Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಎಸ್ ಪಿ ಗೆ ಫೋನ್ ಕೊಟ್ಟು ನೀವೇ ಉತ್ತರಿಸಿ ಎಂದ ರವೂಫ್

ಎಸ್ ಪಿ ಗೆ ಫೋನ್ ಕೊಟ್ಟು ನೀವೇ ಉತ್ತರಿಸಿ ಎಂದ ರವೂಫ್
ಎಸ್ ಪಿ ಗೆ ಫೋನ್ ಕೊಟ್ಟು ನೀವೇ ಉತ್ತರಿಸಿ ಎಂದ ರವೂಫ್
Pratidhvani Dhvani

Pratidhvani Dhvani

August 22, 2019
Share on FacebookShare on Twitter

ಮೊದಲಿಗೆ ಮಂಗಳೂರಿನಲ್ಲಿ ಸಿಕ್ಕಿ ಬಿದ್ದ ಎಂಟು ಮಂದಿ ವಂಚಕರನ್ನು ಶಂಕಿತ ಉಗ್ರರೆಂದು ಬಿಂಬಿಸುವಲ್ಲಿ ಮಾಧ್ಯಮದವರು ವಿಫಲರಾದರು. ಅಷ್ಟರಲ್ಲಿ ಬೆಳ್ತಂಗಡಿಯ ಗೋವಿಂದೂರಿನ ನಿವಾಸಿ ರವೂಫ್ ಎಂಬಾತನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ಯಾವುದೇ ಕನಿಷ್ಟ ಜವಾಬ್ದಾರಿ ಇಲ್ಲದೆ ಸುಳ್ಳು ಸುದ್ದಿ ಬಿತ್ತರಿಸಿದವು.

ಹೆಚ್ಚು ಓದಿದ ಸ್ಟೋರಿಗಳು

ಬೀಫ್‌ ಕರಿ ಎಂದು ಟ್ವೀಟ್‌ : ಗೋಮಾಂಸದ ಚಿತ್ರಗಳನ್ನು ಪೋಸ್ಟ್ ಮಾಡಬೇಡಿ ಎಂದ ಚೆನ್ನೈ ಪೊಲೀಸರಿಗೆ ನೆಟ್ಟಿಗರಿಂದ ಫುಲ್‌ ಕ್ಲಾಸ್!‌

ಬಾಗಲಕೋಟೆ | ಅನ್ಯಕೋಮಿನ ಗುಂಪುಗಳ ನಡುವೆ ಮಾರಮಾರಿ, ಇಬ್ಬರಿಗೆ ಚಾಕು ಇರಿತ : 144 ಸಕ್ಷನ್‌ ಜಾರಿ!

ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಮಳೆ : ಕಂದಾಯ ಸಚಿವ ಆರ್.ಅಶೋಕ್ ಭೇಟಿ, ಪರಿಶೀಲನೆ

“ಪಾಕಿಸ್ತಾನದಿಂದ ಸ್ಯಾಟ್ ಲೈಟ್ ಕರೆ ಬಂದ ಹಿನ್ನೆಲೆಯಲ್ಲಿ ಕೇರಳ ಮೂಲದ ಮೌಲ್ವಿಯನ್ನು ಬಂಧಿಸಿರುವ ಘಟನೆ ಬೆಳ್ತಂಗಡಿ ಬಳಿ ನಡೆದಿದೆ’’, “ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇಂದು ಖಚಿತ ಮಾಹಿತಿ ಮೇರೆಗೆ ಕೇರಳ ಮೂಲದ ಮೌಲ್ವಿಯನ್ನು ಬೆಳ್ತಂಗಡಿ ಬಳಿಯ ಗೋವಿಂದೂರಿನಲ್ಲಿ ವಶಕ್ಕೆ ಪಡೆದಿದ್ದಾರೆ’’ ಹೀಗೆಲ್ಲಾ ಮಾಧ್ಯಮಗಳು ಪ್ರಚಾರ ಮಾಡಿದ ಸುದ್ದಿ.

“ಬಂಧಿತನನ್ನು ರವೂಫ್ ಎಂದು ಗುರುತಿಸಲಾಗಿದ್ದು, ಈತ ಕೇರಳದ ಮಸೀದಿಯೊಂದರಲ್ಲಿ ಮೌಲ್ವಿಯಾಗಿ ಕೆಲಸ ಮಾಡುತ್ತಿದ್ದ. ಈತನಿಗೆ ಪಾಕಿಸ್ತಾನದಿಂದ ಸ್ಯಾಟ್ ಲೈಟ್ ಕರೆ ಬಂದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಲಾಗಿದೆ. ಪಾಕಿಸ್ತಾನದಿಂದ ಅಣುಬಾಂಬ್ ದಾಳಿಯ ಭೀತಿ ಎದುರಾಗಿದ್ದು, ಬೆಂಗಳೂರು, ಮಂಗಳೂರು, ಸೇರಿದಂತೆ ರಾಜ್ಯದ ಐದು ನಗರಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಈ ಬೆನ್ನಲ್ಲೇ ಪಾಕಿಸ್ತಾನದಿಂದ ಮೌಲ್ವಿಯೊಬ್ಬರಿಗೆ ಸ್ಯಾಟ್ ಲೈಟ್ ಕರೆ ಬಂದಿತ್ತೆಂಬ ಮಾಹಿತಿ ಲಭ್ಯವಾಗಿತ್ತು. ಇದರನ್ವಯ ತನಿಖೆ ತೀವ್ರಗೊಳಿಸಿದ ಎನ್.ಐ.ಎ ಅಧಿಕಾರಿಗಳ ತಂಡ ಇಂದು ಮೌಲ್ವಿ ರವೂಫ್ ನನ್ನು ಬಂಧಿಸಿದ್ದಾರೆ’’… ಹೀಗೆ ಬ್ರೇಕಿಂಗ್ ಸುದ್ದಿ ಮುಂದುವರಿದಿತ್ತು.

ಇಂತಹದೊಂದು ಸುಳ್ಳು ಸುದ್ದಿಗೂ ಮುನ್ನ ರಾ (Research and Analysis Wing– RAW) ಹೆಸರನ್ನು ಉಲ್ಲೇಖಿಸಿ “ಉತ್ತಮ ಸಮಾಜಕ್ಕಾಗಿ’’ ಎಂದು ಘೋಷಿಸಿಕೊಳ್ಳುವ ಟಿವಿ ಚಾನಲಿನಲ್ಲಿ ಸುದ್ದಿ ಬರುತ್ತದೆ. ಗೋವಿಂದೂರಿನ ಎಷ್ಟು ಅಕ್ಷಾಂಶ-ರೇಖಾಂಶದಿಂದ ನಿಷೇಧಿತ ಸ್ಯಾಟ್ ಲೈಟ್ ಫೋನಿನಿಂದ ಪಾಕಿಸ್ತಾನ ನಡುವೆ ಸಂಪರ್ಕ ಸಾಧಿಸಲಾಗಿದೆ ಎಂಬುದೂ ಸುದ್ದಿಯ ಭಾಗವಾಗಿತ್ತು. ಯಾವಾಗ ಈ “ನಮ್ಮಲ್ಲಿ ಮಾತ್ರ’’ ಸುದ್ದಿ ಪ್ರಸಾರವಾಯಿತೋ ನಂತರ ಸರಿ ಸುಮಾರು ಎಲ್ಲಾ ಟಿವಿ ಚಾನಲುಗಳು “ನಮ್ಮಲ್ಲೂ ಇದೆ’’ ಎಂದು ಶುರು ಮಾಡಿದವು. ಯಾರೂ ಕೂಡ ಸುದ್ದಿಯ ವಾಸ್ತವ ಅರಿಯಲು ಹೋಗಲಿಲ್ಲ.

ಇವೆಲ್ಲದಕ್ಕೆ ಪ್ರೇರಣೆ ಒದಗಿಸಿದ್ದು ಸ್ಥಳೀಯ ನಿವಾಸಿಗಳಿಂದ. ಅವರಿಗೂ ಪ್ರೇರಣೆ ದೊರೆತಿದ್ದು ಹಿಂದಿನ ದಿನ ಘೋಷಿತವಾದ ಹೈ ಅಲರ್ಟ್. ಗೋವಿಂದೂರಿನಲ್ಲಿ ವಾರದ ಆರು ದಿನವೂ ಬಾಗಿಲು ಹಾಕಿರುತ್ತಿದ್ದ ಹೊಸ ಮನೆಯೊಂದನ್ನು ಕೆಲವು `ಹೈ ಅಲರ್ಟ್’ ನಾಗರಿಕರು ಪೊಲೀಸರ ಗಮನಕ್ಕೆ ತಂದರು. ಪೊಲೀಸರು ಸ್ಥಳಕ್ಕೆ ಆಗಮಿಸಿ ತಮ್ಮ ಕೈಯಲ್ಲಿದ್ದ ಸೆಲ್ಯುಲ್ಲರ್ ಮೊಬೈಲಿನಿಂದ ರವೂಫ್ ಎಂಬ ಮನೆಯೊಡನಿಗೆ ಕಾಲ್ ಮಾಡಿದ್ದಾರೆ. ತಾನು ಮಂಗಳೂರು ಸಮೀಪದ ಮಂಜನಾಡಿಯಲ್ಲಿ ಇದ್ದೇನೆ ಎಂದಿದ್ದಾರೆ ರವೂಫ್.

ಅನಂತರ ಹಲವು ಪೊಲೀಸ್ ಠಾಣೆಗಳಿಂದ, ಹಲವು ಪೊಲೀಸರಿಂದ ರವೂಫ್ ಗೆ ಫೋನ್ ಬರತೊಡಗಿದೆ. ಎಲ್ಲರ ಪ್ರಶ್ನೆ ಒಂದೇ. ನೀವು ಎಲ್ಲಿದ್ದೀರಿ. ಆದರೆ, ಅಷ್ಟು ಹೊತ್ತಿಗಾಗಲೇ ಮಾಧ್ಯಮದವರು ರವೂಫ್ ಅವರನ್ನು ಬಂಧಿಸಿ ಆಗಿತ್ತು. ಆದರೆ, RAW ದವರಾಗಲಿ ಎನ್ಐಎ ಆಗಲಿ ಮಾಧ್ಯಮದವರು ಬಂಧಿಸಿರುವ ರವೂಫ್ ಅವರನ್ನು ಕರಕೊಂಡು ಹೋಗಲು ಬರಲೇ ಇಲ್ಲ. ಟಿವಿ ನೋಡಿದ ಪೊಲೀಸರು ಏನಾಗಿದೆ ಎಂದು ತಿಳಿಯಲು ರವೂಫ್ ಅವರಿಗೆ ಫೋನ್ ಮಾಡುತ್ತಲೇ ಇದ್ದರು.

ಮಂಗಳೂರಲ್ಲಿ ಜನಸ್ನೇಹಿ ಮತ್ತು ಮಾಧ್ಯಮ ಸ್ನೇಹಿ ಪೊಲೀಸ್ ಅಧಿಕಾರಿಗಳು ಇದ್ದರೂ ಬಹುತೇಕ ಸುದ್ದಿಜೀವಿಗಳು ಉನ್ನತ ಪೊಲೀಸ್ ಅಧಿಕಾರಿಗಳಲ್ಲಿ ಸ್ಪಷ್ಟನೆ ಕೇಳಲಿಲ್ಲ. ಒಂದು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ತಮಿಳು ಪತ್ರಿಕೆಯ ರಾಜೇಂದ್ರನ್ ಮಾತ್ರ ಈ ಬಗ್ಗೆ ಪ್ರಶ್ನಿಸಿದರು. ಟಿವಿ ಚಾನಲುಗಳ ಸುಳ್ಳು ಸುದ್ದಿಯಿಂದ ಬೇಸತ್ತು ಊರಲ್ಲಿ ಮುಖ ಎತ್ತಿ ನಡೆಯಲಾಗದೆ ರವೂಫ್ ಕೊನೆಗೆ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ವರಿಷ್ಠಾಧಿಕಾರಿ ಬಿ. ಎ. ಲಕ್ಷ್ಮೀ ಪ್ರಸಾದ್ ಅವರ ಕಚೇರಿಗೆ ಆಗಮಿಸಿ ತಮ್ಮ ಮೊಬೈಲನ್ನು ಎಸ್ಪಿಯವರಿಗೆ ನೀಡಲು ಮುಂದಾದರು.

ರವೂಫ್ ಎಸ್ಪಿ ಎದುರು ಹಾಜರಾದ ಮೇಲಾದರೂ ಮಾಧ್ಯಮಗಳು ಸುಳ್ಳು ಸುದ್ದಿಯ ಅಸಲಿ ಮುಖವನ್ನು ಜನರಿಗೆ ಬಿತ್ತರ ಮಾಡಬೇಕಾಗಿತ್ತು. ಮಾಡಿಲ್ಲ. ಮರುದಿನ ರವೂಫ್ ಅವರು ಮಾಜಿ ಸಚಿವ ಯು. ಟಿ. ಖಾದರ್ ಅವರ ಸಮಕ್ಷಮ ಪತ್ರಿಕಾಗೋಷ್ಠಿ ನಡೆಸಿ ತಾನು ಬಂಧಿತನಾಗಿದ್ದೇನೆ ಎಂಬ ವರದಿಯ “ಸುದ್ದಿಮೂಲ” ಯಾವುದು ಎಂದು ಮಾಧ್ಯಮದವರಲ್ಲಿಯೇ ಕೇಳಿದರು.

ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಶಾಸಕ ಖಾದರ್ ಕೂಡ ಇದಕ್ಕೊಂದು ತಾತ್ವಿಕ ಅಂತ್ಯ ಹಾಡುವ ಇರಾದೆ ಹೊಂದಿದಂತಿಲ್ಲ. ಏಕೆಂದರೆ, ಇಂತಹ ಫೇಕು ಸುದ್ದಿಗಳು ಮಂಗಳೂರಿನಿಂದ ಸೃಷ್ಟಿಯಾಗುವುದು ಇದೇ ಮೊದಲಲ್ಲ. ಈ ಬಾರಿ ಇಂಗ್ಲೀಷ್ ಪತ್ರಿಕೆಯೊಂದು ಕೂಡ ಈ ಫೇಕ್ ಸುದ್ದಿಯನ್ನು ಪ್ರಕಟಿಸಿದೆ. ಈ ರವೂಫ್ ಎಂಬ ವ್ಯಕ್ತಿ ಇತ್ತೀಚೆಗೆ ನಿಧನರಾದ ಮಂಜನಾಡಿ ಅಬ್ಬಾಸ್ ಮುಸ್ಲಿಯಾರ್ ಅವರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಬಡವನಾಗಿದ್ದ ತನ್ನ ಸಹಾಯಕನಿಗಾಗಿ ದಾನಿಗಳ ನೆರವಿನೊಂದಿಗೆ ಮುಸ್ಲಿಯಾರ್ ಗೋವಿಂದೂರಿನಲ್ಲಿ ಮನೆ ನಿರ್ಮಿಸಿಕೊಟ್ಟಿದ್ದರು. ಇದನ್ನೂ ಬಳಸಿಕೊಂಡ ಟಿವಿ ಚಾನಲುಗಳು ಬಡವನಾಗಿದ್ದವ ದಿಢೀರ್ ಶ್ರೀಮಂತನಾಗಿದ್ದು ಹೇಗೆ ಎಂದು ಮತ್ತೊಂದು ಬ್ರೇಕಿಂಗ್ ಕೂಡ ನೀಡಿದ್ದವು.

RS 500
RS 1500

SCAN HERE

don't miss it !

ಅಂದು ಅಮಿತ್ ಶಾ ನುಡಿದಂತೆ ನಡೆದಿದ್ದರೆ ಇಂದು ಬಿಜೆಪಿಯವರು ಸಿಎಂ ಆಗಿರುತ್ತಿದ್ದರು : ಉದ್ದವ್ ಠಾಕ್ರೆ
ದೇಶ

ಅಂದು ಅಮಿತ್ ಶಾ ನುಡಿದಂತೆ ನಡೆದಿದ್ದರೆ ಇಂದು ಬಿಜೆಪಿಯವರು ಸಿಎಂ ಆಗಿರುತ್ತಿದ್ದರು : ಉದ್ದವ್ ಠಾಕ್ರೆ

by ಪ್ರತಿಧ್ವನಿ
July 1, 2022
ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಎಸಿಬಿ ವಶಕ್ಕೆ
ಕರ್ನಾಟಕ

ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಎಸಿಬಿ ವಶಕ್ಕೆ

by ಪ್ರತಿಧ್ವನಿ
July 4, 2022
ಫ್ಯಾಸಿಷ್ಟರ ಬೆಳವಣಿಗೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪಾತ್ರ
ಅಭಿಮತ

ಫ್ಯಾಸಿಷ್ಟರ ಬೆಳವಣಿಗೆಯಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಪಾತ್ರ

by ಡಾ | ಜೆ.ಎಸ್ ಪಾಟೀಲ
July 2, 2022
ಕ್ರಾಂತಿ ಚಿತ್ರತಂಡಕ್ಕೆ ಶುಭ ಹಾರೈಸಿದ ಸೈನಿಕರು
ಇದೀಗ

ಕ್ರಾಂತಿ ಚಿತ್ರತಂಡಕ್ಕೆ ಶುಭ ಹಾರೈಸಿದ ಸೈನಿಕರು

by ಪ್ರತಿಧ್ವನಿ
June 30, 2022
ಜೊತೆಗೆ ಓಡಾಡಿದರೆ ಮದುವೆ ಆಗಿದ್ದೀವಿ ಅಂತಾನಾ? ಪವಿತ್ರಾ ಲೋಕೇಶ್‌ ಕಿಡಿ
ಸಿನಿಮಾ

ಜೊತೆಗೆ ಓಡಾಡಿದರೆ ಮದುವೆ ಆಗಿದ್ದೀವಿ ಅಂತಾನಾ? ಪವಿತ್ರಾ ಲೋಕೇಶ್‌ ಕಿಡಿ

by ಪ್ರತಿಧ್ವನಿ
July 1, 2022
Next Post
ಚಿದಂಬರಂ ಜಾಮೀನು ರದ್ದುಗೊಂಡಿದ್ದು ಏಕೆ?

ಚಿದಂಬರಂ ಜಾಮೀನು ರದ್ದುಗೊಂಡಿದ್ದು ಏಕೆ?

ವಿರಾಜಪೇಟೆ ಭೂ ಕುಸಿತಕ್ಕೆ ಕಲ್ಲು ಗಣಿಗಾರಿಕೆ ಕಾರಣವೇ ?

ವಿರಾಜಪೇಟೆ ಭೂ ಕುಸಿತಕ್ಕೆ ಕಲ್ಲು ಗಣಿಗಾರಿಕೆ ಕಾರಣವೇ ?

ತ್ರಿವಳಿ ತಲಾಖ್ ಗೆ ತೋರಿದ ಧಾವಂತ ಗುಂಪು ಹತ್ಯೆ ನಿಷೇಧಕ್ಕೆಯಾಕಿಲ್ಲ?

ತ್ರಿವಳಿ ತಲಾಖ್ ಗೆ ತೋರಿದ ಧಾವಂತ ಗುಂಪು ಹತ್ಯೆ ನಿಷೇಧಕ್ಕೆಯಾಕಿಲ್ಲ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist