Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಈ ವರ್ಷವೂ ಬರ? ಪರಿಸ್ಥಿತಿ ಎದುರಿಸಲು ಕೇಂದ್ರಕ್ಕೆ ಸಲಹೆ ನೀಡಿದ ಎಐಕೆಎಸ್‌ಸಿಸಿ

ದೇಶಾದ್ಯಂತ ಇರುವ ಕೆರೆಗಳ ನೀರಿನ ಪರಿಸ್ಥಿತಿ ವಿವರಿಸಿರುವ ಎಐಕೆಎಸ್‌ಸಿಸಿ, ವಿಪತ್ತಿನ ಸೂಚನೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ.
ಈ ವರ್ಷವೂ ಬರ? ಪರಿಸ್ಥಿತಿ ಎದುರಿಸಲು ಕೇಂದ್ರಕ್ಕೆ ಸಲಹೆ ನೀಡಿದ ಎಐಕೆಎಸ್‌ಸಿಸಿ
Pratidhvani Dhvani

Pratidhvani Dhvani

June 25, 2019
Share on FacebookShare on Twitter

ಮಾನ್ಸೂನ್ ಮಳೆ ಒಂದು ವಾರ ತಡವಾಗಿ ಆರಂಭವಾಗಿದ್ದು, ಕಳೆದ ವರ್ಷಕ್ಕಿಂತ ಕಡಿಮೆ ಮಳೆ ಸುರಿಯುವ ಸೂಚನೆಗಳು ಸಿಕ್ಕಿವೆ. ಇನ್ನು, ಹವಾಮಾನ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಈ ವರ್ಷದ ಮಳೆ ಭಾರತದ ಅರ್ಧದಷ್ಟು ಭೂಮಿಯನ್ನು ಮಾತ್ರ ತಲುಪಬಲ್ಲದು. ಈ ಹಿನ್ನೆಲೆಯಲ್ಲಿ ಆಲ್ ಇಂಡಿಯಾ ಕಿಸಾನ್ ಸಂಘರ್ಷ್ ಕೋಆರ್ಡಿನೇಷನ್ ಕಮಿಟಿಯು (ಎಐಕೆಎಸ್‌ಸಿಸಿ) ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಸತತ ಎರಡನೇ ವರ್ಷವೂ ಬರ ಎದುರಾಗುವ ಲಕ್ಷಣಗಳಿದ್ದು, ಈಗಿನಿಂದಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಹೆಚ್ಚು ಓದಿದ ಸ್ಟೋರಿಗಳು

ವಿಂಡ್‌ಶೀಲ್ಡ್‌ನಲ್ಲಿ ಬಿರುಕು ತುರ್ತು ಭೂಸ್ಪರ್ಶ ಮಾಡಿದ ಸ್ಪೈಸ್ ಜೆಟ್ ವಿಮಾನ

ಶಿವಸೇನೆ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ ಶಿಂಧೆ ಬಣ

ಶೀಘವ್ರೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು : ಫಡ್ನವೀಸ್

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ದೀರ್ಘಕಾಲೀನ ಮಳೆಯನ್ನು ಗಣನೆಗೆ ತೆಗೆದುಕೊಂಡರೆ ಈ ವರ್ಷ ಸುರಿಯಲಿರುವ ಮಳೆ ಶೇಕಡ 43ರಷ್ಟು ಕಡಿಮೆ! ಕಳೆದ ಕೆಲವೇ ವರ್ಷಗಳ ಲೆಕ್ಕ ತೆಗೆದುಕೊಂಡರೂ ಮಾನ್ಸೂನ್ ಮಳೆ ಕಳೆದ ವರ್ಷ ಶೇಕಡ 9ರಷ್ಟು ಕಡಿಮೆಯಾಗಿತ್ತು. “ಈ ಬಾರಿ ಮಾನ್ಸೂನ್ ತಡವಾಗಿ ಆರಂಭ ಆಗಿರುವುದರಿಂದ ಈಗಾಗಲೇ ಬರ ಎದುರಿಸುತ್ತಿರುವ ಪ್ರದೇಶಗಳ (ದೇಶದ ಶೇಕಡ 46ರಷ್ಟು ಭೂಭಾಗ) ಸ್ಥಿತಿ ಇನ್ನಷ್ಟು ಘೋರವಾಗಿದೆ,” ಎನ್ನುತ್ತದೆ, ಗಾಂಧಿನಗರ ಐಐಟಿಯ ಬರ ಮುನ್ಸೂಚನಾ ವ್ಯವಸ್ಥೆ.

ಈ ಎಲ್ಲ ಸಂಗತಿಗಳ ಹಿನ್ನೆಲೆಯಲ್ಲಿ, “ಅನಾವೃಷ್ಟಿ ಕಾರಣಕ್ಕೆ ಕಳೆದ ಬಾರಿಗಿಂತ ಬರ ಹೆಚ್ಚಾಗುವ ಸಂಭವ ಇರುವುದರಿಂದ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಲು ಕೇಂದ್ರ ತಯಾರಾಗಬೇಕಿದೆ,” ಎಂದಿದೆ ಎಐಕೆಎಸ್‌ಸಿಸಿ. ದೇಶಾದ್ಯಂತ ಇರುವ ಪ್ರಮುಖ ಕೆರೆಗಳ ನೀರಿನ ಪರಿಸ್ಥಿತಿಯನ್ನೂ ವಿವರಿಸುವ ಎಐಕೆಎಸ್‌ಸಿಸಿ, ವಿಪತ್ತು ಎದುರಾಗುವ ಎಲ್ಲ ಸೂಚನೆಗಳೂ ಇವೆ ಎಂಬ ಎಚ್ಚರಿಕೆಯನ್ನು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ. ಬೇಸಿಗೆ ಕಳೆದ ನಂತರ ಇರಬಹುದಾದ ನೀರಿನ ಸಾಮಾನ್ಯ ಪ್ರಮಾಣಕ್ಕಿಂತ ಆಂಧ್ರಪ್ರದೇಶದಲ್ಲಿ ಶೇಕಡ 83, ಮಹಾರಾಷ್ಟ್ರದಲ್ಲಿ ಶೇಕಡ 68, ತಮಿಳುನಾಡಿನಲ್ಲಿ ಶೇಕಡ 41ರಷ್ಟು ಕಡಿಮೆ ನೀರು ಇರುವುದು ಪತ್ತೆಯಾಗಿದೆ.

“ನೀರಿಲ್ಲದೆ ಪರಿತಪಿಸುತ್ತಿರುವ ಹಳ್ಳಿಗಳು ಮತ್ತು ನಗರಗಳು, ಬೆಳೆ ನಷ್ಟ, ಸಾಕುಪ್ರಾಣಿಗಳ ಸಾವು, ನೀರು ಹಂಚಿಕೆ ಜಗಳ ಮುಂತಾದ ಸಂಗತಿಗಳ ಬಗ್ಗೆ ಈಗಾಗಲೇ ಸಾಕಷ್ಟು ಮಾಧ್ಯಮಗಳಲ್ಲಿ ಗಮನಾರ್ಹ ವರದಿಗಳು ಪ್ರಕಟವಾಗುತ್ತಲೇ ಇವೆ,” ಎಂದೂ ಎಐಕೆಎಸ್‌ಸಿಸಿ ಉಲ್ಲೇಖಿಸಿದೆ. 2018ಕ್ಕೆ ಹೋಲಿಸಿದರೆ (ಜೂನ್ 14ರವರೆಗಿನ ಲೆಕ್ಕದಂತೆ) ಈ ವರ್ಷ ಸುರಿದಿರುವ ಮುಂಗಾರು ಮಳೆಯಲ್ಲಿ ಬೆಳೆಯಲಿರುವ ಬೆಳೆಗಳಲ್ಲಿ ಶೇಕಡ 9ರಷ್ಟು ಇಳಿಕೆ ಕಂಡುಬಂದಿದೆ. ಬೇಳೆಕಾಳುಗಳು ಶೇಕಡ 50ರಷ್ಟು, ಎಣ್ಣೆಕಾಳುಗಳು ಶೇಕಡ 41ರಷ್ಟು, ಭತ್ತ ಶೇಕಡ 22ರಷ್ಟು, ಗೋಧಿ 27ರಷ್ಟು ಇಳುವರಿ ಕುಸಿತ ಕಂಡಿವೆ ಎಂದು ಅಂದಾಜಿಸಲಾಗಿದೆ.

ಇದುವರೆಗಿನ ಮಾನ್ಸೂನ್ ವರ್ತನೆ ಗಮನಿಸಿದರೆ ಮುಂದಿನ ತಿಂಗಳುಗಳಲ್ಲಿ ಕೂಡ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಆಗುವ ಸಾಧ್ಯತೆ ತೀರಾ ಕಡಿಮೆ. ಹಾಗಾಗಿ ಬರ ಎಂದು ಘೋಷಣೆ ಮಾಡಿ, ಅದನ್ನು ಎದುರಿಸಲು ಮುಂದಾಗುವುದರಲ್ಲಿ ಕೇಂದ್ರ ಸರ್ಕಾರ ತಡ ಮಾಡಬಾರದು ಎಂದು ಎಐಕೆಎಸ್‌ಸಿಸಿ ಕೇಳಿಕೊಂಡಿದೆ. ಜೊತೆಗೆ, ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಿ, ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು, ಮಳೆಯಾಶ್ರಿತ ಕೃಷಿಭೂಮಿಗಳಿಗೆ ನೀಡಲಾಗುವ ಪರಿಹಾರವನ್ನು ಎಕರೆಗೆ 10,000 ರೂಪಾಯಿಗೆ ಹೆಚ್ಚಿಸಬೇಕು, ಮಹಾತ್ಮ ಗಾಂಧಿ ಗ್ರಾಮೀನ ಉದ್ಯೀಗ ಖಾತ್ರಿ ಯೋಜನೆಯಡಿ ನೀಡಲಾಗುವ ಕನಿಷ್ಠ ಕೂಲಿಯ ದಿನಗಳನ್ನು 150ಕ್ಕೆ ಏರಿಸಬೇಕು ಎಂದು ಬೇಡಿಕೆ ಮಂಡಿಸಿದೆ. ಅಲ್ಲದೆ, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆಯಡಿ ಈಗಾಗಲೇ ಬಾಕಿ ಉಳಿದಿರುವ ವಿಮಾ ಹಣವನ್ನು ರೈತರಿಗೆ ಪಾವತಿ ಮಾಡುವಲ್ಲಿಯೂ ಕೇಂದ್ರ ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದಿದೆ ಎಐಕೆಎಸ್‌ಸಿಸಿ.

RS 500
RS 1500

SCAN HERE

don't miss it !

ಉತ್ತರಪ್ರದೇಶ; ಬಂಧಿಸಲು ಮುಂದಾದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಮಾಲೀಕ
ದೇಶ

ಉತ್ತರಪ್ರದೇಶ; ಬಂಧಿಸಲು ಮುಂದಾದ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಮಾಲೀಕ

by ಪ್ರತಿಧ್ವನಿ
July 4, 2022
ಉದಯಪುರ ಕೊಲೆ ಪ್ರಕರಣ; NIA ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ
ದೇಶ

ಉದಯಪುರ ಕೊಲೆ ಪ್ರಕರಣ; NIA ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ

by ಪ್ರತಿಧ್ವನಿ
June 29, 2022
ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ
ಕರ್ನಾಟಕ

ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
June 30, 2022
ಟಿ ಆರ್ ಎಸ್ – ಬಿಜೆಪಿ; ಮಿತ್ರರಿಂದ ಶತ್ರುಗಳವರೆಗೆ
ದೇಶ

ಟಿ ಆರ್ ಎಸ್ – ಬಿಜೆಪಿ; ಮಿತ್ರರಿಂದ ಶತ್ರುಗಳವರೆಗೆ

by ಮಂಜುನಾಥ ಬಿ
July 2, 2022
ಬಹುಮತ ಸಾಬೀತಿಗೆ ನಾಳೆಯೇ ಮುಹೂರ್ತ : ಇತ್ತ ಶಿಂಧೆ ಕ್ಯಾಂಪ್ ಗುವಾಹಟಿ ಹೋಟೆಲ್‌ನಿಂದ ಚೆಕ್ ಔಟ್!
ದೇಶ

ಬಹುಮತ ಸಾಬೀತಿಗೆ ನಾಳೆಯೇ ಮುಹೂರ್ತ : ಇತ್ತ ಶಿಂಧೆ ಕ್ಯಾಂಪ್ ಗುವಾಹಟಿ ಹೋಟೆಲ್‌ನಿಂದ ಚೆಕ್ ಔಟ್!

by ಪ್ರತಿಧ್ವನಿ
June 29, 2022
Next Post
ವಾಹನ ಸಂಚಾರದಿಂದ ಕಬ್ಬನ್ ಪಾರ್ಕ್‌ಗೆ ಎಂದು ಮುಕ್ತಿ?

ವಾಹನ ಸಂಚಾರದಿಂದ ಕಬ್ಬನ್ ಪಾರ್ಕ್‌ಗೆ ಎಂದು ಮುಕ್ತಿ?

ನೀರಿಗಾಗಿ ಹೊಡೆದಾಡಲು ತಯಾರಾಗಿರಿ!

ನೀರಿಗಾಗಿ ಹೊಡೆದಾಡಲು ತಯಾರಾಗಿರಿ!

ಇಂಗ್ಲೀಷ್ ಮಾಧ್ಯಮ ಶಿಕ್ಷಣವನ್ನು ಪೋಷಕರು ಏಕೆ ಸ್ವಾಗತಿಸುತ್ತಿದ್ದಾರೆ?  

ಇಂಗ್ಲೀಷ್ ಮಾಧ್ಯಮ ಶಿಕ್ಷಣವನ್ನು ಪೋಷಕರು ಏಕೆ ಸ್ವಾಗತಿಸುತ್ತಿದ್ದಾರೆ?  

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist