Pratidhvani
Advertisement
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ
No Result
View All Result
Pratidhvani
No Result
View All Result

ಆಲಮಟ್ಟಿ ಜಲಾಶಯ ತುಂಬಿದೆ, ಬಿಜೆಪಿ ಸಂಸದರ ಜವಾಬ್ದಾರಿ ಹೆಚ್ಚಿದೆ

ಆಲಮಟ್ಟಿ ಜಲಾಶಯ ತುಂಬಿದೆ, ಬಿಜೆಪಿ ಸಂಸದರ ಜವಾಬ್ದಾರಿ ಹೆಚ್ಚಿದೆ
ಆಲಮಟ್ಟಿ ಜಲಾಶಯ ತುಂಬಿದೆ
Pratidhvani Dhvani

Pratidhvani Dhvani

July 24, 2019
Share on FacebookShare on Twitter

ವಿಜಯಪುರ ಜಿಲ್ಲೆಯ ಆಲಮಟ್ಟಿ ಆಣೆಕಟ್ಟು ಇಂದು (ಬುಧವಾರ ಜುಲೈ 24, 2019) ರಂದು ಸಂಪೂರ್ಣ ಭರ್ತಿಯಾಗಿದೆ. 123 ಟಿಎಮ್ ಸಿ ನೀರು ಸಂಗ್ರಹದ ಸಾಮರ್ಥ್ಯದ ಈ ಜಲಾಶಯದ ಎತ್ತರ 519.60 ಮೀಟರ್. ಸದ್ಯ 519.12 ಮೀ. ಎತ್ತರದಷ್ಟು ನೀರು ನಿಂತಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಯೋಜನೆಗೆ ಈಗಾಗಲೇ ರಾಜ್ಯ ಸರಕಾರ ಆಡಳಿತಾತ್ಮಕ ಒಪ್ಪಿಗೆ ನೀಡಿದ್ದು ಅದರ ಅನುಷ್ಠಾನಕ್ಕೆ ರೂ. 80 ರಿಂದ 90 ಸಾವಿರ ಕೋಟಿ ರೂ. ಗಳ ಅವಶ್ಯಕತೆಯಿದೆ. ಒಟ್ಟು 22 ಲಕ್ಷ ಎಕರೆ ಜಮೀನನ್ನು ನೀರಾವರಿಗೆ ಒಳಪಡಿಸುವ ಗುರಿ ಹೊಂದಲಾಗಿದ್ದು, ಬಾಗಲಕೋಟೆ ನಗರದ ಒಂದು ಭಾಗವನ್ನೊಳಗೊಂಡು 22 ಹಳ್ಳಿಗಳ ಸುಮಾರು 50 ಸಾವಿರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ.
ಕೃಷ್ಣಾ ನದಿ ವಿವಾದದಲ್ಲಿ ತೆಲಂಗಾಣ ರಾಜ್ಯವೂ ಒಳಗೊಂಡಿದ್ದು ಆಲಮಟ್ಟಿ ಆಣೆಕಟ್ಟಿನ ಎತ್ತರ ಹೆಚ್ಚಿಸಲು ತಕರಾರು ತೆಗೆಯುತ್ತಿದೆ. ಆದರೆ, ಸುಪ್ರೀಮ್ ಕೋರ್ಟ್ ಕರ್ನಾಟಕದ ಪರವಾಗಿಯೇ ತೀರ್ಪು ನೀಡಿದ್ದು 524 ಮೀ. ಎತ್ತರಕ್ಕೆ ಅನುಮತಿ ನೀಡಿದೆ. ಈ ಎತ್ತರದಲ್ಲಿ 175 ಟಿಎಮ್ ಸಿ ನೀರು ಸಂಗ್ರಹವಾಗಲಿದೆ.
ಆಲಮಟ್ಟಿಯ ಎಲ್ಲ 24 ಗೇಟುಗಳನ್ನು 524 ಮೀ.ಗೆ ಹೆಚ್ಚಿಸಲು ಸುಪ್ರೀಮ್ ಕೋರ್ಟ್ ಅನುಮತಿ ನೀಡಿದ್ದರೂ ಅದು ಕೇಂದ್ರ ಸರಕಾರದ ಅಧಿಸೂಚನೆಯಲ್ಲಿ ಪ್ರಕಟವಾಗಿಲ್ಲ. ಪ್ರಕಟವಾದ ಮೂರ್ನಾಲ್ಕು ತಿಂಗಳಲ್ಲೇ ಗೇಟುಗಳನ್ನು ಎತ್ತರಿಸುವ ಸರ್ವ ಸಿದ್ಧತೆಗಳನ್ನು ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಮೂರನೇ ಹಂತದ ಯೋಜನೆಯ ಜಾರಿಗೆ ಬೇಕಾದ ರೂ. 80 ಸಾವಿರ ಕೋಟಿ ಒದಗಿಸಲು ರಾಜ್ಯ ಸರಕಾರಕ್ಕೆ ಸಾಧ್ಯವೇ ಎಂಬುದು ಈಗಿರುವ ಮಿಲಿಯನ್ ಡಾಲರ್ ಪ್ರಶ್ನೆ. ಸದ್ಯ ಒದಗಿಸಿರುವುದು ರೂ 7,000 ಕೋಟಿ! ಹಾಗಾದರೆ ಯೋಜನೆಯ ಅನುಷ್ಠಾನ ಮರೀಚಿಕೆಯಾಗುವದರಲ್ಲಿ ಯಾವ ಸಂಶಯವೂ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಮುಂದೇನು ಎಂಬ ಪ್ರಶ್ನೆ ಭೂತಾಕಾರವಾಗಿ ನಿಂತು ಬಿಡುತ್ತದೆ.
ಎರಡು ಲಕ್ಷ ಹೆಕ್ಟೇರ್ ಗಿಂತಲೂ ಅಧಿಕ ಜಮೀನು ನೀರಾವರಿಗೆ ಒಳಪಡುವ ಯೋಜನೆಗಳನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಿಸಲು ಅವಕಾಶವಿದೆ. ಆಲಮಟ್ಟಿ ಯೋಜನೆಯಿಂದ ಸುಮಾರು ಆರು ಲಕ್ಷ ಹೆಕ್ಟೇರ್ ಗಿಂತಲೂ ಅಧಿಕ ಜಮೀನು ನೀರಾವರಿಗೆ ಒಳಪಡಲಿದ್ದು ಇದನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಿಸಲು ಕೇಂದ್ರದ ಮೇಲೆ ಒತ್ತಡ ತರುವ ಕೆಲಸವನ್ನು ರಾಜ್ಯದ ಸಂಸದರು, ವಿಶೇಷವಾಗಿ ಬಿಜೆಪಿ ಸಂಸದರು ಮಾಡಬೇಕಾಗಿದೆ. ಇಲ್ಲದಿದ್ದರೆ ಯೋಜನೆಯ ಅನುಷ್ಠಾನ ಹತ್ತು ವರ್ಷವಾದರೂ ಸಾಧ್ಯವಿಲ್ಲ. ಅದು ಕೇವಲ ಕನಸಿನ ಮಾತಾಗಿಯೇ ಉಳಿಯುವುದು ನಿಶ್ಚಿತ.
ಕೃಷ್ಣಾ ನದಿ ನೀರಿನ ವಿವಾದದಲ್ಲಿ ಕರ್ನಾಟಕದ ವಿರುದ್ಧ ಸೆಣಸುತ್ತಿರುವ ಮಹಾರಾಷ್ಟ್ರ ಮತ್ತು ತೆಲಂಗಾಣ ಸರ್ಕಾರಗಳು ಇತ್ತೀಚೆಗೆ ಕೈಗೂಡಿಸಿರುವುದನ್ನು ಕರ್ನಾಟಕ ಗಂಭೀರವಾಗಿ ತೆಗೆದುಕೊಳ್ಳಬೇಕು. ಮಹಾದಾಯಿ ನದಿ ನೀರಿನ ವಿವಾದದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾದ 13 ಟಿ ಎಮ್ ಸಿ ನೀರಿನ ಸಂಬಂಧವೂ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಇನ್ನೂ ಹೊರಡಿಸಬೇಕಾಗಿದೆ. ನ್ಯಾಯಮೂರ್ತಿ ಜೆ. ಎಮ್. ಪಾಂಚಾಲ ನೇತೃತ್ವದ ನ್ಯಾಯಮಂಡಳಿಯು ತನ್ನ ತೀರ್ಪು ನೀಡಿ ಬರುವ ಆಗಸ್ಟ್ 14 ಕ್ಕೆ ಒಂದು ವರ್ಷವಾಗುತ್ತದೆ!
ರಾಜ್ಯದ ಸಂಸದರು ಮಹಾದಾಯಿ ಮತ್ತು ಕೃಷ್ಣಾ ಯೋಜನೆಗಳ ಜಾರಿಗೆ ಕೇಂದ್ರದ ಮೇಲೆ ಒತ್ತಡ ತರುವಂತೆ ಮಾಡುವುದು ನೀರಾವರಿ ಹೋರಾಟಗಾರರ ಕರ್ತವ್ಯವಾಗಿದೆ. ಈ ದಿಸೆಯತ್ತ ಮುಂಬಯಿ ಕರ್ನಾಟಕದ ಏಳು ಜಿಲ್ಲೆಗಳ ಹೋರಾಟಗಾರರು ಒಗ್ಗಟ್ಟು ಪ್ರದರ್ಶಿಸುವುದು ಇಂದಿನ ಅವಶ್ಯಕತೆಯಾಗಿದೆ.

ಹೆಚ್ಚು ಓದಿದ ಸ್ಟೋರಿಗಳು

ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇದೆ.. ಬಜೆಟ್ ಇದೆ : ಆದರೂ BMRCL ನಿಂದಾಗಿ ಬಿಬಿಎಂಪಿಗೆ ತಲೆನೋವು !

ಮೋದಿ ಬರ್ತಾರೆ ಅಂತ ರಸ್ತೆ ಉಬ್ಬು ತೆರವು ಮಾಡಿದ ಬಿಬಿಎಂಪಿ : ಪ್ರತಿ ದಿನ ಅಪಘಾತಕ್ಕೆ ಕಾರಣ !

ಬಿಬಿಎಂಪಿ ಡಿ ಲಿಮಿಟೇಷನ್ ವಿರೋಧಿಸಿ ಸಾರ್ವಜನಿಕರು ನೀಡುತ್ತಿರುವ ಕಾರಣವೇನು ಗೊತ್ತಾ !

RS 500
RS 1500

SCAN HERE

don't miss it !

ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇದೆ.. ಬಜೆಟ್ ಇದೆ : ಆದರೂ BMRCL ನಿಂದಾಗಿ ಬಿಬಿಎಂಪಿಗೆ ತಲೆನೋವು !
ಕರ್ನಾಟಕ

ಮೇಲ್ಸೇತುವೆ ನಿರ್ಮಾಣಕ್ಕೆ ಅನುಮತಿ ಇದೆ.. ಬಜೆಟ್ ಇದೆ : ಆದರೂ BMRCL ನಿಂದಾಗಿ ಬಿಬಿಎಂಪಿಗೆ ತಲೆನೋವು !

by ಕರ್ಣ
July 1, 2022
ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ
ಕರ್ನಾಟಕ

ಸಾಲು ಮರದ ತಿಮ್ಮಕ್ಕನವರಿಗೆ ಸಂಪುಟ ದರ್ಜೆ ಸ್ಥಾನಮಾನ : ಸಿಎಂ ಬೊಮ್ಮಾಯಿ

by ಪ್ರತಿಧ್ವನಿ
June 30, 2022
ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು? : ವಿವಾದಾತ್ಮಕ ಟ್ವೀಟ್ ಮಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮ
ದೇಶ

ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು? : ವಿವಾದಾತ್ಮಕ ಟ್ವೀಟ್ ಮಾಡಿದ ನಿರ್ದೇಶಕ ರಾಮ್ ಗೋಪಾಲ್ ವರ್ಮ

by ಪ್ರತಿಧ್ವನಿ
June 25, 2022
ರಾಜ್ಯಪಾಲರ ಬಹುಮತ ಸಾಬೀತು ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ : ಸಂಜೆ 5 ಗಂಟೆಗೆ ವಿಚಾರಣೆ!
ದೇಶ

ರಾಜ್ಯಪಾಲರ ಬಹುಮತ ಸಾಬೀತು ಆದೇಶ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಶಿವಸೇನೆ : ಸಂಜೆ 5 ಗಂಟೆಗೆ ವಿಚಾರಣೆ!

by ಪ್ರತಿಧ್ವನಿ
June 29, 2022
ಸಂಪೂರ್ಣ ಆಸ್ತಿ ತೆರಿಗೆ ಪಾವತಿಸುವವರಿಗೆ ರಿಯಾಯಿತಿ- ಜೂ.30ರವರೆಗೆ  ಅವಧಿ ವಿಸ್ತರಣೆ
ಕರ್ನಾಟಕ

ಪ್ರಧಾನಿ ಮೋದಿ ಆ ರಸ್ತೆಯಲ್ಲಿ ಓಡಾಡಲೇ ಇಲ್ಲವಂತೆ : BBMP ಯೂ ಟರ್ನ್!

by ಪ್ರತಿಧ್ವನಿ
June 27, 2022
Next Post
ಸಿಇಟಿ

ಸಿಇಟಿ, ನೀಟ್ – ಆನ್ ಲೈನ್ ಕೌನ್ಸಿಲಿಂಗ್ ಪ್ರಸ್ತುತವೇ?

ಪದಗ್ರಹಣ ವಿಳಂಬ: ಬಿ ಎಸ್ ವೈ ಗೆ ಹೈಕಮಾಂಡ್ ಸಂದೇಶ ಏನು?

ಪದಗ್ರಹಣ ವಿಳಂಬ: ಬಿ ಎಸ್ ವೈ ಗೆ ಹೈಕಮಾಂಡ್ ಸಂದೇಶ ಏನು?

ಸರ್ಕಾರ ಪತನಕ್ಕೆ ಹೇಳದೆ ಉಳಿದ ಕಾರಣ ಯಾವುದು?

ಸರ್ಕಾರ ಪತನಕ್ಕೆ ಹೇಳದೆ ಉಳಿದ ಕಾರಣ ಯಾವುದು?

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
    • ವ್ಯಕ್ತಿ ವಿಶೇಷ
  • ಫೀಚರ್ಸ್
  • ಸಿನಿಮಾ
  • ವಿಡಿಯೋ
    • ಮುಕ್ತ ಮಾತು
    • ಸಂದರ್ಶನ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಕ್ಯಾಂಪಸ್ ಕಾರ್ನರ್
    • ಕೃಷಿ
    • ಕಲೆ – ಸಾಹಿತ್ಯ
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist