತೆಗೆದಿದ್ದು, 1990ರಿಂದ ವ್ಯವಸ್ಥಿತವಾದ ಪ್ರಕ್ರಿಯೆಗಳ ಮೂಲಕ ಇನ್ನಷ್ಟು ಕುರುಹುಗಳನ್ನು ಆಚೆ ತರಲಾಗುತ್ತಿದೆ.

RS 500
RS 1500

SCAN HERE

don't miss it !

KMF ಮದರ್‌ ಡೈರಿಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ Amith Shah
ಇದೀಗ

KMF ಮದರ್‌ ಡೈರಿಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ Amith Shah

by ಪ್ರತಿಧ್ವನಿ
August 4, 2022
ಡ್ರಗ್ಸ್‌ ಪ್ರಕರಣ: ಬಾಲಿವುಡ್‌ ನಟನ ಪುತ್ರ ಸಿದ್ಧಾಂತ್‌ ಕಪೂರ್‌ ಗೆ ಸಮನ್ಸ್
ದೇಶ

ಡ್ರಗ್ಸ್‌ ಪ್ರಕರಣ: ಬಾಲಿವುಡ್‌ ನಟನ ಪುತ್ರ ಸಿದ್ಧಾಂತ್‌ ಕಪೂರ್‌ ಗೆ ಸಮನ್ಸ್

by ಪ್ರತಿಧ್ವನಿ
August 8, 2022
ನಮ್ಶ ಶಿವಸೇನೆ ನಾಯಕ ಸಂಜಯ್ ರಾವತ್ ನಿಜವಾದ ಪುಷ್ಪ, ಅವರು ‘ತಲೆ ಬಾಗೋದಿಲ್ಲ’ : ಉದ್ಧವ್ ಠಾಕ್ರೆ
ದೇಶ

‘ಬಿಜೆಪಿ ಇದುವರೆಗೆ ಗುಲಾಬಿ ನೋಡಿದೆ, ಇನ್ನು ಶಿವ ಸೈನಿಕರು ಮುಳ್ಳು ತೋರಿಸಲಿದ್ದಾರೆ’ : ಉದ್ಧವ್ ಠಾಕ್ರೆ

by ಪ್ರತಿಧ್ವನಿ
August 6, 2022
ಸಿದ್ದರಮಯ್ಯ ನಮ್ಮ ಕಾಡಿನವರು : ಜಯಪ್ಪ
ವಿಡಿಯೋ

ಸಿದ್ದರಮಯ್ಯ ನಮ್ಮ ಕಾಡಿನವರು : ಜಯಪ್ಪ

by ಪ್ರತಿಧ್ವನಿ
August 3, 2022
ಕಾಮನ್‌ವೆಲ್ತ್‌ : ಜಾವೆಲಿನ್‌ ಎಸೆತದಲ್ಲಿ ʼಅಣ್ಣು ರಾಣಿʼಗೆ ಕಂಚು
ಕ್ರೀಡೆ

ಕಾಮನ್‌ವೆಲ್ತ್‌ : ಜಾವೆಲಿನ್‌ ಎಸೆತದಲ್ಲಿ ʼಅಣ್ಣು ರಾಣಿʼಗೆ ಕಂಚು

by ಪ್ರತಿಧ್ವನಿ
August 7, 2022
Next Post
ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವುದು ಸಂವಿಧಾನ ಉಲ್ಲಂಘನೆ ಅಲ್ಲವೇ?

ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸುವುದು ಸಂವಿಧಾನ ಉಲ್ಲಂಘನೆ ಅಲ್ಲವೇ?

ಸಂಪುಟ ವಿಸ್ತರಣೆ ಸುಸೂತ್ರ- ಫಲಿಸಿತೇ ಸಿಎಂ ತಂತ್ರಗಾರಿಕೆ?

ಸಂಪುಟ ವಿಸ್ತರಣೆ ಸುಸೂತ್ರ- ಫಲಿಸಿತೇ ಸಿಎಂ ತಂತ್ರಗಾರಿಕೆ?

ದೆಹಲಿಯಲ್ಲಿ ತಾರಕಕ್ಕೇರುತ್ತಿದೆ ದ್ವೇಷದ  ಭಾಷಣದ ಭರಾಟೆ!

ದೆಹಲಿಯಲ್ಲಿ ತಾರಕಕ್ಕೇರುತ್ತಿದೆ ದ್ವೇಷದ ಭಾಷಣದ ಭರಾಟೆ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist