Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಉತ್ತರ ಕರ್ನಾಟಕದ ಮಂದಿಗೆ ಹುದ್ದೆಗಳು ಏಕಿಲ್ಲ? ಎಚ್ ಡಿ ಕೆ ಗೆ ಹೊರಟ್ಟಿ ಪತ್ರ

ಉತ್ತರ ಕರ್ನಾಟಕದ ಮಂದಿಗೆ ಹುದ್ದೆಗಳು ಏಕಿಲ್ಲ? ಎಚ್ ಡಿ ಕೆ ಗೆ ಹೊರಟ್ಟಿ ಪತ್ರ
ಉತ್ತರ ಕರ್ನಾಟಕದ ಮಂದಿಗೆ ಹುದ್ದೆಗಳು ಏಕಿಲ್ಲ? ಎಚ್ ಡಿ ಕೆ ಗೆ ಹೊರಟ್ಟಿ ಪತ್ರ
Pratidhvani Dhvani

Pratidhvani Dhvani

June 15, 2019
Share on FacebookShare on Twitter

ಸಚಿವ ಸ್ಥಾನ ವಂಚಿತರು ಸರ್ಕಾರದ ನ್ಯೂನತೆಗಳನ್ನು ಬಹಿರಂಗವಾಗಿ ಎತ್ತಿ ಹಿಡಿಯುವುದು ಪ್ರಜಾಪ್ರಭುತ್ವದ ಸೊಗಸುಗಾರಿಕೆಯನ್ನು ಹೆಚ್ಚಿಸುತ್ತದೆ. ಈಗ ಕೆಲ ವಾರಗಳಿಂದ ಕಾಂಗ್ರೆಸ್ ಪಕ್ಷ ಧುರೀಣ ಎಚ್ ಕೆ ಪಾಟೀಲ್ ಜಿಂದಲ್ ಕಂಪೆನಿಗೆ ಸರ್ಕಾರಿ ಭೂಮಿಯನ್ನು ಉದಾರವಾಗಿ ಮಾರುವ ವಿರುದ್ಧ ಅಸಮಧಾನ ಲೇಪಿತ ಪತ್ರಗಳನ್ನು ಬರೆದಿದ್ದರು. ಇದೀಗ ಜೆಡಿಎಸ್ ಸರದಿ.

ಹೆಚ್ಚು ಓದಿದ ಸ್ಟೋರಿಗಳು

ಬೆಂಗಳೂರು ಜೈಲಿನಿಂದಲೇ ವಿಡಿಯೋ ಪೋಸ್ಟ್‌ ಮಾಡಿದ ಹರ್ಷ ಕೊಲೆ ಆರೋಪಿ!

ಸರಳ ವಾಸ್ತುಗೂ ಮುನ್ನ ಚಂದ್ರಶೇಖರ್‌ ಗುರೂಜಿ ಏನಾಗಿದ್ದರು ಗೊತ್ತಾ?

ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಧರೆಗುರುಳಿದ ವಿದ್ಯುತ್ ಕಂಬಗಳು!

ಜೆಡಿಎಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಉತ್ತರ ಕರ್ನಾಟಕದ ಕಡೆಗೆ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದ ಮುಖ್ಯ ಒಕ್ಕಣೆ ಕಲಬುರ್ಗಿ ಹಾಗೂ ಧಾರವಾಡ ಹೈಕೋರ್ಟ್ ಪೀಠಗಳಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗಳ ನೇಮಕಾತಿಯಲ್ಲಿ ಉತ್ತರ ಕರ್ನಾಟಕದ ಅರ್ಹ ವ್ಯಕ್ತಿಗಳನ್ನು ಪರಿಗಣಿಸದಿರುವ ಬಗ್ಗೆ.

ಹೊರಟ್ಟಿಯವರ ಪತ್ರದ ಸಾರಾಂಶ ಇಷ್ಟು: ರಾಜ್ಯದಲ್ಲಿ ಐದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗಳು ಮಂಜೂರಾಗಿ ಇದ್ದು, ಅದರಲ್ಲಿ ಒಂದು ದೆಹಲಿ, ಒಂದು ಕಲಬುರ್ಗಿ, ಒಂದು ಧಾರವಾಡ ಮತ್ತು ಎರಡು ಬೆಂಗಳೂರಿಗೆ ಇರುತ್ತದೆ. “ನಾಡಗೌಡ ಎನ್ನುವವರು ಕಲಬುರ್ಗಿಯಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಸೇವಾವಧಿ ಬಾಕಿ ಇದ್ದರೂ ಆಗಸ್ಟ್ 2018 ರಲ್ಲಿ ಅವರ ಜಾಗಕ್ಕೆ ಮಂಗಳೂರು ಮೂಲದವರಾದ ಸಂದೇಶ ಚೌಟ ಇವರನ್ನು ಕಲಬುರ್ಗಿಗೆ ನೇಮಿಸಿದ್ದೀರಿ. ಹುದ್ದೆ ಹೆಸರಿಗೆ ಮಾತ್ರ ಇದ್ದು, ಅವರು ಬೆಂಗಳೂರಿನಲ್ಲಿಯೇ ಸೇವೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದೀರಿ. ಅದರಂತೆ, ಧಾರವಾಡ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗೂ ಸಹ ಮಂಗಳೂರು ಮೂಲದವರಾದ ದಿನೇಶ್ ರಾವ್ ಇವರನ್ನು ನೇಮಕಾತಿ ಮಾಡಿ ಇವರೂ ಸಹ ಬೆಂಗಳೂರಿನಲ್ಲಿಯೇ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಿದ್ದೀರಿ. ಹೀಗೆ ಉತ್ತರ ಕರ್ನಾಟಕದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಸ್ಥಳೀಯ ವಕೀಲರಿಗೆ ಯೋಗ್ಯತೆ ಇದ್ದರೂ ಅನ್ಯಾಯ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.’’

ಹೆಚ್ಚುವರಿ ಅಡ್ವೊಕೇಟ್ ಜನರಲ್ ನೇಮಕಕ್ಕೆ ಸಂಬಂಧಿಸಿದಂತೆ ಹೊರಟ್ಟಿಯವರ ಅಸಮಾಧಾನ ಇಲ್ಲಿಗೇ ನಿಲ್ಲುವುದಿಲ್ಲ. ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದ ಪೊನ್ನಣ್ಣ ಅವರು ಇತ್ತೀಚಿಗೆ ರಾಜಿನಾಮೆ ನೀಡಿ ತೆರವಾದ ಸ್ಥಾನಕ್ಕೆ ಧಾರವಾಡ ಮೂಲದವರನ್ನು ನೇಮಕ ಮಾಡಲು ಅಡ್ವೊಕೇಟ್ ಜನರಲ್ ಅವರು ಶಿಫಾರಸು ಮಾಡಿದರೂ, ಬೆಂಗಳೂರಿನವರನ್ನು ನೇಮಕ ಮಾಡುವ ಹುನ್ನಾರ ನಡೆದಿದೆ ಎಂದು ಹೊರಟ್ಟಿ ಆಪಾದಿಸಿದ್ದಾರೆ.

“ಈ ರೀತಿ ಸತತವಾಗಿ ಎಲ್ಲಾ ರೀತಿಯಿಂದಲೂ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗುತ್ತಾ ಬಂದರೂ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಸ್ಪಷ್ಟ. ಎಲ್ಲಾ ರೀತಿಯಿಂದಲೂ ಹಾಗೂ ಎಲ್ಲಾ ಕ್ಷೇತ್ರಗಳಲ್ಲಿಯೂ ಅಂದರೆ ಅನುದಾನ ಬಿಡುಗಡೆ, ಉನ್ನತ ಅಧಿಕಾರಿಗಳ ನೇಮಕಾತಿ, ಉಪಕುಲಪತಿಗಳ ನೇಮಕಾತಿ ಹೀಗೆ ಎಲ್ಲವೂ ದಕ್ಷಿಣ ಕರ್ನಾಟಕದವರ ಪಾಲಾಗುತ್ತಿವೆ,,’ ಎಂದು ಹೇಳಿರುವ ಹೊರಟ್ಟಿ, ಉತ್ತರ ಕರ್ನಾಟಕದ ಬಗೆಗಿನ ಕಾಳಜಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವೇದಿಕೆಗಳ ಹೇಳಿಕೆಗಳಾಗಿಯೇ ಉಳಿದಿದೆ ಎಂದಿದ್ದಾರೆ.

RS 500
RS 1500

SCAN HERE

don't miss it !

ಪ್ರಧಾನಿ ಮೋದಿ ಇದ್ದ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನ್!
ದೇಶ

ಪ್ರಧಾನಿ ಮೋದಿ ಇದ್ದ ಹೆಲಿಕಾಪ್ಟರ್ ಬಳಿ ಕಪ್ಪು ಬಲೂನ್!

by ಪ್ರತಿಧ್ವನಿ
July 4, 2022
ನಮ್ಮ ಕ್ಷೇತ್ರ ಎಂದು ಮೆರೆಯುತ್ತಿದ್ದ ಬಿಜೆಪಿ, ಜೆಡಿಎಸ್‌ ಭದ್ರಕೋಟೆಯನ್ನು ಕಸಿದುಕೊಂಡಿದ್ದೇವೆ : ಸಿದ್ದರಾಮಯ್ಯ
ಕರ್ನಾಟಕ

PSI ಹಗರಣದಲ್ಲಿ ಇಡೀ ಸರ್ಕಾರವೇ ಭಾಗಿ : ಸಿಎಂ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿದ ಸಿದ್ದರಾಮಯ್ಯ

by ಪ್ರತಿಧ್ವನಿ
July 5, 2022
ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರೆ : ಸಂಸದ ಪ್ರತಾಪ್‌ ಸಿಂಹ
ಕರ್ನಾಟಕ

ಮುಸ್ಲಿಮರೆಲ್ಲಾ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲಾ ಮುಸ್ಲಿಮರೆ : ಸಂಸದ ಪ್ರತಾಪ್‌ ಸಿಂಹ

by ಪ್ರತಿಧ್ವನಿ
June 29, 2022
ಮಹಾರಾಷ್ಟ್ರ ವಿಧಾನಸಭಾಧ್ಯಕ್ಷರಾಗಿ ರಾಹುಲ್ ನಾರ್ವೇಕರ್ ಆಯ್ಕೆ!
ದೇಶ

ಮಹಾರಾಷ್ಟ್ರ ವಿಧಾನಸಭಾಧ್ಯಕ್ಷರಾಗಿ ರಾಹುಲ್ ನಾರ್ವೇಕರ್ ಆಯ್ಕೆ!

by ಪ್ರತಿಧ್ವನಿ
July 3, 2022
ಮೇ 16ರ ಬದಲಾಗಿ, ಜೂನ್‌ 1 ರಿಂದ ಶಾಲೆಯನ್ನು ಆರಂಭಿಸಿ : ಸಿಎಂಗೆ ಪತ್ರ ಬರೆದ ಸಭಾಪತಿ ಬಸವರಾಜ ಹೊರಟ್ಟಿ
ಕರ್ನಾಟಕ

ಶಿಕ್ಷಣ ವ್ಯವಸ್ಥೆ ಕುರಿತು ಸರ್ಕಾರಕ್ಕೆ 112 ಪತ್ರಗಳನ್ನು ಬರೆದಿದ್ದೆ, ಯಾವುದಕ್ಕೂ ಒಂದೇ ಒಂದು ಉತ್ತರ ಬಂದಿಲ್ಲ : ಬಸವರಾಜ್ ಹೊರಟ್ಟಿ

by ಪ್ರತಿಧ್ವನಿ
July 1, 2022
Next Post
ಬರ ಕಾಡುವ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಕತ್ತಾಳೆ ವ್ಯಾಪಾರದ ಭರಾಟೆ

ಬರ ಕಾಡುವ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಕತ್ತಾಳೆ ವ್ಯಾಪಾರದ ಭರಾಟೆ

ವಾಗ್ದಂಡನೆಗೆ ಸಹಿ ಹಾಕಿದ ಸಂಸದರ ಮಾಹಿತಿ ಹಂಚಿಕೆಗೆ ಸಮ್ಮತಿಸದ ಮಾಹಿತಿ ಆಯೋಗ

ವಾಗ್ದಂಡನೆಗೆ ಸಹಿ ಹಾಕಿದ ಸಂಸದರ ಮಾಹಿತಿ ಹಂಚಿಕೆಗೆ ಸಮ್ಮತಿಸದ ಮಾಹಿತಿ ಆಯೋಗ

ಐಎಂಎ ಕರಿನೆರಳಲ್ಲಿ ಐಪಿಎಸ್ ವರ್ಗಾವಣೆ!

ಐಎಂಎ ಕರಿನೆರಳಲ್ಲಿ ಐಪಿಎಸ್ ವರ್ಗಾವಣೆ!

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist