Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಉತ್ತರ ಕರ್ನಾಟಕಕ್ಕೆ ವಾರದಲ್ಲಿ ವರ್ಷದ ಮಳೆ, ಕೋಲಾರದಲ್ಲಿ ಬರ

ಉತ್ತರ ಕರ್ನಾಟಕಕ್ಕೆ ವಾರದಲ್ಲಿ ವರ್ಷದ ಮಳೆ, ಕೋಲಾರದಲ್ಲಿ ಬರ
ಉತ್ತರ ಕರ್ನಾಟಕಕ್ಕೆ ವಾರದಲ್ಲಿ ವರ್ಷದ ಮಳೆ
Pratidhvani Dhvani

Pratidhvani Dhvani

August 10, 2019
Share on FacebookShare on Twitter

ಆಗಸ್ಟ್ ತಿಂಗಳಲ್ಲಿ ಮುಂಗಾರು ಋತುವಿನ ಬಹುತೇಕ ಪಾಲು ಧೋ ಎಂದು ಸುರಿದ ಮಳೆಗೆ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಜಿಲ್ಲೆಗಳು ಪ್ರವಾಹದಿಂದ ತತ್ತರಿಸಿದರೆ, ಕೋಲಾರ, ಬೆಂಗಳೂರು, ಯಾದಗಿರಿ, ರಾಯಚೂರು, ಬಳ್ಳಾರಿ ಜಿಲ್ಲೆಗಳಲ್ಲಿ ವಾಡಿಕೆಯ ಮಳೆ ಆಗಿಲ್ಲ. ಆಗಸ್ಟ್ ಎರಡನೇ ತಾರೀಕಿನಿಂದ ಆರಂಭವಾದ ಭಾರಿ ಮಳೆ ಆಗಸ್ಟ್ 6ರಿಂದ ಇಂದಿನ ತನಕ ಅಸಾಧಾರಣ ಪ್ರಮಾಣದಲ್ಲಿ ಸುರಿಯತೊಡಗಿದೆ.

ಹೆಚ್ಚು ಓದಿದ ಸ್ಟೋರಿಗಳು

ರಾಜಕಾಲುವೆ ಮೇಲೆ ಕಟ್ಟಿದ ಅರಮನೆ, ಮಾಲ್‌ʼಗಳ ಮೇಲೆ ಬುಲ್ಡೋಜರ್‌ ಹೋಗಲ್ಲ; ಬಡವರ ಮನೆಗಳ ಮೇಲೆ ಹರಿಯುತ್ತದೆ

ಸರ್ಕಾರದ ಆಸ್ತಿ ಕಾಪಾಡಬೇಕಾದ BMTF ನಿಂದಲೇ ಭೂಗಳ್ಳರ ರಕ್ಷಣೆ ಆಗ್ತಿದ್ಯಾ.!?

ಚಾರ್ಲಿಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್‌ : ಬೇರೆ ಭಾಷೆಯಲ್ಲೂ ಮಿಂಚಲಿದೆಯ ಚಾರ್ಲಿ?

ಸಾಧಾರಣವಾಗಿ ಆಗಸ್ಟ್ ತಿಂಗಳಲ್ಲಿ ರಾಜ್ಯದಲ್ಲಿ ಸರಾಸರಿ 6 ರಿಂದ 8 ಎಂ ಎಂ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಆಗಸ್ಟ್ 6 ರಿಂದ ಆಗಸ್ಟ್ 10ರ ತನಕ ಐದು ದಿನ ಪ್ರತಿದಿನ 40 ಎಂಎಂ ತನಕ, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ 120 ಎಂಎಂ ತನಕ ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಜೂನ್ 23 ಮತ್ತು ಜುಲೈ 30ರಂದು 15 ಎಂ ಎಂ ಗಿಂತ ಹೆಚ್ಚು ಮಳೆಯಾಗಿತ್ತು. ಆಗಸ್ಠ್ 6, 7 ಮತ್ತು 8ರಂದು 25ರಿಂದ 30 ಎಂ ಎಂ ತನಕ ಮಳೆ ದಾಖಲಾಗಿತ್ತು. ಇದೇ ವೇಳೆ ಕರಾವಳಿ ಜಿಲ್ಲೆಗಳಲ್ಲಿ 110ರಿಂದ 150 ಎಂಎಂ ತನಕ ಮಳೆಯಾಗಿತ್ತು.

ಬೆಳಗಾವಿ ಹೊರತುಪಡಿಸಿ ಉತ್ತರ ಕರ್ನಾಟಕದ ಇತರ ಜಿಲ್ಲೆಗಳ ದಿನದ ಮಳೆ ಸರಾಸರಿಗಿಂತ ಬಹಳಷ್ಟು ಹೆಚ್ಚಳವಾಗಿತ್ತು. ಇದರೊಂದಿಗೆ, ಮಹಾರಾಷ್ಟ್ರದ ಜಲಾಶಯಗಳಿಂದ ಪ್ರವಾಹ ಹರಿಯ ಬಿಟ್ಟಿರುವುದು ಜನರನ್ನು ಜಲಪ್ರವಾಹದಲ್ಲಿ ತತ್ತರಿಸುವಂತೆ ಮಾಡಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಳೆದ ಕೆಲ ದಿನಗಳಲ್ಲಿ ಕಡಿಮೆ ಆಗಿದ್ದರೂ, ಮಲೆನಾಡು, ಅರೆ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ಬಹುತೇಕ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಹಾಸನ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಶಿವಮೊಗ್ಗದ ತೀರ್ಥಹಳ್ಳಿ, ದಕ್ಷಿಣ ಕನ್ನಡದ ಸುಳ್ಯ, ಬೆಳ್ತಂಗಡಿ, ಕಡಬ, ಮಡಿಕೇರಿ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಮಳೆ ದಾಖಲಾಗಿದೆ.

ಆಗಸ್ಟ್ 10ರಂದು ಬೆಳಗ್ಗೆ ಆಗುಂಬೆಯಲ್ಲಿ 188.50 ಎಂ ಎಂ ಮಳೆ ದಾಖಲಾಗಿದ್ದು, ತೀರ್ಥಹಳ್ಳಿ 203 ಎಂಎಂ, ಮಂಗಳೂರಿನ ಕಂದಾವರದಲ್ಲಿ 152 ಎಂ ಎಂ, ಸುಳ್ಯದ ಪೆರಾಜೆಯಲ್ಲಿ 127 ಎಂ ಎಂ, ಪುತ್ತೂರಿನ ಪಾಣಾಜೆಯಲ್ಲಿ 118 ಎಂಎಂ ಮಳೆಯಾಗಿದೆ. ಆಗಸ್ಟ್ 10ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 150 ಎಂ ಎಂ ಮಳೆ ದಾಖಲಾಗಿದ್ದು, ಕೊಡಗಿನಲ್ಲಿ 145, ಚಿಕ್ಕಮಗಳೂರು 116, ಶಿವಮೊಗ್ಗ 113, ಉಡುಪಿಯಲ್ಲಿ 111 ಎಂಎಂ ಮಳೆಯಾಗಿದೆ. ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಯಲ್ಲಿ 32 ಎಂಎಂ ಮಳೆಯಾಗಿದ್ದು, ಮೈಸೂರು 47, ಹಾವೇರಿ 22 ಮತ್ತು ಧಾರವಾಡದಲ್ಲಿ 16 ಎಂಎಂ ಮಳೆ ದಾಖಲಾಗಿದೆ. ಇದು ವಾಡಿಕೆ ಮಳೆಗಿಂತ ಹಲವರು ಪಟ್ಟು ಹೆಚ್ಚಿದೆ.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಪ್ರವಾಹ ಪೀಡಿತವಾಗಿದ್ದರೆ, ಹೈದರಾಬಾದ್ ಕರ್ನಾಟಕ ಬೀದರ್, ಯಾದಗಿರಿ, ಕಲಬುರ್ಗಿ, ರಾಯಚೂರು ಕೊಪ್ಪಳ, ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವಾಡಿಕೆ ಮಳೆಯೂ ಆಗಿಲ್ಲ. ಬೆಳಗಾವಿ ಮತ್ತು ಬಾಗಲಕೋಟೆ ಪ್ರವಾಹದಲ್ಲಿ ಮುಳುಗಿದ್ದರೂ ಬಿಜಾಪುರದಲ್ಲಿ ವಾಡಿಕೆ ಮಳೆ ಬಂದಿಲ್ಲ.

ಹಳೇ ಮೈಸೂರು ಪ್ರಾಂತ್ಯದ ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ ಜಿಲ್ಲೆಯಲ್ಲಿ ಮಳೆ ಕೊರತೆಯಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಕೃಪೆ ತೋರಿಲ್ಲ. ಉತ್ತರ ಕರ್ನಾಟಕ ಧಾರವಾಡದಲ್ಲಿ ಆಗಸ್ಟ್ 4ರಿಂದ 10 ತನಕ ವಾಡಿಕೆಗಿಂತ ಶೇಕಡ 900 ರಷ್ಟು ಮಳೆ ಹೆಚ್ಚಳವಾಗಿದೆ. ಒಂದು ವಾರದಲ್ಲಿ 28.50 ಎಂ ಎಂ ಇರುತ್ತಿದ್ದ ವಾಡಿಕೆ ಮಳೆ ಈ ಬಾರಿ 284 ಎಂಎಂಗೆ ಏರಿದೆ. ಕಳೆದ ಒಂದು ವಾರದಲ್ಲಿ ಬೆಳಗಾವಿ (293 ಎಂಎಂ), ಗದಗ (295 ಎಂಎಂ), ಹಾವೇರಿ (253 ಎಂಎಂ), ಬಾಗಲಕೋಟೆ (32.94 ಎಂಎಂ) ಆದ ಮಳೆ ವಾರದ ಸರಾಸರಿಗಿಂತ ಹಲವಾರು ಪಟ್ಟು ಹೆಚ್ಚು. ಒಂದು ತಿಂಗಳಲ್ಲೊ, ಕೆಲವು ಕಡೆ ಒಂದು ವರುಷದಲ್ಲಿ ಸುರಿಯ ಬೇಕಾದ ಮಳೆರಾಯ ಒಂದೇ ಸಮನೆ ಸುರಿದು ಜನರು ತ್ರಾಸಕ್ಕೀಡಾಗಿದ್ದಾರೆ.

ಆಗಸ್ಟ್ ಮೊದಲ ವಾರದಲ್ಲಿ ಕರ್ನಾಟಕ ರಾಜ್ಯದ ಸರಾಸರಿ ಮಳೆಗಿಂತ ಶೇಕಡ 130ರಷ್ಟು ಹೆಚ್ಚು ಮಳೆಯಾಗಿದೆ. ಇದೇ ವೇಳೆ ಉತ್ತರ ಕರ್ನಾಟಕ ಪ್ರದೇಶದಲ್ಲಿ ಮಳೆಯ ಪ್ರಮಾಣ ಸರಾಸರಿಗಿಂತ ಶೇಕಡ 233ಕ್ಕಿಂತ ಹೆಚ್ಚಳವಾಗಿದೆ. ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ಆಗಿರುವ ನಾಶ ನಷ್ಟದ ಅಧಿಕೃತ ಮಾಹಿತಿ ಲಭ್ಯವಿಲ್ಲದಿದ್ದರೂ, ಪ್ರಾಥಮಿಕ ಅಂಕಿ ಅಂಶಗಳ ಪ್ರಕಾರ ಒಂದೂವರೆ ಲಕ್ಷ ಹೆಕ್ಟರ್ ಕೃಷಿ ನಾಶ ಆಗಿದೆ. ವಿವಿಧ ಇಲಾಖೆಗಳಿಗೆ ಸೇರಿದ ಒಂದೂವರೆ ಸಾವಿರ ಕಿಲೋ ಮೀಟರ್ ರಸ್ತೆ ಹಾನಿಯಾಗಿದ್ದು, 250ಕ್ಕಿಂತ ಹೆಚ್ಚು ಸಣ್ಣ ಮತ್ತು ಮಧ್ಯ ಪ್ರಮಾಣದ ಸೇತುವೆಗಳು ಧ್ವಂಸ ಆಗಿವೆ. ಸಾವಿರಾರು ಜನರು ಮನೆಗಳನ್ನು ಕಳಕೊಂಡಿದ್ದು, ಹಲವಾರು ಎಕರೆ ಜಮೀನು ಕೃಷಿ ಮಾಡಲು ಅಯೋಗ್ಯವಾಗಿದೆ. ಹೆಚ್ಚಿನ ಪ್ರಮಾಣದ ನಾಶ ನಷ್ಟ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಸಂಭವಿಸಿದೆ.

RS 500
RS 1500

SCAN HERE

don't miss it !

ಅಮರಿಂದರ್‌ ಸಿಂಗ್ ಪಕ್ಷ ಬಿಜೆಪಿ ಜೊತೆ ವಿಲೀನ?
ದೇಶ

ಅಮರಿಂದರ್‌ ಸಿಂಗ್ ಪಕ್ಷ ಬಿಜೆಪಿ ಜೊತೆ ವಿಲೀನ?

by ಪ್ರತಿಧ್ವನಿ
July 1, 2022
ಅಕ್ರಮ ಹಣ ವರ್ಗಾವಣೆ; ಸತ್ಯೇಂದ್ರ ಜೈನ್ 2ವಾರ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ ನ್ಯಾಯಾಲಯ
ದೇಶ

ಅಕ್ರಮ ಹಣ ವರ್ಗಾವಣೆ; ಸತ್ಯೇಂದ್ರ ಜೈನ್ 2ವಾರ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ ನ್ಯಾಯಾಲಯ

by ಪ್ರತಿಧ್ವನಿ
June 27, 2022
ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಇಂದು ರಜೆ ಘೋಷಣೆ!
ಕರ್ನಾಟಕ

ಭಾರೀ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಾಲೇಜುಗಳಿಗೆ ಇಂದು ರಜೆ ಘೋಷಣೆ!

by ಪ್ರತಿಧ್ವನಿ
June 30, 2022
ಸಮನ್ಸ್‌ ಸ್ವೀಕರಿಸಿದ ಸಂಜಯ್ ರಾವುತ್‌ಗೆ ಶುಭಾಶಯ: ಮಹಾ ರೆಬೆಲ್ ಶಾಸಕ ಶಿಂಧೆ ಪುತ್ರ
ದೇಶ

ಸಮನ್ಸ್‌ ಸ್ವೀಕರಿಸಿದ ಸಂಜಯ್ ರಾವುತ್‌ಗೆ ಶುಭಾಶಯ: ಮಹಾ ರೆಬೆಲ್ ಶಾಸಕ ಶಿಂಧೆ ಪುತ್ರ

by ಪ್ರತಿಧ್ವನಿ
June 27, 2022
ಇಂಗ್ಲೆಂಡ್‌ ಟೆಸ್ಟ್‌ ಗೆ ವಿರಾಟ್ ಕೊಹ್ಲಿ ಮತ್ತೆ ನಾಯಕ?‌
ಕ್ರೀಡೆ

ಇಂಗ್ಲೆಂಡ್‌ ಟೆಸ್ಟ್‌ ಗೆ ವಿರಾಟ್ ಕೊಹ್ಲಿ ಮತ್ತೆ ನಾಯಕ?‌

by ಪ್ರತಿಧ್ವನಿ
June 28, 2022
Next Post
ಕೊಡಗಿನ ಮಳೆ ಹಾನಿ: ನದಿ ಒತ್ತುವರಿಯೂ ಕಾರಣ

ಕೊಡಗಿನ ಮಳೆ ಹಾನಿ: ನದಿ ಒತ್ತುವರಿಯೂ ಕಾರಣ, ಭೂಕುಸಿತವೂ ಕಾರಣ

ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ವಿಪತ್ತು ಪರಿಸ್ಥಿತಿ

ದಕ್ಷಿಣ ಭಾರತದಲ್ಲಿ ರಾಷ್ಟ್ರೀಯ ವಿಪತ್ತು ಪರಿಸ್ಥಿತಿ, 4 ಲಕ್ಷ ಸಂತ್ರಸ್ತರು

ಮಳೆಯನ್ನು ಸ್ವಾಗತಿಸುವ ಮಲೆನಾಡೂ ನಲುಗಿದೆ

ಮಳೆಯನ್ನು ಸ್ವಾಗತಿಸುವ ಮಲೆನಾಡೂ ನಲುಗಿದೆ

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist