Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ತೀರ್ಪಿನಲ್ಲಿ ಸುಪ್ರೀಂ ಹೇಳಿದ 5 ಮುಖ್ಯ ಮಾತು

ಕರ್ನಾಟಕದ ನೂತನ ಬಡ್ತಿ ಮೀಸಲಾತಿ ಕಾಯ್ದೆಗೆ ಮಾನ್ಯತೆ ನೀಡಿರುವ ಸುಪ್ರೀಂ ಕೋರ್ಟ್, ಸರ್ಕಾರದ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಎಸ್ಸಿ ಎಸ್ಟಿ ಬಡ್ತಿ ಮೀಸಲಾತಿ ತೀರ್ಪಿನಲ್ಲಿ ಸುಪ್ರೀಂ ಹೇಳಿದ 5 ಮುಖ್ಯ ಮಾತು
Pratidhvani Dhvani

Pratidhvani Dhvani

May 16, 2019
Share on FacebookShare on Twitter

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆಂದೇ ರಾಜ್ಯ ಸರ್ಕಾರ ರೂಪಿಸಿದ್ದ ಬಡ್ತಿ ಮೀಸಲಾತಿ ಕಾಯ್ದೆ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು. ಕಾಯ್ದೆಯು ಎಸ್ಸಿ, ಎಸ್ಟಿ ಅಧಿಕಾರಿಗಳಿಗೆ ಕಲ್ಪಿಸುವ ಬಡ್ತಿ ವಿಧಾನ ಆಕ್ಷೇಪಿಸಿ ಬಿ.ಕೆ.ಪವಿತ್ರ ಮತ್ತಿತರರು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಇವೆಲ್ಲವನ್ನೂ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮೇ 10ರಂದು ತೀರ್ಪು ಪ್ರಕಟಿಸಿತು. ತೀರ್ಪಿನಲ್ಲಿ ಕರ್ನಾಟಕದ ನೂತನ ಬಡ್ತಿ ಮೀಸಲಾತಿ ಕಾಯ್ದೆಗೆ ಮಾನ್ಯತೆ ನೀಡಿರುವ ನ್ಯಾಯಾಲಯ, ಹಿಂದಿನ ಕಾಯ್ದೆಯಲ್ಲಿದ್ದ ಲೋಪಗಳನ್ನು ನಿವಾರಿಸುವಲ್ಲಿನ ರಾಜ್ಯ ಸರ್ಕಾರದ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಕರಣದ ಕುರಿತು ತೀರ್ಪು ನೀಡುವಾಗ ಮೀಸಲಾತಿ, ಸಮಾನತೆ, ಸರ್ಕಾರದ ಕರ್ತವ್ಯ ಇತ್ಯಾದಿ ಸಂಗತಿಗಳ ಬಗ್ಗೆ ನ್ಯಾ.ಡಿ.ವೈ.ಚಂದ್ರಚೂಡ್ ಮತ್ತು ನ್ಯಾ.ಯು.ಯು.ಲಲಿತ್ ಅವರಿದ್ದ ಪೀಠ ಮಾತನಾಡಿದೆ. ಆ ಮಾತುಗಳಲ್ಲಿ ಪ್ರಮುಖವೆನಿಸಿದ ಐದು ಅಂಶಗಳು ಇಲ್ಲಿವೆ.

ಹೆಚ್ಚು ಓದಿದ ಸ್ಟೋರಿಗಳು

ಎಲ್‌ ಪಿಜಿ ಸಿಲಿಂಡರ್‌ 50 ರೂ. ಏರಿಕೆ: ಗ್ರಾಹಕರ ಜೇಬಿಗೆ ಕತ್ತರಿ!

ಕೆಲವು ಪೋಸ್ಟ್‌ಗಳು, ಖಾತೆಗಳನ್ನು ನಿರ್ಬಂಧಿಸಿ: ಕೇಂದ್ರ ಆದೇಶದ ವಿರುದ್ಧ ಕೋರ್ಟ್ ಮೊರೆ ಹೋದ ಟ್ವಿಟರ್!

ಗುಜರಾತ್ ಗೆಲ್ಲಲು ಪಂಚ ಸೂತ್ರಗಳ ಮೊರೆ ಹೋದ ಕಾಂಗ್ರೆಸ್

  • ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನ ಶತಮಾನಗಳಿಂದಲೂ ತಾರತಮ್ಯ, ಪೂರ್ವಗ್ರಹಗಳಿಂದ ಹೈರಾಣಾಗಿದ್ದಾರೆ. ಊಳಿಗಮಾನ್ಯ ಮತ್ತು ಜಾತಿ ಪ್ರಧಾನ ಸಾಮಾಜಿಕ ವ್ಯವಸ್ಥೆಗಳು ಅವರನ್ನು ಅವಕಾಶವಂಚಿತನ್ನಾಗಿ ಮಾಡಿವೆ. ಹಾಗಾಗಿ, ಅವರಿಗೆ ಅವಕಾಶಗಳನ್ನು ಕಲ್ಪಿಸುವ ವಿಷಯದಲ್ಲಿ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳದೆ ಹೋದಲ್ಲಿ ಸಂವಿಧಾನ ಪ್ರತಿಪಾದಿಸುವ ಸಂಗತಿಗಳು ಕಲ್ಪನೆಯಲ್ಲಿ ಮಾತ್ರ ಉಳಿದುಬಿಡುತ್ತವೆ.
  • ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಅವಕಾಶಗಳನ್ನು ಕಲ್ಪಿಸುವುದು ಎಂದರೆ, ಸಂವಿಧಾನ ಬಯಸುವಂತೆ ಸಮಾನತೆಯ ಹಕ್ಕನ್ನು ಸಾಧ್ಯವಾಗಿಸುವುದೇ ಆಗಿದೆ. ಸಂವಿಧಾನವು ಹೇಳುವ ಈ ಸಂಗತಿಯೇ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಶ್ರೇಯೋಭಿವೃದ್ಧಿಗೆ ರೂಪಿಸುವ ವಿಶೇಷ ಕ್ರಮಗಳನ್ನು ಎತ್ತಿಹಿಡಿಯುತ್ತದೆ.
  • ಆಡಳಿತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳಿಗೆ ಅವಕಾಶ ಸೃಷ್ಟಿಸುವುದು ಸಮಾನ ನಾಗರಿಕತೆ ತತ್ವಕ್ಕೆ ಬಲ ತುಂಬುತ್ತದೆ. ನಮ್ಮ ಸಮಾಜದಲ್ಲಿ ಯಾವ ಜನ ಪೂರ್ವಗ್ರಹಗಳಿಂದ, ತಾರತಮ್ಯಗಳಿಂದ, ದೌರ್ಜನ್ಯದಿಂದ ನಲುಗಿರುತ್ತಾರೋ ಅವರಿಗೆ ಆಡಳಿತದ ಹಂತಗಳಲ್ಲಿ ದನಿ ಸಿಗುವಂತೆ ಮಾಡುವುದು ಕೂಡ ಸಮಾನ ನಾಗರಿಕ ತತ್ವ.
  • ಕೇಂದ್ರ ಅಥವಾ ರಾಜ್ಯಗಳ ಆಡಳಿತದಲ್ಲಿನ ದಕ್ಷತೆ ಎಂಬುದು ಯಾವಾಗಲೂ ಎಲ್ಲರನ್ನೂ ಒಳಗೊಳ್ಳುವುದು ಎಂದೇ ಪರಿಗಣಿಸಬೇಕು. ಸಮಾಜದ ಎಲ್ಲ ವರ್ಗಗಳಿಗೂ ಆಡಳಿತದ ಹಂತದಲ್ಲಿ ಪ್ರತಿನಿಧಿತ್ವ ಸಿಕ್ಕಾಗ ಮಾತ್ರ ಜನರಿಂದ ಮತ್ತು ಜನರಿಗಾಗಿ ಆಡಳಿತ ಎಂಬ ಪರಿಕಲ್ಪನೆ ನಿಜವಾಗುತ್ತದೆ. ಆಡಳಿತದಲ್ಲಿ ಈ ಬಗೆಯ ಬಹುತ್ವ, ಎಲ್ಲ ವರ್ಗಗಳ ಪ್ರತಿನಿಧಿತ್ವ ಇಲ್ಲದೆಹೋದರೆ, ಆಡಳಿತವು ಸಮಾಜದ ಅಂಚಿನಲ್ಲಿರುವ ಜನರ ವಿರುದ್ಧವೇ ಯೋಚಿಸುವಂತಾಗುತ್ತದೆ. ಸಂವಿಧಾನದ ಆಶಯದಂತೆ ಆಡಳಿತದಲ್ಲಿಯೂ ಬಹುತ್ವಕ್ಕೆ ಮಣೆ ಹಾಕದಿದ್ದರೆ, ಈ ವಿಷಯದಲ್ಲಿ ನಮಗೆ ಬದ್ಧತೆ ಇಲ್ಲವಾದರೆ, ಚರಿತ್ರೆ ನಮ್ಮನ್ನು ಕಾಡುತ್ತದೆ ಮತ್ತು ಇನ್ನಷ್ಟು ಅಸಮಾನತೆಯತ್ತ ಜಾರುತ್ತೇವೆ; ಇದು ಸ್ವಾತಂತ್ರ್ಯ ಮತ್ತು ಸಹೋದರತ್ವ ಪ್ರತಿಪಾದಿಸುವ ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಎಂಬುದು ನಮಗೆ ಅರಿವಿರಬೇಕು.
  • ಸಮಾನತೆಯನ್ನು ಜಾರಿ ಮಾಡುವ ದೃಷ್ಟಿಯಿಂದ ಹುದ್ದೆ ಅಥವಾ ಬಡ್ತಿ ಇನ್ನಿತರ ಅವಕಾಶ ಕಲ್ಪಿಸುವ ಅಭ್ಯರ್ಥಿಗಳು ಭಾರಿ ಬುದ್ಧಿವಂತರಲ್ಲದಿರಬಹುದು ಅಥವಾ ದೊಡ್ಡ ಸಾಧಕರೂ ಅಲ್ಲದಿರಬಹುದು. ಆದರೆ, ಇಂಥ ಕ್ರಮಗಳು ಸಂವಿಧಾನದ ಗುರಿಗಳನ್ನು ಸಾಧ್ಯವಾಗಿಸುತ್ತವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳಿಗೆ ಇಂಥ ಅವಕಾಶ ಕಲ್ಪಿಸುವುದರಿಂದ ಆಡಳಿತದಲ್ಲಿ ವೈವಿಧ್ಯತೆ ಜೊತೆಗೆ ಸಮಾಜದ ಎಲ್ಲ ವರ್ಗಗಳ ಪ್ರತಿನಿಧಿತ್ವ ಕೂಡ ಸಾಧ್ಯವಾಗುತ್ತದೆ.
RS 500
RS 1500

SCAN HERE

don't miss it !

ಕರ್ನಾಟಕಕ್ಕೆ ಕಾಲಿಡುವುದೇ ಶರದ್‌ ಪವಾರ್‌ ಸಾರಥ್ಯದ ಎನ್‌ ಸಿಪಿ?
ದೇಶ

6 ತಿಂಗಳಲ್ಲಿ ಸರಕಾರ ಪತನ: ಶರದ್‌ ಪವಾರ್‌ ಭವಿಷ್ಯ

by ಪ್ರತಿಧ್ವನಿ
July 4, 2022
ಕರ್ನಾಟಕದ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 16 ಅಕ್ರಮ ರೆಸಾರ್ಟ್‌!
ಕರ್ನಾಟಕ

ಕರ್ನಾಟಕದ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ 16 ಅಕ್ರಮ ರೆಸಾರ್ಟ್‌!

by ಪ್ರತಿಧ್ವನಿ
June 29, 2022
ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ
ಕರ್ನಾಟಕ

ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
June 30, 2022
ನಾಳೆಯಿಂದ ನೈಸ್ ರೋಡ್ ಟೋಲ್ ದರ ಹೆಚ್ಚಳ : ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?
ಕರ್ನಾಟಕ

ನಾಳೆಯಿಂದ ನೈಸ್ ರೋಡ್ ಟೋಲ್ ದರ ಹೆಚ್ಚಳ : ಯಾವ ಮಾರ್ಗದಲ್ಲಿ ಎಷ್ಟು ಹೆಚ್ಚಳ?

by ಪ್ರತಿಧ್ವನಿ
June 30, 2022
ಮಹಾ ಸರ್ಕಾರ ರಚನೆಯ ಬೆನ್ನಲ್ಲೇ  ಶರದ್ ಪವಾರ್‌ಗೆ ಆದಾಯ ತೆರಿಗೆಯಿಂದ ನೋಟಿಸ್!‌
ದೇಶ

ಮಹಾ ಸರ್ಕಾರ ರಚನೆಯ ಬೆನ್ನಲ್ಲೇ  ಶರದ್ ಪವಾರ್‌ಗೆ ಆದಾಯ ತೆರಿಗೆಯಿಂದ ನೋಟಿಸ್!‌

by ಪ್ರತಿಧ್ವನಿ
July 1, 2022
Next Post
ಮಹಾರಾಣಿ ಕೆಂಪನಂಜಮ್ಮಣ್ಣಿ ಅವರನ್ನು ನೆನೆದ ಭಾರತೀಯ ವಿಜ್ಞಾನ ಸಂಸ್ಥೆ

ಮಹಾರಾಣಿ ಕೆಂಪನಂಜಮ್ಮಣ್ಣಿ ಅವರನ್ನು ನೆನೆದ ಭಾರತೀಯ ವಿಜ್ಞಾನ ಸಂಸ್ಥೆ

ಪಶ್ಚಿಮ ಬಂಗಾಳ ಈ ಪರಿ ಬದಲಾದದ್ದು ಏಕೆ?

ಪಶ್ಚಿಮ ಬಂಗಾಳ ಈ ಪರಿ ಬದಲಾದದ್ದು ಏಕೆ?

ಟಿವಿ ಪತ್ರಕರ್ತರೇಕೆ ಭ್ರಷ್ಟರಾಗುತ್ತಾರೆ?

ಟಿವಿ ಪತ್ರಕರ್ತರೇಕೆ ಭ್ರಷ್ಟರಾಗುತ್ತಾರೆ?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist